Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಬಿಗ್ಬಾಸ್ ಸ್ಪರ್ಧಿಗಳು ರೆಸಾರ್ಟ್ಗೆ ಶಿಫ್ಟ್: ಅರ್ಧಕ್ಕೆ ಬಿಗ್ಬಾಸ್ ಬಾಗಿಲು ಹಾಕಿದ್ದು ಇದೇ ಮೊದಲಲ್ಲ!
ಕನ್ನಡ ಬಿಗ್ಬಾಸ್ ಆರಂಭಗೊಂಡು ವಾರಗಳು ಕಳೆದಿವೆ ಅದರ ನಡುವೆಯೇ ಈ ಸೀಸನ್ ಬಹಳಷ್ಟು ವಿಚಾರಗಳಿಂದ ವಿಶೇಷ ಎಂದು ಘೋಷಿಸಲಾಗಿತ್ತು. ಈಗ ಸೀಸನ್ 12 ಅರ್ಧದಲ್ಲಿಯೇ ಮನೆಗೆ ಬೀಗ ಬಿದ್ದಿದೆ. ಪರಿಸರ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಬಿಡದಿಯ ಜಾಲಿವುಡ್ ಸ್ಟುಡಿಯೋಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.
ಜಿಲ್ಲಾಧಿಕಾರಿಯ ಸಮ್ಮುಖದಲ್ಲೇ ಎಲ್ಲಾ ಸ್ಪರ್ಧಿಗಳನ್ನು ಮನೆಯಿಂದ ಹೊರ ಕಳುಹಿಸಲಾಗಿದ್ದು, ಮನೆಗೆ ಬೀಗ ಹಾಕಲಾಗಿದೆ. ಹಾಗೆ ವಾಹಿನಿ ಕೂಡ ಈ ಕುರಿತಾಗಿ ತಡವಾಗಿ ಸ್ಪಷ್ಟನೆ ನೀಡಿದೆ. ಪರಿಸರ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಬೀಗ ಹಾಕಲಾಗಿದ್ದು, ವಾಹಿನಿಯ ಕಡೆಯಿಂದ ಕೋರ್ಟ್ಗೆ ತೆರಳುವ ಸೂಚನೆ ಸಿಕ್ಕಿದೆ.

ಆದ್ರೆ ಸದ್ಯಕ್ಕಂತು ಬಿಗ್ ಬಾಸ್ ಎಂಬ ದೊಡ್ಡ ಮನೆಗೆ ಬೀಗ ಬಿದ್ದಿದೆ. ಆದ್ರೆ ಸ್ಪರ್ಧಿಗಳನ್ನು ಬಿಡದಿಯಲ್ಲಿನ ರೆಸಾರ್ಟ್ಗೆ ಶಿಫ್ಟ್ ಮಾಡಲಾಗಿದೆ. ಹೌದು ರಾಜಕಾರಣಿಗಳು, ಹಾಗೆ ಸಿನಿಮಾ ಮಂದಿಯ ಫೇವರಿಟ್ ಸ್ಪಾಟ್ ಎಂದೇ ಹೆಸರಾಗಿರುವ ಈಗಲ್ ಟನ್ ರೆಸಾರ್ಟ್ಗೆ ಎಲ್ಲಾ 17 ಸ್ಪರ್ಧಿಗಳು ಕೂಡ ಶಿಫ್ಟ್ ಮಾಡಲಾಗುತ್ತಿದೆ.
ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಈ ಸ್ಟುಡಿಯೋ, ಕೊಳಚೆ ನೀರನ್ನು ಸಂಸ್ಕರಿಸದೆ ನೇರವಾಗಿ ಮೋರಿಗೆ ಹರಿಬಿಡುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದು ಜಲ ಮಾಲಿನ್ಯ ನಿಯಂತ್ರಣ ಮತ್ತು ಸಂರಕ್ಷಣೆ ಕಾಯ್ದೆ 1974ರ ಉಲ್ಲಂಘನೆ ಎಂದು ನೋಟಿಸ್ ಜಾರಿ ಮಾಡಲಾಗಿತ್ತು. ಹಾಗೆ ಈಗ ತಹಶೀಲ್ದಾರ್ಅ ವರ ಸಮ್ಮುಖದಲ್ಲಿ ಬೀಗ ಸಹ ಹಾಕಲಾಗಿದೆ.
ಈ ನೋಟಿಸ್ ನೀಡಿ ಒಂದು ವಾರವಾದರು ಯಾವುದೇ ಉತ್ತರ ಬಂದಿರಲಿಲ್ಲ ಎಂಬ ಆರೋಪ ಕೂಡ ಇದೆ. ಸದ್ಯಕ್ಕೆ ಸ್ಪರ್ಧಿಗಳನ್ನು ಪೊಲೀಸರ ಭದ್ರತೆಯಲ್ಲಿ ಈಗಲ್ ಟನ್ ರೆಸಾರ್ಟ್ಗೆ ಶಿಫ್ಟ್ ಮಾಡಲಾಗಿದೆ.
ಬಿಗ್ಬಾಸ್ ಅರ್ಧದಲ್ಲೇ ನಿಂತಿದ್ದು ಇದು ಮೊದಲಲ್ಲ!
ಬಿಗ್ ಬಾಸ್ ಆರಂಭಗೊಂಡು 12ನೇ ಸೀಸನ್ ನಡೆಯುತ್ತಿದೆ. ಆದ್ರೆ ಪ್ರತಿ ಬಾರಿ ಬಿಗ್ ಬಾಸ್ ಆರಂಭಗೊಂಡಾಗಲು ಒಂದಲ್ಲಾ ಒಂದು ರೀತಿಯಲ್ಲಿ ವಿವಾದಗಳನ್ನ ಮೈ ಮೇಲೆ ಎಳೆದುಕೊಳ್ಳುತ್ತಲೇ ಇರಲಿದೆ. ಈ ವಾರಿ 2 ವಾರಗಳ ಹತ್ತಿರದಲ್ಲೇ ಮನೆಗೆ ಬೀಗ ಬಿದ್ದಿದೆ. ಆದ್ರೆ ಇದಕ್ಕೂ ಮೊದಲು 70 ದಿನ ಪೂರೈಸಿದ್ದ ಬಿಗ್ ಬಾಸ್ ಅರ್ಧದಲ್ಲೇ ಷೋ ನಿಲ್ಲಿಸಿತ್ತು.
2021ರಲ್ಲಿ ಕೊರೊನಾ ಆರಂಭಗೊಂಡಾಗ ಈ ರೀತಿ ಮಾಡಲಾಗಿತ್ತು. ಕೊರೊನಾದಲ್ಲಿ ಲಾಕ್ಡೌನ್ ಘೋಷಣೆಗೂ ಮುನ್ನ ಬಿಗ್ ಬಾಸ್ ಆರಂಭಗೊಂಡಿತ್ತು, ಆದ್ರೆ ಮಧ್ಯದಲ್ಲಿ ಕೊರೊನಾ ಹೆಚ್ಚಾದ ಪರಿಣಾಮ ಷೋ ನಿಲ್ಲಿಸಬೇಕಾಯಿತು. ಸಮಯದಲ್ಲಿ ಸುಮಾರು 70 ದಿನಗಳ ಕಾಲ ಷೋ ನಡೆದಿತ್ತು. ಬಳಿಕ ಅರ್ಧದಲ್ಲೇ ಸ್ಪರ್ಧಿಗಳು ಹೊರಬರಬೇಕಾಯಿತು.
ಈಗಲ್ ಟನ್ ರೆಸಾರ್ಟ್ ಬಗ್ಗೆ
ಈ ಸೀಸನ್ನ ಎಲ್ಲಾ ಸ್ಪರ್ಧಿಗಳನ್ನು ಈಗಲ್ ಟನ್ ರೆಸಾರ್ಟ್ಗೆ ಶಿಫ್ಟ್ ಮಾಡಲಾಗಿದೆ. ರೆಸಾರ್ಟ್ನಲ್ಲಿ ಶೂಟಿಂಗ್ ನಡೆಯುವುದಿಲ್ಲ. ಬದಲಿಗೆ ಈ ಎಲ್ಲಾ ವಿವಾದಗಳು ಸರಿಯಾಗುವವರೆಗೂ ಸ್ಪರ್ಧಿಗಳು ಅಲ್ಲಿಯೇ ಉಳಿಯಲಿದ್ದಾರೆ. ಬಿಡದಿಯಲ್ಲಿರುವ ಈ ರೆಸಾರ್ಟ್ ರಾಜಕೀಯ ನಾಯಕರಿಂದಲೇ ಹೆಸರಾಗಿದೆ. ಆಪರೇಷನ್ ಕಾರಣಗಳಿಂದಾಗಿ ಈ ರೆಸಾರ್ಟ್ ಸುದ್ದಿಯಾಗುತ್ತೆ. ಈ ಹಿಂದೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಇದ್ದಾಗ ಈ ರೆಸಾರ್ಟ್ ಬಹಳ ಸುದ್ದಿಯಾಗಿತ್ತು.
ಸರ್ಕಾರ ಬೀಳಿಸಲು ಬಿಜೆಪಿ ಮುಂದಾಗಿದೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಈಗಲ್ ಟನ್ ರೆಸಾರ್ಟ್ಗೆ ಶಿಫ್ಟ್ ಆಗಿದ್ದರು. ಆದ್ರೆ ಅಲ್ಲಿಯೂ ರೆಸಾರ್ಟ್ ಬೇರೆ ವಿಚಾರಗಳಿಂದ ಸುದ್ದಿಯಾಗಿತ್ತು, ಆಗ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಹೊಸಪೇಟೆ ಶಾಸಕ ಆನಂದ್ ಸಿಂಗ್ ನಡುವೆ ಗಲಾಟೆ ನಡೆದಿತ್ತು. ಆನಂದ್ ಸಿಂಗ್ ಆಸ್ಪತ್ರೆಗೆ ದಾಖಲಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.



Click it and Unblock the Notifications