Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
Darshan: ನಟ ದರ್ಶನ್ ಬೆನ್ನು ಮೂಳೆ ಶಸ್ತ್ರಚಿಕಿತ್ಸೆ ಯಾವಾಗ? ಅವರ IVDP ಸಮಸ್ಯೆ ಬಗ್ಗೆ ನಿಮಗೆ ಗೊತ್ತಾ?
ಸ್ಯಾಂಡಲ್ವುಡ್ ಸ್ಟಾರ್ ನಟ, ಬಾಕ್ಸ್ ಆಫೀಸ್ ಸುಲ್ತಾನ ನಟ ದರ್ಶನ್ ಜಾಮೀನು ಮೇಲೆ ಹೊರಬಂದ ಬಳಿಕ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಸಂಪೂರ್ಣ ವಿಶ್ರಾಂತಿಯ ಮೊರೆ ಹೋಗಿರುವ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಆದ್ರೆ ಈ ಫೆಬ್ರವರಿ ಅವರ ಹುಟ್ಟುಹಬ್ಬ ಹಿನ್ನೆಲೆ ವಿಡಿಯೋ ಮಾಡಿ ಅಭಿಮಾನಿಗಳಿಗೆ ಮನವಿ ಹಾಗೂ ಧನ್ಯವಾದ ಕೂಡ ಹೇಳಿದ್ದಾರೆ.
ಹಾಗೆ ನಟಿ ರಕ್ಷಿತಾ ನಿರ್ದೇಶಕ ಪ್ರೇಮ್ ಮನೆಯಲ್ಲಿ ರಾಣಾ ವಿವಾಹಕ್ಕೆ ದಂಪತಿ ಸಮೇತ ಅವರು ಆಗಮಿಸಿದ್ದರು. ಹಾಗೆ ಅವರ ಹುಟ್ಟು ಹಬ್ಬ ಹಿನ್ನೆಲೆ ವಿಡಿಯೋ ಕೂಡ ಮಾಡಿದ್ದಾರೆ. ಹುಟ್ಟು ಹಬ್ಬದ ಅಂಗವಾಗಿ ಮನೆ ಹತ್ತಿರ ಯಾರು ಬಾರದಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಹಾಗೆ ಅನಾರೋಗ್ಯ ಹಿನ್ನೆಲೆ ಯಾರನ್ನೂ ಭೇಟಿಯಾಗುವುದಿಲ್ಲ ಎಂದಿದ್ದಾರೆ.

ವಿಡಿಯೋದಲ್ಲಿ ಅವರು ಅಭಿಮಾನಿಗಳ ಕುರಿತು ಮಾತನಾಡುತ್ತಾ, ಶಸ್ತ್ರಚಿಕಿತ್ಸೆ ಮಾಡಲೇಬೇಕಿದೆ. ಒಂದಲ್ಲಾ ಒಂದು ದಿನ ಶಸ್ತ್ರ ಚಿಕಿತ್ಸೆಗೆ ಒಳಗಾಗುವುದು ಖಚಿತ ಎಂದಿದ್ದಾರೆ. ತೀವ್ರ ಬೆನ್ನು ನೋವಿನಿಂದ ಬಳಲಿದ್ದ ಅವರು ಅನಾರೋಗ್ಯ ಕಾರಣ ನೀಡಿಯೇ ಜಾಮೀನಿಗೆ ಅರ್ಜಿ ಹಾಕಿದ್ದರು. ಶಸ್ತ್ರ ಚಿಕಿತ್ಸೆ ನಡೆಸಬೇಕಿರುವುದು ಅನಿವಾರ್ಯ ಎಂದು ದರ್ಶನ್ ಪರ ವಕೀಲರು ವಾದ ಮಾಡಿ ಜಾಮೀನು ಕೊಡಿಸುವಲ್ಲಿ ಯಶಸ್ವಿಯೂ ಆಗಿದ್ದರು.
ಹಾಗಾದ್ರೆ ದರ್ಶನ್ಗೆ ಕಾಡುತ್ತಿರುವ ಸಮಸ್ಯೆ ಏನು?
ದರ್ಶನ್ ಜೈಲಿನಲ್ಲಿದಾಗಲೂ ನಡೆದಾಡಲು ಹಾಗೂ ಕುಳಿತುಕೊಳ್ಳಲು ಸಮಸ್ಯೆ ಎದುರಿಸಿದ್ದಾರೆ. ಬೆನ್ನು ನೋವಿನ ಕಾರಣ ಓಡಾಡಲು ಕೂಡ ಕಷ್ಟಪಡುತ್ತಿದ್ದರು. ತಾನಾಗಿಯೇ ನೋವು ಕಡಿಮೆ ಆಗಿದ್ದರೆ ಶಸ್ತ್ರ ಚಿಕಿತ್ಸೆಯ ಅಗತ್ಯವಿರಲಿಲ್ಲವಂತೆ. ಆದ್ರೆ ಈಗ ಶಸ್ತ್ರ ಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಹಾಗಾದ್ರೆ ಅವರಿಗೆ ಕಾಡಿದ ಬೆನ್ನು ನೋವಿನ ಸಮಸ್ಯೆ ಏನು?
ವೈದ್ಯಕೀಯ ವರದಿಯಲ್ಲಿ ದರ್ಶನ್ ಬೆನ್ನುಮೂಳೆಯಲ್ಲಿ ಐದನೇ ಲಂಬರ್ (L5) ಮತ್ತು ಮೊದಲ ಸ್ಯಾಕ್ರಲ್ (S1) ನಡುವಿನ ನರಗಳ ಮೇಲಿನ ಸಂಕೋಚನದಿಂದಾಗಿ ಇಂಟರ್ವರ್ಟೆಬ್ರಲ್ ಡಿಸ್ಕ್ ಪ್ರೋಲ್ಯಾಪ್ಸ್ (IVDP- Intervertebral Disc Prolapse) ಉಂಟಾಗಿದೆ ಎಂದು ಹೇಳಲಾಗಿದೆ. ಬೆನ್ನು ಮೂಳೆ ಅಥವಾ ಸ್ಪೈನಲ್ ಕಾರ್ಡ್ ರಚನೆಯಲ್ಲಿ ಒಂದು ಮೂಳೆ ಹಾಗೂ ಮತ್ತೊಂದು ಮೂಳೆ ನಡುವೆ ಡಿಸ್ಕ್ ರಚನೆ ಹಾಗೂ ಅದರಲ್ಲಿ ಫ್ಲೂಯಿಡ್ ಕೂಡ ಇರುತ್ತದೆ.
ಎರಡು ಮೂಳೆ ನಡುವೆ ಇರುವ ಮೃದುವಾದ ರಬ್ಬರ್ನಂತಹ ರಚನೆಯು ಕುಶನ್ ರೀತಿ ಕೆಲಸ ಮಾಡುತ್ತದೆ. ಇದು ಮೂಳೆಗಳ ನಡುವೆ ಸಂಪರ್ಕ ಸಾಧಿಸದಂತೆ ನೋಡಿಕೊಳ್ಳುತ್ತದೆ. ಹಾಗೆ ಮೂಳೆ ಸವೆಯದಂತೆ ನೋಡಿಕೊಳ್ಳುತ್ತದೆ. ಈ ಡಿಸ್ಕ್ಗಳ ಹೊರಭಾಗವು ಗಟ್ಟಿಯಾದ ಫೈಬ್ರೊಕಾರ್ಟಿಲೇಜ್ ಎಂಬ ಅಂಶದಿಂದ ಮಾಡಲ್ಪಟ್ಟಿರುತ್ತದೆ.
ಒಂದು ವೇಳೆ ಈ ಡಿಸ್ಕ್ನಲ್ಲಿನ ಹೊರ ಪದರವಾದ ಫೈಬ್ರೊಕಾರ್ಟಿಲ್ಯಾಜಿನಸ್ ಹಾನಿಯಾದಾಗ ಮೂಳೆಗಳ ನಡುವಿನ ನ್ಯೂಕ್ಲಿಯಸ್ ಪಲ್ಪೋಸಸ್ ಮೂಲಕ ಸ್ರವಿಕೆ ಆರಂಭವಾಗುತ್ತದೆ. ಇದು ಅತೀಯಾದ ನೋವು, ಓಡಾಡಲು ಆಗದೇ ಇರುವಂತೆ ಮಾಡುತ್ತದೆ. ಸಾಮಾನ್ಯವಾಗಿ ಈ ಕ್ರಿಯೆಯನ್ನು ಡಿಸ್ಕ್ ಜಾರುವಿಕೆ ಅಂತಲೂ ಕರೆಯುವುದುಂಟು.
ಸಂಕ್ರಾಂತಿ ಸಮಯಕ್ಕೆ ಶಸ್ತ್ರ ಚಿಕಿತ್ಸೆ
ಈ ಸಮಸ್ಯೆಯಿಂದ ಬಳಲುತ್ತಿರುವ ನಟ ದರ್ಶನ್ ಅವರಿಗೆ ಸಂಕ್ರಾತಿ ಹಬ್ಬದ ವೇಳೆಗೆ ಆಪರೇಷನ್ ಮಾಡುವ ಸಾಧ್ಯತೆ ಇದೆ. ಮೈಸೂರಿನಲ್ಲಿಯೇ ಈ ಶಸ್ತ್ರಚಿಕಿತ್ಸೆ ನೆರವೇರುವ ಸಾಧ್ಯತೆಯೂ ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ನಟ ದರ್ಶನ್ ಕೂಡ ತಮ್ಮ ವಿಡಿಯೋ ಸಂದೇಶದಲ್ಲಿ ಈ ಕುರಿತು ಹೇಳಿದ್ದು, ಶಸ್ತ್ರ ಚಿಕಿತ್ಸೆ ಮಾಡದೆ ವಿಧಿ ಇಲ್ಲ ಎಂದಿದ್ದಾರೆ.



Click it and Unblock the Notifications
