Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
ನಿಮಗೆ ಏನು ಬೇಕೋ ಖರೀದಿಸಿ: ಡೆಬಿಟ್ ಕಾರ್ಡ್ ಸಂಖ್ಯೆ..ಓಟಿಪಿ ಹಂಚಿಕೊಂಡ ಉದ್ಯಮಿ
ಯಾರಾದರೂ ನಿಮ್ಮ ಎಟಿಎಂ ಕಾರ್ಡ್, ಕ್ರೆಡಿಟ್-ಡೆಬಿಟ್ ಕಾರ್ಡ್ ಮಾಹಿತಿ ಕೇಳಿದರೆ ಹಾಗೆ ಒಟಿಪಿ ಕೇಳಿದರೆ ನೀಡಬಾರದು ಎಂದು ಆರ್ಬಿಐ, ಸೈಬರ್ ಪೊಲೀಸ ಸೇರಿ ಹಲವರು ಹೇಳುತ್ತಲೇ ಇರುತ್ತಾರೆ. ಅಲ್ಲದೆ ನಮ್ಮ ವೈಯಕ್ತಿಕ ಮಾಹಿತಿಗಳನ್ನು ಆನ್ಲೈನ್ಗಳಲ್ಲಿ ಹಂಚಿಕೊಳ್ಳಬೇಡಿ ಅಂತಲೂ ಹೇಳುತ್ತಿರುತ್ತಾರೆ. ಇದೆಲ್ಲಾ ನಮ್ಮ ಗೌಪ್ಯತೆಯ ಪ್ರಶ್ನೆಯಾಗಿರುತ್ತದೆ.
ಆದ್ರೆ ಇಲ್ಲೊಬ್ಬ ತಮ್ಮ ಕಾರ್ಡ್ ಡೀಟೈಲ್ಸ್, ಓಟಿಪಿ, ಎಕ್ಸ್ಪೈರಿ ಡೇಟ್ ಎಲ್ಲವನ್ನು ಹಂಚಿಕೊಂಡಿದ್ದಲ್ಲದೆ ನಿಮಗೆ ಏನು ಬೇಕೋ ಅದನ್ನು ಖರೀದಿಸಿ ಎಂದಿದ್ದಾನೆ. ಇದನ್ನು ನೋಡಿದ ನೆಟ್ಟಿಗರು ಇದು ಯಾವುದೋ ಸ್ಕ್ಯಾಮ್ನ ಭಾಗ ಇರಬಹುದು ಎಂದುಕೊಂಡಿದ್ದರು. ಆದ್ರೆ ಇದು ನಿಜವಾಗಿಯೂ ಆತ ಎಲ್ಲಾ ಒಟಿಪಿಗಳನ್ನ ಎಕ್ಸ್ (ಟ್ವಿಟರ್) ಮೂಲಕ ಹಂಚಿಕೊಂಡಿದ್ದಾನೆ.

ಈ ಪೋಸ್ಟ್ ನೋಡಿದ ಮಂದಿ ಜೋಮೆಟೋದಲ್ಲಿ, ಸ್ವಿಗ್ಗಿ ಸೇರಿ ಕೆಲವು ಆನ್ಲೈನ್ ಶಾಪಿಂಗ್ ಆಪ್ ತೆರೆದು ತಮಗೆ ಇಷ್ಟಬಂದ ವಸ್ತು ಆರ್ಡರ್ ಮಾಡಿದ್ದಾರೆ. ಇದಕ್ಕೆ ಆತನ ಕಾರ್ಡ್ನಿಂದಲೇ ಹಣ ಸಹ ಕಟ್ ಆಗಿರುವುದು ನೋಡಬಹುದು. ಹಾಗಾದ್ರೆ ಆತ ಹೀಗೆ ಮಾಡಿದ್ದೇಕೆ? ಆತ ಯಾರು? ಎಷ್ಟು ಹಣ ಇದರಿಂದ ಆತನಿಗೆ ನಷ್ಟವಾಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.
ರಾಹುಲ್ ಕೃಷ್ಣನ್ ಎಂಬ ಯುವ ಉದ್ಯಮಿ ಈತ, ಬೋಲ್ಡ್ ಕೇರ್ ಎಂಬ ಸಣ್ಣ ಸ್ಟಾರ್ಟ್ಅಪ್ನ ಸಂಸ್ಥಾಪಕ. ಬೋಲ್ಡ್ ಕೇರ್ ಎಂಬುದು ಲೈಂಗಿಕ ಆರೋಗ್ಯ ಸಂಬಂಧ ಹತ್ತು ಹಲವು ಪ್ರೋಡಕ್ಟ್ಗಳ ಪರಿಚಯಿಸಿರುವ ಒಂದು ಕಂಪನಿಯಾಗಿದೆ. ಆತ ರೀತಿ ಆನ್ಲೈನ್ನಲ್ಲಿ ಎಸ್ಬಿಐ ಕಾರ್ಡ್ ಮಾಹಿತಿ ಹಂಚಿಕೊಂಡು ಎಲ್ಲರಿಗೂ ಶಾಕ್ ಕೊಟ್ಟಿದ್ದಾನೆ.
ರಾಹುಲ್ ಕೃಷ್ಣನ್ ಅವರು ತಮ್ಮ ಡೆಬಿಟ್ ಕಾರ್ಡ್ ವಿವರಗಳನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದರು, ಜನರು 1,000 ರೂ.ಗಳ ಮಿತಿಯೊಳಗೆ ಯಾವುದೇ ವಹಿವಾಟು ಮಾಡಲು ಅವಕಾಶ ಇರಲಿದೆ ಎಂದು ಅವರು ತಿಳಿಸಿದ್ದರು. ಇದಾಗಿ ಕ್ಷಣದಲ್ಲಿ ನೂರಾರು ಮಂದಿ ಅವರ ಕಾರ್ಡ್ ನಂಬರ್ ಬಳಸಿ ಆರ್ಡರ್ ಮಾಡಲು ಮುಂದಾದರು, ಆದ್ರೆ ಓಟಿಪಿ ನೇರವಾಗಿ ಕೃಷ್ಣನ್ ಅವರಿಗೆ ಹೋಗುತ್ತಿತ್ತು. ಈ ಓಟಿಪಿಯನ್ನು ಸಹ ಅವರು ಹಂಚಿಕೊಂಡರು. ಇದರಿಂದ ನೂರಾರು ಮಂದಿ ತಮ್ಮಿಷ್ಟದ ವಸ್ತ ಖರೀದಿಸಿದರು.
ಆದ್ರೆ ಬುದ್ದಿವಂತರಾದ ಮಂದಿ 1 ಸಾವಿರ ರೂಪಾಯಿಗಿಂತ ಅಧಿಕ ಬೆಲೆಯ ವಸ್ತು ಖರೀದಿಸಲು ಮುಂದಾಗಿದ್ದಾರೆ. ಆದ್ರೆ ಇಂತಹ ವಹಿವಾಟಿಗೆ ಕೃಷ್ಣನ್ ಓಟಿಪಿ ನೀಡಿಲ್ಲ. ಬದಲಾಗಿ 1 ಸಾವಿರ ಒಳಗಿನ ವಹಿವಾಟಿಗೆ ಮಾತ್ರವೇ ಈ ಒಟಿಪಿ ನೀಡಿದ್ದಾರೆ. ಇನ್ನೊಂದು ಕಡೆ ಒಟಿಪಿಯನ್ನು ಹಂಚಿಕೊಳ್ಳುವುದು ಆರ್ಬಿಐ ನಿಯಮದಡಿ ಅಪರಾಧ. ಅಷ್ಟೇ ಅಲ್ಲ ಬ್ಯಾಂಕ್ ಅವರ ಯುಪಿಐ ವಹಿವಾಟನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದರಿಂದ ಹಲವರಿಗೆ ಖರೀದಿಸಲು ಸಾಧ್ಯವಾಗಿಲ್ಲ. ಅವರ ಗರಿಷ್ಠ ವಹಿವಾಟು ಅಂತ್ಯವಾಗಿದ್ದ ಬಳಿಕ ಈ ಖರೀದಿ ನಿಂತಿದೆ.
ಆತ ಈ ರೀತಿ ಮಾಡಿದ್ಯಾಕೆ?
ಯಾರು ಲಾಭವಿಲ್ಲದೆ ಈ ರೀತಿಯ ಕೆಲಸಕ್ಕೆ ಹೈ ಹಾಕುವುದಿಲ್ಲ. ಅದ್ರಲ್ಲೂ ಆತನ ಸ್ಟಾರ್ಟ್ಅಪ್ಗೆ ಸಹಾಯವಾಗಲಿ ಎಂಬ ಕಾರಣಕ್ಕೆ ಮಾರ್ಕೆಟಿಂಗ್ ಮಾಡಲಾಗಿದೆ. ಬೋಲ್ಡ್ ಕೇರ್ಗೆ ರಣವೀರ್ ಸಿಂಗ್ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಅದರ ಜೊತೆಗೆ ತನ್ನ ಕಂಪನಿ ಬಗ್ಗೆ ಒಂದಿಷ್ಟು ಜನರಿಗೆ ತಿಳಿಯಲಿ ಎಂಬ ಕಾರಣಕ್ಕೆ ಆತ ಈ ರೀತಿಯ ಮಾರ್ಕೆಟಿಂಗ್ ಮಾಡಿದ್ದಾನೆ.
ಆದ್ರೆ ಈ ಟ್ರಿಕ್ಸ್ ನೋಡಿದ ಮಂದಿ ಹಾಗೂ ಅವರ ಫಾಲೋವರ್ಸ್ ಸಂಖ್ಯೆ ಒಂದೇ ದಿನದಲ್ಲಿ ದುಪ್ಪಟ್ಟಾಗಿದೆ. ಹೀಗಾಗಿ ಅವರು ಮತ್ತೊಮ್ಮೆ ಈ ರೀತಿಯ ಆಫರ್ ನೀಡಬಹುದು ಎಂದು ಜನರು ಕಾಯುವಂತಿದೆ. ಕೆಲವರಿಗೆ ಸಿಕ್ಕಿದ್ದನ್ನು ಆರ್ಡರ್ ಮಾಡಿ ಸಂತೋಷಗೊಂಡಿದ್ದಾರೆ.



Click it and Unblock the Notifications