Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಮನೆಯಲ್ಲಿ ಯಾರಾದ್ರು ಮರಣ ಹೊಂದಿದ್ರೆ ತಡವಾಗಿ ಬರಬಹುದು ಅಪಘಾತವಾದ್ರೆ ಅಲ್ಲ: ಮ್ಯಾನೇಜರ್ ಮೆಸೇಜ್..!!
ಇತ್ತೀಚಿನ ದಿನಗಳಲ್ಲಿ ಕಾರ್ಪೋರೇಟ್ ಕಂಪನಿಗಳ ಕೆಲಸದ ಒತ್ತಡ ಸಂಬಂಧ ಹತ್ತು ಹಲವು ಸುದ್ದಿಗಳನ್ನು ನಾವು ನೋಡುತ್ತಲೇ ಇರುತ್ತೇವೆ. ಇತ್ತೀಚಿಗೆ ಕೆಲಸದ ಸ್ಥಳದಲ್ಲಿನ ಒತ್ತಡ ಹಾಗೂ ರಜೆಗಾಗಿ ಕೆಲಸಗಾರರು ಮಾಡೋ ಸಾಹಸಗಳ ನಾವು ನೋಡಿದ್ದೇವೆ. ಇನ್ನೊಂದು ಕಡೆ ಲೇ ಆಫ್ಗಳ ಸುದ್ದಿ ಕೂಡ ನಾವು ಕೇಳುತ್ತಲೇ ಇದ್ದೇವೆ.
ಅದರಲ್ಲೂ ಕಾರ್ಪೋರೇಟ್ ಕಂಪನಿಗಳು 14 ಗಂಟೆ ಕೆಲಸ, ಭಾನುವಾರವೂ ಕೆಲಸದಂತಹ ವಿಪರೀತ ನಿಯಮಗಳ ರೂಪಿಸುವುದು. ರಜೆಯ ಸಮಯದಲ್ಲು ಮೀಟಿಂಗ್, ಮದುವೆಯುಲ್ಲೂ ಲ್ಯಾಪ್ಟಾಪ್ ಹಿಡಿದು ಕೆಲಸ ಮಾಡಿಸುವುದು ಇಂತಹ ಹಲವು ಸುದ್ದಿಗಳನ್ನು ನಾವು ನೋಡುತ್ತಲೇ ಇರುತ್ತೇವೆ.

ಈಗ ಇದೆ ರೀತಿ ಇನ್ನೊಂದು ಘಟನೆ ಎಲ್ಲರಲ್ಲೂ ಆಘಾತ ಮೂಡಿಸುತ್ತಿದೆ. ನೀವು ಆಫಿಸ್ಗೆ ತಡವಾಗಿ ಬರಲು ಒಂದು ಕಾರಣ ಇದ್ದೇ ಇರುತ್ತೆ. ಇಲ್ಲೊಬ್ಬ ಕೂಡ ಆಫಿಸ್ಗೆ ಬರುವಾಗ ಕಾರು ಅಪಘಾತವಾಗಿದೆ. ಹೀಗಾಗಿ ಆತ ಆಫಿಸ್ಗೆ ತಡವಾಗಿ ಬರುವುವುದಾಗಿ ತನ್ನ ಮ್ಯಾನೇಜರ್ಗೆ ವಾಟ್ಸಾಪ್ ಮೂಲಕ ತಿಳಿಸಿದ್ದಾನೆ. ಆದ್ರೆ ಮ್ಯಾನೇಜರ್ ಇದೊಂದು ಕಾರಣದಿಂದ ತಡವಾಗಿ ಬರುವಂತಿಲ್ಲ ಎಂದು ಕಡ್ಡಿ ಮುರಿದಂತೆ ಹೇಳದ್ದಾನೆ.
ಇಷ್ಟೇ ಆಗಿದ್ದರೆ ಸುಮ್ಮನಿರಬಹುದಿತ್ತು. ಆತ ಮನೆಯಲ್ಲಿ ಯಾರಾದರಿ ಮರಣ ಹೊಂದಿದ್ದರೆ ಮಾತ್ರ ತಡವಾಗಿ ಆಫಿಸ್ಗೆ ಬರಬಹುದು ಎಂದು ಕಹಿಯಾಗಿ ಮೆಸೇಜ್ ಮಾಡಿದ್ದಾನೆ. ಈ ಸಂದೇಶವನ್ನು ಉದ್ಯೋಗಿ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ನಿಮ್ಮ ಮ್ಯಾನೇಜರ್ ನಿಮಗೆ ಈ ರೀತಿ ಹೇಳಿದರೆ ನೀವು ಏನು ಮಾಡುತ್ತೀರಿ ಎಂದು ಎಕ್ಸ್ (ಟ್ವಿಟರ್)ನಲ್ಲಿ ಬರೆದು ಈ ಪೊಸ್ಟ್ ಹಂಚಿಕೊಳ್ಳಲಾಗಿದೆ.
ತಡವಾಗಿ ಬರಲು ಅಪಘಾತದ ಕಾರಣ ನೀಡುವಂತಿಲ್ಲ, ಮನೆಯಲ್ಲಿ ಯಾರಾದರು ಮರಣ ಹೊಂದಿದರೆ ಮಾತ್ರವೇ ನೀವು ತಡವಾಗಿ ಬರಬಹುದು ಎಂಬುದು ಆತನ ಸಂದೇಶದ ಸಾರಾಂಶವಾಗಿದೆ. ಇದನ್ನು ಕಂಡ ನೆಟ್ಟಿಗರು ಆಘಾತಕ್ಕೊಳಗಾಗಿದ್ದಾರೆ. ಕಂಪನಿಗಳ ಇಷ್ಟೊಂದು ಕಠೋರ ಮಾತುಗಳು ನಿಜಕ್ಕೂ ಶಾಕಿಂಗ್ ಆಗಿದೆ.
ಈ ಪೋಸ್ಟ್ಗೆ ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದಾರೆ, ಕಾರ್ಪೋರೇಟ್ ಕಂಪನಿಗಳ ವರ್ಕ್ ಕಲ್ಚರ್ ಕುರಿತಂತೆ ದೊಡ್ಡ ಪ್ರಶ್ನೆ ಎದ್ದಿದೆ. ಮನೆಯಲ್ಲಿ ಯಾರಾದರು ಮರಣ ಹೊಂದಿದ್ದರೂ ಈ ಕಂಪನಿಗಳು ಮುಂದೊಂದು ದಿನ ರಜೆ ನೀಡುವುದಿಲ್ಲ, ನೀಡಿದರೂ ಆ ದಿನದ ವೇತನ ಕಡಿತ ಮಾಡುವ ನಿಯಮ ಜಾರಿ ಮಾಡಿದರೂ ಮಾಡಿಯಾವು ಎಂದು ಒಬ್ಬರು ಬರೆದುಕೊಂಡಿದ್ದಾರೆ.
ಅಪಘಾತವಾದಾಗಲು ಒಂದು ದಿನ ರಜೆ ಕೊಡದಿರುವ ಇಂತಹ ಕಂಪನಿಯಲ್ಲಿ ಕೆಲಸ ಮಾಡುವುದೇ ದೊಡ್ಡ ಅಪರಾಧ ನೀವು ಅಲ್ಲಿಂದ ಹೊರಬರುವುದು ಬಹಳ ಉತ್ತಮ, ನಾನಾಗಿದ್ದರೆ ರಾಜೀನಾಮೆ ಪತ್ರವನ್ನ ಅಂದೇ ಕಳುಹಿಸುತ್ತಿದ್ದ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಎಲ್ಲಾ ಕಂಪನಿಲ್ಲೂ ಒಂದೇ ರೀತಿಯ ಮ್ಯಾನೇಜರ್ ಇರುತ್ತಾರೆ ಎಂದೇನು ಇಲ್ಲ. ಕೆಲವರು ಎಲ್ಲವನ್ನೂ ತಿಳಿದು ಉದ್ಯೋಗಿಗಳ ಹಿತ ಕಾಪಾಡುತ್ತಾರೆ. ಆದ್ರೆ ಇಂತಹ ಕೆಟ್ಟ ಪರಿಸರದಲ್ಲಿ ಕೆಲಸ ಮಾಡುವುದಾದರು ಹೇಗೆ ಎಂದು ಮೂರನೇ ವ್ಯಕ್ತಿ ಬರೆದುಕೊಂಡಿದ್ದಾರೆ.



Click it and Unblock the Notifications