Latest Updates
-
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಕೂಲ್ ಆಗಿರಿ! -
ಬಿಸಿಗಾಳಿಯ ಅಬ್ಬರ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ! -
ಹೊಸ ಜೀವನ ಆರಂಭಿಸುವ ಮುನ್ನ ಎಚ್ಚರ: ವಿಚ್ಛೇದನ ಮತ್ತು ಕಾನೂನು ಹಕ್ಕುಗಳ ಬಗ್ಗೆ ಹೈಕೋರ್ಟ್ ಹೇಳಿದ್ದೇನು? -
ಬಿರುಗಾಳಿ ಮತ್ತು ಬಿಸಿಲ ಬೇಗೆ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ನಿಮ್ಮ ಜೀವ ಉಳಿಸುವ ಸರಳ ಮನೆಮದ್ದುಗಳಿವು! -
ಬಿಸಿಲಿನ ಬೇಗೆಗೆ ತತ್ತರಿಸಿದ್ದೀರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಕೂಲಿಂಗ್ ಹ್ಯಾಕ್ಸ್ ಮಿಸ್ ಮಾಡ್ಬೇಡಿ! -
ಬದಲಾಗುತ್ತಿರುವ ಹವಾಮಾನ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಕಾದಿದೆ ಅಪಾಯ! -
ವಾಟ್ಸಾಪ್ನಲ್ಲಿ ಪ್ರೀತಿಯ ಬಲೆ: ನಿಮ್ಮ ಖಾತೆ ಖಾಲಿಯಾಗುವ ಮುನ್ನ ಈ ಎಚ್ಚರಿಕೆ ವಹಿಸಿ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬೇಸಿಗೆಯ ಧಗೆಗೆ ಸುಸ್ತಾಗಿದ್ದೀರಾ? ಈ ಸಾಂಪ್ರದಾಯಿಕ ಆಹಾರಗಳಿದ್ದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ!
ಮೀನ ರಾಶಿಯಲ್ಲಿ ಬುಧ- ಆದಿತ್ಯ ಯೋಗ: ಈ 3 ರಾಶಿಗಳಿಗೆ ಅದೃಷ್ಟ ಕೈ ಹಿಡಿದಿದೆ
ಮೀನ ರಾಶಿಯಲ್ಲಿ ಮಾರ್ಚ್ 16ರಿಮದ ಏಪ್ರಿಲ್ 14ರವರೆಗೆ ಬುಧ-ಆದಿತ್ಯ ಯೋಗ ಏರ್ಪಟ್ಟಿದೆ. ಮಾರ್ಚ್ 15ಕ್ಕೆ ಸೂರ್ಯನು ಮೀನ ರಾಶಿಗೆ ಪ್ರವೇಶಿಸಿದೆ. ಮಾರ್ಚ್ 16ಕ್ಕೆ ಬುಧ ಕೂಡ ಮೀನ ರಾಶಿಗೆ ಆಗಮಿಸಿರುವುದರಿಂದ ಬುಧ ಆದಿತ್ಯ ಯೋಗ ಏರ್ಪಟ್ಟಿದೆ.

ಬುಧನಿಗೆ ಮೀನ ರಾಶಿ ದುರ್ಬಲ ರಾಶಿಯಾಗಿದೆ, ಆದ್ದರಿಂದ ಬಹುತೇಕ ರಾಶಿಗಳಿಗೆ ಈ ಸಂಚಾರ ಒಳ್ಳೆಯದಲ್ಲ, ಆದರೆ ಕೆಲ ರಾಶಿಗಳ ಮೇಲೆ ಒಳ್ಳೆಯ ಪ್ರಭಾವ ಬೀರಿದೆ.
ಅದರಲ್ಲೂ ಸೂರ್ಯ-ಬುಧ ಸಂಯೋಗವಾಗಿ ಬುಧಾದಿತ್ಯ ಯೋಗ ಏರ್ಪಟ್ಟಿದೆ. ಈ ಯೋಗ ಬಲದಿಂದ ಈ ರಾಶಿಗಳಿಗೆ ರಾಜಯೋಗ ಏರ್ಪಟ್ಟಿದೆ ನೋಡಿ:
ವೃಷಭ ರಾಶಿ
ವೃಷಭ ರಾಶಿಯವರಿಗೆ 11ನೇ ಮನೆಯಲ್ಲಿ ರಾಹಯೋಗ ಏರ್ಪಟ್ಟಿದೆ. ಈ ಸಮಯದಲ್ಲಿ, ಸೂರ್ಯ, ಬುಧ ಮತ್ತು ಗುರು ಈ ಮೂರು ಗ್ರಹಗಳೂ ಒಳ್ಳೆಯ ಪ್ರಭಾವ ಬೀರುವುದರಿಂದ ಈ ಅವಧಿ ನಿಮಗೆ ತುಂಬಾನೇ ಒಳ್ಳೆಯದಿದೆ. ಈ ಅವಧಿ ವ್ಯಾಪಾರ, ವ್ಯವಹಾರಗಳಲ್ಲಿ ಒಳ್ಳೆಯ ಲಾಭ ಗಳಿಸುವಿರಿ. ವ್ಯಾಪಾರಸ್ಥರು ಒಳ್ಳೆಯ ಲಾಭ ಪಡೆಯುವಿರಿ. ವೃತ್ತಿ ಜೀವನದಲ್ಲಿ ಬಡ್ತಿ ಪಡೆಯುವಿರಿ. ಈ ಅವಧಿಯಲ್ಲಿ ಮನೆ, ಆಸ್ತಿ, ಗಾಡಿ ಖರೀದಿಗೆ ಉತ್ತಮವಾಗಿದೆ. ಕುಟುಂಬ ಜೀವನದಲ್ಲಿ ಖುಷಿ ಇರಲಿದೆ, ಆರೋಗ್ಯ ಕೂಡ ಚೆನ್ನಾಗಿರಲಿದೆ. ಒಟ್ಟಿನಲ್ಲಿ ಈ ಅವಧಿ ನಿಮಗೆ ತುಂಬಾನೇ ಅನುಕೂಲಕರವಾಗಿದೆ.
ಕರ್ಕ ರಾಶಿ
ಕರ್ಕ ರಾಶಿಯವರಲ್ಲಿ 9ನೇ ಮನೆಯಲ್ಲಿ ರಜಯೋಗ ಏರ್ಪಟ್ಟಿದೆ. ಈ ಸಮಯದಲ್ಲಿ, ಬುಧ, ಗುರು ಮತ್ತು ಸೂರ್ಯನ ಈ ಸಂಯೋಜನೆಯು ನಿಮ್ಮ ಅದೃಷ್ಟ ಹೆಚ್ಚಿಸಿದೆ. ಈ ಸಮಯದಲ್ಲಿ ನೀವು ಮಾಡುವ ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸು ಪಡೆಯುವಿರಿ. ಕುಟುಂಬದಲ್ಲಿ, ಒಡಹುಟ್ಟಿದವರ ಜೊತೆ ಇದ್ದ ವೈಮನಸ್ಸು ಬಗೆಹರಿಯಲಿದೆ. ಮನೆಯಲ್ಲಿ ಸಂತೋಷ ಹೆಚ್ಚಾಗಲಿದೆ. ಈ ಅವಧಿಯಲ್ಲಿ ಧಾರ್ಮಿಕ ಕ್ಷೇತ್ರದ ಕಡೆಗೆ ಒಲವು ಹೆಚ್ಚಲಿದೆ. ನೀವು ಉದ್ಯೋಗವನ್ನು ಬದಲಾಯಿಸಲು ಇಚ್ಚಿಸಿದ್ದರೆ ಒಳ್ಳೆಯ ಕಡೆಯಿಂದ ಆಫರ್ ಪಡೆಯುವಿರಿ. ಈ ಬುಧ ಆದಿತ್ಯ ಯೋಗದಿಂದಾಗಿ ಈ ಅವಧಿಯಲ್ಲಿ ನೀವು ಯಾವುದಕ್ಕೂ ಚಿಂತೆ ಮಾಡಬೇಕಾಗಿಲ್ಲ.
ವೃಶ್ಚಿಕ ರಾಶಿ
ಈ ರಾಶಿಯವರಿಗೆ ಐದನೇ ಮನೆಯಲ್ಲಿ ಈ ರಾಜಯೋಗವು ಏರ್ಪಟ್ಟಿದೆ. ಈ ಸಮಯದಲ್ಲಿ ಸೂರ್ಯ, ಬುಧ, ಗುರುಗಳ ಕೃಪೆಯಿಂದ ವೃತ್ತಿ ಜೀವನದಲ್ಲಿ ಪ್ರಗತಿ ಕಾಣುವಿರಿ. ಸರ್ಕಾರಿ ನೌಕರಿಗೆ ಪ್ರಯತ್ನಿಸುತ್ತಿದ್ದರೆ ಫಲ ಸಿಗಲದಿದೆ. ಪ್ರೇಮ ಸಂಬಂಧದಲ್ಲಿ ಇದ್ದಂಥ ಸಮಸ್ಯೆ ಬಗೆಹರಿಯಲಿದೆ. ಈ ರಾಜಯೋಗದಿಂದಾಗಿ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರೆ ಒಳ್ಳೆಯ ಲಾಭ ಪಡೆಯುವಿರಿ. ನಿಮ್ಮ ಕೆಲಸ ಕಾರ್ಯಗಳಿಗೆ ನೀವು ಬ್ಯಾಂಕ್ನಿಂದ ಸಾಲವನ್ನು ತೆಗೆದುಕೊಳ್ಳಲು ಬಯಸಿದರೆ, ಈ ಸಮಯದಲ್ಲಿ ನೀವು ಸಾಲವನ್ನು ಪಡೆಯಬಹುದು. ಒಟ್ಟಿನಲ್ಲಿ ಈ ಅವಧಿ ತುಂಬಾನೇ ಅನುಕೂಲಕರವಾಗಿದೆ.



Click it and Unblock the Notifications


