Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕಿಚ್ಚನ ಕ್ಲಾಸ್ ಲುಕ್, ತೆಗೆದುಕೊಂಡ ಕ್ಲಾಸ್.... ವಾವ್!
ವೀಕೆಂಡ್ನಲ್ಲಿ ಬಿಗ್ಬಾಸ್ ಮನೆಮಂದಿಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಳ್ಳುತ್ತಾರೆ ಎಂದು ಎಲ್ಲಾ ವೀಕ್ಷಕರು ನಿರೀಕ್ಷೆ ಮಾಡಿದ್ದರು, ಆದರೆ ಇಷ್ಟು ಸೂಪರ್ ಆಗಿ ಕ್ಲಾಸ್ ತೆಗೆದುಕೊಳ್ಳುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ, ಒಬ್ಬೊಬ್ಬರಿಗೆ ಅವರು ತೆಗೆದುಕೊಂಡ ಕ್ಲಾಸ್ ಸೂಪರ್ ಆಗಿತ್ತು. ಈ ವಾರ ಕಿಚ್ಚನ ಲುಕ್ಗೆ , ಕಿಚ್ಚನ ಕ್ಲಾಸ್ಗೆ ವೀಕ್ಷಕರು ಫುಲ್ ಖುಷ್.
ಒಂದೊಂದು ಮಾತು ತುಂಬಾನೇ ಪವರ್ಫುಲ್ ಆಗಿತ್ತು
ಸುದೀಪ್ ಅವರು ಮಾತನಾಡುವಾಗ ತುಂಬಾನೇ ಬುದ್ಧಿವಂತಿಕೆ, ಅದಕ್ಕೆ ಹಾಸ್ಯ ಬೆರೆಸಿ ಮಾತನಾಡುತ್ತಾರೆ, ಆದರೆ ಈ ವೀಕೆಂಡ್ನಲ್ಲಿ ಹೆಡ್ ಮಾಸ್ಟರ್ ರೀತಿ ಫುಲ್ ಸ್ಟ್ರಿಕ್ಟ್ ಆಗಿ ಕ್ಲಾಸ್ ತೆಗೆದುಕೊಳ್ಳುತ್ತಿದ್ದ ಖದರ್ಗೆ ಸ್ಪರ್ಧಿಗಳು ಬೆಚ್ಚಿಬಿದ್ದಿದ್ದಂತೂ ಸುಳ್ಳಲ್ಲ, ಅದರಲ್ಲೂ ನಮ್ರತಾ, ತುಕಾಲಿ ಸಂತೋಷ್, ವಿನಯ್, ಸ್ನೇಹಿತ್ ಅವರಿಗೆ ತೆಗೆದುಕೊಂಡ ಕ್ಲಾಸ್ ತುಂಬಾನೇ ಅದ್ಭುತವಾಗಿತ್ತು.

ಈ ವಾರವೂ ನಮ್ರತಾ ಚಮಚದಿಂದ ಹೊರಬರಲೇ ಎಂದು ತಿಳಿಸಿದ ಕಿಚ್ಚ
ನಮ್ರತಾ ಬಿಗ್ಬಾಸ್ ಮನೆಯಲ್ಲಿ ತಮ್ಮದೇ ಆದ ಯಾವ ಸ್ಟ್ಯಾಂಡ್ ತೆಗೆದುಕೊಳ್ಳುತ್ತಿಲ್ಲ, ವಿನಯ್ ಹೇಳಿದ್ದೇ ಸರಿ, ಸ್ವಂತ ಬುದ್ಧಿಯಿಂದ ಆಡುತ್ತಿಲ್ಲ ಎಂಬ ಕಾರಣಕ್ಕೆ ವೀಕ್ಷಕರು ಅವರಿಗೆ ಚಮಚ ನೀಡಿದ್ದರು, ಆದರೂ ನಮ್ರತಾ ಅವರಿಗೆ ನನ್ನ ಯಾವ ವರ್ತನೆಗೆ ಚಮಚ ಸಿಕ್ಕಿದೆ ಎಂದು ಅರ್ಥವಾಗಿರಲಿಲ್ಲ, ಈ ವಾರ ಸುದೀಪ್ ಅವರು ತುಂಬಾನೇ ಚೆನ್ನಾಗಿ ಅರ್ಥ ಮಾಡಿಸಿದ್ದಾರೆ. ತಾನು ಎಲ್ಲಿ ತಪ್ಪು ಮಾಡಿದ್ದೇನೆ ಎಂಬುವುದು ಈ ವಾರ ನಮ್ರತಾಗೆ ಗೊತ್ತಾಗಿದೆ, ಮುಂದೆ ಅವರ ಆಟದ ವೈಖರಿ ಬದಲಾಗಬಹುದು.
ವೀಕೆಂಡ್ನಲ್ಲಿ ಬದಲಾಯ್ತು ಉತ್ತಮ ಪಟ್ಟ
ಮನೆಯ ಉತ್ತಮ ಯಾರು, ಕಳಪೆ ಯಾರು ಎಂದು ಕೊಡುವಾಗ ವಿನಯ್ಗೆ ಕೊಟ್ಟಿದ್ದರು. ಆದರೆ ವೀಕೆಂಡ್ನಲ್ಲಿ ಆ ಗೇಮ್ ಬದಲಾಯ್ತು, ಸುದೀಪ್ ಅವರು ಈ ವಾರ ಕ್ಯಾಪ್ಟನ್ ಯಾರಾಗಬೇಕು ಎಂದು ಕೇಳಿದಾಗ ಬಹುಮತ ಸ್ನೇಹಿತ್ಗೆ ಬಿತ್ತು, ಅದರಂತೆ ವಿನಯ್ ತಂದು ಉತ್ತಮ ಪದಕವನ್ನು ಉತ್ತಮ ಎಂದು ಸ್ನೇಹಿತ್ ಅವರ ಕುತ್ತಿಗೆಗೆ ಹಾಕಲಾಯ್ತು.
ತುಕಾಲಿಗೆ ಸಕತ್ ಕ್ಲಾಸ್
ತುಕಾಲಿ ಜೋಕ್ ಹೇಳುತ್ತಿದ್ದೇನೆ ಎಂದು ಹೇಳುವುದೆಲ್ಲಾ ಜೋಕ್ ಅಲ್ಲ ಎಂಬುವುದನ್ನು ಸುದೀಪ್ ಅವರು ತುಂಬಾನೇ ಚೆನ್ನಾಗಿ ತಿಳಿಸಿಕೊಟ್ಟಿದ್ದಾರೆ. ತುಕಾಲಿ ಅವರು ನನಗೆ ಮಾವನ ಪಾತ್ರ ಕೊಟ್ಟರು ಎಂದಾಗ ನೀವು ಇರುವುದೇ ಹಾಗೇ ಎಂಬುವುದಾಗಿ ಹೇಳುವ ಮೂಲಕ ನಿಮ್ಮ ಶೈಲಿ ಬದಲಾಯಿಸಿ ಎಂಬ ಸೂಚನೆ ಕೊಟ್ಟಿದ್ದಾರೆ.
ಕನ್ನಡಿಗರ ಕ್ಷಮೆ ಕೇಳಿದ ವಿನಯ್
ಸುದೀಪ್ ವಿನಯ್ ಅವರಿಗೆ ತೆಗದುಕೊಂಡ ಕ್ಲಾಸ್ ವೀಕ್ಷಕರಿಗೆ ತುಂಬಾ ಖಿಷಿ ಕೊಟ್ಟಿದೆ, ಕೊನೆಗೆ ವಿನಯ್ ಅವರು ಕರ್ನಾಟಕ ಜನತೆಯ ಕ್ಷಮೆ ಕೇಳಿದ್ದಾರೆ.
ಕಿಚ್ಚಳ ಚಪ್ಪಾಳೆ ಪಡೆದ ಸಂಗೀತ
ವಿನಯ್ ಬಳೆ ಬಗ್ಗೆ ಮಾತನಾಡಿದ್ದಕ್ಕೆ ಬಳೆ ತೊಟ್ಟು ವಿನಯ್ ಅವರ ವರ್ತನೆ ವಿರೋಧಿಸಿದ ಸಂಗೀತಗೆ ಕಿಚ್ಚನ ಚಪ್ಪಾಳೆ ತಟ್ಟಿದೆ.
ಶನಿವಾರದ ಪಂಚಾಯಿತಿಯಲ್ಲಿ ಮನೆಯಲ್ಲಿದ್ದ ಗುಂಪುಗಳನ್ನು ಒಡೆದಿದ್ದಾರೆ, ಎಲ್ಲರೂ ಸ್ವಂತಿಕೆಯಿಂದ ಆಡುವುದು ಎಷ್ಟು ಮುಖ್ಯ ಎಂಬುವುದನ್ನು ತಿಳಿಸಿಕೊಟ್ಟಿದ್ದಾರೆ, ಇನ್ನು ಬಿಗ್ಬಾಸ್ ಸ್ಪರ್ಧಿಗಳ ಆಟದ ವೈಖರಿ ಬದಲಾಗುವ ಎಲ್ಲಾ ಲಕ್ಷಣಗಳಿವೆ....



Click it and Unblock the Notifications