Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚೈತ್ರ ನವರಾತ್ರಿ: ಈ ವರ್ಷ ದುರ್ಗೆಯ ವಾಹನ ಯಾವುದು, ಈ ವಾಹನ ಏನು ಸೂಚನೆ ನೀಡುತ್ತದೆ?
ವರ್ಷದಲ್ಲಿ ಎರಡು ನವರಾತ್ರಿಯನ್ನು ಅದ್ದೂರಿಯಾಗಿ ಆಚರಿಸಲಾಗುವುದು. ಪ್ರತಿ ನವರಾತ್ರಿಯಂದು ದುರ್ಗೆ ಬೇರೆ-ಬೇರೆ ವಾಹನದಲ್ಲಿ ಬರುತ್ತಾಳೆ. ದುರ್ಗೆ ಯಾವ ವಾಹನದಲ್ಲಿ ಬರುತ್ತಾಳೋ ಅದರ ಆಧಾರದ ಮೇಲೆ ವರ್ಷಫಲವನ್ನು ಹೇಳಲಾಗುವುದು.
ಈ ವರ್ಷ ಯುಗಾದಿಯಂದೇ ಚೈತ್ರ ನವರಾತ್ರಿ ಬಂದಿದೆ. ಮಾರ್ಚ್ 22 ಬುಧವಾರದಂದು ನವರಾತ್ರಿ ಪ್ರಾರಂಭವಾಗಿದೆ. ಪ್ರತಿವರ್ಷ ನವರಾತ್ರಿಯಂದು ದುರ್ಗೆ ಬೇರೆ-ಬೇರೆ ವಾಹನದಲ್ಲಿ ಭೂಮಿಗೆ ಬರುತ್ತಾಳೆ ಎಂದು ಹೇಳಲಾಗುವುದು.

ದುರ್ಗೆ ಬರುವ ಹೋಗುವ ಹೋಗುವ ವಾಹನ ತುಂಬಾನೇ ಮುಖ್ಯವಾಗಿರುತ್ತದೆ, ಅದರಂತೆ ಫಲ ಇರಲಿದೆ. ಈ ವರ್ಷ ಚೈತ್ರ ನವರಾತ್ರಿಯಲ್ಲಿ ದುರ್ಗೆಯು ದೋಣಿಯಲ್ಲಿ ಬಂದು ತನ್ನ ಭಕ್ತರನ್ನು ಹರಿಸುತ್ತಾಳೆ. ಆದರೆ ಈ ವರ್ಷ ಶುಭಫಲ ಹೆಚ್ಚು ನೀಡಲಿದ್ದಾಳೆ.
ಹಿಂದೂ ನಂಬಿಕೆಗಳ ಪ್ರಕಾರ ಮಾತೆ ದುರ್ಗ ಆನೆ ಮೇಲೆ ಕುಳಿತು ಬಂದರೆ ಆ ವರ್ಷ ತುಂಬಾ ಮಳೆಯಿರುತ್ತದೆ, ಕುದುರೆ ಮೇಲೆ ಬಂದರೆ ಯುದ್ಧದ ಪರಿಸ್ಥಿತಿ, ರಾಜ್ಯದಲ್ಲಿ ಗೊಂದಲ, ಗಲಭೆ ಇರಲಿದೆ. ದುರ್ಗೆ ದೋಣಿಯಲ್ಲಿ ಬಂದರೆ ತುಂಬಾನೇ ಶುಭ, ಸಂಪತ್ತು ಹೆಚ್ಚಿಸಲಿದ್ದಾಳೆ ಎಂದು ಹೇಳಲಾಗುವುದು.
ಚೈತ್ರ ನವರಾತ್ರಿ ಬುಧವಾರದಂದು ಪ್ರಾರಂಭವಾಗಿದೆ. ಆದ್ದರಿಂದ ದುರ್ಗೆ ದೋಣಿಯಲ್ಲಿ ಭೂ ಲೋಕಕ್ಕೆ ತನ್ನ ಭಕ್ತರನ್ನು ಹರಿಸಲು ಬಂದಿದ್ದಾಳೆ. ದುರ್ಗೆ ಮಾತೆ ದೋಣಿಯಲ್ಲಿ ಬಂದಿರುವುದರಿಂದ ಮಳೆ ಬೆಳೆ ಚೆನ್ನಾಗಿರಲಿದೆ ಎಂದು ಹೇಳಲಾಗುವುದು.
ನವರಾತ್ರಿ ಯಾವ ದಿನ ಪ್ರಾರಂಭವಾದರೆ ದುರ್ಗೆ ತಾವ ವಾಹನದಲ್ಲಿ ಬರುತ್ತಾಳೆ?
ನವರಾತ್ರಿಯಂದು ದುರ್ಗೆ ಯಾವ ವಾಹನದಲ್ಲಿ ಬರುತ್ತಾಳೆ ಎಂಬುವುದು ನವರಾತ್ರಿ ಯಾವ ದಿನ ಪ್ರಾರಂಭವಾಗುವುದು ಅದರ ಆಧಾರದ ಮೇಲೆ ಮೇಲೆ ಹೇಳಲಾಗುವುದು.
ದೇವಿ ಭಾಗವತ ಪ್ರಕಾರ ಭಾನುವಾರ ಅಥವಾ ಸೋಮವಾರ ನವರಾತ್ರಿ ಪ್ರಾರಂಭವಾದರೆ ದೇವಿ ಆನೆ ಮೇಲೆ ಬರುತ್ತಾಳೆ.
ಶನಿವಾರ ಮತ್ತು ಮಂಗಳವಾರ ನವರಾತ್ರಿ ಪ್ರಾರಂಭವಾದರೆ ಕುದುರೆ ಮೇಲೇರಿ ಬರುತ್ತಾಳೆ.
ಬುಧವಾರ ಬಂದರೆ ದೋಣಿ ಮೇಲೆ ಕುಳಿತು ಬರುತ್ತಾಳೆ
ಗುರುವಾರ, ಶುಕ್ರವಾರ ಬಂದರ ಪಲಕ್ಕಿಯೇರಿ ಬರುತ್ತಾರೆ.
ದುರ್ಗೆ ಮಾತೆ ಆನೆ ಮೇಲೇರಿ ಬಂದರೆ ಏನರ್ಥ?
ದುರ್ಗೆ ಮಾತೆ ಆನೆ ಮೇಲೇರಿ ಬರುವುದರಿಂದ ಮಳೆ-ಬೆಳೆ ಚೆನ್ನಾಗಿ ಬರಲಿದೆ. ದೇಶದಲ್ಲಿ ಸಮೃದ್ಧಿ ಹೆಚ್ಚಾಗಲಿದೆ, ಜನರು ಖುಷಿಯ-ನೆಮ್ಮದಿಯ ಬದುಕು ಸಾಧಿಸುತ್ತಾರೆ.
ಕುದುರೆ ಮತ್ತು ಪಲ್ಲಕ್ಕಿಯಲ್ಲಿ ದುರ್ಗೆ ಮಾತೆ ಬಂದರೆ ಏನರ್ಥ?
ದುರ್ಗೆ ಕುದುರೆ, ಪಲ್ಲಕ್ಕಿಯಲ್ಲಿ ಬಂದರೆ ಅದು ಶುಭ ಎಂದು ಪರಿಗಣಿಸುವುದಿಲ್ಲ. ಇವುಗಳು ವಿನಾಶ, ಯುದ್ಧ, ಸಾಂಕ್ರಾಮಿಕ ರೋಗದ ಮುನ್ಸೂಚನೆ ನೀಡುತ್ತಾಳೆ ಎಂದು ಹೇಳಲಾಗುವುದು.
ಆನೆ, ದೋಣಿಯಲ್ಲಿ ಬಂದರೆ ಶುಭ, ಇದೀಗ ದುರ್ಗೆ ದೋಣಿಯಲ್ಲಿ ಬಂದಿರುವುದರಿಂದ ಶುಭ ಫಲ ನೀಡಲಿದ್ದಾಳೆ ಎಂದು ಹೇಳಬಹುದು.
ನವರಾತ್ರಿಯಲ್ಲಿ ಈ ಮಂತ್ರಗಳನ್ನು ಪಠಿಸಿ:
ಧ್ಯಾನ ಮಂತ್ರ
ಓಂ ಜಾತಾ ಜತ್ ಸಮ್ಯುಕ್ತಮರ್ಧೇಂದು ಕೃತಿ ಲಕ್ಷಣಮ್
ಲೋಚನಾಯಾತ್ರಾ ಸ್ನುಕ್ತಮ್ ಪದಮೇಂದು ಸಾದ್ಯ ಶನಯಮ್
ವಿದ್ಯಾರ್ಥಿಗಳು ಈ ಮಂತ್ರ ಪಠಿಸುವುದರಿಂದ ಏಕಾಗ್ರತೆ ಹೆಚ್ಚುವುದು
ದುರ್ಗಾ ಶತ್ರು ಶಾಂತಿ ಮಂತ್ರ
ರಿಪವಾಹ ಸಂಕ್ಷ್ಯಾಮ್ ಯಂತಿ ಕಲ್ಯಾಣಮ್ ಚಾಪ್ ಪಾದಾಯತೇ
ನಂದತೇ ಚ ಕುಲಮ್ ಪುನಾಸಮ್ ಮಹಾತ್ಮಮಮ್ ಮಾ ಶ್ರೀನು ಯಾನ್ಮನ್
ಈ ಮಂತ್ರ ಪಠಿಸುವುದರಿಂದ ದುಷ್ಟಶಕ್ತಿಗಳು ದೂರಾಗುವುದು, ನಮಗೆ ಒಳಿತಾಗುವುದು
ಸರ್ವ ಬಾಧಾ ಮುಕ್ತಿ ಮಂತ್ರ
ಸರ್ವ ಬಾಧಾ ವಿನಿರ್ಮುಕ್ತೊ ಧನ ಧ್ಯಾನ ಸುತನ್ವಿತಃ
ಮನುಷ್ಯೊ ಮತಪ್ರಸಾದಿನ್ ಭವಿಷ್ಯತಿ ನ ಸನ್ಶಯಃ
ಈ ಮಂತ್ರವನ್ನು ಪಠಿಸುವುದರಿಂದ ಎಲ್ಲಾ ಸಾಲ, ಕಷ್ಟದಿಂದ ಮುಕ್ತಿ ಪಡೆಯುತ್ತೇವೆ.



Click it and Unblock the Notifications
