Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಡೆದಾಡುವ ರಾಮನನ್ನೇ ಸೃಷ್ಟಿಸಿದ ಕಲಾವಿದ..! ಅಯೋಧ್ಯೆ ರಾಮನ ಹೋಲುವ ಬಾಲಕ
ಜನವರಿಯಲ್ಲಿ ಅಯೋಧ್ಯೆ ರಾಮಮಂದಿರ ಉದ್ಘಾಟನೆಗೊಂಡು ಭಾರೀ ಸಂಖ್ಯೆಯಲ್ಲಿ ಭಕ್ತರನ್ನು ಸೆಳೆಯುತ್ತಿದೆ. ಈ ನಡುವೆ ರಾಮಲಲ್ಲಾನಿಗೆ ಜರುಗುವ ಆರತಿ ದರ್ಶನ ಪಡೆಯಲು ಭಕ್ತರು ನಿತ್ಯ ಮಂದಿರಕ್ಕೆ ಭೇಟಿ ನೀಡುತ್ತಿದ್ದಾರೆ. ಅಲ್ಲದೆ ಬಾಲರಾಮನ ನೋಡಲೆಂದು ದೇಶದ ಮೂಲೆ ಮೂಲೆಯಿಂದಲೂ ಜನರ ಆಗಮನವಾಗುತ್ತಿದೆ.
ಇನ್ನೊಂದೆಡೆ ರಾಮನ ದರ್ಶನ ಪಡೆಯಲು ಸಾಧ್ಯವಾಗದವರಿಗಾಗಿ ದೂರದರ್ಶನ ವಾಹಿನಿ ಆರತಿಯನ್ನು ನೇರಪ್ರಸಾರ ಮಾಡುತ್ತಿದೆ. ಇದೂ ಸಾಲದಂತೆ ಆನ್ಲೈನ್ನಲ್ಲಿ ಪಾಸ್ಗಳ ಪಡೆಯಲು ಅನುವು ಮಾಡಿಕೊಡಲಾಗಿದೆ. ಈ ನಡುವೆ ರಾಮಲಲ್ಲಾನ ದರ್ಶನಕ್ಕಾಗಿ ಕಾಯುತ್ತಿರುವ ದಂಪತಿ ಬಾಲಕನೊಬ್ಬನಿಗೆ ರಾಮನಂತೆ ಬಣ್ಣ ಹಚ್ಚಿ ಸೇಮ್ ರಾಮನಂತೆ ಕಾಣುವಂತೆ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಈ ದಂಪತಿ ಬಾಲಕನೊಬ್ಬನಿಗೆ ರಾಮನಂತೆ ಬಣ್ಣ ಹಚ್ಚಿ ವೇಷ ಹಾಕಿಸಿ ಸಂಭ್ರಮಿಸಿದ್ದಾರೆ. ಪಶ್ಚಿಮ ಬಂಗಾಳದ ಅಸನ್ಸೋಲ್ನ ಆಶಿಶ್ ಕುಂದು ಎಂಬ ಕಲಾವಿದ ಬಾಲಕನಿಗೆ ರಾಮನಂತೆ ಬಣ್ಣ ಹಚ್ಚಿದ್ದಾರೆ. ಅವರ ಕಾರ್ಯ ಕಂಡು ಜನ ಬೆರಗಾಗಿದ್ದಾರೆ. ಏಕೆಂದರೆ ರಾಮ ಲಲ್ಲಾ ಮೂರ್ತಿಯಂತೆಯೇ ಆ ಬಾಲಕ ಕಾಣುತ್ತಾನೆ. ಅಷ್ಟೊಂದು ಹೋಲಿಕೆ ಈ ಕಲಾವಿದನ ಕೈಚಳಕದಲ್ಲಿ ಮೂಡಿ ಬಂದಿದೆ.

ಮೇಕಪ್ ಆರ್ಟಿಸ್ಟ್ ಕುಂದು ತನ್ನ ಪತ್ನಿಯ ಸಹಾಯದಿಂದ 9 ವರ್ಷದ ಬಾಲಕನನ್ನು ಅಯೋಧ್ಯೆಯ ರಾಮಮಂದಿರದಲ್ಲಿ ಇರಿಸಲಾಗಿರುವ ರಾಮಲಲ್ಲಾನ ವಿಗ್ರಹವನ್ನು ಹೋಲುವಂತೆ ಪರಿವರ್ತಿಸುವ ಕಾರ್ಯವನ್ನು ಕೈಗೊಂಡವರು. ಮನೆಯಲ್ಲಿ ತಯಾರಿಸಿದ ಮತ್ತು ಮಾರುಕಟ್ಟೆಯಲ್ಲಿ ಖರೀದಿಸಿದ ಮೇಕ್ಅಪ್ ವಸ್ತುಗಳ ಬಳಸಿ ಈ ಬಣ್ಣ ಬಳಿಯಲಾಗಿದೆಯಂತೆ. ಆದರೆ ಇದು ಒಂದೇ ದಿನ ಮಾಡಿದ ಕಲೆಯಲ್ಲವಂತೆ. ಇದಕ್ಕೂ ಮೊದಲು ಹಲವು ಬಾರಿ ಪ್ರಯತ್ನಿಸಿದ ಬಳಿಕ ಈ ರೀತಿಯ ಫಲಿತಾಂಶ ಅವರಿಗೆ ಸಿಕ್ಕಿದೆಯಂತೆ.
ನೀವು ಈ ಬಾಲಕನನ್ನು ಅಯೋಧ್ಯೆ ರಾಮ ಮಂದಿರ ರಾಮಲಲ್ಲಾನ ಪಕ್ಕದಲ್ಲಿ ನಿಲ್ಲಿಸಿದರೆ ಇಬ್ಬರಲ್ಲಿ ಯಾರು ನಿಜವಾದ ರಾಮ ಎಂದು ಕಂಡುಹಿಡಿಯುವುದು ಸಹ ಸ್ವಲ್ಪ ಕಷ್ಟವಾಗುತ್ತದೆ. ಅಷ್ಟೊಂದು ನಿಖರವಾಗಿ ಕಲಾವಿದ ರಾಮನ ಚಿತ್ರಿಸಿದ್ದಾನೆ. ಈ ರೀತಿ ಚಿತ್ರಿಸಲು ಅವರು ರಾಮನ ಚಿತ್ರವನ್ನು ಹಲವು ವಿಧದಲ್ಲಿ, ಹಲವು ಬಾರಿ ನೋಡಿದ್ದರಂತೆ. ಕೆಲವು ಫೋಟೋಗಳನ್ನು ಇಡೀ ದಿನ ನೋಡುತ್ತಿದ್ದರಂತೆ.
ಸದ್ಯ ಅವರ ಬಾಲರಾಮನ ಫೊಟೋಗಳು, ವಿಡಿಯೋಗಳು ಸಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿವೆ. ಅವರ ಕಾರ್ಯ, ನೈಪುಣ್ಯತೆ ಕಂಡು ಜನರು ಬೆರಗಾಗಿದ್ದಾರೆ. ಜೊತೆಗೆ ನಡೆದಾಡುವ ರಾಮಲಲ್ಲಾನ ಕಂಡು ನಿಬ್ಬೆರಗಾಗಿದ್ದಾರೆ.
ಈ ದಂಪತಿ ಬ್ಯೂಟಿ ಪಾರ್ಲರ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಒಂದು ದಿನ ಅವರಿಗೆ ರಾಮಲಲ್ಲಾನ ರೀತಿ ಬಾಲಕನಿಗೆ ಬಣ್ಣ ಹಚ್ಚು ಆಸೆ ಆಗಿತ್ತಂತೆ ಮತ್ತೆ ತಡ ಮಾಡದೆ ಈ ಕಾರ್ಯಕ್ಕೆ ಬೇಕಾಗಿದ್ದ ತಯಾರಿ ನಡೆಸಿದ್ದಾರೆ. ಇದಕ್ಕೆ ಅಬೀರ್ ಎಂಬ ಬಾಲಕನನ್ನೂ ಆಯ್ಕೆ ಮಾಡಿಕೊಂಡು ಕೆಲಸ ಆರಂಭಿಸಿದ್ದಾರೆ. ಮೊದಲು ಆತನ ಮೈ ಮೇಲೆ ಕಪ್ಪು ಬಣ್ಣ ಹಚ್ಚಲಾಗಿದೆ. ಜೊತೆಗೆ ರಾಮಲಲ್ಲಾನ ಕೈಯಲ್ಲಿದ್ದ ಬಿಲ್ಲು ಬಾಣವನ್ನೂ ಸಹ ಕೃತಕವಾಗಿ ತಯಾರಿಸಿದ್ದಾರೆ. ಎಲ್ಲ ಮುಗಿದ ಬಳಿಕ ಅಯೋಧ್ಯೆ ರಾಮ ಲಲ್ಲಾನಂತಯೇ ಈ ಬಾಲಕ ಕಂಡುಬಂದಿದ್ದಾನೆ.
ಈ ದಂಪತಿ ಜನವರಿಯಲ್ಲಿ ಮಂದಿರ ಉದ್ಘಾಟನೆಯ ದಿನವೇ ಈ ರೀತಿಯ ವಿಶೇಷವಾದ ಕಾರ್ಯ ಮಾಡುವ ಕನಸು ಹೊತ್ತಿದ್ದರಂತೆ ಆದರೆ ಅದು ಸಾಧ್ಯವಾಗಿರಲಿಲ್ಲ. ಬಳಿಕ ಅಂದಿನಿಂದ ಇಂದಿನವರೆಗೂ ಈ ರೀತಿ ಏನಾದರು ಮಾಡಬೇಕು ಎಂದು ಬಾಲಕನನ್ನು ನಡೆದಾಡುವ ರಾಮಲಲ್ಲಾನನ್ನಾಗಿ ಪರಿವರ್ತಿಸಿದ್ದಾರೆ.
ಆನ್ಲೈನ್ನಲ್ಲಿ ಈ ವಿಡಿಯೋ, ಫೋಟೋಗಳೂ ವೈರಲ್ ಆಗಿದ್ದು, ಇದನ್ನು ಕಂಡ ಜನ ಒಂದು ಕ್ಷಣ ಗೊಂದಲಕ್ಕೊಳಗಾಗಿದ್ದಾರೆ. ರಾಮನ ಮೂರ್ತಿಗೆ ಜೀವ ಬಂದಿದ್ಯಾ ಎಂದು ಅಚ್ಚರಿ ಹೊರಹಾಕಿದ್ದಾರೆ.



Click it and Unblock the Notifications