Latest Updates
-
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್
ಚಾತುರ್ಮಾಸ ಶುರು: 4 ಮಾಸ ಈ ಶುಭ ಕಾರ್ಯಗಳನ್ನು ಮಾಡಲೇಬಾರದು
ಜುಲೈ 17ಕ್ಕೆ ದೇವಶಯನಿ ಏಕಾದಶಿ ಅದಾದ ಬಳಿಕ ಚಾತುರ್ಮಾಸ, ದೇವಶಯನಿ ಏಕಾದಶಿ ಬಳಿಕ ಶ್ರೀವಿಷ್ಣು ಯೋಗ ನಿದ್ದೆಗೆ ಜಾರುತ್ತಾನೆ, ಶಿವನು ಈ ಭೂಮಂಡಲದ ಆಡಾಳಿತ ಮಾಡುತ್ತಾನೆ ಎಂಬುವುದು ಧಾರ್ಮಿಕ ನಂಬಿಕೆ, ಚಾರ್ತುಮಾಸದಲ್ಲಿ ಯಾವುದೇ ಶುಭ ಕಾರ್ಯ ಮಾಡುವುದು ಒಳ್ಳೆಯದಲ್ಲ ಎಂದು ಹೇಳಲಾಗುವುದು, ಈ ಚಾರ್ತುಮಾಸದ ವಿಶೇಷತೆಯೇನು? ಈ ಚಾತುರ್ಮಾಸದಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎಂದು ನೋಡೋಣ ಬನ್ನಿ:

ಚಾತುರ್ಮಾಸದಲ್ಲಿ ಯಾವ ಕಾರ್ಯಗಳನ್ನು ಮಾಡಬಾರದು?
ಮದುವೆ ಮಾಡುವುದು, ಉಪನಯನ, ಗೃಹ ಪ್ರವೇಶ, ಹೊಸ ಮನೆ ಕಟ್ಟುವುದಕ್ಕೆ ಶುರು ಮಾಡುವುದು, ಭೂಮಿ ಪೂಜೆ ಹೀಗೆ ಯಾವುದೇ ಶುಭ ಕಾರ್ಯಗಳನ್ನು ಈ ನಾಲ್ಕು ಮಾಸದಲ್ಲಿ ಮಾಡಲೇಬಾರದು.
ಚಾತುರ್ಮಾಸದಲ್ಲಿ ಒಟ್ಟು ನಾಲ್ಕು ಮಾಸದಲ್ಲಿ ಪ್ರತಿಯೊಂದು ಮಾಸವೂ ವಿಶೇಷವಾಗಿರಲಿದೆ
ಶ್ರಾವಣ ಮಾಸ:: ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಮಾಡಲಾಗುವುದು, ಅಲ್ಲದೆ ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವನೆ ಮಾಡುವುದಿಲ್ಲ.
ಭಾದ್ರಪದ ಮಾಸ: ಈ ಮಾಸದಲ್ಲಿ ಮೊಸರು ಸೇವನೆ ಮಾಡಬಾರದು ಎಂದು ಹೇಳಲಾಗುವುದು
ಅಶ್ವಿನಿ ಮಾಸದಲ್ಲಿ ಹಾಲು ಸೇವನೆ ಒಳ್ಳೆಯದಲ್ಲ
ಕಾರ್ತಿಕ ಮಾಸದಲ್ಲಿ ಬೆಳ್ಳುಳ್ಳಿ, ಈರುಳ್ಳಿ, ಉದ್ದಿನ ಬೇಳೆ ಸೇವಿಸಬಾರದು ಎಂದು ಹೇಳಲಾಗುವುದು.
ಚಾತುರ್ಮಾಸದಲ್ಲಿ ಹಾಲು, ಬೆಲ್ಲ, ಮೊಸರು, ಎಣ್ಣೆ, ಬದನೆಕಾಯಿ, ಎಣ್ಣೆ, ಹಸಿರು ತರಕಾರಿ, ಉಪ್ಪು, ಖಾರ, ಸಿಹಿ ಪದಾರ್ಥ,ಮದ್ಯ, ಮಾಂಸ ಇವುಗಳನ್ನು ಸೇವಿಸಬಾರದು ಎಂದು ಹೇಳಲಾಗುವುದು, ಕೆಲವರು ಈ ನಿಯಮ ಕೂಡ ಪಾಲಿಸುತ್ತಾರೆ, ಈ ಆಹಾರಕ್ರಮದಿಂದ ಆರೋಗ್ಯ ಕೂಡ ವೃದ್ಧಿಯಾಗುವುದು ಎಂದು ಹೇಳಲಾಗುವುದು.
ಚಾತುರ್ಮಾಸದಲ್ಲಿ ಏನು ಮಾಡಬಾರದು?
ಈ ಸಮಯದಲ್ಲಿ ದೇವರ ಪೂಜೆ ಮಾಡಬೇಕು, ಪೂಜಾ ಕಾರ್ಯಗಳನ್ನು ಮಾಡಲು ಈ ಅವಧಿ ತುಂಬಾನ ಒಳ್ಳೆಯದು
ತೀರ್ಥಯಾತ್ರೆಗೆ ಈ ಅವಧಿ ಅನುಕೂಲಕರವಾಗಿದೆ.
ಈ ಅವಧಿಯಲ್ಲಿ ಕೆಲಸ ಬದಲಾವಣೆ ಸುಕ್ತವಲ್ಲ
ಆಹಾರ, ವಸ್ತ್ರಗಳನ್ನು ದಾನ ಮಾಡಿ.
ಈ ಸಮಯದಲ್ಲಿ ತುಂಬಾ ಭಕ್ತರು ದಿನದಲ್ಲಿ ಒಂದು ಹೊತ್ತು ಮಾತ್ರ ಊಟ ಮಾಡುತ್ತಾರೆ.
ದೇವ ಶಯನಿ ಏಕಾದಶಿ ಪೂಜಾ ವಿಧಿಯೇನು?
ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಮನಸ್ಸು, ದೇಹವನ್ನು ಶುದ್ಧಗೊಳಿಸಿ
ನಂತರ ಶ್ರೀ ವಿಷ್ಣುವಿನ ಫೋಟೋ ಅಥವಾ ಮೂರ್ತಿಯನ್ನು ಒರೆಸಿ ಅಲಂಕರಿಸಿ, ನಂತರ ತುಪ್ಪದ ದೀಪ ಹಚ್ಚಿ ಪೂಜಿಸಿ
ಈ ದಿನ ಶ್ರೀ ವಿಷ್ಣು ಮಂತ್ರಗಳನ್ನು ಹೇಳಿ
ದೇವಶಯನಿ ಏಕಾದಶಿ ಬಳಿಕ ವಿಷ್ಣು ನಿದ್ರೆಗೆ ಜಾರುತ್ತಾನೆ ಎಂಬುವುದು ಧಾರ್ಮಿಕ ನಂಬಿಕೆಯಾಗಿದೆ.
ಆಷಾಢ ಮಾಸದಲ್ಲಿ ಪ್ರತಿ ಶುಕ್ರವಾರ ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು.
ಶ್ರಾವಣ ಮಾಸದಲ್ಲಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಶೈವಾರದಕರು ಈ ನಾಲ್ಕೂ ತಿಂಗಳು ಸೋಮವಾರ ಶಿವನಿಗೆ ಅಭಿಷೇಕ ಮಾಡುತ್ತಾರೆ. ಒಟ್ಟು 16 ಸೋಮವಾರ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುವುದು.
ಚಾತುರ್ಮಾಸದಲ್ಲಿ ಈ ಕಾರ್ಯ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುವುದು
ಲಕ್ಷ್ಮ ಪ್ರದರ್ಶಣೆ ಮಾಡುವುದು
ಲಕ್ಷ ತುಳಸಿ ಅರ್ಪಿಸಿ ಶ್ರೀವಿಷ್ಣುವಿಗೆ ಪೂಜೆ ಮಾಡುವುದು
ಸಂಜೆ ದೇವರಿಗೆ ತುಪ್ಪದ ದೀಪ ಹಚ್ಚಿಡುವುದು
ಬೆಡ್ ಮೇಲೆ ಮಲಗದೆ ನೆಲದ ಮೇಲೆ ಅಥವಾ ಬರಿ ಚಾಪೆ ಹಾಕಿ ಮಲಗುವುದು
ಮೌನವ್ರತ
ಹುಣ್ಣಿಮೆಗೆ ದುರ್ಗೆ, ಗೌರಿಗೆ ವಿಶೇಷ ಪೂಜೆ ಸಲ್ಲಿಸುವುದು
ಮಂತ್ರಗಳ ಪಠಣೆ
ಪೂಜೆಗಳನ್ನು ಮಾಡಿಸುವುದು
ದಾನ , ಧರ್ಮ ಮಾಡುವುದು
ಈ ನಾಲ್ಕು ಮಾಸ ಶ್ರಾವಣ, ಗಣೇಶ ಚತುರ್ಥಿ, ಕಾರ್ತಿಕ ಪೂಜೆ ಹೀಗೆ ವಿಶೇಷ ಧಾರ್ಮಿಕ ಆಚರಣೆಗಳಿರುತ್ತದೆ, ಈ ಅವಧಿಯಲ್ಲಿ ಮಾಂಸಾಹಾರ ಮಾಡಬಾರದು ಎಂದು ಹೇಳಲಾಗುವುದು. ಚಾತುರ್ಮಾಸ ವ್ರತ ಆಚರಣೆ ಮಾಡುವಿದರಿಂದ ಶ್ರೀವಿಷ್ಣುವಿನ ಕೃಪೆಗೆ ಪಾತ್ರರಾಗುತ್ತಾರೆ ಎಂಬ ನಂಬಿಕೆ.



Click it and Unblock the Notifications