Latest Updates
-
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು! -
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು?
ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
ಮಕ್ಕಳ ಭವಿಷ್ಯ ರೂಪಿಸುವ ಕೇಂದ್ರಗಳೆಂದರೆ ಅವು ಶಾಲೆಗಳು. ಜ್ಞಾನ ದೇಗುವವಿದು ಕೈ ಮುಗಿದು ಒಳಗೆ ಬಾ ಎಂದು ಶಾಲೆಯ ಬಾಗಿಲ ಮೇಲೆ, ಕಿಟಕಿ ಮೇಲೆ ನಾವು ನೋಡಿರುತ್ತೇವೆ. ಇಂತಹ ಶಾಲೆಗಳಿಗೆ ಮಕ್ಕಳಿಗೆ ಪಾಠ ಮಾಡಲು ಬರುವ ಶಿಕ್ಷಕರು ದೇವರ ಸಮಾನರಾಗಿರುತ್ತಾರೆ. ಗುರುಗಳಿಗೆ ಗೌರವ ನೀಡಿದರೆ ಪುಣ್ಯ ಬರಲಿದೆ ಅನ್ನೋ ಮಾತಿದೆ. ಏಕೆಂದರೆ ಅವರು ಮಕ್ಕಳನ್ನು ತಿದ್ದಿ ತೀಡಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿಸುವ ದೇವರಿದ್ದಂತೆ. ಹೀಗಾಗಿ ಮನೆಯಲ್ಲಿ ತಂದೆ ತಾಯಿ ಬಿಟ್ಟರೆ ಮುಂದಿನ ಗೌರವ ಪಾಠ ಹೇಳಿಕೊಟ್ಟ ಗುರುಗಳಿಗೆ ಸಿಗಬೇಕು ಎನ್ನುವುದು ಕಾಲರೂಢಿಯಾಗಿದೆ.
ಆದ್ರೆ ಮಕ್ಕಳಿಗೆ ಪಾಠ ಮಾಡಲೆಂದೇ ಶಾಲೆಗೆ ಬರುವ ಶಿಕ್ಷಕರೇ ಅಡ್ಡದಾರಿ ಹಿಡಿದರೆ ಹೇಗೆ? ಹೌದು ಇಲ್ಲೊಬ್ಬ ಶಿಕ್ಷಕ ಆತನಿಗೆ ಜೀವನ ರೂಪಿಸಲು ದಾರಿ ಮಾಡಿಕೊಟ್ಟ ಶಾಲೆಯಲ್ಲೇ ಅನೈತಿಕ ಚಟುವಟಿಕೆ ಕೇಂದ್ರವನ್ನಾಗಿ ಮಾಡಿಕೊಂಡಿದ್ದ. ಆತ ಶಾಲೆಯಲ್ಲೇ ಮದ್ಯಪಾನ ಮಾಡಿ ಪಾಠ ಮಾಡುತ್ತಿದ್ದ.

ಛತ್ತೀಸ್ಗಢದ ಬಸ್ತಾರ್ನ ಸರ್ಕಾರಿ ಶಾಲೆಯ ಶಿಕ್ಷಕನೊಬ್ಬ ಈಗ ಮಕ್ಕಳ ಕೈಯಲ್ಲೇ ಚಪ್ಪಲಿ ಏಟು ತಿಂದಿರುವ ಘಟನೆ ನಡೆದಿದೆ. ಇಲ್ಲಿನ ಪ್ರಾಥಮಿಕ ಶಾಲೆ ಶಿಕ್ಷಕನಾಗಿದ್ದ ಆತ ಶಾಲೆಯಲ್ಲೇ ಮದ್ಯ ಪಾನ ಮಾಡುತ್ತಿದ್ದ. ಪ್ರಶ್ನಿಸಿದವರ ಮೇಲೆಯೇ ಮರು ಪ್ರಶ್ನೆ ಮಾಡಿ ನಾನಿರುವುದೇ ಹೀಗೆ, ಕುಡಿದು ಶಾಲೆಗೆ ಬರುತ್ತೇನೆ ಏನು ಮಾಡುತ್ತೀಯ ಎಂಬೆಲ್ಲಾ ಹಾರಿಕೆಯ ಉತ್ತರ ನೀಡುತ್ತಿದ್ದ.
ಮಕ್ಕಳ ಎದುರೇ ಮದ್ಯಪಾನ
ಆತ ಬೆಳಗ್ಗೆ ಬರುವಾಗಲೇ ತನ್ನ ಜೊತೆ ಮದ್ಯ ತರುತ್ತಿದ್ದ, ಬಳಿಕ ಶಾಲೆಯ ಕೊಠಡಿಯಲ್ಲಿ ಕುಳಿತು ಮದ್ಯಪಾನ ಮಾಡುತ್ತಿದ್ದ. ಈ ವೇಳೆ ಉಳಿದ ಶಿಕ್ಷಕರು, ಮಕ್ಕಳು ಇದ್ದರೂ ತಲೆ ಕೆಡಿಸಿಕೊಳ್ಳದೆ ಆತ ಮದ್ಯಪಾನ ಮಾಡಿ ಮಲಗುತ್ತಿದ್ದ. ಇಲ್ಲವೆ ಪಾಠ ಮಾಡುವ ನೆಪದಲ್ಲಿ ಮಕ್ಕಳಿಗೆ ಹೊಡೆಯುವುದು ಬಡಿಯುವುದು ಮಾಡುತ್ತಿದ್ದ.
ಚಪ್ಪಲಿಯಲ್ಲಿ ಹೊಡೆದ ಮಕ್ಕಳು
ಎಂದಿನಂತೆ ಆತ ಶಾಲೆಗೆ ಬಂದು ಮದ್ಯಪಾನ ಮಾಡಿದ್ದಾನೆ. ಆದರೆ ಇಂದು ಆತನ ಗ್ರಹಚಾರ ಕೆಟ್ಟು ಒಬ್ಬರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಏನು ಬೇಕಾದರು ಮಾಡಿ ನಾನು ಕುಡಿಯುತ್ತೇನೆ ಎಂಬ ಉತ್ತರ ನೀಡಿದ್ದಾನೆ. ಆದರೆ ಕುಡಿದ ಅಮಲಿನಲ್ಲಿದ್ದ ಶಿಕ್ಷಕನಿಗೆ ಮಕ್ಕಳು ದಾಳಿ ಮಾಡಲು ಮುಂದಾದಗ ಬೈಕ್ ಹತ್ತಿ ತೆರಳಲು ಸಿದ್ದನಾಗಿದ್ದಾನೆ. ಈ ವೇಳೆ ಮಕ್ಕಳು ಚಪ್ಪಲಿಯನ್ನು ಎಸೆದಿದ್ದು, ಇವರಿಂದ ತಪ್ಪಿಸಿಕೊಳ್ಳಲು ಆತ ಬೈಕ್ ಏರಿ ಓಡಿ ಹೋಗಿದ್ದಾನೆ.
ಆತ ಮನೆಯಿಂದ ಬರುವಾಗಲೇ ಮಧ್ಯದಾರಿಯಲ್ಲಿ ಸಿಗುವ ಅಂಗಡಿಯಿಂದ ಮದ್ಯ ಖರೀದಿಸುತ್ತಿದ್ದ. ಶಾಲೆಗೆ ಬಂದವನೇ ಮೊದಲು ಮದ್ಯ ಸೇವಿಸಿ ಬಳಿಕ ತನ್ನ ಕೆಲಸ ಮಾಡಲು ಮುಂದಾಗುತ್ತಿದ್ದನಂತೆ. ಇದು ಒಂದು ದಿನದ ಕಥೆಯಲ್ಲ ಬದಲಿಗೆ ಹಲವು ದಿನಗಳಿಂದಲೂ ಆತನದ್ದು ಇದೇ ರೀತಿಯ ವರ್ತನೆಯಾಗಿತ್ತು. ಕೆಲವು ಬಾರಿ ಶಾಲೆಯಲ್ಲಿ ಮಲಗಿ ಆರಾಮಾಗಿ ಎದ್ದು ಹೋಗುತ್ತಿದ್ದ. ಕೇಳಿದವರಿಗೆ ಹೆದರಿಸುತ್ತಿದ್ದ ಎಂಬ ಆರೋಪ ಅವನ ಮೇಲಿದೆ.
ಕರ್ತವ್ಯದಿಂದ ಶಿಕ್ಷಕ ವಜಾ
ಈ ರೀತಿ ವರ್ತನೆ ಮಾಡಿದ್ದ ಶಿಕ್ಷಕನ್ನನ್ನು ಸಂತೋಷ್ ಕೇವತ್ ಎಂದು ಗುರುತಿಸಲಾಗಿದೆ. ಘಟನೆಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆದ ಬಳಿಕ ಸಂಬಂಧಿತ ಅಧಿಕಾರಿಗಳು ಆತನನ್ನು ವಜಾಗೊಳಿಸಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ಆತನ ಕುರಿತು ಈ ಹಿಂದೆಯೂ ಶಾಲಾ ಶಿಕ್ಷಕರು ದೂರು ನೀಡಿದ್ದರೂ ಅಧಿಕಾರಿಗಳು ಕ್ರಮ ತೆಗೆದುಕೊಂಡಿರಲಿಲ್ಲ ಎಂಬ ಆರೋಪ ಸಹ ಕೇಳಿಬಂದಿದೆ. ಹೀಗಾಗಿಯೇ ಆ ಶಿಕ್ಷಕ ಶಾಲೆಯಲ್ಲೇ ನಿತ್ಯ ಮದ್ಯಪಾನ ಮಾಡುತ್ತಿದ್ದ. ಕೇಳಿದವರಿಗೆ ದಬಾಯಿಸುತ್ತಿದ್ದ ಎಂದು ದೂರಲಾಗಿದೆ.



Click it and Unblock the Notifications