Latest Updates
-
ಎವೆಲಿನ್ ಶರ್ಮಾ ವಿಚ್ಛೇದನ: ಮಕ್ಕಳ ಭವಿಷ್ಯಕ್ಕಾಗಿ ಈ ಜೋಡಿ ಆರಿಸಿದ ಹೊಸ ದಾರಿ ಯಾವುದು? -
ಬಿಸಿಲ ಧಗೆಗೆ ತಂಪಾದ ಗುಡ್ ನ್ಯೂಸ್: ಮೇ 8 ರಿಂದ ಶುರುವಾಗಲಿದೆ ಗ್ರೇಟ್ ಸಮ್ಮರ್ ಸೇಲ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಪದ್ಧತಿಯಿಂದ ಇಡೀ ದಿನ ಇರಿ ಫ್ರೆಶ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಕೂಲ್ ಆಗಿರಿ! -
ಬಿಸಿಗಾಳಿಯ ಅಬ್ಬರ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ! -
ಹೊಸ ಜೀವನ ಆರಂಭಿಸುವ ಮುನ್ನ ಎಚ್ಚರ: ವಿಚ್ಛೇದನ ಮತ್ತು ಕಾನೂನು ಹಕ್ಕುಗಳ ಬಗ್ಗೆ ಹೈಕೋರ್ಟ್ ಹೇಳಿದ್ದೇನು? -
ಬಿರುಗಾಳಿ ಮತ್ತು ಬಿಸಿಲ ಬೇಗೆ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ನಿಮ್ಮ ಜೀವ ಉಳಿಸುವ ಸರಳ ಮನೆಮದ್ದುಗಳಿವು! -
ಬಿಸಿಲಿನ ಬೇಗೆಗೆ ತತ್ತರಿಸಿದ್ದೀರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಕೂಲಿಂಗ್ ಹ್ಯಾಕ್ಸ್ ಮಿಸ್ ಮಾಡ್ಬೇಡಿ! -
ಬದಲಾಗುತ್ತಿರುವ ಹವಾಮಾನ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಕಾದಿದೆ ಅಪಾಯ!
ರುದ್ರಾಕ್ಷಿ ಧರಿಸಿದಾಗ ಅಪ್ಪಿ-ತಪ್ಪಿಯೂ ಈ 4 ಕಾರ್ಯ ಮಾಡಲೇಬಾರದು
ಶಿವನ ಕೊರಳಿನಲ್ಲಿರುವ ರುದ್ರಾಕ್ಷಿಗೆ ಮಹತ್ವದ ಸ್ಥಾನವಿದೆ. ಅನೇಕ ಸಾಧು- ಸಂತರು ಸೇರಿದಂತೆ ಸಾಮಾನ್ಯ ಜನ ಕೂಡ ರುದ್ರಾಕ್ಷಿಯನ್ನು ಧರಿಸುತ್ತಾರೆ. ಆದರೆ ರುದ್ರಾಕ್ಷಿಯ ಬಗ್ಗೆ ನಿಮಗೆಷ್ಟು ಗೊತ್ತು? ಶಿವನ ಕಣ್ಣೀರು ಭೂಮಿಗೆ ಬಿದ್ದಾಗ ರುದ್ರಾಕ್ಷಿ ಸೃಷ್ಟಿಯಾಯ್ತಂತೆ. ರುದ್ರಾಕ್ಷಿ ಧಾರಣೆಗೆ ಹಿಂದೂ ಧರ್ಮದಲ್ಲಿ ಪ್ರಾಮುಖ್ಯತೆಯನ್ನು ನೀಡಲಾಗಿದೆ.
ರುದ್ರಾಕ್ಷಿಯನ್ನು ಮಹಾದೇವನ ಪ್ರತಿರೂಪ ಅಂತಲೇ ಕರೆಯಲಾಗುತ್ತದೆ. ಇನ್ನೂ ಈ ರುದ್ರಾಕ್ಷಿಯನ್ನು ನಮ್ಮ ಮನಸ್ಸಿಗೆ ಬಂದ ಹಾಗೇ ಧರಿಸುವ ಹಾಗಿಲ್ಲ. ಅದಕ್ಕೆ ಅದರದ್ದೇ ಆದ ಕಟ್ಟುಪಾಡುಗಳಿದೆ. ಅಷ್ಟಕ್ಕು ರುದ್ರಾಕ್ಷಿಯನ್ನು ಧರಿಸುವುದು ಹೇಗೆ? ಯಾವೆಲ್ಲಾ ಸಂದರ್ಭಗಳಲ್ಲಿ ರುದ್ರಾಕ್ಷಿ ಧರಿಸಬಾರದು? ರುದ್ರಾಕ್ಷಿ ಧರಿಸುವಾಗ ಯಾವೆಲ್ಲಾ ತಪ್ಪುಗಳನ್ನು ಮಾಡಬಾರದು ಅನ್ನೋದನ್ನು ತಿಳಿಯೋಣ.

ರುದ್ರಾಕ್ಷಿಯ ಮಹತ್ವವೇನು?
ರುದ್ರಾಕ್ಷಿ ಮಣಿಗಳನ್ನು ರುದ್ರಾಕ್ಷಿ ಮರದಿಂದ ಸಂಗ್ರಹ ಮಾಡಲಾಗುತ್ತದೆ. ಹಾಗೂ ಇದಕ್ಕೆ ಸನಾತನ ಧರ್ಮದಲ್ಲಿ ಪೂಜ್ಯನೀಯ ಸ್ಥಾನ ನೀಡಲಾಗಿದೆ. ಸಂಸ್ಕೃತ ಪದವಾದ "ರುದ್ರ" ಹಾಗೂ "ಅಕ್ಷ" ದಿಂದ ರುದ್ರಾಕ್ಷಿ ರೂಪುಗೊಂಡಿದೆ. ಅಕ್ಷ ಎಂದರೆ ಶಿವನ ಕಣ್ಣೀರು. ಅದೇ ರೀತಿ ರುದ್ರ ಎಂದರೆ ಶಿವ. ಇದೇ ಕಾರಣಕ್ಕೆ ರುದ್ರಾಕ್ಷಿಯನ್ನು ಆ ಪರಶಿವನ ದೇಹದ ಒಂದು ಅಂಗ ಅಂತಲೇ ಕರೆಯಲಾಗುತ್ತದೆ. ಇದೇ ಕಾರಣಕ್ಕೆ ಹಿಂದೂ ಧರ್ಮದಲ್ಲಿ ರುದ್ರಾಕ್ಷಿಗೆ ಒಂದು ಪವಿತ್ರ ಸ್ಥಾನ ಕಲ್ಪಿಸಿರೋದು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರುದ್ರಾಕ್ಷಿಗೆ ಮಾನವರ ಮನಸ್ಸನ್ನು ಶಾಂತಗೊಳಿಸುವ ಮತ್ತು ಕೋಪವನ್ನು ತಣ್ಣಗಾಗಿಸುವ ಶಕ್ತಿ ಇದ್ಯಂತೆ.
ಯಾವ ಸಂದರ್ಭಗಳಲ್ಲಿ ರುದ್ರಾಕ್ಷಿ ಧರಿಸಬಾರದು?
1. ಮಧ್ಯಪಾನ, ಧೂಮಪಾನ ಮತ್ತು ಮಾಂಸಹಾರ ಸೇವಿಸುವಾಗ
ನಿಮಗೊಂದು ವಿಚಾರ ಗೊತ್ತಿರಲಿ ಮಧ್ಯಪಾನ, ಧೂಮಪಾನ ಮತ್ತು ಮಾಂಸಹಾರ ಸೇವನೆ ಮಾಡುವಾಗ ರುದ್ರಾಕ್ಷಿಯನ್ನು ಧರಿಸಬಾರದು. ಇದರಿಂದ ರುದ್ರಾಕ್ಷಿಯ ಪಾವಿತ್ರ್ಯತೆ ಹಾಳಾಗುವುದು ಮಾತ್ರವಲ್ಲದೇ, ಇದನ್ನು ಧರಿಸಿದ ವ್ಯಕ್ತಿಯ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಲಿದೆಯಂತೆ. ಹೀಗಾಗಿ ಈ ಮೂರು ಚಟುವಟಿಕೆಗಳನ್ನು ಮಾಡುವಾಗ ರುದ್ರಾಕ್ಷಿಯನ್ನು ಧರಿಸಲೇಬೇಡಿ.
2. ಮಲಗುವಾಗ ರುದ್ರಾಕ್ಷಿ ಧರಿಸಬೇಡಿ
ಕೆಲವೊಂದು ನಂಬಿಕೆಗಳ ಪ್ರಕಾರ ಮಲಗಿದ ನಂತರ ನಮ್ಮ ದೇಹವು ಪಾವಿತ್ರ್ಯತೆಯನ್ನು ಕಳೆದುಕೊಳ್ಳುತ್ತಂತೆ. ಹೀಗಾಗಿ ಇದರಿಂದ ರುದ್ರಾಕ್ಷಿಯ ಪಾವಿತ್ರ್ಯತೆಗೆ ತೊಂದರೆಯನ್ನುಂಟು ಮಾಡುತ್ತಂತೆ. ಹೀಗಾಗಿ ಮಲಗೋದಕ್ಕೆ ಹೋಗೋದಕ್ಕಿಂತ ಮೊದಲು ರುದ್ರಾಕ್ಷಿಯನ್ನು ತೆಗೆದಿಡೋದು ಉತ್ತಮ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರುದ್ರಾಕ್ಷಿಯನ್ನು ದಿಂಬಿನ ಅಡಿಯಲ್ಲಿ ಇಟ್ಟುಕೊಂಡರೆ ಆಗ ನಮಗೆ ಕೆಟ್ಟ ಕನಸುಗಳು ಬೀಳುವುದಿಲ್ಲವಂತೆ.
3. ಮರಣ ನೋಡೋದಿಕ್ಕೆ ಹೋಗುವಾಗ ಧರಿಸಬಾರದು
ಸತ್ತವರನ್ನು ನೋಡೋದಿಕ್ಕೆ ಹೋಗುವಾಗ ಅಥವಾ ಅವರ ಅಂತಿಮ ಕಾರ್ಯಗಳನ್ನು ಪೂರೈಸುವ ಸಂದರ್ಭದಲ್ಲಿ ರುದ್ರಾಕ್ಷಿಯನ್ನು ಧರಿಸಬಾರದು. ಈ ಸಂದರ್ಭದಲ್ಲಿ ರುದ್ರಾಕ್ಷಿಯನ್ನು ಧರಿಸಿದರೆ ಅದು ಪಾವಿತ್ರ್ಯತೆಯನ್ನು ಕಳೆದುಕೊಂಡು ಬಿಡುತ್ತಂತೆ. ಅಷ್ಟೇ ಅಲ್ಲ, ಇದರಿಂದ ನಿಮ್ಮ ಜೀವನದ ಮೇಲೂ ಋಣಾತ್ಮಕ ಪರಿಣಾಮ ಬೀಳಲಿದೆ.
4. ಈಗ ತಾನೇ ಹುಟ್ಟಿದ ಮಗುವಿನ ಕೋಣೆಗೆ ಹೋಗುವಾಗ
ಹಿಂದೂ ಧರ್ಮದ ನಂಬಿಕೆಯ ಪ್ರಕಾರ ಮಗು ಹುಟ್ಟಿದ ಕೆಲವು ದಿನಗಳನ್ನು ಸೂತಕ ಕಾಲ ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ತಾಯಿ ಹಾಗೂ ಮಗು ಸೂತಕದಲ್ಲಿರೋದ್ರಿಂದ ಮಗು ಹಾಗೂ ತಾಯಿ ಇರುವ ಕೋಣೆಗೆ ಹೋಗುವಾಗ ರುದ್ರಾಕ್ಷಿಯನ್ನು ಧರಿಸಬಾರದು. ಇದರಿಂದ ರುದ್ರಾಕ್ಷಿ ಪಾವಿತ್ರ್ಯತೆಯನ್ನು ಕಳೆದುಕೊಳ್ಳುತ್ತಂತೆ.
ರುದ್ರಾಕ್ಷಿಯನ್ನು ಕಾಟಾಚರಕ್ಕೆ ಧರಿಸುವುದಲ್ಲ. ಅಥವಾ ಫ್ಯಾಷನ್ ಅಂತಾನೋ, ಇನ್ನೋವುದೋ ಕಾರಣಕ್ಕೆ ಧರಿಸಬೇಡಿ. ರುದ್ರಾಕ್ಷಿ ಧರಿಸುವಾಗ ಈ ಎಲ್ಲಾ ವಿಚಾರಗಳು ನಿಮ್ಮ ಗಮನದಲ್ಲಿ ಇರಲೇಬೇಕು. ಯಾಕಂದ್ರೆ ಕೊಂಚ ಯಡವಟ್ಟು ಮಾಡಿದ್ರೂ ಕೂಡ ಇದ್ರಿಂದ ನಿಮಗೆ ಆಪತ್ತು ಎದುರಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.



Click it and Unblock the Notifications
