Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಆನ್ಲೈನ್ನಲ್ಲೇ ಶ್ರೀರಾಮನ ಮಂತ್ರ ಪಠಿಸಿ...ಪ್ರಮಾಣ ಪತ್ರ ಪಡೆಯಿರಿ..! ಹೇಗೆ ಗೊತ್ತಾ?
ಇಂದು ಭವ್ಯ ರಾಮಮಂದಿರ ಉದ್ಘಾಟನೆಯಾಗುತ್ತಿದ್ದು, ಇಡೀ ವಿಶ್ವದ ದೃಷ್ಟಿ ಭಾರತದ ಮೇಲಿದೆ. ಎಲ್ಲಾ ಕಡೆ ರಾಮ ನಾಮ ಸ್ಮರಣೆಯಾಗುತ್ತಿದೆ. ಜೈಶ್ರೀರಾಮ್ ಘೋಷಣೆ ಮುಗಿಲು ಮುಟ್ಟುತ್ತಿದೆ. ಅಯೋಧ್ಯೆ ರಾಮನ ದರ್ಶನ ಪಡೆಯಲು ಕೋಟಿ ಕೋಟಿ ರಾಮ ಭಕ್ತರು ಕಾದಿದ್ದಾರೆ. ಆದರೆ ಎಲ್ಲಾ ಭಕ್ತರು ಇಂದು ಅಯೋಧ್ಯೆಗೆ ತೆರಳಲು ಸಾಧ್ಯವಿಲ್ಲ. ಕೇವಲ ಆಹ್ವಾನಿತ ಗಣ್ಯರಿಗೆ ಮಾತ್ರ ಇಂದು ವಿಶೇಷ ಆರತಿ ಮತ್ತು ದರ್ಶನ ಭಾಗ್ಯವಿದೆ. ಆದರೆ ನೀವು ಕುಳಿತಲ್ಲೇ ರಾಮನ ತಲುಪಬಹುದಿದೆ.
ಹೌದು ನೀವು ಕುಳಿತಲ್ಲೇ ಆನ್ಲೈನ್ ಮೂಲಕ ರಾಮ ಮಂದಿರ ಉದ್ಘಾಟನೆಯನ್ನೂ ವೀಕ್ಷಿಸಬಹುದು ಜೊತೆಗೆ ರಾಮ ನಾಮ ಸ್ಮರಣೆಯ ಮಾಡಿ ಪ್ರಮಾಣ ಪತ್ರವನ್ನೂ ಪಡೆದುಕೊಳ್ಳಬಹುದು. ಆನ್ಲೈನ್ ಮೂಲಕವೇ ಭಾಗವಹಿಸಿ ರಾಮ ನಾಮವನ್ನು ಜಪಿಸಬಹುದು.
ಕಿರು ವಿಡಿಯೋ ಅಪ್ಲಿಕೇಶನ್ ಜೋಶ್ ಮತ್ತು ಸ್ಥಳೀಯ ಸುದ್ದಿ ಅನ್ವೇಷಣೆ ವೇದಿಕೆ ಡೈಲಿ ಹಂಟ್ ಹಾಗೂ ಒನ್ ಇಂಡಿಯಾ ವೆಬ್ಸೈಟ್ ವೇದಿಕೆಗಳು ರಾಮ ಭಕ್ತರಿಗೆ ಇಂತಹದೊಂದು ಅವಕಾಶ ಮಾಡಿಕೊಟ್ಟಿವೆ. ಹಾಗಾದ್ರೆ ನೀವು ಮಾಡಬೇಕಾಗಿರೋದು ಏನು ಎಂಬುದನ್ನು ಇಲ್ಲಿ ಹೇಳಿದ್ದೇವೆ ನೋಡಿ.

ಜೋಶ್ ಮತ್ತು ಡೈಲಿ ಹಂಟ್ ಮತ್ತು ಒನ್ ಇಂಡಿಯಾ ವರ್ಚುವಲ್ ಮೂಲಕ ಶ್ರೀರಾಮ ಮಂತ್ರ ಪಠಿಸಲು ವೇದಿಕೆ ಕಲ್ಪಿಸಿದ್ದು, ನೀವೂ ಸಹ ಭಾಗವಹಿಸಿ ಶ್ರೀರಾಮನ ಮೇಲಿರುವ ಭಕ್ತಿಯನ್ನು ಪ್ರದರ್ಶಿಸಬಹುದು. ಈ ಕೆಳಗೆ ನೀಡಲಾಗಿರುವ ಲಿಂಕ್ ಮೂಲಕ ಇಲ್ಲವೆ ಜೋಶ್ ಅಥವಾ ಡೈಲಿ ಹಂಟ್ ಆಪ್ ತೆರೆಯುವ ಮೂಲಕ ನೀವು ಆನ್ಲೈನ್ ರಾಮ ನಾಮ ಸ್ಮರಣೆಯಲ್ಲಿ ಭಾಗಿಯಾಗಬಹುದು.
ಈ ಲಿಂಕ್ನಲ್ಲಿ ಶ್ರೀ ರಾಮ್, ಜೈ ರಾಮ್, ಜೈ ಜೈ ರಾಮ್ ಮಂತ್ರವನ್ನು ಪಠಿಸಬಹುದು. ನೀವು ನಿಮ್ಮ ಹೆಸರನ್ನು ಮೊದಲು ನಮೂದಿಸಿ ಬಳಿಕ ಎಷ್ಟು ಬಾರಿ ಈ ಮಂತ್ರವನ್ನು ಪಠಿಸುತ್ತೀರಿ ಎಂಬ ಆಯ್ಕೆಯನ್ನು ಮಾಡಿದರೆ ಸ್ವಯಂಚಾಲಿತವಾಗಿ ಮಂತ್ರ ಆರಂಭವಾಗುತ್ತದೆ. ಬಳಿಕ ನೀವು ಆ ಮಂತ್ರವನ್ನು ಜಪಿಸಿದರೆ ಸಾಕು. ಈ ಮಂತ್ರ ಪಠಣೆ ಮುಗಿದ ಬಳಿಕ ಪ್ರಮಾಣ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ನೀವು 11, 108, ಅಥವಾ 1008 ಬಾರಿ ಮಂತ್ರವನ್ನು ಪಠಿಸಬಹುದು.
ಆನ್ಲೈನ್ನಲ್ಲಿ ರಾಮ ಮಂದಿರ ಉದ್ಘಾಟನೆ ನೋಡುವುದು ಹೇಗೆ?
ಅಯೋಧ್ಯೆಗೆ ತೆರಳಲು ಸಾಧ್ಯವಾಗದಿರುವ ಭಕ್ತರು ಆನ್ಲೈನ್ನಲ್ಲೂ ಪ್ರಭು ಶ್ರೀರಾಮನ ಈ ಸ್ಮರಣೀಯ ಕಾರ್ಯಕ್ರಮ ಕಣ್ತುಂಬಿಕೊಳ್ಳಬಹುದು. ಡಿಡಿ ನ್ಯಾಷನಲ್ ಮತ್ತು ದೂರದರ್ಶನದ ಯೂಟ್ಯೂಬ್ ಚಾನಲ್ನಲ್ಲಿ ಬೆಳಗ್ಗೆಯಿಂದಲೇ ನೇರಪ್ರಸಾರವಿದ್ದು, ಅಲ್ಲಿ ಉಚಿತವಾಗಿ ನೀವು ರಾಮ ಮಂದಿರ ಉದ್ಘಾಟನೆಯ ದೃಶ್ಯ ಕಣ್ತುಂಬಿಕೊಳ್ಳಬಹುದು.
ಪ್ರಾಣ ಪ್ರತಿಷ್ಠಾಪನೆಗೆ ಇರುವ ಶುಭ ಮುಹೂರ್ತ ಜನವರಿ 22 ಮಧ್ಯಾಹ್ನ 12:29:08 ಸೆಕೆಂಡ್ನಿಂದ 12:30:32 ಸೆಕೆಂಡ್ ಒಳಗಡೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುವುದು. ಅಭಿಜಿತ್ ಮುಹೂರ್ತ ಕೂಡ ಇದೆ ಅಭಿಜಿತ್ ಮುಹೂರ್ತವನ್ನು ಅತ್ಯಂತ ಶುಭ ಸಮಯ ಎಂದು ಪರಿಗಣಿಸಲಾಗಿದೆ. ಪ್ರಾಣಪ್ರತಿಷ್ಠಾಪನೆ ಸಮಯದಲ್ಲಿಯೇ ಅಭಿಜಿತ್ ಮುಹೂರ್ತ ಕೂಡ ಬಂದಿರುವುದರಿಂದ ತುಂಬಾನೇ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಈ ಮುಹೂರ್ತದಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡುವುದರಿಂದ ಪ್ರಗತಿ ಉಂಟಾಗುವುದು.
ಅಯೋಧ್ಯೆ ರಾಮ ಮಂದಿರಲ್ಲಿ ನೀಡಲಾಗುವ ಪ್ರಸಾದ
ತಿರುಪತಿಯಿಂದ 1 ಲಕ್ಷ ಲಡ್ಡುಗಳನ್ನು ಕಳುಹಿಸಲಾಗಿದೆ, ಅದನ್ನು ಇಂದು ಅಯೋಧ್ಯೆಯಲ್ಲ ನೆರೆದಿರುವ ಭಕ್ತರಿಗೆ ಲಡ್ಡುಪ್ರಸಾದ ನೀಡಲಾಗುವುದು. ಅಯೋಧ್ಯೆಗೆ ಪ್ರಸಾದವಾಗಿ ಶ್ರೀರಾಮನಿಗೆ ಪ್ರಿಯವಾದ ಸಕ್ಕರೆಯನ್ನು ಪ್ರಸಾದವನ್ನಾಗಿ ನೀಡಲಾಗುವುದು. ಇಲ್ಲಿ ನಿಮಗೆ ಕಲ್ಲು ಸಕ್ಕರೆ ಹೊರತು ಪಡಿಸಿ ಬೇರೆ ಯಾವುದೇ ಪ್ರಸಾದ ಸಿಗುವುದಿಲ್ಲ , ಕಲ್ಲುಸಕ್ಕರೆ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು, ಇದೇ ಕಲ್ಲು ಸಕ್ಕರೆ ಪ್ರಸಾದವಾಗಿ ನೀಡಲಾಗುವುದು.
ಈ ಲಿಂಕ್ ಮೂಲಕ ನೀವು ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಮೂಲಕ ರಾಮ ನಾಮ ಸ್ಮರಣೆಯಲ್ಲಿ ಭಾಗಿಯಾಗಬಹುದು. ಮೊಬೈಲ್ನಲ್ಲಾದರೆ ಡೈಲಿ ಹಂಟ್ ಅಥವಾ ಜೋಶ್ ಆಪ್ ತೆರೆದು ಭಾಗಿಯಾಗಬಹುದು https://share.myjosh.in/webview/ram-mandir-event



Click it and Unblock the Notifications
