Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ಈ ರೀತಿಯ ನಡವಳಿಕೆ ಇದ್ದರೆ ಬಿಟ್ಟು ಬಿಡಿ ! ಇಲ್ಲದಿದ್ದರೆ ಸಂಸಾರಕ್ಕೆ ಆಪತ್ತು
ಆಚಾರ್ಯ ಚಾಣಕ್ಯರು ಒರ್ವ ಶ್ರೇಷ್ಠ ಅರ್ಥ ಶಾಸ್ತ್ರಜ್ಞರು ಮಾತ್ರವಲ್ಲದೇ ಇವರೊಬ್ಬರು ಮಹಾನ್ ಜ್ಞಾನಿ, ವಿಧ್ವಾಂಸರೂ ಕೂಡ ಹೌದು. ಒರ್ವ ಸಾಮಾನ್ಯ ಧನ ಕಾಯುವ ಹುಡುಗನಿಗೆ ತರಭೇಟಿ ಕೊಟ್ಟು ಮುಂದೆ ಆತ ಮೌರ್ಯ ಸಾಮ್ರಾಜ್ಯ ಸ್ಥಾಪನೆ ಮಾಡೋದಕ್ಕೆ ಕಾರಣರಾಗುತ್ತಾರೆ. ಇಂತಹ ಮಹಾತ್ಮ ಚಾಣಕ್ಯರು ಹಾಕಿಕೊಟ್ಟ ದಾರಿಯಲ್ಲಿ ನಡೆದುಕೊಂಡು ಬಂದವರು ಯಾರೂ ಕೂಡ ಇದುವರೆಗೂ ಸೋಲು ಕಂಡಿದ್ದೇ ಇಲ್ಲ.
ವೈವಾಹಿಕ ಜೀವನದ ಬಗ್ಗೆ ಕೂಡ ಚಾಣಕ್ಯರು ಅನೇಕ ನೀತಿಗಳನ್ನು ರೂಪಿಸಿದ್ದಾರೆ. ಜೀವನದಲ್ಲಿ ಖುಷಿಯಾಗಿರಲು ಏನು ಮಾಡಬೇಕು, ದಾಂಪತ್ಯದಲ್ಲಿ ದುಃಖವನ್ನು ಹೋಗಲಾಡಿಸೋದು ಹೇಗೆ ಅನ್ನೋದ್ರ ಬಗ್ಗೆಯೂ ತಿಳಿಸಿದ್ದಾರೆ. ಸದ್ಯ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳದಿರಲು ಏನು ಮಾಡ್ಬೇಕು ಅನ್ನೋದ್ರ ಬಗ್ಗೆ ತಿಳಿಸಿದ್ದಾರೆ. ಚಾಣಕ್ಯನ ಈ ನೀತಿಗಳನ್ನು ಪಾಲಿಸಿದ್ರೆ ದಾಂಪತ್ಯದಲ್ಲಿ ಬಿರುಕು ಮೂಡೋದಕ್ಕೆ ಸಾಧ್ಯವೇ ಇಲ್ಲ.

1. ಮೋಸ ಮಾಡಬಾರದು
ಚಾಣಕ್ಯರು ತಮ್ಮ ನೀತಿಯಲ್ಲಿ ಮೋಸ ಮಾಡೋದು ವಿಷ ಇದ್ದ ಹಾಗೆ ಎಂದು ಹೇಳಿದ್ದಾರೆ. ಕೇವಲ ಪತ್ನಿ- ಪತ್ನಿ ಒಬ್ಬರಿಗೊಬ್ಬರು ಮೋಸ ಮಾಡೋದು ಮಾತ್ರವಲ್ಲ. ಸಂಬಂಧದಲ್ಲಿ ಯಾರು ಯಾರಿಗೂ ಮೋಸ ಮಾಡಬಾರದು ಎಂದು ಹೇಳಿದ್ದಾರೆ. ಒಂದು ವೇಳೆ ಪತಿ- ಪತ್ನಿ ತಮ್ಮ ಸಂಬಂಧವನ್ನು ಗಟ್ಟಿ ಮಾಡೋದಕ್ಕೆ ಇಚ್ಚಿಸಿದ್ದೇ ಆದರೆ ಈ ಸಂಬಂಧದಲ್ಲಿ ಮೋಸಕ್ಕೆ ಅವಕಾಶವೇ ಇರಬಾರದು ಎಂದಿದ್ದಾರೆ. ಹೀಗಾಗಿ ಯಾವ ಸಂಬಂಧದಲ್ಲಿ ಮೋಸ ಇರುತ್ತದೆಯೋ ಅಂತಹ ಸಂಬಂಧದಕ್ಕೆ ಬೇಗನೆ ಬಿರುಕು ಕಾಣಿಸಿಕೊಳ್ಳುತ್ತದೆ.
2. ಸುಳ್ಳು ಹೇಳಬಾರದು
ಚಾಣಕ್ಯ ಪ್ರಕಾರ ಸುಳ್ಳುಗಳನ್ನೇ ಹೇಳಿ ಕಟ್ಟಿದ ಸಂಸಾರ ಖಂಡಿತವಾಗಿ ಉಳಿಯೋದಿಕ್ಕೆ ಸಾಧ್ಯವೇ ಇಲ್ಲ. ಒಂದು ವೇಳೆ ಸಂಬಂಧದಲ್ಲಿ ಸುಳ್ಳು ಹೇಳಿರೋದು ಸಾಭೀತಾದರೆ ಆ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳೋದಕ್ಕೆ ಶುರುವಾಗುತ್ತದೆ. ಹೀಗಾಗಿ ಸುಳ್ಳಿನಿಂದ ಯಾವತ್ತೂ ದೂರವಿರಿ. ಸಂಬಂಧವನ್ನು ಯಾವಾಗಲೂ ಸತ್ಯ, ನಂಬಿಕೆಯ ಸರಪಳಿಯಿಂದ ಕಟ್ಟಬೇಕೇ ವಿನಹ ಸುಳ್ಳಿನಿಂದಲ್ಲ. ಸುಳ್ಳಿನಿಂದ ಸಂಸಾರ ಇಂದಲ್ಲ ನಾಳೆ ಕೊನೆಯಾಗುತ್ತದೆ.
3. ಕೋಪ ಮಾಡಿಕೊಳ್ಳಬಾರದು
ಚಾಣಕ್ಯನ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಗೂ ಕೋಪ ನಿಯಂತ್ರಿಸಿಕೊಳ್ಳುವ ಶಕ್ತಿ ಇರಬೇಕು. ಕೋಪ ಎಂತಹ ಸಂಬಂಧದಲ್ಲೂ ಬಿರುಕು ಕಾಣಿಸಿಕೊಳ್ಳೋದಕ್ಕೆ ಕಾರಣವಾಗುತ್ತದೆ. ಕೋಪದಲ್ಲಿ ಆಡಿದ ಮಾತನ್ನು ಹಿಂತೆಗೆದುಕೊಳ್ಳೋದಕ್ಕೆ ಸಾಧ್ಯವೇ ಇಲ್ಲ. ನಮ್ಮ ಕಟುವಾದ ಮಾತಿನಿಂದ ನೊಂದುಕೊಂಡ ನಮ್ಮ ಸಂಗಾತಿ ಮತ್ತೆಂದಿಗೂ ನಮ್ಮ ಜೊತೆಗೆ ಬದುಕೋದಕ್ಕೆ ಇಷ್ಟ ಪಡೋದಿಲ್ಲ. ಸುಖಾ ಸುಮ್ಮನೆ ಕೋಪ ಮಾಡಿಕೊಳ್ಳುವ ಬದಲು ಆ ಪರಿಸ್ಥಿತಿಯನ್ನು ಅರಿತುಕೊಂಡು ಬಾಳಿದರೆ ಉತ್ತಮ.
4. ಒಬ್ಬರಿಗಿಂತ ಮತ್ತೊಬ್ಬರು ಮೇಲೂ ಎಂದು ಅಂದುಕೊಳ್ಳಬಾರದು
ಗಂಡ-ಹೆಂಡತಿ ಸಂಬಂಧದಲ್ಲಿ ಯಾರೂ ಮೇಲಿಲ್ಲ ಹಾಗೂ ಯಾರು ಕೂಡ ಕೀಳಲ್ಲ. ಇಬ್ಬರೂ ಕೂಡ ಸಮಾನರು. ಆದರೆ ಕೆಲವೊಂದು ಸಂಬಂಧಗಳಲ್ಲಿ ಗಂಡಂದಿರು ಪ್ರಾಬಲ್ಯವನ್ನು ಪ್ರದರ್ಶಿಸುತ್ತಾರೆ. ಇನ್ನೂ ಕೆಲವು ಸಂಬಂಧಗಳಲ್ಲಿ ಪತ್ನಿಯರು ಪ್ರಾಬಲ್ಯ ಸಾಧಿಸುತ್ತಾರೆ. ಸಂಬಂಧ ಹೀಗಿದ್ದರೆ ಖಂಡಿತ ಉಳಿಯೋದಿಲ್ಲ. ನಿಧಾನವಾಗಿ ಬಿರುಕು ಕಾಣಿಸಿಕೊಂಡು ಒಂದಲ್ಲ ಒಂದು ದಿನ ಒಡೆದು ಹೋಗುತ್ತದೆ.
ದಾಂಪತ್ಯ ಜೀವನ ಮೂರು ಗಂಟಿನ ನಂಟಿನಲ್ಲಿ ಭದ್ರವಾಗಬೇಕು. ಅದನ್ನು ಬಿಟ್ಟು ಬಿಕ್ಕ ಪುಟ್ಟ ವಿಚಾರಗಳಿಗೆ ಜಗಳವಾಡಿ ಸಂಬಂಧ ಹಾಳು ಮಾಡಿಕೊಳ್ಳಬಾರದು.



Click it and Unblock the Notifications
