Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ನಡೆದಾಡುವ ರಾಮನನ್ನೇ ಸೃಷ್ಟಿಸಿದ ಕಲಾವಿದ..! ಅಯೋಧ್ಯೆ ರಾಮನ ಹೋಲುವ ಬಾಲಕ
ಜನವರಿಯಲ್ಲಿ ಅಯೋಧ್ಯೆ ರಾಮಮಂದಿರ ಉದ್ಘಾಟನೆಗೊಂಡು ಭಾರೀ ಸಂಖ್ಯೆಯಲ್ಲಿ ಭಕ್ತರನ್ನು ಸೆಳೆಯುತ್ತಿದೆ. ಈ ನಡುವೆ ರಾಮಲಲ್ಲಾನಿಗೆ ಜರುಗುವ ಆರತಿ ದರ್ಶನ ಪಡೆಯಲು ಭಕ್ತರು ನಿತ್ಯ ಮಂದಿರಕ್ಕೆ ಭೇಟಿ ನೀಡುತ್ತಿದ್ದಾರೆ. ಅಲ್ಲದೆ ಬಾಲರಾಮನ ನೋಡಲೆಂದು ದೇಶದ ಮೂಲೆ ಮೂಲೆಯಿಂದಲೂ ಜನರ ಆಗಮನವಾಗುತ್ತಿದೆ.
ಇನ್ನೊಂದೆಡೆ ರಾಮನ ದರ್ಶನ ಪಡೆಯಲು ಸಾಧ್ಯವಾಗದವರಿಗಾಗಿ ದೂರದರ್ಶನ ವಾಹಿನಿ ಆರತಿಯನ್ನು ನೇರಪ್ರಸಾರ ಮಾಡುತ್ತಿದೆ. ಇದೂ ಸಾಲದಂತೆ ಆನ್ಲೈನ್ನಲ್ಲಿ ಪಾಸ್ಗಳ ಪಡೆಯಲು ಅನುವು ಮಾಡಿಕೊಡಲಾಗಿದೆ. ಈ ನಡುವೆ ರಾಮಲಲ್ಲಾನ ದರ್ಶನಕ್ಕಾಗಿ ಕಾಯುತ್ತಿರುವ ದಂಪತಿ ಬಾಲಕನೊಬ್ಬನಿಗೆ ರಾಮನಂತೆ ಬಣ್ಣ ಹಚ್ಚಿ ಸೇಮ್ ರಾಮನಂತೆ ಕಾಣುವಂತೆ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಈ ದಂಪತಿ ಬಾಲಕನೊಬ್ಬನಿಗೆ ರಾಮನಂತೆ ಬಣ್ಣ ಹಚ್ಚಿ ವೇಷ ಹಾಕಿಸಿ ಸಂಭ್ರಮಿಸಿದ್ದಾರೆ. ಪಶ್ಚಿಮ ಬಂಗಾಳದ ಅಸನ್ಸೋಲ್ನ ಆಶಿಶ್ ಕುಂದು ಎಂಬ ಕಲಾವಿದ ಬಾಲಕನಿಗೆ ರಾಮನಂತೆ ಬಣ್ಣ ಹಚ್ಚಿದ್ದಾರೆ. ಅವರ ಕಾರ್ಯ ಕಂಡು ಜನ ಬೆರಗಾಗಿದ್ದಾರೆ. ಏಕೆಂದರೆ ರಾಮ ಲಲ್ಲಾ ಮೂರ್ತಿಯಂತೆಯೇ ಆ ಬಾಲಕ ಕಾಣುತ್ತಾನೆ. ಅಷ್ಟೊಂದು ಹೋಲಿಕೆ ಈ ಕಲಾವಿದನ ಕೈಚಳಕದಲ್ಲಿ ಮೂಡಿ ಬಂದಿದೆ.

ಮೇಕಪ್ ಆರ್ಟಿಸ್ಟ್ ಕುಂದು ತನ್ನ ಪತ್ನಿಯ ಸಹಾಯದಿಂದ 9 ವರ್ಷದ ಬಾಲಕನನ್ನು ಅಯೋಧ್ಯೆಯ ರಾಮಮಂದಿರದಲ್ಲಿ ಇರಿಸಲಾಗಿರುವ ರಾಮಲಲ್ಲಾನ ವಿಗ್ರಹವನ್ನು ಹೋಲುವಂತೆ ಪರಿವರ್ತಿಸುವ ಕಾರ್ಯವನ್ನು ಕೈಗೊಂಡವರು. ಮನೆಯಲ್ಲಿ ತಯಾರಿಸಿದ ಮತ್ತು ಮಾರುಕಟ್ಟೆಯಲ್ಲಿ ಖರೀದಿಸಿದ ಮೇಕ್ಅಪ್ ವಸ್ತುಗಳ ಬಳಸಿ ಈ ಬಣ್ಣ ಬಳಿಯಲಾಗಿದೆಯಂತೆ. ಆದರೆ ಇದು ಒಂದೇ ದಿನ ಮಾಡಿದ ಕಲೆಯಲ್ಲವಂತೆ. ಇದಕ್ಕೂ ಮೊದಲು ಹಲವು ಬಾರಿ ಪ್ರಯತ್ನಿಸಿದ ಬಳಿಕ ಈ ರೀತಿಯ ಫಲಿತಾಂಶ ಅವರಿಗೆ ಸಿಕ್ಕಿದೆಯಂತೆ.
ನೀವು ಈ ಬಾಲಕನನ್ನು ಅಯೋಧ್ಯೆ ರಾಮ ಮಂದಿರ ರಾಮಲಲ್ಲಾನ ಪಕ್ಕದಲ್ಲಿ ನಿಲ್ಲಿಸಿದರೆ ಇಬ್ಬರಲ್ಲಿ ಯಾರು ನಿಜವಾದ ರಾಮ ಎಂದು ಕಂಡುಹಿಡಿಯುವುದು ಸಹ ಸ್ವಲ್ಪ ಕಷ್ಟವಾಗುತ್ತದೆ. ಅಷ್ಟೊಂದು ನಿಖರವಾಗಿ ಕಲಾವಿದ ರಾಮನ ಚಿತ್ರಿಸಿದ್ದಾನೆ. ಈ ರೀತಿ ಚಿತ್ರಿಸಲು ಅವರು ರಾಮನ ಚಿತ್ರವನ್ನು ಹಲವು ವಿಧದಲ್ಲಿ, ಹಲವು ಬಾರಿ ನೋಡಿದ್ದರಂತೆ. ಕೆಲವು ಫೋಟೋಗಳನ್ನು ಇಡೀ ದಿನ ನೋಡುತ್ತಿದ್ದರಂತೆ.
ಸದ್ಯ ಅವರ ಬಾಲರಾಮನ ಫೊಟೋಗಳು, ವಿಡಿಯೋಗಳು ಸಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿವೆ. ಅವರ ಕಾರ್ಯ, ನೈಪುಣ್ಯತೆ ಕಂಡು ಜನರು ಬೆರಗಾಗಿದ್ದಾರೆ. ಜೊತೆಗೆ ನಡೆದಾಡುವ ರಾಮಲಲ್ಲಾನ ಕಂಡು ನಿಬ್ಬೆರಗಾಗಿದ್ದಾರೆ.
ಈ ದಂಪತಿ ಬ್ಯೂಟಿ ಪಾರ್ಲರ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಒಂದು ದಿನ ಅವರಿಗೆ ರಾಮಲಲ್ಲಾನ ರೀತಿ ಬಾಲಕನಿಗೆ ಬಣ್ಣ ಹಚ್ಚು ಆಸೆ ಆಗಿತ್ತಂತೆ ಮತ್ತೆ ತಡ ಮಾಡದೆ ಈ ಕಾರ್ಯಕ್ಕೆ ಬೇಕಾಗಿದ್ದ ತಯಾರಿ ನಡೆಸಿದ್ದಾರೆ. ಇದಕ್ಕೆ ಅಬೀರ್ ಎಂಬ ಬಾಲಕನನ್ನೂ ಆಯ್ಕೆ ಮಾಡಿಕೊಂಡು ಕೆಲಸ ಆರಂಭಿಸಿದ್ದಾರೆ. ಮೊದಲು ಆತನ ಮೈ ಮೇಲೆ ಕಪ್ಪು ಬಣ್ಣ ಹಚ್ಚಲಾಗಿದೆ. ಜೊತೆಗೆ ರಾಮಲಲ್ಲಾನ ಕೈಯಲ್ಲಿದ್ದ ಬಿಲ್ಲು ಬಾಣವನ್ನೂ ಸಹ ಕೃತಕವಾಗಿ ತಯಾರಿಸಿದ್ದಾರೆ. ಎಲ್ಲ ಮುಗಿದ ಬಳಿಕ ಅಯೋಧ್ಯೆ ರಾಮ ಲಲ್ಲಾನಂತಯೇ ಈ ಬಾಲಕ ಕಂಡುಬಂದಿದ್ದಾನೆ.
ಈ ದಂಪತಿ ಜನವರಿಯಲ್ಲಿ ಮಂದಿರ ಉದ್ಘಾಟನೆಯ ದಿನವೇ ಈ ರೀತಿಯ ವಿಶೇಷವಾದ ಕಾರ್ಯ ಮಾಡುವ ಕನಸು ಹೊತ್ತಿದ್ದರಂತೆ ಆದರೆ ಅದು ಸಾಧ್ಯವಾಗಿರಲಿಲ್ಲ. ಬಳಿಕ ಅಂದಿನಿಂದ ಇಂದಿನವರೆಗೂ ಈ ರೀತಿ ಏನಾದರು ಮಾಡಬೇಕು ಎಂದು ಬಾಲಕನನ್ನು ನಡೆದಾಡುವ ರಾಮಲಲ್ಲಾನನ್ನಾಗಿ ಪರಿವರ್ತಿಸಿದ್ದಾರೆ.
ಆನ್ಲೈನ್ನಲ್ಲಿ ಈ ವಿಡಿಯೋ, ಫೋಟೋಗಳೂ ವೈರಲ್ ಆಗಿದ್ದು, ಇದನ್ನು ಕಂಡ ಜನ ಒಂದು ಕ್ಷಣ ಗೊಂದಲಕ್ಕೊಳಗಾಗಿದ್ದಾರೆ. ರಾಮನ ಮೂರ್ತಿಗೆ ಜೀವ ಬಂದಿದ್ಯಾ ಎಂದು ಅಚ್ಚರಿ ಹೊರಹಾಕಿದ್ದಾರೆ.



Click it and Unblock the Notifications