Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಚೈತ್ರ ನವರಾತ್ರಿ: ಈ ವರ್ಷ ದುರ್ಗೆಯ ವಾಹನ ಯಾವುದು, ಈ ವಾಹನ ಏನು ಸೂಚನೆ ನೀಡುತ್ತದೆ?
ವರ್ಷದಲ್ಲಿ ಎರಡು ನವರಾತ್ರಿಯನ್ನು ಅದ್ದೂರಿಯಾಗಿ ಆಚರಿಸಲಾಗುವುದು. ಪ್ರತಿ ನವರಾತ್ರಿಯಂದು ದುರ್ಗೆ ಬೇರೆ-ಬೇರೆ ವಾಹನದಲ್ಲಿ ಬರುತ್ತಾಳೆ. ದುರ್ಗೆ ಯಾವ ವಾಹನದಲ್ಲಿ ಬರುತ್ತಾಳೋ ಅದರ ಆಧಾರದ ಮೇಲೆ ವರ್ಷಫಲವನ್ನು ಹೇಳಲಾಗುವುದು.
ಈ ವರ್ಷ ಯುಗಾದಿಯಂದೇ ಚೈತ್ರ ನವರಾತ್ರಿ ಬಂದಿದೆ. ಮಾರ್ಚ್ 22 ಬುಧವಾರದಂದು ನವರಾತ್ರಿ ಪ್ರಾರಂಭವಾಗಿದೆ. ಪ್ರತಿವರ್ಷ ನವರಾತ್ರಿಯಂದು ದುರ್ಗೆ ಬೇರೆ-ಬೇರೆ ವಾಹನದಲ್ಲಿ ಭೂಮಿಗೆ ಬರುತ್ತಾಳೆ ಎಂದು ಹೇಳಲಾಗುವುದು.

ದುರ್ಗೆ ಬರುವ ಹೋಗುವ ಹೋಗುವ ವಾಹನ ತುಂಬಾನೇ ಮುಖ್ಯವಾಗಿರುತ್ತದೆ, ಅದರಂತೆ ಫಲ ಇರಲಿದೆ. ಈ ವರ್ಷ ಚೈತ್ರ ನವರಾತ್ರಿಯಲ್ಲಿ ದುರ್ಗೆಯು ದೋಣಿಯಲ್ಲಿ ಬಂದು ತನ್ನ ಭಕ್ತರನ್ನು ಹರಿಸುತ್ತಾಳೆ. ಆದರೆ ಈ ವರ್ಷ ಶುಭಫಲ ಹೆಚ್ಚು ನೀಡಲಿದ್ದಾಳೆ.
ಹಿಂದೂ ನಂಬಿಕೆಗಳ ಪ್ರಕಾರ ಮಾತೆ ದುರ್ಗ ಆನೆ ಮೇಲೆ ಕುಳಿತು ಬಂದರೆ ಆ ವರ್ಷ ತುಂಬಾ ಮಳೆಯಿರುತ್ತದೆ, ಕುದುರೆ ಮೇಲೆ ಬಂದರೆ ಯುದ್ಧದ ಪರಿಸ್ಥಿತಿ, ರಾಜ್ಯದಲ್ಲಿ ಗೊಂದಲ, ಗಲಭೆ ಇರಲಿದೆ. ದುರ್ಗೆ ದೋಣಿಯಲ್ಲಿ ಬಂದರೆ ತುಂಬಾನೇ ಶುಭ, ಸಂಪತ್ತು ಹೆಚ್ಚಿಸಲಿದ್ದಾಳೆ ಎಂದು ಹೇಳಲಾಗುವುದು.
ಚೈತ್ರ ನವರಾತ್ರಿ ಬುಧವಾರದಂದು ಪ್ರಾರಂಭವಾಗಿದೆ. ಆದ್ದರಿಂದ ದುರ್ಗೆ ದೋಣಿಯಲ್ಲಿ ಭೂ ಲೋಕಕ್ಕೆ ತನ್ನ ಭಕ್ತರನ್ನು ಹರಿಸಲು ಬಂದಿದ್ದಾಳೆ. ದುರ್ಗೆ ಮಾತೆ ದೋಣಿಯಲ್ಲಿ ಬಂದಿರುವುದರಿಂದ ಮಳೆ ಬೆಳೆ ಚೆನ್ನಾಗಿರಲಿದೆ ಎಂದು ಹೇಳಲಾಗುವುದು.
ನವರಾತ್ರಿ ಯಾವ ದಿನ ಪ್ರಾರಂಭವಾದರೆ ದುರ್ಗೆ ತಾವ ವಾಹನದಲ್ಲಿ ಬರುತ್ತಾಳೆ?
ನವರಾತ್ರಿಯಂದು ದುರ್ಗೆ ಯಾವ ವಾಹನದಲ್ಲಿ ಬರುತ್ತಾಳೆ ಎಂಬುವುದು ನವರಾತ್ರಿ ಯಾವ ದಿನ ಪ್ರಾರಂಭವಾಗುವುದು ಅದರ ಆಧಾರದ ಮೇಲೆ ಮೇಲೆ ಹೇಳಲಾಗುವುದು.
ದೇವಿ ಭಾಗವತ ಪ್ರಕಾರ ಭಾನುವಾರ ಅಥವಾ ಸೋಮವಾರ ನವರಾತ್ರಿ ಪ್ರಾರಂಭವಾದರೆ ದೇವಿ ಆನೆ ಮೇಲೆ ಬರುತ್ತಾಳೆ.
ಶನಿವಾರ ಮತ್ತು ಮಂಗಳವಾರ ನವರಾತ್ರಿ ಪ್ರಾರಂಭವಾದರೆ ಕುದುರೆ ಮೇಲೇರಿ ಬರುತ್ತಾಳೆ.
ಬುಧವಾರ ಬಂದರೆ ದೋಣಿ ಮೇಲೆ ಕುಳಿತು ಬರುತ್ತಾಳೆ
ಗುರುವಾರ, ಶುಕ್ರವಾರ ಬಂದರ ಪಲಕ್ಕಿಯೇರಿ ಬರುತ್ತಾರೆ.
ದುರ್ಗೆ ಮಾತೆ ಆನೆ ಮೇಲೇರಿ ಬಂದರೆ ಏನರ್ಥ?
ದುರ್ಗೆ ಮಾತೆ ಆನೆ ಮೇಲೇರಿ ಬರುವುದರಿಂದ ಮಳೆ-ಬೆಳೆ ಚೆನ್ನಾಗಿ ಬರಲಿದೆ. ದೇಶದಲ್ಲಿ ಸಮೃದ್ಧಿ ಹೆಚ್ಚಾಗಲಿದೆ, ಜನರು ಖುಷಿಯ-ನೆಮ್ಮದಿಯ ಬದುಕು ಸಾಧಿಸುತ್ತಾರೆ.
ಕುದುರೆ ಮತ್ತು ಪಲ್ಲಕ್ಕಿಯಲ್ಲಿ ದುರ್ಗೆ ಮಾತೆ ಬಂದರೆ ಏನರ್ಥ?
ದುರ್ಗೆ ಕುದುರೆ, ಪಲ್ಲಕ್ಕಿಯಲ್ಲಿ ಬಂದರೆ ಅದು ಶುಭ ಎಂದು ಪರಿಗಣಿಸುವುದಿಲ್ಲ. ಇವುಗಳು ವಿನಾಶ, ಯುದ್ಧ, ಸಾಂಕ್ರಾಮಿಕ ರೋಗದ ಮುನ್ಸೂಚನೆ ನೀಡುತ್ತಾಳೆ ಎಂದು ಹೇಳಲಾಗುವುದು.
ಆನೆ, ದೋಣಿಯಲ್ಲಿ ಬಂದರೆ ಶುಭ, ಇದೀಗ ದುರ್ಗೆ ದೋಣಿಯಲ್ಲಿ ಬಂದಿರುವುದರಿಂದ ಶುಭ ಫಲ ನೀಡಲಿದ್ದಾಳೆ ಎಂದು ಹೇಳಬಹುದು.
ನವರಾತ್ರಿಯಲ್ಲಿ ಈ ಮಂತ್ರಗಳನ್ನು ಪಠಿಸಿ:
ಧ್ಯಾನ ಮಂತ್ರ
ಓಂ ಜಾತಾ ಜತ್ ಸಮ್ಯುಕ್ತಮರ್ಧೇಂದು ಕೃತಿ ಲಕ್ಷಣಮ್
ಲೋಚನಾಯಾತ್ರಾ ಸ್ನುಕ್ತಮ್ ಪದಮೇಂದು ಸಾದ್ಯ ಶನಯಮ್
ವಿದ್ಯಾರ್ಥಿಗಳು ಈ ಮಂತ್ರ ಪಠಿಸುವುದರಿಂದ ಏಕಾಗ್ರತೆ ಹೆಚ್ಚುವುದು
ದುರ್ಗಾ ಶತ್ರು ಶಾಂತಿ ಮಂತ್ರ
ರಿಪವಾಹ ಸಂಕ್ಷ್ಯಾಮ್ ಯಂತಿ ಕಲ್ಯಾಣಮ್ ಚಾಪ್ ಪಾದಾಯತೇ
ನಂದತೇ ಚ ಕುಲಮ್ ಪುನಾಸಮ್ ಮಹಾತ್ಮಮಮ್ ಮಾ ಶ್ರೀನು ಯಾನ್ಮನ್
ಈ ಮಂತ್ರ ಪಠಿಸುವುದರಿಂದ ದುಷ್ಟಶಕ್ತಿಗಳು ದೂರಾಗುವುದು, ನಮಗೆ ಒಳಿತಾಗುವುದು
ಸರ್ವ ಬಾಧಾ ಮುಕ್ತಿ ಮಂತ್ರ
ಸರ್ವ ಬಾಧಾ ವಿನಿರ್ಮುಕ್ತೊ ಧನ ಧ್ಯಾನ ಸುತನ್ವಿತಃ
ಮನುಷ್ಯೊ ಮತಪ್ರಸಾದಿನ್ ಭವಿಷ್ಯತಿ ನ ಸನ್ಶಯಃ
ಈ ಮಂತ್ರವನ್ನು ಪಠಿಸುವುದರಿಂದ ಎಲ್ಲಾ ಸಾಲ, ಕಷ್ಟದಿಂದ ಮುಕ್ತಿ ಪಡೆಯುತ್ತೇವೆ.



Click it and Unblock the Notifications
