Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಬಿಗ್ಬಾಸ್ಗೆ ಬೀಗ ಮುಂದೇನು? ಗೊಂದಲದ ನಡುವೆಯೇ ಹೊರಬಂತು ಪ್ರೋಮೋ!
Bigg Boss Kannada: ಬಿಗ್ಬಾಸ್ ಸೀಸನ್ 12ಗೆ ಆರಂಭದಲ್ಲಿಯೇ ವಿಘ್ನ ಎದುರಾಗಿದೆ. 10 ದಿನಗಳ ಷೋ ಪ್ರಸಾರದ ಬಳಿಕ ಈಗ ಬೀಗ ಬಿದ್ದಿದೆ. ಅತ್ಯಂತ ದೊಡ್ಡ ಮನೆಯಾಗಿದ್ದ ಬಿಗ್ಬಾಸ್ ಮನೆ ಈಗ ಜನರಿಲ್ಲದೆ, ಸ್ಪಧಿಗಳಿಲ್ಲದೆ ಖಾಲಿಯಾಗಿದೆ. ನಿನ್ನೆ ರಾತ್ರಿ ಪೊಲೀಸರು ಹಾಗೂ ಸಿಬ್ಬಂದಿಯ ನೇತೃತ್ವದಲ್ಲಿ ಮನೆಗೆ ಬೀಗ ಹಾಕಲಾಗಿದೆ. ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಈ ಸ್ಟುಡಿಯೋ, ಕೊಳಚೆ ನೀರನ್ನು ಸಂಸ್ಕರಿಸದೆ ನೇರವಾಗಿ ಮೋರಿಗೆ ಹರಿಬಿಡುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಸದ್ಯ ಬಿಗ್ ಬಾಸ್ ಅಭಿಮಾನಿಗಳಲ್ಲಿ ಷೋ ಮುಂದುವರೆಯಲಿದ್ಯಾ? ಅಥವಾ ಅರ್ಧಕ್ಕೆ ನಿಲ್ಲಲಿದ್ಯಾ ಎಂಬ ಗೊಂದಲ ಮೂಡಿದೆ. ತಡರಾತ್ರಿ ಸಿಬ್ಬಂದಿ ಮನೆಗೆ ಬೀಗ ಹಾಕಿದ್ದಾರೆ. ಹೀಗಾಗಿ ಹೊಸ ಎಪಿಸೋಡ್ಗಳು ಶೂಟ್ ಹೇಗೆ ಮಾಡಲಾಗುತ್ತಿದೆ ಎಂಬ ಕುತೂಹಲದವಿದೆ. ಆದ್ರೆ ಬಿಗ್ ಬಾಸ್ ಮತ್ತೆ ಆರಂಭಗಾಗುವುದು ಕಷ್ಟಕರವಾಗಿದೆ.

ಈಗಾಗಲೇ ಕೋರ್ಟ್ ಮೆಟ್ಟಿಲೇರಲಾಗಿದೆ. ಜಾಲಿವುಡ್ ಸ್ಟುಡಿಯೋ ಪರಿಸರ ಇಲಾಖೆಯ ನಿಯಮಗಳ ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿದೆ. ಹೀಗಾಗಿ ಸ್ಫರ್ಧಿಗಳೆಲ್ಲರು ಈಗಲ್ ಟನ್ ರೆಸಾರ್ಟ್ಗೆ ಶಿಫ್ಟ್ ಮಾಡಲಾಗಿದೆ. ಹಾಗೆ 12ಕ್ಕೂ ಹೆಚ್ಚು ರೂಮ್ಗಳು ಬುಕ್ ಆಗಿವೆ ಎಂದು ವರದಿಯಾಗಿದೆ. ಬಿಗ್ ಬಾಸ್ ಮನೆಗೆ ಬೀಗ ಬೀಳುತ್ತಿದ್ದಂತೆ ವೀಕ್ಷಕರಿಗೆ ಶಾಕ್ ಆಗಿತ್ತು. ಹಾಗೆ ಅಡಚಣೆಗಾಗಿ ಕ್ಷಮೆ ಕೋರುತ್ತೇವೆ ಎಂದು ಕಲರ್ಸ್ ಕನ್ನಡ ವಿಷಾದ ವ್ಯಕ್ತಪಡಿಸಿದೆ.
ಆದ್ರೆ ಈಗ ಷೋ ಮತ್ತೆ ಮುಂದುವರೆಯಲಿದ್ಯಾ? ಅಥವಾ ಅಂತ್ಯವಾಗಲಿದ್ಯಾ ಎಂಬ ಕುತೂಹಲದ ಜೊತೆಗೆ ಪ್ರಶ್ನೆಗಳು ಕೂಡ ಎದುರಾಗಿವೆ. ಈ ವಿಚಾರವಾಗಿ ಜಾಲಿವುಡ್ ಸ್ಟುಡಿಯೋಸ್ ಕೋರ್ಟ್ ಮೆಟ್ಟಿಲೇರಿದೆ. ಅಲ್ಲಿನ ನಿರ್ಧಾರದ ಮೇಲೆ ಬಿಗ್ಬಾಸ್ ಭವಿಷ್ಯ ನಿರ್ಧಾರವಾಗಲಿದೆ.
ವಿವಾದದ ನಡುವೆ ಬಂತು ಪ್ರೋಮೋ
ನಿನ್ನೆ ಮನೆಗೆ ಬೀಗ ಬಿದ್ದಿದೆ. ಸ್ಪರ್ಧಿಗಳು ಬಿಡದಿಯ ಈಗಲ್ ಟನ್ ರೆಸಾರ್ಟ್ನಲ್ಲಿದ್ದಾರೆ. ಆದ್ರೆ ಕಲರ್ಸ್ ಕನ್ನಡ ಈ ದಿನದ ಸಂಚಿಕೆಯ ಪ್ರೋಮೋ ರಿಲೀಸ್ ಮಾಡಿದೆ. ಈ ಮೂಲಕ ಬಿಗ್ಬಾಸ್ ಎಂದಿನಂತೆ ಮುಂದುವರೆಯಲಿದೆ ಎಂಬ ಸೂಚನೆ ನೀಡಿದೆ. ಇದರಿಂದ ಶೋ ಅಂತ್ಯವಾಗಲಿದೆ ಎಂಬ ಅನುಮಾನಕ್ಕೆ ತೆರೆ ಬಿದ್ದಿದೆ. ಶೋ ನಿಲ್ಲಿಸುವುದಿಲ್ಲ ಎಂಬ ಸೂಚನೆಯನ್ನು ನೀಡಲಾಗಿದೆ.
ಪ್ರೋಮೋದಲ್ಲಿ ಮತ್ತೆ ಊಟದ ವಿಚಾರವಾಗಿ ಗಲಾಟೆ ಆಗಿರುವುದನ್ನು ತೋರಿಸಲಾಗಿದೆ. ಕಿಚನ್ ವಿಚಾರವಾಗಿ ಹಾಗೆ ಊಟದ ವಿಷಯದಲ್ಲಿ ರಕ್ಷಿತಾ ಶೆಟ್ಟಿ ಗಲಾಟೆ ಮಾಡುತ್ತಿರುವುದು ಪ್ರೋಮೋದಲ್ಲಿದೆ. ಇದು ಅಭಿಮಾನಿಗಳಿಗೆ ನೆಮ್ಮದಿ ತಂದಿದೆ. ಈ ವಾರ ಕೂಡ ಬಿಗ್ ಬಾಸ್ ಸಂಚಿಕೆಗಳು ಪ್ರಸಾರವಾಗಲಿದೆ ಎಂದು ಹೇಳಲಾಗಿದೆ.
ಸದ್ಯ ಈಗ ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕಿರುವ ಹಿನ್ನಲೆಯಲ್ಲಿ ರಾಮನಗರ ಜಿಲ್ಲಾಡಳಿತದ ನೋಟಿಸ್ ವಿರುದ್ಧವಾಗಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಿದ್ದಾರೆ. ಈ ಅರ್ಜಿಯ ಜೊತೆಗೆ ತುರ್ತು ವಿಚಾರಣೆಗೂ ಮನವಿ ಮಾಡಲಿದ್ದಾರೆ ಎನ್ನಲಾಗಿದೆ. ಕೆಲ ದಿನದಲ್ಲಿ ಬಿಗ್ಬಾಸ್ ಪುನರ್ ಆರಂಭಿಸಲು ಅನುಮತಿ ಸಿಗದಿದ್ದರೆ ಶೋ ನಡೆಯಲು ಬೇರೊಂದು ಮಾರ್ಗ ಕಂಡುಕೊಳ್ಳಬೇಕಾಗುತ್ತದೆ. ಇಲ್ಲವೆ ಶೋ ಅನ್ನು ಅರ್ಧಕ್ಕೆ ನಿಲ್ಲಿಸಬೇಕಾಗಬಹುದು.



Click it and Unblock the Notifications
