Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
ಮಕ್ಕಳ ಭವಿಷ್ಯ ರೂಪಿಸುವ ಕೇಂದ್ರಗಳೆಂದರೆ ಅವು ಶಾಲೆಗಳು. ಜ್ಞಾನ ದೇಗುವವಿದು ಕೈ ಮುಗಿದು ಒಳಗೆ ಬಾ ಎಂದು ಶಾಲೆಯ ಬಾಗಿಲ ಮೇಲೆ, ಕಿಟಕಿ ಮೇಲೆ ನಾವು ನೋಡಿರುತ್ತೇವೆ. ಇಂತಹ ಶಾಲೆಗಳಿಗೆ ಮಕ್ಕಳಿಗೆ ಪಾಠ ಮಾಡಲು ಬರುವ ಶಿಕ್ಷಕರು ದೇವರ ಸಮಾನರಾಗಿರುತ್ತಾರೆ. ಗುರುಗಳಿಗೆ ಗೌರವ ನೀಡಿದರೆ ಪುಣ್ಯ ಬರಲಿದೆ ಅನ್ನೋ ಮಾತಿದೆ. ಏಕೆಂದರೆ ಅವರು ಮಕ್ಕಳನ್ನು ತಿದ್ದಿ ತೀಡಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿಸುವ ದೇವರಿದ್ದಂತೆ. ಹೀಗಾಗಿ ಮನೆಯಲ್ಲಿ ತಂದೆ ತಾಯಿ ಬಿಟ್ಟರೆ ಮುಂದಿನ ಗೌರವ ಪಾಠ ಹೇಳಿಕೊಟ್ಟ ಗುರುಗಳಿಗೆ ಸಿಗಬೇಕು ಎನ್ನುವುದು ಕಾಲರೂಢಿಯಾಗಿದೆ.
ಆದ್ರೆ ಮಕ್ಕಳಿಗೆ ಪಾಠ ಮಾಡಲೆಂದೇ ಶಾಲೆಗೆ ಬರುವ ಶಿಕ್ಷಕರೇ ಅಡ್ಡದಾರಿ ಹಿಡಿದರೆ ಹೇಗೆ? ಹೌದು ಇಲ್ಲೊಬ್ಬ ಶಿಕ್ಷಕ ಆತನಿಗೆ ಜೀವನ ರೂಪಿಸಲು ದಾರಿ ಮಾಡಿಕೊಟ್ಟ ಶಾಲೆಯಲ್ಲೇ ಅನೈತಿಕ ಚಟುವಟಿಕೆ ಕೇಂದ್ರವನ್ನಾಗಿ ಮಾಡಿಕೊಂಡಿದ್ದ. ಆತ ಶಾಲೆಯಲ್ಲೇ ಮದ್ಯಪಾನ ಮಾಡಿ ಪಾಠ ಮಾಡುತ್ತಿದ್ದ.

ಛತ್ತೀಸ್ಗಢದ ಬಸ್ತಾರ್ನ ಸರ್ಕಾರಿ ಶಾಲೆಯ ಶಿಕ್ಷಕನೊಬ್ಬ ಈಗ ಮಕ್ಕಳ ಕೈಯಲ್ಲೇ ಚಪ್ಪಲಿ ಏಟು ತಿಂದಿರುವ ಘಟನೆ ನಡೆದಿದೆ. ಇಲ್ಲಿನ ಪ್ರಾಥಮಿಕ ಶಾಲೆ ಶಿಕ್ಷಕನಾಗಿದ್ದ ಆತ ಶಾಲೆಯಲ್ಲೇ ಮದ್ಯ ಪಾನ ಮಾಡುತ್ತಿದ್ದ. ಪ್ರಶ್ನಿಸಿದವರ ಮೇಲೆಯೇ ಮರು ಪ್ರಶ್ನೆ ಮಾಡಿ ನಾನಿರುವುದೇ ಹೀಗೆ, ಕುಡಿದು ಶಾಲೆಗೆ ಬರುತ್ತೇನೆ ಏನು ಮಾಡುತ್ತೀಯ ಎಂಬೆಲ್ಲಾ ಹಾರಿಕೆಯ ಉತ್ತರ ನೀಡುತ್ತಿದ್ದ.
ಮಕ್ಕಳ ಎದುರೇ ಮದ್ಯಪಾನ
ಆತ ಬೆಳಗ್ಗೆ ಬರುವಾಗಲೇ ತನ್ನ ಜೊತೆ ಮದ್ಯ ತರುತ್ತಿದ್ದ, ಬಳಿಕ ಶಾಲೆಯ ಕೊಠಡಿಯಲ್ಲಿ ಕುಳಿತು ಮದ್ಯಪಾನ ಮಾಡುತ್ತಿದ್ದ. ಈ ವೇಳೆ ಉಳಿದ ಶಿಕ್ಷಕರು, ಮಕ್ಕಳು ಇದ್ದರೂ ತಲೆ ಕೆಡಿಸಿಕೊಳ್ಳದೆ ಆತ ಮದ್ಯಪಾನ ಮಾಡಿ ಮಲಗುತ್ತಿದ್ದ. ಇಲ್ಲವೆ ಪಾಠ ಮಾಡುವ ನೆಪದಲ್ಲಿ ಮಕ್ಕಳಿಗೆ ಹೊಡೆಯುವುದು ಬಡಿಯುವುದು ಮಾಡುತ್ತಿದ್ದ.
ಚಪ್ಪಲಿಯಲ್ಲಿ ಹೊಡೆದ ಮಕ್ಕಳು
ಎಂದಿನಂತೆ ಆತ ಶಾಲೆಗೆ ಬಂದು ಮದ್ಯಪಾನ ಮಾಡಿದ್ದಾನೆ. ಆದರೆ ಇಂದು ಆತನ ಗ್ರಹಚಾರ ಕೆಟ್ಟು ಒಬ್ಬರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಏನು ಬೇಕಾದರು ಮಾಡಿ ನಾನು ಕುಡಿಯುತ್ತೇನೆ ಎಂಬ ಉತ್ತರ ನೀಡಿದ್ದಾನೆ. ಆದರೆ ಕುಡಿದ ಅಮಲಿನಲ್ಲಿದ್ದ ಶಿಕ್ಷಕನಿಗೆ ಮಕ್ಕಳು ದಾಳಿ ಮಾಡಲು ಮುಂದಾದಗ ಬೈಕ್ ಹತ್ತಿ ತೆರಳಲು ಸಿದ್ದನಾಗಿದ್ದಾನೆ. ಈ ವೇಳೆ ಮಕ್ಕಳು ಚಪ್ಪಲಿಯನ್ನು ಎಸೆದಿದ್ದು, ಇವರಿಂದ ತಪ್ಪಿಸಿಕೊಳ್ಳಲು ಆತ ಬೈಕ್ ಏರಿ ಓಡಿ ಹೋಗಿದ್ದಾನೆ.
ಆತ ಮನೆಯಿಂದ ಬರುವಾಗಲೇ ಮಧ್ಯದಾರಿಯಲ್ಲಿ ಸಿಗುವ ಅಂಗಡಿಯಿಂದ ಮದ್ಯ ಖರೀದಿಸುತ್ತಿದ್ದ. ಶಾಲೆಗೆ ಬಂದವನೇ ಮೊದಲು ಮದ್ಯ ಸೇವಿಸಿ ಬಳಿಕ ತನ್ನ ಕೆಲಸ ಮಾಡಲು ಮುಂದಾಗುತ್ತಿದ್ದನಂತೆ. ಇದು ಒಂದು ದಿನದ ಕಥೆಯಲ್ಲ ಬದಲಿಗೆ ಹಲವು ದಿನಗಳಿಂದಲೂ ಆತನದ್ದು ಇದೇ ರೀತಿಯ ವರ್ತನೆಯಾಗಿತ್ತು. ಕೆಲವು ಬಾರಿ ಶಾಲೆಯಲ್ಲಿ ಮಲಗಿ ಆರಾಮಾಗಿ ಎದ್ದು ಹೋಗುತ್ತಿದ್ದ. ಕೇಳಿದವರಿಗೆ ಹೆದರಿಸುತ್ತಿದ್ದ ಎಂಬ ಆರೋಪ ಅವನ ಮೇಲಿದೆ.
ಕರ್ತವ್ಯದಿಂದ ಶಿಕ್ಷಕ ವಜಾ
ಈ ರೀತಿ ವರ್ತನೆ ಮಾಡಿದ್ದ ಶಿಕ್ಷಕನ್ನನ್ನು ಸಂತೋಷ್ ಕೇವತ್ ಎಂದು ಗುರುತಿಸಲಾಗಿದೆ. ಘಟನೆಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆದ ಬಳಿಕ ಸಂಬಂಧಿತ ಅಧಿಕಾರಿಗಳು ಆತನನ್ನು ವಜಾಗೊಳಿಸಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ಆತನ ಕುರಿತು ಈ ಹಿಂದೆಯೂ ಶಾಲಾ ಶಿಕ್ಷಕರು ದೂರು ನೀಡಿದ್ದರೂ ಅಧಿಕಾರಿಗಳು ಕ್ರಮ ತೆಗೆದುಕೊಂಡಿರಲಿಲ್ಲ ಎಂಬ ಆರೋಪ ಸಹ ಕೇಳಿಬಂದಿದೆ. ಹೀಗಾಗಿಯೇ ಆ ಶಿಕ್ಷಕ ಶಾಲೆಯಲ್ಲೇ ನಿತ್ಯ ಮದ್ಯಪಾನ ಮಾಡುತ್ತಿದ್ದ. ಕೇಳಿದವರಿಗೆ ದಬಾಯಿಸುತ್ತಿದ್ದ ಎಂದು ದೂರಲಾಗಿದೆ.



Click it and Unblock the Notifications