Latest Updates
-
ವೀಕೆಂಡ್ ಪ್ಲಾನ್ ಮಾಡಿದ್ದೀರಾ? ಹವಾಮಾನ ವೈಪರೀತ್ಯದ ಎಚ್ಚರಿಕೆ: ನಿಮ್ಮ ಸುರಕ್ಷತೆಗಾಗಿ ಈ ಬದಲಾವಣೆ ಮಾಡಿಕೊಳ್ಳಿ! -
ಮುಂಬೈ ಬಿಸಿಲು ಮತ್ತು ಆರ್ದ್ರತೆ: 15 ನಿಮಿಷದಲ್ಲಿ ನಿಮ್ಮ ಮನೆಯನ್ನು ತಂಪಾಗಿರಿಸುವ ಸರಳ ಉಪಾಯಗಳು! -
ನಿಮ್ಮ ಆಹಾರದ ಪ್ಯಾಕೆಟ್ನಲ್ಲಿ ಸ್ಟೇಪ್ಲರ್ ಪಿನ್ ಇದೆಯೇ? ಎಚ್ಚರ, FSSAI ಕಠಿಣ ಆದೇಶ! -
ಧರ್ಮಶಾಲಾದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಮಳೆ ಆತಂಕದ ನಡುವೆ ಗೆಲ್ಲೋರು ಯಾರು? -
ದೆಹಲಿ-ಎನ್ಸಿಆರ್ ಬಿರುಗಾಳಿ: ಫಿಟ್ನೆಸ್ ಪ್ರಿಯರೇ ಎಚ್ಚರ, ಇಂದಿನ ವರ್ಕೌಟ್ ಮನೆಯಲ್ಲೇ ಮಾಡುವುದು ಏಕೆ ಸುರಕ್ಷಿತ? -
ದೆಹಲಿಯಲ್ಲಿ ಇಂದು ಮಳೆ ಎಚ್ಚರಿಕೆ: ನಿಮ್ಮ ಡಿನ್ನರ್ ಪ್ಲಾನ್ ಸುರಕ್ಷಿತವಾಗಿರಲು ಈ ಟಿಪ್ಸ್ ಫಾಲೋ ಮಾಡಿ -
ಬೆಂಗಳೂರಿನಲ್ಲಿ ಭರ್ಜರಿ ಮಳೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ಈ 5 ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಪತ್ರಿಕೆಯಲ್ಲಿ ಆಹಾರ ಸುತ್ತಿ ತಿನ್ನುತ್ತಿದ್ದೀರಾ? ಇದು ನಿಮ್ಮ ಆರೋಗ್ಯಕ್ಕೆ 'ನಿಧಾನಗತಿಯ ವಿಷ' ಎಚ್ಚರ! -
ಬೆಂಗಳೂರಿನಲ್ಲಿ ಮತ್ತೆ ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ಸೇರಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಬಿಸಿಗಾಳಿ ಅಥವಾ ಭಾರಿ ಮಳೆ: ಮನೆಯಲ್ಲೇ ಫಿಟ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!
ಲಕ್ಷ್ಮಿ ನಿಮ್ಮ ಮನೆಯನ್ನು ಬಿಟ್ಟು ಹೋಗುತ್ತಿದ್ದಾಳೆ ಎಂದು ಸೂಚಿಸುವ ಲಕ್ಷಣಗಳಿವು!
ಚಾಣಕ್ಯರು ನಮ್ಮ ಜೀವನಕ್ಕೆ ಅಗತ್ಯವಿರುವ ಎಲ್ಲಾ ನೀತಿ ಪಾಠಗಳನ್ನು ರೂಪಿಸಿದ್ದಾರೆ. ಯಾವ ವ್ಯಕ್ತಿ ಚಾಣಕ್ಯ ನೀತಿಯನ್ನು ಪಾಲಿಸುತ್ತಾನೋ ಆತನಿಗೆ ಯಾವತ್ತಿಗೂ ಸೋಲು ಎದುರಾಗೋದಿಲ್ವಂತೆ. ಅದೇ ರೀತಿ ನಾವು ಜೀವನ ಸಾಗಿಸೋದಕ್ಕೆ ಹಣದ ಅವಶ್ಯಕತೆ ಇದೆ. ಈ ಜಗತ್ತಿನಲ್ಲಿ ಪ್ರತಿಯೊಬ್ಬರು ಕೂಡ ಹಣದ ಹಿಂದೆ ಬಿದ್ದವರೇ, ಹೇಗಾದರೂ ಮಾಡಿ ಹಣ ಸಂಪಾದನೆ ಮಾಡಬೇಕೆಂಬ ಹಠ ಅನೇಕರಿಗೆ ಇರುತ್ತದೆ. ಆದ್ರೆ ಕೆಲವರು ಇದ್ರಲ್ಲಿ ಸೋತು ಹೋಗುತ್ತಾರೆ.
ಹೌದು, ಇದರ ಹಿಂದೆ ಒಂದು ಪ್ರಮುಖವಾದ ಕಾರಣವಿದೆ. ನಾವು ಹಣ ಸಂಪಾದನೆಯ ಹಾದಿಯಲ್ಲಿ ತೊಡಗಿದ್ದಾಗ ನಾವು ಅಂದುಕೊಂಡ ಕೆಲಸ ಕೈಗೂಡದಿದ್ದಾಗ ಒಂದು ಸಾರಿ ನಿಮ್ಮ ಮನೆಯ ಸುತ್ತ-ಮುತ್ತ ಗಮನಿಸಿ. ಮನೆಯಲ್ಲಿನ ಕೆಲ ಪರಿಸ್ಥಿತಿಗಳು ನಿಮ್ಮ ಕೈಯಲ್ಲಿ ದುಡ್ಡು ಉಳಿಯೋದಿಲ್ಲ ಅನ್ನೋದನ್ನು ಸಾರಿ ಸಾರಿ ಹೇಳುತ್ತಿರುತ್ತವೆ. ಹಾಗಾದ್ರೆ ನಮ್ಮ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ ಎಂದು ಸೂಚಿಸುವ ಲಕ್ಷಣಗಳು ಏನು ಅನ್ನೋದನ್ನು ತಿಳಿಯೋಣ.

1. ಒಡೆದ ಕನ್ನಡಿ
ಆಚಾರ್ಯ ಚಾಣಕ್ಯರು ನಮ್ಮ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ ಎಂದದಾಗ ಯಾವೆಲ್ಲಾ ಘಟನೆಗಳು ನಡೆದು ಬಿಟ್ಟುತ್ವೆ ಅನ್ನೋದ್ರ ಬಗ್ಗೆ ವಿವರಣೆ ನೀಡಿದ್ದಾರೆ. ನಿಮ್ಮ ಮನೆಯಲ್ಲಿ ಪದೇ ಪದೇ ಕನ್ನಡಿ ಒಡೆದು ಹೋಗ್ತಿದ್ಯಾ? ಈ ಘಟನೆ ಪದೇ ಪದೇ ಮರುಕಳಿಸುತ್ತಿದ್ದರೆ ಖಂಡಿತ ಆರ್ಥಿಕ ಸಮಸ್ಯೆ ಬರುತ್ತೆ ಎಂದರ್ಥ. ಯಾವುದೇ ಕಾರಣಕ್ಕೂ ಒಡೆದ ಕನ್ನಡಿಯನ್ನು ಮನೆಯೊಳಗಡೆ ಇಟ್ಟುಕೊಳ್ಳಲೇ ಬೇಡಿ. ಇದು ದಾರಿದ್ರ್ಯವನ್ನು ಸೂಚಿಸುತ್ತದೆ. ಕನ್ನಡಿ ಒಂಚೂರು ಒಡೆದರೂ ಮೊದಲಿಗೆ ಅದನ್ನು ಬದಲಾಯಿಸಿ.
2. ಒಣಗುತ್ತಿರುವ ತುಳಸಿ ಗಿಡ
ಹಿಂದೂ ಧರ್ಮದ ಪ್ರಕಾರ ತುಳಸಿ ಗಿಡಕ್ಕೆ ಪವಿತ್ರ ಸ್ಥಾನಮಾನ ನೀಡಲಾಗಿದೆ. ಸಾಮಾನ್ಯವಾಗಿ ಬೆಳಗ್ಗೆ ಎದ್ದ ತಕ್ಷಣ ತುಳಸಿ ಗಿಡಕ್ಕೆ ನೀರು ಹಾಕುವ ಸಂಪ್ರದಾಯವಿದೆ. ಚಾಣಕ್ಯನ ಪ್ರಕಾರ ನಿಮ್ಮ ಮನೆಯಲ್ಲಿರುವ ತುಳಸಿ ಗಿಡ ಸಾಕಷ್ಟು ಪೋಷಣೆ ಮಾಡಿದ ನಂತರವೂ ಒಣಗಿ ಹೋಗುತ್ತಿದ್ಯಾ? ಹಾಗಾದ್ರೆ ಖಂಡಿತ ಆರ್ಥಿಕ ಸಮಸ್ಯೆ ಎದುರಾಗುವ ಸೂಚನೆಯಿದು. ಕೆಲವೊಂದು ಸಲ ಮನೆಯಲ್ಲಿ ತುಳಸಿ ಗಿಡ ಒಣಗಿ ಹೋಗೋದನ್ನು ನಾವು ನೋಡಿರ್ತೀವಿ. ತುಳಸಿ ಗಿಡಕ್ಕೆ ಸರಿಯಾಗಿ ನೀರು ಹಾಕದಿದ್ದರೂ ಕೂಡ ಹೀಗಾಗುವ ಸಾಧ್ಯತೆ ಇದೆ.
3. ಮನೆಯಲ್ಲಿ ಪದೇ ಪದೇ ಜಗಳಗಳಾಗೋದು
ನಿಮ್ಮ ಮನೆಯಲ್ಲಿ ಯಾವುದೇ ಕಾರಣಗಳು ಇಲ್ಲದೇ ಪದೇ ಪದೇ ಜಗಳವಾಗ್ತಿದ್ಯಾ? ಸಣ್ಣ ಪುಟ್ಟ ಕಾರಣಕ್ಕೆ ಮನೆಯ ಸದಸ್ಯರು ಕಿತ್ತಾಡಿಕೊಳ್ಳುತ್ತಿದ್ದೀರಾ? ಹಾಗಾದ್ರೆ ಇದು ಆರ್ಥಿಕ ಸಮಸ್ಯೆಯ ಮುನ್ಸೂಚನೆ. ಚಾಣಕ್ಯನ ಪ್ರಕಾರ ಇದು ಗ್ರಹಗಳ ದೋಷ ಅಥವಾ ವಾಸ್ತು ದೋಷದಿಂದಲೂ ಎದುರಾಗುವ ಸಾಧ್ಯತೆಗಳಿದೆ. ಹೀಗಾಗಿ ಈ ರೀತಿ ಸಮಸ್ಯೆ ಕಂಡು ಬಂದರೆ ತಕ್ಷಣ ತಜ್ಞರನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಿ.
4. ದೇವರ ಆರಾಧನೆ ಮಾಡದಿದ್ದಾಗ
ಸಾಮಾನ್ಯವಾಗಿ ಪ್ರತಿಯೊಂದು ಮನೆಯಲ್ಲಿಯೂ ದೇವರ ಆರಾಧನೆಯನ್ನು ಖಂಡಿತವಾಗಿ ಮಾಡಲಾಗುತ್ತದೆ. ಯಾವುದೇ ಧರ್ಮದವರಾದರೂ ಬೆಳಗ್ಗೆ ಎದ್ದ ತಕ್ಷಣ ದೇವರನ್ನು ಪೂಜಿಸದೇ ಇರೋದಿಲ್ಲ. ಹಿಂದೂ ಧರ್ಮದಲ್ಲಿ ಕೆಲವೊಂದು ಕಟ್ಟುಪಾಡುಗಳಿದೆ. ಇದರ ಪ್ರಕಾರವೇ ದೇವರ ಆರಾಧನೆ ನಡೆಯಬೇಕು. ದೇವರನ್ನು ಭಕ್ತಿಯಿಂದ ನೆನೆದರೆ ಸಾಕು. ಅದರ ಹೊರತಾಗಿ ಯಾವ ಆಡಂಬರವೂ ಬೇಕಾಗಿಲ್ಲ. ಆದರೆ ಕೆಲವು ಮನೆಗಳಲ್ಲಿ ಇದ್ಯಾವುದೇ ಚಟುವಟಿಕೆ ನಡೆಯುವುದಿಲ್ಲ. ಯಾರು ದೇವರನ್ನು ಪೂಜಿಸುವ ಪದ್ಧತಿ ಪಾಲಿಸುವುದಿಲ್ಲವೋ ಅಂತಹ ಮನೆಗಳಲ್ಲಿ ದಾರಿದ್ರ್ಯ ಕಾಡುತ್ತೆ ಅಂತ ಹೇಳಲಾಗುತ್ತದೆ.
5. ಹಿರಿಯರಿಗೆ ಅಗೌರವ ತೋರುವುದು
ಹಿರಿಯರನ್ನು ಗೌರವ ಭಾವದಿಂದ ಕಾಣಬೇಕು. ನಮ್ಮಕ್ಕಿಂತ ಹಿರಿಯರಿಗೆ ಗೌರವ ನೀಡುವುದು ನಮ್ಮ ಸಂಸ್ಕೃತಿಯ ಭಾಗ ಎಂದರೆ ತಪ್ಪಾಗೋದಿಲ್ಲ. ಯಾವ ಮನೆಯಲ್ಲಿ ಹಿರಿಯರಿಗೆ ಗೌರವ ಸಲ್ಲೋದಿಲ್ಲವೋ ಆ ಮನೆಯಲ್ಲಿ ಸುಖ, ಸಮೃದ್ಧಿ ಹಾಗೂ ನೆಮ್ಮದಿ ನೆಲೆಸೋದಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ಹಿರಿಯರಿಗೆ ಅವಮಾನ ಮಾಡೋದಾಗಲಿ ಅಥವಾ ಅವರನ್ನು ನಿಂದಿಸೋದಕ್ಕೆ ಹೋಗಬೇಡಿ.
ಚಾಣಕ್ಯ ಪ್ರಕಾರ ಈ ವಿಚಾರಗಳ ಬಗ್ಗೆ ಜಾಗರೂಕರಾಗಿರಬೇಕು. ಒಂದು ವೇಳೆ ಈ ರೀತಿ ಲಕ್ಷಣಗಳು ಕಂಡು ಬಂದರೆ ಖಂಡಿತ ಅದನ್ನು ನಿರ್ಲಕ್ಷ್ಯ ಮಾಡೋದಕ್ಕೆ ಹೋಗಬೇಡಿ. ಬದಲಾಗಿ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಿ. ಆಗ ಕೊಂಚ ಮಟ್ಟಿಗೆ ನೀವು ಆರ್ಥಿಕ ಸಮಸ್ಯೆಯಿಂದ ಬಚಾವ್ ಆಗುವ ಸಾಧ್ಯತೆ ಇದೆ.



Click it and Unblock the Notifications

