Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮನೆಯಲ್ಲಿ ಯಾರಾದ್ರು ಮರಣ ಹೊಂದಿದ್ರೆ ತಡವಾಗಿ ಬರಬಹುದು ಅಪಘಾತವಾದ್ರೆ ಅಲ್ಲ: ಮ್ಯಾನೇಜರ್ ಮೆಸೇಜ್..!!
ಇತ್ತೀಚಿನ ದಿನಗಳಲ್ಲಿ ಕಾರ್ಪೋರೇಟ್ ಕಂಪನಿಗಳ ಕೆಲಸದ ಒತ್ತಡ ಸಂಬಂಧ ಹತ್ತು ಹಲವು ಸುದ್ದಿಗಳನ್ನು ನಾವು ನೋಡುತ್ತಲೇ ಇರುತ್ತೇವೆ. ಇತ್ತೀಚಿಗೆ ಕೆಲಸದ ಸ್ಥಳದಲ್ಲಿನ ಒತ್ತಡ ಹಾಗೂ ರಜೆಗಾಗಿ ಕೆಲಸಗಾರರು ಮಾಡೋ ಸಾಹಸಗಳ ನಾವು ನೋಡಿದ್ದೇವೆ. ಇನ್ನೊಂದು ಕಡೆ ಲೇ ಆಫ್ಗಳ ಸುದ್ದಿ ಕೂಡ ನಾವು ಕೇಳುತ್ತಲೇ ಇದ್ದೇವೆ.
ಅದರಲ್ಲೂ ಕಾರ್ಪೋರೇಟ್ ಕಂಪನಿಗಳು 14 ಗಂಟೆ ಕೆಲಸ, ಭಾನುವಾರವೂ ಕೆಲಸದಂತಹ ವಿಪರೀತ ನಿಯಮಗಳ ರೂಪಿಸುವುದು. ರಜೆಯ ಸಮಯದಲ್ಲು ಮೀಟಿಂಗ್, ಮದುವೆಯುಲ್ಲೂ ಲ್ಯಾಪ್ಟಾಪ್ ಹಿಡಿದು ಕೆಲಸ ಮಾಡಿಸುವುದು ಇಂತಹ ಹಲವು ಸುದ್ದಿಗಳನ್ನು ನಾವು ನೋಡುತ್ತಲೇ ಇರುತ್ತೇವೆ.

ಈಗ ಇದೆ ರೀತಿ ಇನ್ನೊಂದು ಘಟನೆ ಎಲ್ಲರಲ್ಲೂ ಆಘಾತ ಮೂಡಿಸುತ್ತಿದೆ. ನೀವು ಆಫಿಸ್ಗೆ ತಡವಾಗಿ ಬರಲು ಒಂದು ಕಾರಣ ಇದ್ದೇ ಇರುತ್ತೆ. ಇಲ್ಲೊಬ್ಬ ಕೂಡ ಆಫಿಸ್ಗೆ ಬರುವಾಗ ಕಾರು ಅಪಘಾತವಾಗಿದೆ. ಹೀಗಾಗಿ ಆತ ಆಫಿಸ್ಗೆ ತಡವಾಗಿ ಬರುವುವುದಾಗಿ ತನ್ನ ಮ್ಯಾನೇಜರ್ಗೆ ವಾಟ್ಸಾಪ್ ಮೂಲಕ ತಿಳಿಸಿದ್ದಾನೆ. ಆದ್ರೆ ಮ್ಯಾನೇಜರ್ ಇದೊಂದು ಕಾರಣದಿಂದ ತಡವಾಗಿ ಬರುವಂತಿಲ್ಲ ಎಂದು ಕಡ್ಡಿ ಮುರಿದಂತೆ ಹೇಳದ್ದಾನೆ.
ಇಷ್ಟೇ ಆಗಿದ್ದರೆ ಸುಮ್ಮನಿರಬಹುದಿತ್ತು. ಆತ ಮನೆಯಲ್ಲಿ ಯಾರಾದರಿ ಮರಣ ಹೊಂದಿದ್ದರೆ ಮಾತ್ರ ತಡವಾಗಿ ಆಫಿಸ್ಗೆ ಬರಬಹುದು ಎಂದು ಕಹಿಯಾಗಿ ಮೆಸೇಜ್ ಮಾಡಿದ್ದಾನೆ. ಈ ಸಂದೇಶವನ್ನು ಉದ್ಯೋಗಿ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ನಿಮ್ಮ ಮ್ಯಾನೇಜರ್ ನಿಮಗೆ ಈ ರೀತಿ ಹೇಳಿದರೆ ನೀವು ಏನು ಮಾಡುತ್ತೀರಿ ಎಂದು ಎಕ್ಸ್ (ಟ್ವಿಟರ್)ನಲ್ಲಿ ಬರೆದು ಈ ಪೊಸ್ಟ್ ಹಂಚಿಕೊಳ್ಳಲಾಗಿದೆ.
ತಡವಾಗಿ ಬರಲು ಅಪಘಾತದ ಕಾರಣ ನೀಡುವಂತಿಲ್ಲ, ಮನೆಯಲ್ಲಿ ಯಾರಾದರು ಮರಣ ಹೊಂದಿದರೆ ಮಾತ್ರವೇ ನೀವು ತಡವಾಗಿ ಬರಬಹುದು ಎಂಬುದು ಆತನ ಸಂದೇಶದ ಸಾರಾಂಶವಾಗಿದೆ. ಇದನ್ನು ಕಂಡ ನೆಟ್ಟಿಗರು ಆಘಾತಕ್ಕೊಳಗಾಗಿದ್ದಾರೆ. ಕಂಪನಿಗಳ ಇಷ್ಟೊಂದು ಕಠೋರ ಮಾತುಗಳು ನಿಜಕ್ಕೂ ಶಾಕಿಂಗ್ ಆಗಿದೆ.
ಈ ಪೋಸ್ಟ್ಗೆ ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದಾರೆ, ಕಾರ್ಪೋರೇಟ್ ಕಂಪನಿಗಳ ವರ್ಕ್ ಕಲ್ಚರ್ ಕುರಿತಂತೆ ದೊಡ್ಡ ಪ್ರಶ್ನೆ ಎದ್ದಿದೆ. ಮನೆಯಲ್ಲಿ ಯಾರಾದರು ಮರಣ ಹೊಂದಿದ್ದರೂ ಈ ಕಂಪನಿಗಳು ಮುಂದೊಂದು ದಿನ ರಜೆ ನೀಡುವುದಿಲ್ಲ, ನೀಡಿದರೂ ಆ ದಿನದ ವೇತನ ಕಡಿತ ಮಾಡುವ ನಿಯಮ ಜಾರಿ ಮಾಡಿದರೂ ಮಾಡಿಯಾವು ಎಂದು ಒಬ್ಬರು ಬರೆದುಕೊಂಡಿದ್ದಾರೆ.
ಅಪಘಾತವಾದಾಗಲು ಒಂದು ದಿನ ರಜೆ ಕೊಡದಿರುವ ಇಂತಹ ಕಂಪನಿಯಲ್ಲಿ ಕೆಲಸ ಮಾಡುವುದೇ ದೊಡ್ಡ ಅಪರಾಧ ನೀವು ಅಲ್ಲಿಂದ ಹೊರಬರುವುದು ಬಹಳ ಉತ್ತಮ, ನಾನಾಗಿದ್ದರೆ ರಾಜೀನಾಮೆ ಪತ್ರವನ್ನ ಅಂದೇ ಕಳುಹಿಸುತ್ತಿದ್ದ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಎಲ್ಲಾ ಕಂಪನಿಲ್ಲೂ ಒಂದೇ ರೀತಿಯ ಮ್ಯಾನೇಜರ್ ಇರುತ್ತಾರೆ ಎಂದೇನು ಇಲ್ಲ. ಕೆಲವರು ಎಲ್ಲವನ್ನೂ ತಿಳಿದು ಉದ್ಯೋಗಿಗಳ ಹಿತ ಕಾಪಾಡುತ್ತಾರೆ. ಆದ್ರೆ ಇಂತಹ ಕೆಟ್ಟ ಪರಿಸರದಲ್ಲಿ ಕೆಲಸ ಮಾಡುವುದಾದರು ಹೇಗೆ ಎಂದು ಮೂರನೇ ವ್ಯಕ್ತಿ ಬರೆದುಕೊಂಡಿದ್ದಾರೆ.



Click it and Unblock the Notifications