Latest Updates
-
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಚಾತುರ್ಮಾಸ ಶುರು: 4 ಮಾಸ ಈ ಶುಭ ಕಾರ್ಯಗಳನ್ನು ಮಾಡಲೇಬಾರದು
ಜುಲೈ 17ಕ್ಕೆ ದೇವಶಯನಿ ಏಕಾದಶಿ ಅದಾದ ಬಳಿಕ ಚಾತುರ್ಮಾಸ, ದೇವಶಯನಿ ಏಕಾದಶಿ ಬಳಿಕ ಶ್ರೀವಿಷ್ಣು ಯೋಗ ನಿದ್ದೆಗೆ ಜಾರುತ್ತಾನೆ, ಶಿವನು ಈ ಭೂಮಂಡಲದ ಆಡಾಳಿತ ಮಾಡುತ್ತಾನೆ ಎಂಬುವುದು ಧಾರ್ಮಿಕ ನಂಬಿಕೆ, ಚಾರ್ತುಮಾಸದಲ್ಲಿ ಯಾವುದೇ ಶುಭ ಕಾರ್ಯ ಮಾಡುವುದು ಒಳ್ಳೆಯದಲ್ಲ ಎಂದು ಹೇಳಲಾಗುವುದು, ಈ ಚಾರ್ತುಮಾಸದ ವಿಶೇಷತೆಯೇನು? ಈ ಚಾತುರ್ಮಾಸದಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎಂದು ನೋಡೋಣ ಬನ್ನಿ:

ಚಾತುರ್ಮಾಸದಲ್ಲಿ ಯಾವ ಕಾರ್ಯಗಳನ್ನು ಮಾಡಬಾರದು?
ಮದುವೆ ಮಾಡುವುದು, ಉಪನಯನ, ಗೃಹ ಪ್ರವೇಶ, ಹೊಸ ಮನೆ ಕಟ್ಟುವುದಕ್ಕೆ ಶುರು ಮಾಡುವುದು, ಭೂಮಿ ಪೂಜೆ ಹೀಗೆ ಯಾವುದೇ ಶುಭ ಕಾರ್ಯಗಳನ್ನು ಈ ನಾಲ್ಕು ಮಾಸದಲ್ಲಿ ಮಾಡಲೇಬಾರದು.
ಚಾತುರ್ಮಾಸದಲ್ಲಿ ಒಟ್ಟು ನಾಲ್ಕು ಮಾಸದಲ್ಲಿ ಪ್ರತಿಯೊಂದು ಮಾಸವೂ ವಿಶೇಷವಾಗಿರಲಿದೆ
ಶ್ರಾವಣ ಮಾಸ:: ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಮಾಡಲಾಗುವುದು, ಅಲ್ಲದೆ ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವನೆ ಮಾಡುವುದಿಲ್ಲ.
ಭಾದ್ರಪದ ಮಾಸ: ಈ ಮಾಸದಲ್ಲಿ ಮೊಸರು ಸೇವನೆ ಮಾಡಬಾರದು ಎಂದು ಹೇಳಲಾಗುವುದು
ಅಶ್ವಿನಿ ಮಾಸದಲ್ಲಿ ಹಾಲು ಸೇವನೆ ಒಳ್ಳೆಯದಲ್ಲ
ಕಾರ್ತಿಕ ಮಾಸದಲ್ಲಿ ಬೆಳ್ಳುಳ್ಳಿ, ಈರುಳ್ಳಿ, ಉದ್ದಿನ ಬೇಳೆ ಸೇವಿಸಬಾರದು ಎಂದು ಹೇಳಲಾಗುವುದು.
ಚಾತುರ್ಮಾಸದಲ್ಲಿ ಹಾಲು, ಬೆಲ್ಲ, ಮೊಸರು, ಎಣ್ಣೆ, ಬದನೆಕಾಯಿ, ಎಣ್ಣೆ, ಹಸಿರು ತರಕಾರಿ, ಉಪ್ಪು, ಖಾರ, ಸಿಹಿ ಪದಾರ್ಥ,ಮದ್ಯ, ಮಾಂಸ ಇವುಗಳನ್ನು ಸೇವಿಸಬಾರದು ಎಂದು ಹೇಳಲಾಗುವುದು, ಕೆಲವರು ಈ ನಿಯಮ ಕೂಡ ಪಾಲಿಸುತ್ತಾರೆ, ಈ ಆಹಾರಕ್ರಮದಿಂದ ಆರೋಗ್ಯ ಕೂಡ ವೃದ್ಧಿಯಾಗುವುದು ಎಂದು ಹೇಳಲಾಗುವುದು.
ಚಾತುರ್ಮಾಸದಲ್ಲಿ ಏನು ಮಾಡಬಾರದು?
ಈ ಸಮಯದಲ್ಲಿ ದೇವರ ಪೂಜೆ ಮಾಡಬೇಕು, ಪೂಜಾ ಕಾರ್ಯಗಳನ್ನು ಮಾಡಲು ಈ ಅವಧಿ ತುಂಬಾನ ಒಳ್ಳೆಯದು
ತೀರ್ಥಯಾತ್ರೆಗೆ ಈ ಅವಧಿ ಅನುಕೂಲಕರವಾಗಿದೆ.
ಈ ಅವಧಿಯಲ್ಲಿ ಕೆಲಸ ಬದಲಾವಣೆ ಸುಕ್ತವಲ್ಲ
ಆಹಾರ, ವಸ್ತ್ರಗಳನ್ನು ದಾನ ಮಾಡಿ.
ಈ ಸಮಯದಲ್ಲಿ ತುಂಬಾ ಭಕ್ತರು ದಿನದಲ್ಲಿ ಒಂದು ಹೊತ್ತು ಮಾತ್ರ ಊಟ ಮಾಡುತ್ತಾರೆ.
ದೇವ ಶಯನಿ ಏಕಾದಶಿ ಪೂಜಾ ವಿಧಿಯೇನು?
ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಮನಸ್ಸು, ದೇಹವನ್ನು ಶುದ್ಧಗೊಳಿಸಿ
ನಂತರ ಶ್ರೀ ವಿಷ್ಣುವಿನ ಫೋಟೋ ಅಥವಾ ಮೂರ್ತಿಯನ್ನು ಒರೆಸಿ ಅಲಂಕರಿಸಿ, ನಂತರ ತುಪ್ಪದ ದೀಪ ಹಚ್ಚಿ ಪೂಜಿಸಿ
ಈ ದಿನ ಶ್ರೀ ವಿಷ್ಣು ಮಂತ್ರಗಳನ್ನು ಹೇಳಿ
ದೇವಶಯನಿ ಏಕಾದಶಿ ಬಳಿಕ ವಿಷ್ಣು ನಿದ್ರೆಗೆ ಜಾರುತ್ತಾನೆ ಎಂಬುವುದು ಧಾರ್ಮಿಕ ನಂಬಿಕೆಯಾಗಿದೆ.
ಆಷಾಢ ಮಾಸದಲ್ಲಿ ಪ್ರತಿ ಶುಕ್ರವಾರ ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು.
ಶ್ರಾವಣ ಮಾಸದಲ್ಲಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಶೈವಾರದಕರು ಈ ನಾಲ್ಕೂ ತಿಂಗಳು ಸೋಮವಾರ ಶಿವನಿಗೆ ಅಭಿಷೇಕ ಮಾಡುತ್ತಾರೆ. ಒಟ್ಟು 16 ಸೋಮವಾರ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುವುದು.
ಚಾತುರ್ಮಾಸದಲ್ಲಿ ಈ ಕಾರ್ಯ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುವುದು
ಲಕ್ಷ್ಮ ಪ್ರದರ್ಶಣೆ ಮಾಡುವುದು
ಲಕ್ಷ ತುಳಸಿ ಅರ್ಪಿಸಿ ಶ್ರೀವಿಷ್ಣುವಿಗೆ ಪೂಜೆ ಮಾಡುವುದು
ಸಂಜೆ ದೇವರಿಗೆ ತುಪ್ಪದ ದೀಪ ಹಚ್ಚಿಡುವುದು
ಬೆಡ್ ಮೇಲೆ ಮಲಗದೆ ನೆಲದ ಮೇಲೆ ಅಥವಾ ಬರಿ ಚಾಪೆ ಹಾಕಿ ಮಲಗುವುದು
ಮೌನವ್ರತ
ಹುಣ್ಣಿಮೆಗೆ ದುರ್ಗೆ, ಗೌರಿಗೆ ವಿಶೇಷ ಪೂಜೆ ಸಲ್ಲಿಸುವುದು
ಮಂತ್ರಗಳ ಪಠಣೆ
ಪೂಜೆಗಳನ್ನು ಮಾಡಿಸುವುದು
ದಾನ , ಧರ್ಮ ಮಾಡುವುದು
ಈ ನಾಲ್ಕು ಮಾಸ ಶ್ರಾವಣ, ಗಣೇಶ ಚತುರ್ಥಿ, ಕಾರ್ತಿಕ ಪೂಜೆ ಹೀಗೆ ವಿಶೇಷ ಧಾರ್ಮಿಕ ಆಚರಣೆಗಳಿರುತ್ತದೆ, ಈ ಅವಧಿಯಲ್ಲಿ ಮಾಂಸಾಹಾರ ಮಾಡಬಾರದು ಎಂದು ಹೇಳಲಾಗುವುದು. ಚಾತುರ್ಮಾಸ ವ್ರತ ಆಚರಣೆ ಮಾಡುವಿದರಿಂದ ಶ್ರೀವಿಷ್ಣುವಿನ ಕೃಪೆಗೆ ಪಾತ್ರರಾಗುತ್ತಾರೆ ಎಂಬ ನಂಬಿಕೆ.



Click it and Unblock the Notifications











