Latest Updates
-
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ!
ಫಿಟ್ನೆಸ್ಗಾಗಿ 39 ನಾಣ್ಯಗಳು , ಅಯಸ್ಕಾಂತ ತಿಂದ ಭೂಪ: ಉಕ್ಕಿನಂಥ ಬಾಡಿಗಾಗಿ ಇವುಗಳನ್ನು ತಿಂದು ಡೆಡ್ಬಾಡಿ ಆಗುತ್ತಿದ್ದ ಪಾಪ!
ಮನುಷ್ಯರಿಗೆ ಎಂಥೆಲ್ಲಾ ಹುಚ್ಚುತನ ಎಂದು ಕೆಲವೊಂದು ಪ್ರಕರಣ ನೋಡಿದಾಗ ಅನಿಸದೆ ಇರಲ್ಲ. ದೇಹಕ್ಕೆ ಖನಿಜಾಂಶ ಅವಶ್ಯಕ ಹಾಗಂತ ಖನಿಜ ತಿಂದರೆ ಆಗುತ್ತೇ? ಆದರೆ ಇಲ್ಲೊಬ್ಬ ಪುಣ್ಯಾತ್ಮ ಅಂಥದ್ದೊಂದು ಕೆಲಸ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ದೆಹಲಿಯ ಶ್ರೀ ಗಂಗಾರಾಮ್ ಆಸ್ಪತ್ರೆಗೆ ಈ ವ್ಯಕ್ತಿ ದಾಖಲಾಗಿದ್ದು ವ್ಯಕ್ತಿಯ ದೇಹದಿಂದ ಬರೋಬರಿ 39 ನಾಣ್ಯಗಳು ಹಾಗೂ ಅಯಸ್ಕಾಂತ ಹೊರ ತೆಗೆದಿದ್ದಾರೆ, ಅದು 26 ವರ್ಷದ ಯುವಕನ ಮೈಯಿಂದ ಈ ಖನಿಜಾಂಶಗಳನ್ನು ಹೊರ ತೆಗೆಯಲಾಗಿದೆ. ಅಷ್ಟಕ್ಕೂ ಆತ ಈ ನಾಣ್ಯ, ಅಯಸ್ಕಾಂತ ಏಕೆ ನುಂಗಿದ ಎಂಬುವುದೇ ಇನ್ನೂ ಸ್ವಾರಸ್ಯಕರ.

ಉಕ್ಕಿನಂಥ ಮೈಕಟ್ಟು ಪಡೆಯಲು ಸತು ಬೇಕು, ಹಾಗಾಗಿ ಯುವಕ ಹೀಗೆ ಮಾಡಿದ್ದಾನೆ
ವೈದ್ಯರ ಬಳಿ, ನ್ಯೂಟ್ರಿಷಿಯನಿಸ್ಟ್ ಬಳಿ ಹೋದರೆ ನೀವು ಖನಿಜಾಂಶವಿರುವ ಆಹಾರ ಸೇವಿಸಿ, ಸತು ಸೇವಿಸಿ, ಕಬ್ಬಿಣದಂಶವಿರುವ ಆಹಾರ ಸೇವಿಸಿ ಎಂದೆಲ್ಲಾ ಹೇಳುತ್ತಾರೆ. ರಕ್ತಹೀನತೆ ತಡೆಗಟ್ಟಲು ಕಬ್ಬಿಣದಂಶವಿರುವ ಆಹಾರ ಸೇವಿಸಬೇಕು, ಹಾಗಂತ ಕಬ್ಬಿಣ ತಿಂದರೆ ಆದೀತೆ? ಆದರೆ ಈತ ಪೆದ್ದುತನದಿಂದ ನಾಣ್ಯಗಳು ಹಾಗೂ ಅಯಸ್ಕಾಂತ ತಿಂದಿದ್ದಾನೆ, ಅದರ ಪರಿಣಾಮ ನೇರ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಬಾಡಿ ಬಿಲ್ಡಿಂಗ್ ಮಾಡುವ ಪ್ರಯತ್ನದಲ್ಲಿದ್ದ
26 ವರ್ಷದ ಯುವಕ ಬೇರೆ, ನನ್ನ ಮೈಕಟ್ಟು ನೋಡಿದರೆ ವಾವ್ ಅನ್ನಬೇಕೆಂಬ ಆಸೆ ಅವನದ್ದು ಅದಕ್ಕೆ ದೇಹಕ್ಕೆ ಜಿಂಕ್ ಸಹಾಯಕಾರಿ ಎಂಬುವುದು ಗೊತ್ತು, ಆದರೆ ಅದು ಆಹಾರದಿಂದ ಪಡೆಯಬೇಕು ಅಥವಾ ಸಪ್ಲೆಮೆಂಟ್ ತೆಗೆದುಕೊಳ್ಳಬೇಕು ಎಂದು ಏಕೆ ಗೊತ್ತಾಗಿಲ್ಲವೋ, ನೇರ ನಾಣ್ಯ ಹಾಗೂ ಅಯಸ್ಕಾಂತ ತಿಂದಿದ್ದಾನೆ. ಹೀಗೆ ತಿಂದರೆ ಆತ ಅವುಗಳಂತೆಯೇ ದೇಹ ಸ್ಟ್ರಾಂಗ್ ಆಗುತ್ತೆ ಎಂದು ಯೋಚಿಸಿರಬಹುದು, ಆದರೆ ಅದು ಜೀರ್ಣ ಆಗಲ್ಲ ಅಂತ ಗೊತ್ತಿರಲ್ಲ.
ತೀವ್ರ ಹೊಟ್ಟೆ ನೋವಿನ ಸಮಸ್ಯೆ ಬಳಲಿದ ಯುವಕ
ಈ ಯುವಕನಿಗೆ ಕಳೆದ ಕೆಲವು ದಿನಗಳಿಂದ ತೀವ್ರ ಹೊಟ್ಟೆನೋವು ಉಂಟಾಗಿತ್ಯು, ಜೊತೆಗೆ ತುಂಬಾನೇ ವಾಂತಿ, ಮನೆಯವರು ಆತನನ್ನು ಆಸ್ಪತ್ರೆಗೆ ಕರೆ ತಂದಿದ್ದಾರೆ, ವೈದ್ಯರು ಸ್ಕ್ಯಾನಿಂಗ್ ಮಾಡಿದಾಗ ವೈದ್ಯರಿಗೆ ದಿಗ್ಭ್ರೆಮೆಯಾಗುವಂತೆ ಇತ್ತು ಆ ರಿಪೋರ್ಟ್, ಏಕೆಂದರೆ ಆ ಯುವಕ ಹೊಟ್ಟೆಯಲ್ಲಿ 39 ನಾಣ್ಯಗಳಿತ್ತು. ಜೊತೆಗೆ ಅಯಸ್ಕಾಂತ ಕೂಡ ಪತ್ತೆಯಾಗಿತ್ತು. ಈತನ ನಾಣ್ಯ ಸೇವಿಸಿರುವುದರಿಂದ ಕರುಳಿಗೆ ಬ್ಲಾಕೇಜ್ ಕಂಡು ಬಂದಿತ್ತು.
ಕೂಡಲೇ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ನಾಣ್ಯಗಳನ್ನು, ಅಯಸ್ಕಾಂತ ಹೊರ ತೆಗೆದಿದ್ದಾರೆ. ಬಾಡಿ ಬಿಲ್ಡ್ ಮಾಡಲು ನಾಣ್ಯ ತಿಂದು ಡೆಡ್ಬಾಡಿ ಆಗುವ ಪರಿಸ್ಥಿತಿ ಆತನಿಗೆ ಉಂಟಾಯ್ತು. ಸರ್ಜರಿ ಸುಮಾರು ಎರಡು ಗಂಟೆ ಕಾಲ ಮಾಡಲಾಯ್ತು. ಈ ಯುವಕನಿಗೆ ಆಪರೇಷನ್ ಮಾಡಿದ ವೈದ್ಯರು ಡಾ. ಮಿತ್ತಲ್ ಯಾರೂ ಈ ರೀತಿಯ ಕೆಲಸ ಮಾಡಬಾರದು, ಆ ಯುವಕನ ಪ್ರಾಣಕ್ಕೆ ಅಪಾಯ ಬಂದಿತ್ತು, ನಾವು ಏಕೆ ಈ ರೀತಿ ಮಾಡಿದೆ ಎಂದು ಕೇಳಿದಾಗ ಬಾಡಿ ಬಿಲ್ಡ್ ಮಾಡುವ ಆಸೆಯಿಂದ ಎಂದು ಹೇಳಿದ, ಯಾರೂ ಈ ರೀತಿಯ ಕೆಲಸ ಮಾಡಬಾರದು ಎಂದು ವೈದ್ಯರು ಹೇಳಿದ್ದಾರೆ.
ಆತನೇ ಆ ರೀತಿ ತಿಂದನೋ ಅಥವಾ ಬೇರೆಯವರು ಆತನ ತಲೆಕೆಡಿಸಿ ಆ ರೀತಿ ಮಾಡಿದರೋ ಎಂದು ಗೊತ್ತಿಲ್ಲ, ಆತನಿಗೆ schizophrenia ಅಂದರೆ ಒಂದು ಬಗೆಯ ಮಾನಸಿಕ ಕಾಯಿಲೆ ಇತ್ತು ಎಂದು ವೈದ್ಯರು ಹೇಳಿದ್ದಾರೆ, ಹಾಗಾಗಿ ಬಹುಶಃ ಈತ ನಾಣ್ಯಗಳನ್ನು ಸೇವಿಸಿರಬಹುದು, ಮನೆಯವರು ಸಕಾಲಕ್ಕೆ ಆಸ್ಪತ್ರೆಗೆ ಕರೆತಂದಿದ್ದಕ್ಕೆ ಪ್ರಾಣ ಉಳಿದಿದೆ.



Click it and Unblock the Notifications