Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರೂಮಿಗೆ ಬಂದ ಚಿರತೆಯನ್ನೇ ಕೂಡಿ ಹಾಕಿದ ಬಾಲಕ..! ಆಮೇಲೆ ಆಗಿದ್ದೇನು ನೋಡಿ..?
ಕಾಡು ಪ್ರಾಣಿಗಳು ಆಹಾರ ಹುಡುಕಿ ನಗರಗಳತ್ತ ಬರುವುದು ಸಾಮಾನ್ಯ ಎನ್ನುವಂತಾಗಿದೆ. ದಶಕಗಳಿಂದ ಪ್ರಾಣಿಗಳು ಹಾಗೂ ಮಾನವರ ನಡುವಿನ ಸಂಘರ್ಷ ನಡೆಯುತ್ತಲೇ ಇದೆ. ಇದರಲ್ಲಿ ಪ್ರಾಣಿಗಳು ಹಾಗೂ ಮಾನವರು ಸಾವಿಗೀಡಾಗುತ್ತಾರೆ. ಅದರಲ್ಲೂ ಚಿರತೆ ದಾಳಿಯಿಂದ ಭಾರತದಲ್ಲಿ ಅಸುನೀಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹಾಗೆ ಚಿರತೆಗಳು ನಗರಗಳತ್ತ ಬಂದು ದಾಂಧಲೆ ನಡೆಸುವುದು ಸಹ ಹೆಚ್ಚುತ್ತಿದೆ.
ಚಿರತೆಗಳು ನಗರಗಳತ್ತ ಬಂದಾಗ ಜನ ಮನೆಯಿಂದ ಹೊರಬರದೆ ಬಾಗಿಲು ಭದ್ರ ಮಾಡಿಕೊಳ್ಳುತ್ತಾರೆ. ನೀವಿದ್ದ ಜಾಗಕ್ಕೆ ಚಿರತೆ ಬಂದಿದೆ ಎಂದು ತಿಳಿದರೆ ನೀವು ಭಯ ಭೀತರಾಗಿ ರೂಮಿನೊಳಗೆ ಉಳಿದುಬಿಡುತ್ತೀರಿ. ಇನ್ನೂ ನಿಮ್ಮ ಎದುರಿಗೆ ಬಂದು ಬಿಟ್ಟರೆ ಹೇಗಾಗುತ್ತದೆ.? ಚಿರತೆ ಎದುರು ಬಂದರೆ ಕಿರುಚಾಡಿ ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಓಡುತ್ತೇವೆ. ಆದ್ರೆ ಇಲ್ಲೊಬ್ಬ ಹುಡುಗ ಚಿರತೆ ಬಂದಾಗ ಹೆದರದೆ, ಭಯ ಬೀಳದೆ ಚಿರತೆಗೇ ಬುದ್ಧಿ ಕಲಿಸಿದ್ದಾನೆ.
ಹೌದು ಮಹಾರಾಷ್ಟ್ರದ ಈ 12 ವರ್ಷದ ಹುಡುಗ ರೂಮಿನೊಳಗೆ ಬಂದ ಚಿರತೆಯನ್ನು ಅಲ್ಲಿಯೇ ಕೂಡಿ ಹಾಕಿ ಆಗಬಹುದಾದ ದೊಡ್ಡ ಅನಾಹುತವೊಂದನ್ನು ತಪ್ಪಿಸಿ ಸುದ್ದಿಯಾಗಿದ್ದಾನೆ. ಮಹಾರಾಷ್ಟ್ರದ ಮಾಲೆಗಾಂವ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಈ ಬಾಲಕನ ಸಮಯ ಪ್ರಜ್ಞೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ಘಟನೆಯ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆ ಬಾಲಕನಿಗೆ ಶೌರ್ಯ ಪ್ರಶಸ್ತಿ ನೀಡುವಂತೆಯೂ ಮಾತುಗಳು ಕೇಳಿಬಂದಿದೆ.

ಅಲ್ಲಿ ನಡೆದಿದ್ದೇನು..?
12 ವರ್ಷದ ಬಾಲಕ ಮೋಹಿತ್ ಅಹಿರೆ ಮೊಬೈಲ್ನಲ್ಲಿ ಗೇಮ್ ಆಡುತ್ತಾ ಕುಳಿತಿರುವಾಗ ಎಲ್ಲಿಂದಲೋ ಬಂದ ಚಿರತೆಯೊಂದು ಸೀದಾ ರೂಮಿನೊಳಗೆ ನುಗ್ಗಿಬಿಟ್ಟಿದೆ. ಆ ಬಾಲಕ ಅದೃಷ್ಟ ಚೆನ್ನಾಗಿದ್ದ ಕಾರಣ ಚಿರತೆಯ ಕಣ್ಣಿಗೆ ಆತ ಬೀಳಲೆ ಇಲ್ಲ. ಆದರೆ ಚಿರತೆ ಬರುವುದನ್ನು ಕಂಡ ಬಾಲಕ ಒಂದು ಸ್ವಲ್ಪವೂ ಭಯ ಬೀಳದೆ, ವಿಚಲಿತನಾಗದೆ ಬುದ್ಧಿಗೆ ಕೆಲಸ ಕೊಟ್ಟಿದ್ದಾನೆ.
ಚಿರತೆ ಮುಂದೆ ಹೋಗಿದ್ದನ್ನು ಕಂಡ ಆತ ನಿಧಾನಕ್ಕೆ ಮೊಬೈಲ್ ಕೆಳಗಿಟ್ಟು ರೂಮಿನ ಬಾಗಿಲು ಹಾಕಿ ಅಲ್ಲಿಂದ ಓಡಿದ್ದಾನೆ. ಆಹಾರ ಹುಡುಕಿ ಬಂದಿದ್ದ ಚಿರತೆ ರೂಮಿನಲ್ಲಿ ಬಂಧಿಯಾಗಿದೆ. ಒಂದು ವೇಳೆ ಚಿರತೆ ಬಾಲಕನ ನೋಡಿದ್ದರೆ ಅಲ್ಲೊಂದು ಅನಾಹುತ ನಡೆಯುತ್ತಿತ್ತು. ಇಲ್ಲವೇ ಚಿರತೆ ನೋಡಿದ ಭಯದಲ್ಲಿ ಬಾಲಕ ಚೀರಿಕೊಂಡು ಓಡಿ ಹೋಗಿದ್ದರೂ ಚಿರತೆ ಪರಾರಿಯಾಗಿ ದಾಳಿ ಮಾಡುತ್ತಿತ್ತು. ಇಲ್ಲವೆ ಸಿಕ್ಕ ಸಿಕ್ಕವರ ಮೇಲೆ ಎರಗಿ ಒಂದಿಷ್ಟು ರಂಪ ಮಾಡುತ್ತಿತ್ತು. ಆದ್ರೆ ಬಾಲಕನ ಧೈರ್ಯ ಮತ್ತು ಬುದ್ಧಿವಂತಿಕೆಗೆ ಚಿರತೆ ಸಿಲುಕಿ ಲಾಕ್ ಆಗಿತ್ತು.
ರೂಮಿಯಲ್ಲಿ ಯಾರಿದ್ದರು..?
ರೂಮಿನಲ್ಲಿ ಚಿರತೆ ಕೂಡಿ ಹಾಕುವಾಗ ಹಲವರಿಗೆ ಅನಿಸಿರಬಹುದು ರೂಮಿನಲ್ಲಿದ್ದ ಬೇರೆಯವರ ಕಥೆ ಏನಾಗಿದೆ ಎಂದು. ಆದ್ರೆ ಈ ರೂಮಿನಲ್ಲಿ ಬೇರೆ ಯಾರು ಇರಲೇ ಇಲ್ಲ. ಆ ಬಾಲಕನೊಬ್ಬನೇ ಅಲ್ಲಿ ಕುಳಿತು ಮೊಬೈಲ್ ಬಳಸುತ್ತಿದ್ದ. ಅಸಲಿಗೆ ಇದೊಂದು ಮದುವೆ ಹಾಲ್ ಪಕ್ಕದಲ್ಲಿದ್ದ ಸೆಕ್ಯೂರಿಟಿ ಲಾಕ್ ರೂಮ್ ಆಗಿತ್ತು. ಅಲ್ಲಿ ಈ ಬಾಲಕನ ತಂದೆ ಸೆಕ್ಯೂರಿಟಿ ಆಗಿ ಕೆಲಸ ಮಾಡುತ್ತಿದ್ದರು. ರೂಮಿನಲ್ಲಿ ಯಾರು ಇಲ್ಲದನ್ನು ಅರಿತುಕೊಂಡೇ ಬಾಲಕ ಈ ಚಾಣಾಕ್ಯ ನಡೆ ಇಟ್ಟಿದ್ದ.
ಬಳಿಕ ಚಿರತೆ ಏನಾಯಿತು?
ಆಹಾರ ಹುಡುಕಿ ಬಂದು ರೂಮಿನಲ್ಲಿ ಸಿಲುಕಿದ ಚಿರತೆ ಅತ್ತಿತ್ತ ತಿರುಗಾಡಿದೆ. ಹೊರ ಹೋಗಲು ದಾರಿ ಹುಡುಕಿದೆ. ಆದರೆ ಪೊಲೀಸರು ಮತ್ತು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದು 5 ವರ್ಷದ ಈ ಗಂಡು ಚಿರತೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಯಿತು. ಆ ಬಾಲಕನ ಕಾರ್ಯದಿಂದ ದೊಡ್ಡ ಅನಾಹುತವೇ ತಪ್ಪಿದಂತಾಯಿತು.



Click it and Unblock the Notifications