Latest Updates
-
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ?
₹180 ಕೋಟಿ ಮೌಲ್ಯದ ಚಿನ್ನಾಭರಣದೊಂದಿಗೆ ತಿರುಪತಿ ದೇವಾಲಯಕ್ಕೆ ಬಂದ ಕುಟುಂಬ..! ಯಾರಿವರು..?
ಒಬ್ಬರು ಮೈ ಮೇಲೆ ಎಷ್ಟು ರೂಪಾಯಿಯ ಚಿನ್ನ ಧರಿಸಬಹುದು. ಹೆಚ್ಚೆಂದರೆ ಲಕ್ಷ ರೂಪಾಯಿವರೆಗೂ ಧರಿಸಬಹುದು. ಆದ್ರೆ ಇಲ್ಲೊಂದು ಕುಟುಂಬ ಬರೋಬ್ಬರಿ ನೂರಾರು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಧರಿಸಿ ದೇವರ ದರ್ಶನ ಪಡೆದಿದ್ದು ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದಾರೆ.
ತಿರುಪತಿಯಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನವು ಭಾರತದ ಅತ್ಯಂತ ಪೂಜ್ಯ ಹಿಂದೂ ಯಾತ್ರಾ ಸ್ಥಳಗಳಲ್ಲಿ ಒಂದಾಗಿರುವುದು ನಮಗೆಲ್ಲಾ ತಿಳಿದ ವಿಚಾರ. ಈ ದೇವಾಲಯದ ದೇಶದಲ್ಲಿ ಅತ್ಯಧಿಕ ಆದಾಯ ಗಳಿಸುವ ಹಾಗೂ ಶ್ರೀಮಂತ ದೇವಾಲಯ ಎಂಬ ಕೀರ್ತಿ ಪಡೆದುಕೊಂಡಿದೆ. ಈ ದೇವಾಲಯಕ್ಕೆ ದೇಶದ ಮೂಲೆ ಮೂಲೆಯಿಂದ ಮಾತ್ರವಲ್ಲ ವಿದೇಶದಿಂದಲೂ ಭಕ್ತರು ಬರುತ್ತಾರೆ.

ಇದೇ ತಿರುಪತಿ ದೇವಾಲಯಕ್ಕೆ ಶುಕ್ರವಾರದಂದು ಭೇಟಿ ನೀಡಿದ್ದ ಕುಟುಂಬವೊಂದು ಎಲ್ಲರ ಗಮನ ಸೆಳೆದಿದೆ. ಮೂವರು ಬರೊಬ್ಬರಿ 25 ಕೆ.ಜಿ ಚಿನ್ನಾಭರಣ ತಮ್ಮ ಮೈ ಮೇಲೆ ಹಾಕಿಕೊಂಡು ಬಂದಿದ್ದರು. ಇದನ್ನು ಕಂಡ ಜನರು ಅಚ್ಚರಿ ಜೊಗೆ ಶಾಕ್ಗೂ ಒಳಗಾಗಿದ್ದಾರೆ. ಯಾರಿವರು.? ಇಷ್ಟೊಂದು ಚಿನ್ನಾಭರಣ ಹೇಗೆ ಬಂದಿದೆ? ಅದು ಅಸಲಿಯೋ ನಕಲಿಯೋ ಎಂಬ ಅನುಮಾನ ಅವರಲ್ಲಿ ಮೂಡಿದೆ.
ಮೂವರು ಚಿನ್ನಾಭರಣವನ್ನು ಹೂವಿನ ಹಾರದಂತೆ ಹಾಕಿಕೊಂಡು ದೇವಾಲಯದ ಆವರಣದಲ್ಲಿ ನಡೆದುಕೊಂಡು ಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಂಪ್ರದಾಯಿಕ ಉಡುಪು ತೊಟ್ಟಿದ್ದ ಅವರು ದೇವಾಲಯದ ಆಕರ್ಷಣೇಯ ಕೇಂದ್ರವಾಗಿದ್ದರು ಅವರ ಮೈ ಮೇಲೆ ಸುಮಾರು 180 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣವಿತ್ತು.
ಇಬ್ಬರು ಪುರುಷರು, ಒಬ್ಬ ಮಹಿಳೆ ಮತ್ತು ಒಬ್ಬ ಹುಡುಗ ಈ ರೀತಿ ಸಾಂಪ್ರದಾಯಿಕ ಬಟ್ಟೆ ಹಾಕಿಕೊಂಡು ದೇವಾಲಯಕ್ಕೆ ಬಂದಿದ್ದರು. ಚಿನ್ನದ ಸರಗಳು, ಚಿನ್ನದ ಸನ್ಗ್ಲಾಸ್ಗಳು, ಬಳೆಗಳು, ನೆಕ್ಲೇಸ್ಗಳು, '7' ಸಂಖ್ಯೆಯ ಚಿನ್ನದ ಸರ ಮತ್ತು ಇತರ ಆಭರಣಗಳು 180 ಕೋಟಿ ರೂಪಾಯಿ ಮೌಲ್ಯದ್ದಾಗಿದೆ ಎಂದು ವರದಿಯಾಗಿದೆ. ಜೊತೆಗೆ ಇವರಿಗೆ ಭದ್ರತೆ ನೀಡಲೆಂದು ಪ್ರೈವೇಟ್ ರಕ್ಷಣಾ ಸಿಬ್ಬಂದಿ ಓರ್ವ ಪೋಲಿಸ್ ಸಹ ಅವರ ಜೊತೆಗಿರುವುದು ನೋಡಬಹುದು.
ಈ ದೇವಾಲಯಕ್ಕೆ ಪ್ರತಿ ದಿನ ಸುಮಾರು 75,000 ರಿಂದ 90,000 ಮಂದಿ ಭಕ್ತರು ಆಗಮಿಸುತ್ತಾರೆ, ಆದ್ರೆ ಅದರಲ್ಲಿ ಈ ಮೂವರು ಗಮನ ಸೆಳೆದಿದ್ದರು. ಈ ದೇವಾಲಯವು ವಿಷ್ಣುವಿನ ರೂಪವಾದ ವೆಂಕಟೇಶ್ವರನಿಗೆ ಸಮರ್ಪಿತವಾಗಿದೆ, ಅವರು ಕಲಿಯುಗದ ಪ್ರಯೋಗಗಳು ಮತ್ತು ತೊಂದರೆಗಳಿಂದ ಮಾನವಕುಲವನ್ನು ರಕ್ಷಿಸಲು ಭೂಮಿಯ ಮೇಲೆ ಕಾಣಿಸಿಕೊಂಡರು ಎಂದು ನಂಬಲಾಗಿದೆ.
ಶ್ರೀನಿವಾಸ, ಬಾಲಾಜಿ ಮತ್ತು ವೇಕಟಾಚಲಪತಿ ಎಂದೂ ಕರೆಯಲ್ಪಡುವ ಶ್ರೀ ವೆಂಕಟೇಶ್ವರನು 5 ಸಾವಿರ ವರ್ಷಗಳ ಹಿಂದೆ ತಿರುಮಲವನ್ನು ತನ್ನ ವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದಾನೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಆದರೆ ಈ ದೇವಾಲಯ ಸಂಪತ್ತಿಗೆ ಹೆಸರುವಾಸಿಯಾಗಿದೆ. ಇಲ್ಲಿಗೆ ಬರುವ ಭಕ್ತರು ಉಆಗೂ ಉದ್ಯಮಿಗಳು ಕೋಟಿ ಕೋಟಿ ರೂಪಾಯಿ ಬೆಲೆಯ ವಜ್ರಾಭರಣ, ಚಿನ್ನ ದಾನವಾಗಿ ನೀಡುತ್ತಾರೆ.
ಬಾಲಿವುಡ್ ನಟ ನಟಿಯರು, ಉದ್ಯಮಿಗಳಾದ ಅನಂತ್ ಅಂಬಾನಿ, ಅನಿಲ್ ಅಂಬಾನಿ, ರತನ್ ಟಾಟಾ ಸೇರಿ ನೂರಾರು ಮಂದಿ ಇಲ್ಲಿಗೆ ಉಡುಗೊರೆಯಾಗಿ ನೂರಾರು ಕೋಟಿ ಮೌಲ್ಯದ ವಸ್ತುಗಳ ನೀಡಿದ್ದಾರೆ. ಆದರೆ ಅವರು ಎಂದಿಗೂ ಇಷ್ಟೊಂದು ಆಭರಣ ಹಾಕಿಕೊಂಡು ದೇವಾಯಲಕ್ಕೆ ಆಗಮಿಸಿಲ್ಲ.
25 ಕೆ.ಜಿ ಆಭರಣ ಹಾಕಿ ದೇವಾಲಯಕ್ಕೆ ಬಂದಿದ್ದ ಈ ಕುಟುಂಬದವರು ದೇವಾಲಯಕ್ಕೆ ಎಷ್ಟು ಉಡುಗೊರೆ ನೀಡಿದ್ದಾರೆ? ಏನು ನೀಡಿದ್ದಾರೆ ಎಂಬುದು ಎಲ್ಲಿಯೂ ದಾಖಲಾಗಿಲ್ಲ. ಆದರೆ ಈ ವಿಡಿಯೋ ನೋಡಿದ ಮಂದಿ ಇವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ದೇವಾಲಯದಲ್ಲಿ ತಲೆ ಬಗ್ಗಿಸಿ ನಡೆಯಬೇಕು, ನಮ್ಮ ಸಂಪತ್ತು ಪ್ರದರ್ಶನಕ್ಕೆ ದೇವಾಲಯ ಆಯ್ದುಕೊಂಡ ಈ ಮಂದಿಗೆ ಏನು ಅನಿಸುತ್ತಿಲ್ಲವೇ? ಎಂದು ಬಳಕೆದಾರರೊಬ್ಬರು ಬರೆದುಕೋಂಡಿದ್ದಾರೆ.



Click it and Unblock the Notifications