Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಮನೆಯಲ್ಲಿ ಯಾರಾದ್ರು ಮರಣ ಹೊಂದಿದ್ರೆ ತಡವಾಗಿ ಬರಬಹುದು ಅಪಘಾತವಾದ್ರೆ ಅಲ್ಲ: ಮ್ಯಾನೇಜರ್ ಮೆಸೇಜ್..!!
ಇತ್ತೀಚಿನ ದಿನಗಳಲ್ಲಿ ಕಾರ್ಪೋರೇಟ್ ಕಂಪನಿಗಳ ಕೆಲಸದ ಒತ್ತಡ ಸಂಬಂಧ ಹತ್ತು ಹಲವು ಸುದ್ದಿಗಳನ್ನು ನಾವು ನೋಡುತ್ತಲೇ ಇರುತ್ತೇವೆ. ಇತ್ತೀಚಿಗೆ ಕೆಲಸದ ಸ್ಥಳದಲ್ಲಿನ ಒತ್ತಡ ಹಾಗೂ ರಜೆಗಾಗಿ ಕೆಲಸಗಾರರು ಮಾಡೋ ಸಾಹಸಗಳ ನಾವು ನೋಡಿದ್ದೇವೆ. ಇನ್ನೊಂದು ಕಡೆ ಲೇ ಆಫ್ಗಳ ಸುದ್ದಿ ಕೂಡ ನಾವು ಕೇಳುತ್ತಲೇ ಇದ್ದೇವೆ.
ಅದರಲ್ಲೂ ಕಾರ್ಪೋರೇಟ್ ಕಂಪನಿಗಳು 14 ಗಂಟೆ ಕೆಲಸ, ಭಾನುವಾರವೂ ಕೆಲಸದಂತಹ ವಿಪರೀತ ನಿಯಮಗಳ ರೂಪಿಸುವುದು. ರಜೆಯ ಸಮಯದಲ್ಲು ಮೀಟಿಂಗ್, ಮದುವೆಯುಲ್ಲೂ ಲ್ಯಾಪ್ಟಾಪ್ ಹಿಡಿದು ಕೆಲಸ ಮಾಡಿಸುವುದು ಇಂತಹ ಹಲವು ಸುದ್ದಿಗಳನ್ನು ನಾವು ನೋಡುತ್ತಲೇ ಇರುತ್ತೇವೆ.

ಈಗ ಇದೆ ರೀತಿ ಇನ್ನೊಂದು ಘಟನೆ ಎಲ್ಲರಲ್ಲೂ ಆಘಾತ ಮೂಡಿಸುತ್ತಿದೆ. ನೀವು ಆಫಿಸ್ಗೆ ತಡವಾಗಿ ಬರಲು ಒಂದು ಕಾರಣ ಇದ್ದೇ ಇರುತ್ತೆ. ಇಲ್ಲೊಬ್ಬ ಕೂಡ ಆಫಿಸ್ಗೆ ಬರುವಾಗ ಕಾರು ಅಪಘಾತವಾಗಿದೆ. ಹೀಗಾಗಿ ಆತ ಆಫಿಸ್ಗೆ ತಡವಾಗಿ ಬರುವುವುದಾಗಿ ತನ್ನ ಮ್ಯಾನೇಜರ್ಗೆ ವಾಟ್ಸಾಪ್ ಮೂಲಕ ತಿಳಿಸಿದ್ದಾನೆ. ಆದ್ರೆ ಮ್ಯಾನೇಜರ್ ಇದೊಂದು ಕಾರಣದಿಂದ ತಡವಾಗಿ ಬರುವಂತಿಲ್ಲ ಎಂದು ಕಡ್ಡಿ ಮುರಿದಂತೆ ಹೇಳದ್ದಾನೆ.
ಇಷ್ಟೇ ಆಗಿದ್ದರೆ ಸುಮ್ಮನಿರಬಹುದಿತ್ತು. ಆತ ಮನೆಯಲ್ಲಿ ಯಾರಾದರಿ ಮರಣ ಹೊಂದಿದ್ದರೆ ಮಾತ್ರ ತಡವಾಗಿ ಆಫಿಸ್ಗೆ ಬರಬಹುದು ಎಂದು ಕಹಿಯಾಗಿ ಮೆಸೇಜ್ ಮಾಡಿದ್ದಾನೆ. ಈ ಸಂದೇಶವನ್ನು ಉದ್ಯೋಗಿ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ನಿಮ್ಮ ಮ್ಯಾನೇಜರ್ ನಿಮಗೆ ಈ ರೀತಿ ಹೇಳಿದರೆ ನೀವು ಏನು ಮಾಡುತ್ತೀರಿ ಎಂದು ಎಕ್ಸ್ (ಟ್ವಿಟರ್)ನಲ್ಲಿ ಬರೆದು ಈ ಪೊಸ್ಟ್ ಹಂಚಿಕೊಳ್ಳಲಾಗಿದೆ.
ತಡವಾಗಿ ಬರಲು ಅಪಘಾತದ ಕಾರಣ ನೀಡುವಂತಿಲ್ಲ, ಮನೆಯಲ್ಲಿ ಯಾರಾದರು ಮರಣ ಹೊಂದಿದರೆ ಮಾತ್ರವೇ ನೀವು ತಡವಾಗಿ ಬರಬಹುದು ಎಂಬುದು ಆತನ ಸಂದೇಶದ ಸಾರಾಂಶವಾಗಿದೆ. ಇದನ್ನು ಕಂಡ ನೆಟ್ಟಿಗರು ಆಘಾತಕ್ಕೊಳಗಾಗಿದ್ದಾರೆ. ಕಂಪನಿಗಳ ಇಷ್ಟೊಂದು ಕಠೋರ ಮಾತುಗಳು ನಿಜಕ್ಕೂ ಶಾಕಿಂಗ್ ಆಗಿದೆ.
ಈ ಪೋಸ್ಟ್ಗೆ ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದಾರೆ, ಕಾರ್ಪೋರೇಟ್ ಕಂಪನಿಗಳ ವರ್ಕ್ ಕಲ್ಚರ್ ಕುರಿತಂತೆ ದೊಡ್ಡ ಪ್ರಶ್ನೆ ಎದ್ದಿದೆ. ಮನೆಯಲ್ಲಿ ಯಾರಾದರು ಮರಣ ಹೊಂದಿದ್ದರೂ ಈ ಕಂಪನಿಗಳು ಮುಂದೊಂದು ದಿನ ರಜೆ ನೀಡುವುದಿಲ್ಲ, ನೀಡಿದರೂ ಆ ದಿನದ ವೇತನ ಕಡಿತ ಮಾಡುವ ನಿಯಮ ಜಾರಿ ಮಾಡಿದರೂ ಮಾಡಿಯಾವು ಎಂದು ಒಬ್ಬರು ಬರೆದುಕೊಂಡಿದ್ದಾರೆ.
ಅಪಘಾತವಾದಾಗಲು ಒಂದು ದಿನ ರಜೆ ಕೊಡದಿರುವ ಇಂತಹ ಕಂಪನಿಯಲ್ಲಿ ಕೆಲಸ ಮಾಡುವುದೇ ದೊಡ್ಡ ಅಪರಾಧ ನೀವು ಅಲ್ಲಿಂದ ಹೊರಬರುವುದು ಬಹಳ ಉತ್ತಮ, ನಾನಾಗಿದ್ದರೆ ರಾಜೀನಾಮೆ ಪತ್ರವನ್ನ ಅಂದೇ ಕಳುಹಿಸುತ್ತಿದ್ದ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಎಲ್ಲಾ ಕಂಪನಿಲ್ಲೂ ಒಂದೇ ರೀತಿಯ ಮ್ಯಾನೇಜರ್ ಇರುತ್ತಾರೆ ಎಂದೇನು ಇಲ್ಲ. ಕೆಲವರು ಎಲ್ಲವನ್ನೂ ತಿಳಿದು ಉದ್ಯೋಗಿಗಳ ಹಿತ ಕಾಪಾಡುತ್ತಾರೆ. ಆದ್ರೆ ಇಂತಹ ಕೆಟ್ಟ ಪರಿಸರದಲ್ಲಿ ಕೆಲಸ ಮಾಡುವುದಾದರು ಹೇಗೆ ಎಂದು ಮೂರನೇ ವ್ಯಕ್ತಿ ಬರೆದುಕೊಂಡಿದ್ದಾರೆ.



Click it and Unblock the Notifications