Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಫಿಟ್ನೆಸ್ಗಾಗಿ 39 ನಾಣ್ಯಗಳು , ಅಯಸ್ಕಾಂತ ತಿಂದ ಭೂಪ: ಉಕ್ಕಿನಂಥ ಬಾಡಿಗಾಗಿ ಇವುಗಳನ್ನು ತಿಂದು ಡೆಡ್ಬಾಡಿ ಆಗುತ್ತಿದ್ದ ಪಾಪ!
ಮನುಷ್ಯರಿಗೆ ಎಂಥೆಲ್ಲಾ ಹುಚ್ಚುತನ ಎಂದು ಕೆಲವೊಂದು ಪ್ರಕರಣ ನೋಡಿದಾಗ ಅನಿಸದೆ ಇರಲ್ಲ. ದೇಹಕ್ಕೆ ಖನಿಜಾಂಶ ಅವಶ್ಯಕ ಹಾಗಂತ ಖನಿಜ ತಿಂದರೆ ಆಗುತ್ತೇ? ಆದರೆ ಇಲ್ಲೊಬ್ಬ ಪುಣ್ಯಾತ್ಮ ಅಂಥದ್ದೊಂದು ಕೆಲಸ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ದೆಹಲಿಯ ಶ್ರೀ ಗಂಗಾರಾಮ್ ಆಸ್ಪತ್ರೆಗೆ ಈ ವ್ಯಕ್ತಿ ದಾಖಲಾಗಿದ್ದು ವ್ಯಕ್ತಿಯ ದೇಹದಿಂದ ಬರೋಬರಿ 39 ನಾಣ್ಯಗಳು ಹಾಗೂ ಅಯಸ್ಕಾಂತ ಹೊರ ತೆಗೆದಿದ್ದಾರೆ, ಅದು 26 ವರ್ಷದ ಯುವಕನ ಮೈಯಿಂದ ಈ ಖನಿಜಾಂಶಗಳನ್ನು ಹೊರ ತೆಗೆಯಲಾಗಿದೆ. ಅಷ್ಟಕ್ಕೂ ಆತ ಈ ನಾಣ್ಯ, ಅಯಸ್ಕಾಂತ ಏಕೆ ನುಂಗಿದ ಎಂಬುವುದೇ ಇನ್ನೂ ಸ್ವಾರಸ್ಯಕರ.

ಉಕ್ಕಿನಂಥ ಮೈಕಟ್ಟು ಪಡೆಯಲು ಸತು ಬೇಕು, ಹಾಗಾಗಿ ಯುವಕ ಹೀಗೆ ಮಾಡಿದ್ದಾನೆ
ವೈದ್ಯರ ಬಳಿ, ನ್ಯೂಟ್ರಿಷಿಯನಿಸ್ಟ್ ಬಳಿ ಹೋದರೆ ನೀವು ಖನಿಜಾಂಶವಿರುವ ಆಹಾರ ಸೇವಿಸಿ, ಸತು ಸೇವಿಸಿ, ಕಬ್ಬಿಣದಂಶವಿರುವ ಆಹಾರ ಸೇವಿಸಿ ಎಂದೆಲ್ಲಾ ಹೇಳುತ್ತಾರೆ. ರಕ್ತಹೀನತೆ ತಡೆಗಟ್ಟಲು ಕಬ್ಬಿಣದಂಶವಿರುವ ಆಹಾರ ಸೇವಿಸಬೇಕು, ಹಾಗಂತ ಕಬ್ಬಿಣ ತಿಂದರೆ ಆದೀತೆ? ಆದರೆ ಈತ ಪೆದ್ದುತನದಿಂದ ನಾಣ್ಯಗಳು ಹಾಗೂ ಅಯಸ್ಕಾಂತ ತಿಂದಿದ್ದಾನೆ, ಅದರ ಪರಿಣಾಮ ನೇರ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಬಾಡಿ ಬಿಲ್ಡಿಂಗ್ ಮಾಡುವ ಪ್ರಯತ್ನದಲ್ಲಿದ್ದ
26 ವರ್ಷದ ಯುವಕ ಬೇರೆ, ನನ್ನ ಮೈಕಟ್ಟು ನೋಡಿದರೆ ವಾವ್ ಅನ್ನಬೇಕೆಂಬ ಆಸೆ ಅವನದ್ದು ಅದಕ್ಕೆ ದೇಹಕ್ಕೆ ಜಿಂಕ್ ಸಹಾಯಕಾರಿ ಎಂಬುವುದು ಗೊತ್ತು, ಆದರೆ ಅದು ಆಹಾರದಿಂದ ಪಡೆಯಬೇಕು ಅಥವಾ ಸಪ್ಲೆಮೆಂಟ್ ತೆಗೆದುಕೊಳ್ಳಬೇಕು ಎಂದು ಏಕೆ ಗೊತ್ತಾಗಿಲ್ಲವೋ, ನೇರ ನಾಣ್ಯ ಹಾಗೂ ಅಯಸ್ಕಾಂತ ತಿಂದಿದ್ದಾನೆ. ಹೀಗೆ ತಿಂದರೆ ಆತ ಅವುಗಳಂತೆಯೇ ದೇಹ ಸ್ಟ್ರಾಂಗ್ ಆಗುತ್ತೆ ಎಂದು ಯೋಚಿಸಿರಬಹುದು, ಆದರೆ ಅದು ಜೀರ್ಣ ಆಗಲ್ಲ ಅಂತ ಗೊತ್ತಿರಲ್ಲ.
ತೀವ್ರ ಹೊಟ್ಟೆ ನೋವಿನ ಸಮಸ್ಯೆ ಬಳಲಿದ ಯುವಕ
ಈ ಯುವಕನಿಗೆ ಕಳೆದ ಕೆಲವು ದಿನಗಳಿಂದ ತೀವ್ರ ಹೊಟ್ಟೆನೋವು ಉಂಟಾಗಿತ್ಯು, ಜೊತೆಗೆ ತುಂಬಾನೇ ವಾಂತಿ, ಮನೆಯವರು ಆತನನ್ನು ಆಸ್ಪತ್ರೆಗೆ ಕರೆ ತಂದಿದ್ದಾರೆ, ವೈದ್ಯರು ಸ್ಕ್ಯಾನಿಂಗ್ ಮಾಡಿದಾಗ ವೈದ್ಯರಿಗೆ ದಿಗ್ಭ್ರೆಮೆಯಾಗುವಂತೆ ಇತ್ತು ಆ ರಿಪೋರ್ಟ್, ಏಕೆಂದರೆ ಆ ಯುವಕ ಹೊಟ್ಟೆಯಲ್ಲಿ 39 ನಾಣ್ಯಗಳಿತ್ತು. ಜೊತೆಗೆ ಅಯಸ್ಕಾಂತ ಕೂಡ ಪತ್ತೆಯಾಗಿತ್ತು. ಈತನ ನಾಣ್ಯ ಸೇವಿಸಿರುವುದರಿಂದ ಕರುಳಿಗೆ ಬ್ಲಾಕೇಜ್ ಕಂಡು ಬಂದಿತ್ತು.
ಕೂಡಲೇ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ನಾಣ್ಯಗಳನ್ನು, ಅಯಸ್ಕಾಂತ ಹೊರ ತೆಗೆದಿದ್ದಾರೆ. ಬಾಡಿ ಬಿಲ್ಡ್ ಮಾಡಲು ನಾಣ್ಯ ತಿಂದು ಡೆಡ್ಬಾಡಿ ಆಗುವ ಪರಿಸ್ಥಿತಿ ಆತನಿಗೆ ಉಂಟಾಯ್ತು. ಸರ್ಜರಿ ಸುಮಾರು ಎರಡು ಗಂಟೆ ಕಾಲ ಮಾಡಲಾಯ್ತು. ಈ ಯುವಕನಿಗೆ ಆಪರೇಷನ್ ಮಾಡಿದ ವೈದ್ಯರು ಡಾ. ಮಿತ್ತಲ್ ಯಾರೂ ಈ ರೀತಿಯ ಕೆಲಸ ಮಾಡಬಾರದು, ಆ ಯುವಕನ ಪ್ರಾಣಕ್ಕೆ ಅಪಾಯ ಬಂದಿತ್ತು, ನಾವು ಏಕೆ ಈ ರೀತಿ ಮಾಡಿದೆ ಎಂದು ಕೇಳಿದಾಗ ಬಾಡಿ ಬಿಲ್ಡ್ ಮಾಡುವ ಆಸೆಯಿಂದ ಎಂದು ಹೇಳಿದ, ಯಾರೂ ಈ ರೀತಿಯ ಕೆಲಸ ಮಾಡಬಾರದು ಎಂದು ವೈದ್ಯರು ಹೇಳಿದ್ದಾರೆ.
ಆತನೇ ಆ ರೀತಿ ತಿಂದನೋ ಅಥವಾ ಬೇರೆಯವರು ಆತನ ತಲೆಕೆಡಿಸಿ ಆ ರೀತಿ ಮಾಡಿದರೋ ಎಂದು ಗೊತ್ತಿಲ್ಲ, ಆತನಿಗೆ schizophrenia ಅಂದರೆ ಒಂದು ಬಗೆಯ ಮಾನಸಿಕ ಕಾಯಿಲೆ ಇತ್ತು ಎಂದು ವೈದ್ಯರು ಹೇಳಿದ್ದಾರೆ, ಹಾಗಾಗಿ ಬಹುಶಃ ಈತ ನಾಣ್ಯಗಳನ್ನು ಸೇವಿಸಿರಬಹುದು, ಮನೆಯವರು ಸಕಾಲಕ್ಕೆ ಆಸ್ಪತ್ರೆಗೆ ಕರೆತಂದಿದ್ದಕ್ಕೆ ಪ್ರಾಣ ಉಳಿದಿದೆ.



Click it and Unblock the Notifications
