Latest Updates
-
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ!
ಚೈತ್ರ ನವರಾತ್ರಿ: ಈ ವರ್ಷ ದುರ್ಗೆಯ ವಾಹನ ಯಾವುದು, ಈ ವಾಹನ ಏನು ಸೂಚನೆ ನೀಡುತ್ತದೆ?
ವರ್ಷದಲ್ಲಿ ಎರಡು ನವರಾತ್ರಿಯನ್ನು ಅದ್ದೂರಿಯಾಗಿ ಆಚರಿಸಲಾಗುವುದು. ಪ್ರತಿ ನವರಾತ್ರಿಯಂದು ದುರ್ಗೆ ಬೇರೆ-ಬೇರೆ ವಾಹನದಲ್ಲಿ ಬರುತ್ತಾಳೆ. ದುರ್ಗೆ ಯಾವ ವಾಹನದಲ್ಲಿ ಬರುತ್ತಾಳೋ ಅದರ ಆಧಾರದ ಮೇಲೆ ವರ್ಷಫಲವನ್ನು ಹೇಳಲಾಗುವುದು.
ಈ ವರ್ಷ ಯುಗಾದಿಯಂದೇ ಚೈತ್ರ ನವರಾತ್ರಿ ಬಂದಿದೆ. ಮಾರ್ಚ್ 22 ಬುಧವಾರದಂದು ನವರಾತ್ರಿ ಪ್ರಾರಂಭವಾಗಿದೆ. ಪ್ರತಿವರ್ಷ ನವರಾತ್ರಿಯಂದು ದುರ್ಗೆ ಬೇರೆ-ಬೇರೆ ವಾಹನದಲ್ಲಿ ಭೂಮಿಗೆ ಬರುತ್ತಾಳೆ ಎಂದು ಹೇಳಲಾಗುವುದು.

ದುರ್ಗೆ ಬರುವ ಹೋಗುವ ಹೋಗುವ ವಾಹನ ತುಂಬಾನೇ ಮುಖ್ಯವಾಗಿರುತ್ತದೆ, ಅದರಂತೆ ಫಲ ಇರಲಿದೆ. ಈ ವರ್ಷ ಚೈತ್ರ ನವರಾತ್ರಿಯಲ್ಲಿ ದುರ್ಗೆಯು ದೋಣಿಯಲ್ಲಿ ಬಂದು ತನ್ನ ಭಕ್ತರನ್ನು ಹರಿಸುತ್ತಾಳೆ. ಆದರೆ ಈ ವರ್ಷ ಶುಭಫಲ ಹೆಚ್ಚು ನೀಡಲಿದ್ದಾಳೆ.
ಹಿಂದೂ ನಂಬಿಕೆಗಳ ಪ್ರಕಾರ ಮಾತೆ ದುರ್ಗ ಆನೆ ಮೇಲೆ ಕುಳಿತು ಬಂದರೆ ಆ ವರ್ಷ ತುಂಬಾ ಮಳೆಯಿರುತ್ತದೆ, ಕುದುರೆ ಮೇಲೆ ಬಂದರೆ ಯುದ್ಧದ ಪರಿಸ್ಥಿತಿ, ರಾಜ್ಯದಲ್ಲಿ ಗೊಂದಲ, ಗಲಭೆ ಇರಲಿದೆ. ದುರ್ಗೆ ದೋಣಿಯಲ್ಲಿ ಬಂದರೆ ತುಂಬಾನೇ ಶುಭ, ಸಂಪತ್ತು ಹೆಚ್ಚಿಸಲಿದ್ದಾಳೆ ಎಂದು ಹೇಳಲಾಗುವುದು.
ಚೈತ್ರ ನವರಾತ್ರಿ ಬುಧವಾರದಂದು ಪ್ರಾರಂಭವಾಗಿದೆ. ಆದ್ದರಿಂದ ದುರ್ಗೆ ದೋಣಿಯಲ್ಲಿ ಭೂ ಲೋಕಕ್ಕೆ ತನ್ನ ಭಕ್ತರನ್ನು ಹರಿಸಲು ಬಂದಿದ್ದಾಳೆ. ದುರ್ಗೆ ಮಾತೆ ದೋಣಿಯಲ್ಲಿ ಬಂದಿರುವುದರಿಂದ ಮಳೆ ಬೆಳೆ ಚೆನ್ನಾಗಿರಲಿದೆ ಎಂದು ಹೇಳಲಾಗುವುದು.
ನವರಾತ್ರಿ ಯಾವ ದಿನ ಪ್ರಾರಂಭವಾದರೆ ದುರ್ಗೆ ತಾವ ವಾಹನದಲ್ಲಿ ಬರುತ್ತಾಳೆ?
ನವರಾತ್ರಿಯಂದು ದುರ್ಗೆ ಯಾವ ವಾಹನದಲ್ಲಿ ಬರುತ್ತಾಳೆ ಎಂಬುವುದು ನವರಾತ್ರಿ ಯಾವ ದಿನ ಪ್ರಾರಂಭವಾಗುವುದು ಅದರ ಆಧಾರದ ಮೇಲೆ ಮೇಲೆ ಹೇಳಲಾಗುವುದು.
ದೇವಿ ಭಾಗವತ ಪ್ರಕಾರ ಭಾನುವಾರ ಅಥವಾ ಸೋಮವಾರ ನವರಾತ್ರಿ ಪ್ರಾರಂಭವಾದರೆ ದೇವಿ ಆನೆ ಮೇಲೆ ಬರುತ್ತಾಳೆ.
ಶನಿವಾರ ಮತ್ತು ಮಂಗಳವಾರ ನವರಾತ್ರಿ ಪ್ರಾರಂಭವಾದರೆ ಕುದುರೆ ಮೇಲೇರಿ ಬರುತ್ತಾಳೆ.
ಬುಧವಾರ ಬಂದರೆ ದೋಣಿ ಮೇಲೆ ಕುಳಿತು ಬರುತ್ತಾಳೆ
ಗುರುವಾರ, ಶುಕ್ರವಾರ ಬಂದರ ಪಲಕ್ಕಿಯೇರಿ ಬರುತ್ತಾರೆ.
ದುರ್ಗೆ ಮಾತೆ ಆನೆ ಮೇಲೇರಿ ಬಂದರೆ ಏನರ್ಥ?
ದುರ್ಗೆ ಮಾತೆ ಆನೆ ಮೇಲೇರಿ ಬರುವುದರಿಂದ ಮಳೆ-ಬೆಳೆ ಚೆನ್ನಾಗಿ ಬರಲಿದೆ. ದೇಶದಲ್ಲಿ ಸಮೃದ್ಧಿ ಹೆಚ್ಚಾಗಲಿದೆ, ಜನರು ಖುಷಿಯ-ನೆಮ್ಮದಿಯ ಬದುಕು ಸಾಧಿಸುತ್ತಾರೆ.
ಕುದುರೆ ಮತ್ತು ಪಲ್ಲಕ್ಕಿಯಲ್ಲಿ ದುರ್ಗೆ ಮಾತೆ ಬಂದರೆ ಏನರ್ಥ?
ದುರ್ಗೆ ಕುದುರೆ, ಪಲ್ಲಕ್ಕಿಯಲ್ಲಿ ಬಂದರೆ ಅದು ಶುಭ ಎಂದು ಪರಿಗಣಿಸುವುದಿಲ್ಲ. ಇವುಗಳು ವಿನಾಶ, ಯುದ್ಧ, ಸಾಂಕ್ರಾಮಿಕ ರೋಗದ ಮುನ್ಸೂಚನೆ ನೀಡುತ್ತಾಳೆ ಎಂದು ಹೇಳಲಾಗುವುದು.
ಆನೆ, ದೋಣಿಯಲ್ಲಿ ಬಂದರೆ ಶುಭ, ಇದೀಗ ದುರ್ಗೆ ದೋಣಿಯಲ್ಲಿ ಬಂದಿರುವುದರಿಂದ ಶುಭ ಫಲ ನೀಡಲಿದ್ದಾಳೆ ಎಂದು ಹೇಳಬಹುದು.
ನವರಾತ್ರಿಯಲ್ಲಿ ಈ ಮಂತ್ರಗಳನ್ನು ಪಠಿಸಿ:
ಧ್ಯಾನ ಮಂತ್ರ
ಓಂ ಜಾತಾ ಜತ್ ಸಮ್ಯುಕ್ತಮರ್ಧೇಂದು ಕೃತಿ ಲಕ್ಷಣಮ್
ಲೋಚನಾಯಾತ್ರಾ ಸ್ನುಕ್ತಮ್ ಪದಮೇಂದು ಸಾದ್ಯ ಶನಯಮ್
ವಿದ್ಯಾರ್ಥಿಗಳು ಈ ಮಂತ್ರ ಪಠಿಸುವುದರಿಂದ ಏಕಾಗ್ರತೆ ಹೆಚ್ಚುವುದು
ದುರ್ಗಾ ಶತ್ರು ಶಾಂತಿ ಮಂತ್ರ
ರಿಪವಾಹ ಸಂಕ್ಷ್ಯಾಮ್ ಯಂತಿ ಕಲ್ಯಾಣಮ್ ಚಾಪ್ ಪಾದಾಯತೇ
ನಂದತೇ ಚ ಕುಲಮ್ ಪುನಾಸಮ್ ಮಹಾತ್ಮಮಮ್ ಮಾ ಶ್ರೀನು ಯಾನ್ಮನ್
ಈ ಮಂತ್ರ ಪಠಿಸುವುದರಿಂದ ದುಷ್ಟಶಕ್ತಿಗಳು ದೂರಾಗುವುದು, ನಮಗೆ ಒಳಿತಾಗುವುದು
ಸರ್ವ ಬಾಧಾ ಮುಕ್ತಿ ಮಂತ್ರ
ಸರ್ವ ಬಾಧಾ ವಿನಿರ್ಮುಕ್ತೊ ಧನ ಧ್ಯಾನ ಸುತನ್ವಿತಃ
ಮನುಷ್ಯೊ ಮತಪ್ರಸಾದಿನ್ ಭವಿಷ್ಯತಿ ನ ಸನ್ಶಯಃ
ಈ ಮಂತ್ರವನ್ನು ಪಠಿಸುವುದರಿಂದ ಎಲ್ಲಾ ಸಾಲ, ಕಷ್ಟದಿಂದ ಮುಕ್ತಿ ಪಡೆಯುತ್ತೇವೆ.



Click it and Unblock the Notifications
