Latest Updates
-
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ!
ಫಿಟ್ನೆಸ್ಗಾಗಿ 39 ನಾಣ್ಯಗಳು , ಅಯಸ್ಕಾಂತ ತಿಂದ ಭೂಪ: ಉಕ್ಕಿನಂಥ ಬಾಡಿಗಾಗಿ ಇವುಗಳನ್ನು ತಿಂದು ಡೆಡ್ಬಾಡಿ ಆಗುತ್ತಿದ್ದ ಪಾಪ!
ಮನುಷ್ಯರಿಗೆ ಎಂಥೆಲ್ಲಾ ಹುಚ್ಚುತನ ಎಂದು ಕೆಲವೊಂದು ಪ್ರಕರಣ ನೋಡಿದಾಗ ಅನಿಸದೆ ಇರಲ್ಲ. ದೇಹಕ್ಕೆ ಖನಿಜಾಂಶ ಅವಶ್ಯಕ ಹಾಗಂತ ಖನಿಜ ತಿಂದರೆ ಆಗುತ್ತೇ? ಆದರೆ ಇಲ್ಲೊಬ್ಬ ಪುಣ್ಯಾತ್ಮ ಅಂಥದ್ದೊಂದು ಕೆಲಸ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ದೆಹಲಿಯ ಶ್ರೀ ಗಂಗಾರಾಮ್ ಆಸ್ಪತ್ರೆಗೆ ಈ ವ್ಯಕ್ತಿ ದಾಖಲಾಗಿದ್ದು ವ್ಯಕ್ತಿಯ ದೇಹದಿಂದ ಬರೋಬರಿ 39 ನಾಣ್ಯಗಳು ಹಾಗೂ ಅಯಸ್ಕಾಂತ ಹೊರ ತೆಗೆದಿದ್ದಾರೆ, ಅದು 26 ವರ್ಷದ ಯುವಕನ ಮೈಯಿಂದ ಈ ಖನಿಜಾಂಶಗಳನ್ನು ಹೊರ ತೆಗೆಯಲಾಗಿದೆ. ಅಷ್ಟಕ್ಕೂ ಆತ ಈ ನಾಣ್ಯ, ಅಯಸ್ಕಾಂತ ಏಕೆ ನುಂಗಿದ ಎಂಬುವುದೇ ಇನ್ನೂ ಸ್ವಾರಸ್ಯಕರ.

ಉಕ್ಕಿನಂಥ ಮೈಕಟ್ಟು ಪಡೆಯಲು ಸತು ಬೇಕು, ಹಾಗಾಗಿ ಯುವಕ ಹೀಗೆ ಮಾಡಿದ್ದಾನೆ
ವೈದ್ಯರ ಬಳಿ, ನ್ಯೂಟ್ರಿಷಿಯನಿಸ್ಟ್ ಬಳಿ ಹೋದರೆ ನೀವು ಖನಿಜಾಂಶವಿರುವ ಆಹಾರ ಸೇವಿಸಿ, ಸತು ಸೇವಿಸಿ, ಕಬ್ಬಿಣದಂಶವಿರುವ ಆಹಾರ ಸೇವಿಸಿ ಎಂದೆಲ್ಲಾ ಹೇಳುತ್ತಾರೆ. ರಕ್ತಹೀನತೆ ತಡೆಗಟ್ಟಲು ಕಬ್ಬಿಣದಂಶವಿರುವ ಆಹಾರ ಸೇವಿಸಬೇಕು, ಹಾಗಂತ ಕಬ್ಬಿಣ ತಿಂದರೆ ಆದೀತೆ? ಆದರೆ ಈತ ಪೆದ್ದುತನದಿಂದ ನಾಣ್ಯಗಳು ಹಾಗೂ ಅಯಸ್ಕಾಂತ ತಿಂದಿದ್ದಾನೆ, ಅದರ ಪರಿಣಾಮ ನೇರ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಬಾಡಿ ಬಿಲ್ಡಿಂಗ್ ಮಾಡುವ ಪ್ರಯತ್ನದಲ್ಲಿದ್ದ
26 ವರ್ಷದ ಯುವಕ ಬೇರೆ, ನನ್ನ ಮೈಕಟ್ಟು ನೋಡಿದರೆ ವಾವ್ ಅನ್ನಬೇಕೆಂಬ ಆಸೆ ಅವನದ್ದು ಅದಕ್ಕೆ ದೇಹಕ್ಕೆ ಜಿಂಕ್ ಸಹಾಯಕಾರಿ ಎಂಬುವುದು ಗೊತ್ತು, ಆದರೆ ಅದು ಆಹಾರದಿಂದ ಪಡೆಯಬೇಕು ಅಥವಾ ಸಪ್ಲೆಮೆಂಟ್ ತೆಗೆದುಕೊಳ್ಳಬೇಕು ಎಂದು ಏಕೆ ಗೊತ್ತಾಗಿಲ್ಲವೋ, ನೇರ ನಾಣ್ಯ ಹಾಗೂ ಅಯಸ್ಕಾಂತ ತಿಂದಿದ್ದಾನೆ. ಹೀಗೆ ತಿಂದರೆ ಆತ ಅವುಗಳಂತೆಯೇ ದೇಹ ಸ್ಟ್ರಾಂಗ್ ಆಗುತ್ತೆ ಎಂದು ಯೋಚಿಸಿರಬಹುದು, ಆದರೆ ಅದು ಜೀರ್ಣ ಆಗಲ್ಲ ಅಂತ ಗೊತ್ತಿರಲ್ಲ.
ತೀವ್ರ ಹೊಟ್ಟೆ ನೋವಿನ ಸಮಸ್ಯೆ ಬಳಲಿದ ಯುವಕ
ಈ ಯುವಕನಿಗೆ ಕಳೆದ ಕೆಲವು ದಿನಗಳಿಂದ ತೀವ್ರ ಹೊಟ್ಟೆನೋವು ಉಂಟಾಗಿತ್ಯು, ಜೊತೆಗೆ ತುಂಬಾನೇ ವಾಂತಿ, ಮನೆಯವರು ಆತನನ್ನು ಆಸ್ಪತ್ರೆಗೆ ಕರೆ ತಂದಿದ್ದಾರೆ, ವೈದ್ಯರು ಸ್ಕ್ಯಾನಿಂಗ್ ಮಾಡಿದಾಗ ವೈದ್ಯರಿಗೆ ದಿಗ್ಭ್ರೆಮೆಯಾಗುವಂತೆ ಇತ್ತು ಆ ರಿಪೋರ್ಟ್, ಏಕೆಂದರೆ ಆ ಯುವಕ ಹೊಟ್ಟೆಯಲ್ಲಿ 39 ನಾಣ್ಯಗಳಿತ್ತು. ಜೊತೆಗೆ ಅಯಸ್ಕಾಂತ ಕೂಡ ಪತ್ತೆಯಾಗಿತ್ತು. ಈತನ ನಾಣ್ಯ ಸೇವಿಸಿರುವುದರಿಂದ ಕರುಳಿಗೆ ಬ್ಲಾಕೇಜ್ ಕಂಡು ಬಂದಿತ್ತು.
ಕೂಡಲೇ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ನಾಣ್ಯಗಳನ್ನು, ಅಯಸ್ಕಾಂತ ಹೊರ ತೆಗೆದಿದ್ದಾರೆ. ಬಾಡಿ ಬಿಲ್ಡ್ ಮಾಡಲು ನಾಣ್ಯ ತಿಂದು ಡೆಡ್ಬಾಡಿ ಆಗುವ ಪರಿಸ್ಥಿತಿ ಆತನಿಗೆ ಉಂಟಾಯ್ತು. ಸರ್ಜರಿ ಸುಮಾರು ಎರಡು ಗಂಟೆ ಕಾಲ ಮಾಡಲಾಯ್ತು. ಈ ಯುವಕನಿಗೆ ಆಪರೇಷನ್ ಮಾಡಿದ ವೈದ್ಯರು ಡಾ. ಮಿತ್ತಲ್ ಯಾರೂ ಈ ರೀತಿಯ ಕೆಲಸ ಮಾಡಬಾರದು, ಆ ಯುವಕನ ಪ್ರಾಣಕ್ಕೆ ಅಪಾಯ ಬಂದಿತ್ತು, ನಾವು ಏಕೆ ಈ ರೀತಿ ಮಾಡಿದೆ ಎಂದು ಕೇಳಿದಾಗ ಬಾಡಿ ಬಿಲ್ಡ್ ಮಾಡುವ ಆಸೆಯಿಂದ ಎಂದು ಹೇಳಿದ, ಯಾರೂ ಈ ರೀತಿಯ ಕೆಲಸ ಮಾಡಬಾರದು ಎಂದು ವೈದ್ಯರು ಹೇಳಿದ್ದಾರೆ.
ಆತನೇ ಆ ರೀತಿ ತಿಂದನೋ ಅಥವಾ ಬೇರೆಯವರು ಆತನ ತಲೆಕೆಡಿಸಿ ಆ ರೀತಿ ಮಾಡಿದರೋ ಎಂದು ಗೊತ್ತಿಲ್ಲ, ಆತನಿಗೆ schizophrenia ಅಂದರೆ ಒಂದು ಬಗೆಯ ಮಾನಸಿಕ ಕಾಯಿಲೆ ಇತ್ತು ಎಂದು ವೈದ್ಯರು ಹೇಳಿದ್ದಾರೆ, ಹಾಗಾಗಿ ಬಹುಶಃ ಈತ ನಾಣ್ಯಗಳನ್ನು ಸೇವಿಸಿರಬಹುದು, ಮನೆಯವರು ಸಕಾಲಕ್ಕೆ ಆಸ್ಪತ್ರೆಗೆ ಕರೆತಂದಿದ್ದಕ್ಕೆ ಪ್ರಾಣ ಉಳಿದಿದೆ.



Click it and Unblock the Notifications