Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಬಿಗ್ಬಾಸ್ ಮನೆಯವರಿಂದ ಕಳಪೆ ಎಂದು ಕರೆಸಿಕೊಂಡ ಸಂಗೀತಾಗೆ ಪ್ರೇಕ್ಷಕರು ಏನು ಹೇಳುತ್ತಿದ್ದಾರೆ?
ಕಳೆದ ಎಲ್ಲಾ ಸೀಸನ್ಗಿಂತ ಈ ಬಾರಿಯ ಸೀಸನ್ ಭಿನ್ನವಾಗಿ ಗಮನ ಸೆಳೆಯುತ್ತಿದೆ, ಈ ಸೀಸನ್ನ ಸ್ಪರ್ಧಿಗಳು ಮನರಂಜನೆ ವಿಷಯಕ್ಕಿಂತ ಬೀದಿ ಜಗಳದಲ್ಲಿ ಕೆಟ್ಟ ರೀತಿಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಸ್ಪರ್ಧಿಗಳ ವರ್ತನೆ ಅದರಲ್ಲೂ ವಿನಯ್ ವರ್ತನೆ ಪ್ರೇಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ. ವಿನಯ್ ಇತರ ಸ್ಪರ್ಧಿಗಳನ್ನು ಹೀಯಾಳಿಸಿ ಮಾತನಾಡುತ್ತಾರೆ. ಅಲ್ಲದೆ ಹೆಣ್ಮಕ್ಕಳು ದುರ್ಬಲರು ಎಂಬರ್ಥದಲ್ಲಿ ಬಳೆ ಶಬ್ದ ಬಳಕೆ ಮಾಡಿರುವುದು ಕೂಡ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಬಿಗ್ಬಾಸ್ ಇವತ್ತಿನ ಎಪಿಸೋಡ್ ಪ್ರೊಮೋಬಿಟ್ಟಿದೆ, ಅದರಲ್ಲಿ ಸಂಗೀತಾಗೆ ಕಳೆಪೆ ಸಿಕ್ಕಿರುವುದು ಗೊತ್ತಾಗಿದೆ. ಬಿಗ್ಬಾಸ್ ಮನೆಯಲ್ಲಿ ಇರುವವರು ಸಂಗೀತಾಗೆ ಕಳೆ ಕೊಟ್ಟರೂ ವೀಕ್ಷಕರು ಸಂಗೀತಾಗೆ ಉತ್ತಮ ಎಂಬ ಪಟ್ಟಿ ನೀಡುತ್ತಿದ್ದಾರೆ, ಅದಕ್ಕೆ ಕಾರಣ ಆ ಮನೆಯಲ್ಲಿ ವಿನಯ್ ಅವರನ್ನು ಸಂಗೀತ ಸಮರ್ಥವಾಗಿ ಎದುರಿಸಿರುವ ಪರಿ. ಬಿಗ್ಬಾಸ್ ಮನೆಯಲ್ಲಿ ಬಹುತೇಕರು ತಾವು ಸ್ಪರ್ಧಿಯಾಗಿ ಬಂದಿದ್ದೇನೆ ಎಂಬುವುದನ್ನು ಮರೆತು ವಿನಯ್ಗೆ ಬೆಂಬಲಿಗರಾಗಿ ಬಂದಿದ್ದೇವೆ ಎಂಬಂತೆ ವರ್ತಿಸುತ್ತಿದ್ದಾರೆ. ಕಳೆದ ವಾರ ಸುದೀಪ್ ಅವರು ಈ ಬಗ್ಗೆ ಹೇಳಿದ ಮೇಲೆ ಕಾರ್ತಿಕ್, ಪ್ರತಾಪ್ ವಿನಯ್ ಮಾತಿಗೆ ಎದುರೇಟು ನೀಡಿದ್ದಾರೆ, ಆದರೆ ಬಿಗ್ಬಾಸ್ ಶುರುವಾದಾಗಿನಿಂದ ವಿನಯ್ಗೆ ಕಟ್ಟಾ ಸ್ಪರ್ಧಿಯಾಗಿ ಕಾಣಿಸುತ್ತಿರುವವರು ಎಂದರೆ ಸಂಗೀತಾ.
ಈ ವಾರದಲ್ಲಿ ವಿನಯ್ಗೆ ಸಕತ್ ಆಗಿ ಠಕ್ಕರ್ ನೀಡಿದ್ದರು ಸಂಗೀತಾ
ವಿನಯ್ ವರ್ತನೆ-ಸಂಗೀತಾ ವರ್ತನೆ ನೋಡಿದಾಗ ಇಬ್ಬರದ್ದೂ ಅತಿಯಾಯ್ತು ಎಂದನಿಸಿದರೂ ವಿನಯ್ ವರ್ತನೆಯಿಂದಾಗಿ ಸಂಗೀತಾ ಆ ರೀತಿ ವರ್ತಿಸಬೇಕಾಯಿತು ಎಂಬುವುದು ತೋರುತ್ತಿತ್ತು, ಅಲ್ಲದೆ ಅಷ್ಟೇ ಧೈರ್ಯವಾಗಿ ನಿಲ್ಲುವ ಮೂಲಕ ವಿನಯ್ ಅಹಂಕಾರಕ್ಕೆ ತಕ್ಕ ಉತ್ತರ ನೀಡುವ ಕೆಲಸ ಮಾಡಿದ್ದರು.
ಯಾರಿಗೆ ಕಳಪೆ ನೀಡಬೇಕು ಎಂಬ ಸ್ಟ್ರಾಟಜಿಯನ್ನು ವಿನಯ್ ಅವರೇ ಮಾಡಿದ್ದರು
ಈ ಹಿಂದಿನ ಎಪಿಸೋಡ್ನಲ್ಲಿ ಯಾರಿಗೆ ಕಳಪೆ ನೀಡಬೇಕು, ನಮ್ಮ ಕಡೆ ಬಹುಮತ ಬರಲು ಏನು ಮಾಡಬೇಕು ಎಂದು ಮೊದಲೇ ಪ್ಲ್ಯಾನ್ ಮಾಡಿದ್ದರು. ಅದರಂತೆಯೇ ಸಂಗೀತಾಗೆ ಒಂದು ಗುಂಪಿನವರು ಕಳಪೆ ನೀಡಿದ್ದಾರೆ, ಆದರೆ ಈ ಕಳಪೆಯನ್ನು ಯಾರೂ ತಮ್ಮ ಸ್ವಂತ ನಿರ್ಧಾರದಿಂದ ಮಾಡಿಲ್ಲ, ಒಂದು ರೀತಿ ವಿನಯ್ ಪ್ರಭಾವಕ್ಕೆ ಒಳಗಾಗಿ ಮಾಡಿದ್ದಾರೆ, ಏಕೆಂದರೆ ಈ ಕುರಿತು ಮೊನ್ನೆಯ ಎಪಿಸೋಡ್ನಲ್ಲಿಯೇ ವೀಕ್ಷಕರಿಗೆ ಮನವರಿಕೆಯಾಗಿದೆ, ಹಾಗಾಗಿ ಬಿಗ್ಬಾಸ್ ಪ್ರೊಮೋ ಹೊರಬರುತ್ತಿದ್ದಂತೆ ಸಂಗೀತ ಪರ ಬ್ಯಾಟಿಂಗ್ ಆರಂಭಿಸಿದ್ದಾರೆ ವೀಕ್ಷಕರು.
ಮಕ್ಕಳ ಎದುರಿನಲ್ಲಿ ಬಿಗ್ಬಾಸ್ ನೋಡಬೇಡಿ ಎಂದ ಮಾಜಿ ಬಿಗ್ಬಾಸ್ ಸ್ಪರ್ಧಿ
ಅವರು ತಮ್ಮ ಪೋಸ್ಟ್ನಲ್ಲಿ ಈ ಸಲದ ಕನ್ನಡ ಬಿಗ್ಬಾಸ್ ಸೀಸನ್ ನಿಜಕ್ಕೂ ಬೇಸರ ತಂದಿದೆ, ಶೋನಲ್ಲಿ ಉಳಿಯೋಭರದಲ್ಲಿ ಅವಾಚ್ಯ ಶಬ್ದಗಳ ನಿಂದನೆ, ಚಾರಿತ್ರ್ಯ ವಧೆ, ಹೆಣ್ಣು ಮಕ್ಕಳ ಮೇಲೆ ಏಕವಚನ ಬಳಕೆ, ಮಾನಸಿಕವಾಗಿ ಇತರರನ್ನು ಕುಗ್ಗಿಸುವ ಪ್ರಯತ್ನ, ಜೋರು ಧ್ವನಿಯಲ್ಲಿ ಗದರುವುದು, ಹೆದರಿಸುವುದು ಇವೆಲ್ಲವೂ ಹೆಚ್ಚಾಗಿದೆ. ಚಿಕ್ಕ ಮಕ್ಕಳಿರುವ ತಂದೆ ತಾಯಂದಿರು ದಯವಿಟ್ಟು ಇಂತಹ ಕಾರಗಯಕ್ರಮಗಳನ್ನು ಮಕ್ಕಳ ಎದುರಿಗೆ ನೋಡದಿರಿ. ಇದು ಮಗುವಿನ ಮನಸ್ಸಿನ ಮೇಲೆ ಪ್ರತೀಕೂಲ ಪ್ರಭಾವ ಬೀರುತ್ತದೆ ಹಾಗೂ ಅವರು ಈ ಸ್ವಭಾವದ ಅನುಕರಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.



Click it and Unblock the Notifications