Latest Updates
-
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ
ದಶಕಗಳ ಸಂಪ್ರದಾಯ ಮುರಿದು ಭಾನುವಾರ ಬಜೆಟ್ ಮಂಡನೆ: ಇತಿಹಾಸದ ಪುಟ ಸೇರಿದ 2026ರ ಬಜೆಟ್
ಬಹು ನಿರೀಕ್ಷಿತ ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಆಗುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 9ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ಹೀಗಾಗಿ ಜನಸಾಮಾನ್ಯರ ದೃಷ್ಟಿ ಈಗ ಬಜೆಟ್ ಭಾಷಣದ ಮೇಲಿದೆ. ಕೇಂದ್ರ ಸಚಿವ ಸಂಪುಟ ಬಜೆಟ್ಗೆ ಅನುಮೋದನೆ ನೀಡಿದೆ. ಕೇಂದ್ರ ಬಜೆಟ್ ಮಂಡನೆಗೂ ಮುನ್ನ ನಡೆದ ಸಚಿವ ಸಂಪುಟ ಸಭೆಯು ಬಜೆಟ್ಗೆ ಅನುಮೋದನೆ ಸಿಕ್ಕಿದೆ.
ಸದ್ಯ ಈ ಬಜೆಟ್ ಕುರಿತಾದ ಹಲವು ನಿರೀಕ್ಷೆಗಳು ಹೆಚ್ಚಾಗಿವೆ. ಕೇಂದ್ರ ಬಜೆಟ್ ಭಾಷಣದಲ್ಲಿ ಪಾರ್ಟ್ ಎ ಹಾಗೂ ಪಾರ್ಟಿ ಬಿ ಎಂದು ಎರಡು ವಿಭಾಗ. 75 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಪಾರ್ಟ್ ಬಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಪಾರ್ಟ್ ಎ ಭಾಗದಲ್ಲಿ ದೇಶದ ಆರ್ಥಿಕ ಸ್ಥಿತಿಗತಿ, ಯೋಜನೆಗಳು, ಅನುದಾನಗಳು, ನೀತಿ ಸೇರಿದಂತೆ ಹಲವು ಘೋಷಣೆಗಳು ಇರುತ್ತದೆ. ಪಾರ್ಟ್ ಬಿ ಬಜೆಟ್ ಪ್ರತಿಯಲ್ಲಿ ತೆರಿಗೆ ಪ್ರಸ್ತಾವನೆ ಸೇರಿದಂತೆ ಕೆಲ ಘೋಷಣೆಗಳಿಗೆ ಸೀಮಿತವಾಗಿರುತ್ತದೆ.

ಸ್ವತಂತ್ರ ಭಾರತದಲ್ಲಿ ಬಜೆಟ್ ಹಲವು ರೀತಿಯ ಬದಲಾವಣೆಗಳ ನೋಡುತ್ತಾ ಬಂದಿದೆ. ಅದ್ರಲ್ಲೂ ಇದೇ ಮೊದಲ ಬಾರಿಗೆ ಭಾನುವಾರದಂದು ಕೇಂದ್ರ ಬಜೆಟ್ ಮಂಡನೆಯಾಗುತ್ತಿದೆ. ಭಾರತದ ಹಣಕಾಸು ಇತಿಹಾಸದಲ್ಲಿ ಮೊದಲ ಬಾರಿಗೆ, ಕೇಂದ್ರ ಬಜೆಟ್ ಅನ್ನು ಭಾನುವಾರದಂದು ಮಂಡಿಸಲು ನಿರ್ಧರಿಸಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಬೆಳಿಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ 2026-27 ರ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದಾರೆ.
ಫೆಬ್ರವರಿ ಸಂಪ್ರದಾಯ ಬದಲು
ಈ ಮೊದಲು ಹಾಗೆ ಆರಂಭಿಕ ಬಜೆಟ್ಗಳು ಫೆಬ್ರವರಿಯ ಕೊನೆಯ ಕೆಲಸದ ದಿನದಂದು ಘೋಷಣೆಯಾಗುತ್ತಿತ್ತು. 1999ರಲ್ಲಿ ಫೆಬ್ರವರಿ 28 ಭಾನುವಾರವಾದಾಗ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರವು ಬಜೆಟ್ ಅನ್ನು ಮುಂಚಿತವಾಗಿ ಮಂಡಿಸಿದ್ದರು. ಅಂದಿನ ಹಣಕಾಸು ಸಚಿರವಾಗಿದ್ದ ಯಶವಂತ್ ಸಿನ್ಹಾ ಅದನ್ನು ಒಂದು ದಿನ ಮುಂಚಿತವಾಗಿ ಫೆಬ್ರವರಿ 27 ರಂದು ಶನಿವಾರ ಮಂಡಿಸಿದ್ದರು. ಅಲ್ಲಿಂದ ಸಂಪ್ರದಾಯವೊಂದು ಮುರಿದಂತಾಗಿತ್ತು.
1999 ರ ಬಜೆಟ್ ಕೂಡ ಐತಿಹಾಸಿಕವಾಗಿತ್ತು ಏಕೆಂದರೆ ಅಲ್ಲಿಯವರೆಗೆ ಕೇಂದ್ರ ಬಜೆಟ್ಗಳನ್ನು ಸಂಜೆ ಸುಮಾರು ಸಂಜೆ 5 ಗಂಟೆಗೆ ಮಂಡಿಸಲಾಗುತ್ತಿತ್ತು. ಲಂಡನ್ನ ಹಗಲಿನ ಸಮಯಕ್ಕೆ ಹೊಂದಿಕೆಯಾಗುವ ಸಮಯ ಘೋಷಣೆಗಳು ಉಪಯುಕ್ತವೆಂದು ಪರಿಗಣಿಸಲಾಗುತ್ತಿದ್ದ ಬ್ರಿಟಿಷ್ ವಸಾಹತುಶಾಹಿ ಪದ್ಧತಿಯಿಂದ ಇದು ಹಿಂದೆ ಸರಿದಿತ್ತು. ಸಿನ್ಹಾ ಈ ಸಮಯವನ್ನು ಬೆಳಗ್ಗೆ 11 ಗಂಟೆಗೆ ಬದಲಾಯಿಸಿದರು. ಅಂದಿನಿಂದ ಬಜೆಟ್ 11 ಗಂಟೆಗೆ ಮಂಡಿಸಲಾಗುತ್ತಿದೆ.
2017 ರಿಂದ, ಸತತ ಸರ್ಕಾರಗಳು ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಅನ್ನು ಮಂಡಿಸಿವೆ, ಇದನ್ನು ಫೆಬ್ರವರಿ ಅಂತ್ಯದ ವೇಳಾಪಟ್ಟಿಯಿಂದ ಮುಂದಕ್ಕೆ ಸಾಗಿಸಲಾಗಿದೆ. ಏಪ್ರಿಲ್ 1 ರಂದು ಹೊಸ ಹಣಕಾಸು ವರ್ಷ ಪ್ರಾರಂಭವಾಗುವ ಮೊದಲು ಬಜೆಟ್ ಪ್ರಸ್ತಾವನೆಗಳನ್ನು ಚರ್ಚಿಸಲು, ಅನುಮೋದಿಸಲು ಮತ್ತು ಕಾರ್ಯಗತಗೊಳಿಸಲು ಸಂಸತ್ತಿಗೆ ಸಾಕಷ್ಟು ಸಮಯವನ್ನು ನೀಡುವ ಗುರಿಯನ್ನು ಸುಧಾರಣೆಯು ಹೊಂದಿತ್ತು. ಹಾಗೆ ಅಂದಿನಿಂದ ಇಂದಿನವರೆಗೂ ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡಿಸಲಾಗುತ್ತಿದೆ. ಹಾಗೆ ಇದೇ ಮೊದಲ ಬಾರಿಗೆ ಭಾನುವಾರದಂದು ಸಹ ಬಜೆಟ್ ಮಂಡಿಸಲಾಗುತ್ತಿರುವುದು ಎಲ್ಲಾ ಸಂಪ್ರದಾಯವನ್ನು ಮೀರಿ ಹೊಸ ಇತಿಹಾಸ ಬರೆಯಲಾಗುತ್ತಿದೆ.
ಕಾಂಜೀವರಂ ಸಿಲ್ಕ್ ಸೀರೆಯಲ್ಲಿ ಸೀತಾರಾಮನ್
ತಮಿಳುನಾಡಿನ ಕಾಂಜೀವರಂ ಸಿಲ್ಕ್ ಸೀರೆಯನ್ನು ಧರಿಸಿ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿಗೆ ಆಗಮಿಸಿದರು. ಕಳೆದ ವರ್ಷದ ಬಿಹಾರದ ಮಧುಬನಿ ಆರ್ಟ್ಸ್ ಸೀರೆ ಧರಿಸಿ ಬಜೆಟ್ ಮಂಡಿಸಿದ್ದರು. 2024ರಲ್ಲಿ ಆಂಧ್ರದ ಮಂಗಲಗಿರಿ ಹ್ಯಾಂಡ್ ಲೂಮ್ ಸೀರೆ ಧರಿಸಿದ್ದರು.



Click it and Unblock the Notifications