Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
ಈ ಫೋಟೋದಲ್ಲಿರುವ ಚಿರತೆಯಲ್ಲಿ ವಿಶೇಷತೆ ಇದೆ..! ನೀವು ಗುರುತಿಸುತ್ತೀರಾ..?
ಪ್ರಾಣಿಗಳ ಪ್ರಪಂಚದಲ್ಲಿ ಎಷ್ಟೊಂದು ವಿಚಿತ್ರಗಳು ನಡೆಯುತ್ತವೆ ಅನ್ನೋದನ್ನ ನಾವು ಊಹಿಸಲು ಸಾಧ್ಯವಿಲ್ಲ. ಅಲ್ಲಿ ಒಂದೊಂದು ದಿನ ಒಂದೊಂದು ವಿಭಿನ್ನ ಚಮತ್ಕಾರಗಳು ನಡೆಯುತ್ತವೆ. ಕೆಲವೊಮ್ಮೆ ಈ ಅಚ್ಚರಿಗಳ ನೋಡಿದ್ರೆ ನಾವು ದಂಗಾಗಿ ಬಿಡುತ್ತೇವೆ. ಇಂತಹ ವಿಚಿತ್ರಗಳಲ್ಲಿ ಕೆಲವೊಂದು ಇದೇ ಮೊದಲು ದಾಖಲಾಗಿರುತ್ತದೆ.
ಈಗ ಈ ಚಿರತೆಯೊಂದರೆ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಈ ಫೋಟೋ ದೇಶದಲ್ಲಿ ಇದೇ ಮೊದಲು ಸೆರೆ ಹಿಡಿಯಲಾಗಿದೆ. ನೀವು ಈ ಫೋಟೋದಲ್ಲಿರುವ ಒಂದು ವಿಶೇಷವನ್ನ ಗುರುತಿಸುತ್ತೀರಾ? ಫೋಟೋದಲ್ಲಿ ಚಿರತೆಯೊಂದು ಮರದ ಮೇಲೆ ಮಲಗಿರುವುದು ನೋಡಬಹುದು. ಈ ಚಿರತೆಯಲ್ಲಿ ಒಂದು ವಿಶೇಷತೆ ಅಡಗಿದೆ.

ಹೌದು ವನ್ಯಜೀವಿ ಛಾಯಾಗ್ರಾಹಕ ಧ್ರುವ ಪಾಟೀಲ್ ಈ ಫೋಟೋವನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸೆರೆಹಿಡಿದಿದ್ದು, ಈ ಫೋಟೋ ಇದೆ ಮೊದಲ ಬಾರಿಗೆ ಸೆರೆಹಿಡಿದ ವಿಶೇಷತೆಯಿಂದ ಕೂಡಿರುವ ಚಿತ್ರವಾಗಿದೆ. ಚಿರತೆಯೊಂದು ಮರದಲ್ಲಿ ಮಲಗಿ ಕ್ಯಾಮರಾ ಕಡೆ ನೋಡುತ್ತಿದೆ. ಆದರೆ ಈ ಫೋಟೋ ಸಾಮಾನ್ಯ ಚಿರತೆಗಳ ಸಾಲಿಗೆ ಸೇರುವುದಿಲ್ಲ.
ನಿಮಗಿದು ಅಚ್ಚರಿಯಾಗಬಹುದು, ಈ ಚಿರತೆ ಸಾಮಾನ್ಯ ಚಿರತೆಯಲ್ಲ. ಈ ಫೋಟೋದಲ್ಲಿರುವ ಚಿರತೆಯಲ್ಲಿ ಒಂದು ವಿಶೇಷವಿದೆ ಅದು ಏನೆಂಬುದನ್ನು ನೀವು ಗುರುತಿಸಲು ಸಾಧ್ಯವೇ ಎಂಬುದನ್ನು ನೋಡಿ. ಈ ಚಿರತೆಯ ಕಣ್ಣನ್ನು ಸ್ವಲ್ಪ ಗಮನಿಸಿ ನೋಡಿ. ಈ ಚಿರತೆಯ ಕಣ್ಣು ಒಂದೇ ಬಣ್ಣದಲ್ಲಿಲ್ಲ. ಬದಲಿಗೆ ಎರಡೂ ಕಣ್ಣುಗಳು ಬೇರೆ ಬೇರೆ ಬಣ್ಣ ಹೊಂದಿವೆ. ಇದನ್ನು ಗಮನವಿಟ್ಟು ನೋಡಿದರೆ ಮಾತ್ರ ನಮ್ಮ ಗಮನಕ್ಕೆ ಬರುತ್ತವೆ.
ಅಚ್ಚರಿ ಎಂದರೆ ಈ ಚಿರತೆಯ ಕಣ್ಣು ಎರಡು ಬಣ್ಣದಲ್ಲಿ ಇರುವುದು ಎಡಿಟ್ ಮಾಡಿರುವ ಚಿತ್ರವಲ್ಲ ಬದಲಿಗೆ ಇದು ಅಪರೂಪದ ಚಿರತೆಯಾಗಿದೆ. ಇದೇ ಮೊದಲ ಬಾರಿಗೆ ಈ ರೀತಿಯ ಚಿತ್ರ ಸೆರೆಯಾಗಿದೆ. ಹೆಟೆರೋಕ್ರೊಮಿಯಾ ಇರಿಡಮ್ ಎಂಬ ಸಮಸ್ಯೆಯಿಂದ ಈ ರೀತಿ ಕಣ್ಣುಗಳನ್ನು ಈ ಚಿರತೆ ಹೊಂದಿದೆ. ಚಿರತೆ-ಅಸಾಮಾನ್ಯ ಆನುವಂಶಿಕ ಸ್ಥಿತಿಯ ಪರಿಣಾಮವಾಗಿ ಎರಡು ವಿಭಿನ್ನ ಬಣ್ಣಗಳ ಕಣ್ಣುಗಳು-ಭಾರತದಲ್ಲಿ8 ಮೊದಲ ಬಾರಿಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ಚಿರತೆ ಕಂಡುಬಂದಿದೆ.
ಹೆಟೆರೋಕ್ರೊಮಿಯಾ ಇರಿಡಮ್ ಅಪರೂಪದ ರೂಪಾಂತರವಾಗಿದ್ದು, ಪ್ರತಿ ಕಣ್ಣುಗಳು ವಿಭಿನ್ನ ಬಣ್ಣವನ್ನು ಹೊಂದಿರುತ್ತವೆ. ಚಿರತೆಯ ಒಂದು ಕಣ್ಣು ನೀಲಿ-ಹಸಿರು ಮತ್ತು ಇನ್ನೊಂದು ಕಂದು ಬಣ್ಣವಿದ್ದು ಇದು ಫೋಟೋ ತೆಗೆಯುವಾಗ ಗಮನಕ್ಕೆ ಬಂದಿರಲಿಲ್ಲವಂತೆ, ಬಳಿಕ ಫೋಟೋವನ್ನು ಗಮನವಿಟ್ಟು ನೋಡುವಾಗ ಕಣ್ಣುಗಳ ಬಣ್ಣ ಬೇರೆ ಬೇರೆಯಾಗಿರುವುದು ತಿಳಿದುಬಂದಿದೆ. ಇದು ಹೆಣ್ಣು ಹುಲಿಯಾಗಿದ್ದು, ವಯಸ್ಸಾಗಿದೆ.
ಇನ್ನು ಬಂಡೀಪುರದಲ್ಲಿ ಈ ಚಿರತೆ ಹಾಗೂ ಕಪ್ಪು ಬಣ್ಣದ ಪ್ಯಾಂಥರ್ ಸಹ ಇದೇ ಬಂಡೀಪುರ ಅರಣ್ಯದಲ್ಲಿ ಪತ್ತೆಯಾಗಿತ್ತು, ಹೀಗಾಗಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಇಂತಹ ವಿಭಿನ್ನ ಪ್ರಾಣಿಗಳ ವಾಸಸ್ಥಾನವಾಗಿದೆ ಎಂಬುದು ಮತ್ತೆ ಸಾಬೀತಾಗಿದೆ.
ಪಾಟೀಲ್ ಅವರು ಈ ಹಿಂದೆ ಮೈಸೂರು ಸಮೀಪದ ಕಬಿನಿ ವನ್ಯಜೀವಿ ಅಭಯಾರಣ್ಯದಲ್ಲಿ ಕಪ್ಪು ಪ್ಯಾಂಥರ್ ಅನ್ನು ಸಹ ಸೆರೆಹಿಡಿದು ಗಮನ ಸೆಳೆದಿದ್ದರು. ಈಗ ಈ ವಿಭಿನ್ನ ಕಣ್ಣುಗಳ ಹೊಂದಿರುವ ಚಿರತೆಯು ಸಹ ಎಲ್ಲರ ಗಮನ ಸೆಳೆಯುತ್ತಿದೆ. ಇನ್ನು ಬಂಡೀಪುರದಲ್ಲಿ ಬಿಳಿ ಬಣ್ಣದ ಜಿಂಕೆಯೂ ಕಾಣಿಸಿಕೊಂಡಿತ್ತು. ಇದು ಕಂದು ಬಣ್ಣವಿಲ್ಲದೆ ಸ್ವಲ್ಪ ಬಿಳಿ ಬಣ್ಣದಲ್ಲಿ ಕಂಡುಬಂದಿತ್ತು, ಇದು ಬಣ್ಣಗಳಿಗೆ ಕಾರಣವಾಗುವ ಮೆಲನಿನ್ ಕೊರತೆ ಈ ರೀತಿ ಬಣ್ಣಕ್ಕೆ ಕಾರಣವಾಗುತ್ತದೆ.
ಸದ್ಯ ಈ ವಿಚಿತ್ರ ಕಣ್ಣಿನ ಬಣ್ಣಗಳ ಹೊಂದಿರುವ ಚಿರತೆ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಲಿದೆ. ಈಗ ಬಂಡೀಪುರಕ್ಕೆ ಮತ್ತೊಂದು ವಿಭಿನ್ನ ಪ್ರಾಣಿ ಸೇರ್ಪಡೆಯಾದಂತಾಗಿದೆ.



Click it and Unblock the Notifications
