ಭಾದ್ರಪದ ಪೂರ್ಣಿಮೆ: ಚಂದ್ರದೋಷಕ್ಕೆ ಈ ದಿನ ಪರಿಹಾರವೇನು?

ಆಗಸ್ಟ್ 29ಕ್ಕೆ ಭಾದ್ರಪದ ಪೂರ್ಣಿಮೆ. ಈ ದಿನ ತುಂಬಾ ವಿಶೇಷವಾದದ್ದು. ಈ ದಿನದಂದು ಕೆಲವೊಂದು ವಸ್ತುಗಳನ್ನು ದಾನ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುವುದು. ಈ ಭಾದ್ರಪದ ಪೂರ್ಣಿಮೆಯ ವಿಶೇಷತೆಗಳೇನು? ಏಕೆ ಈ ದಿನ ತುಂಬಾ ವಿಶೇಷವಾದದ್ದು ಎಂದು ನೋಡೋಣ:

Bhadrapada poornima

ಭಾದ್ರಪದ ಪೂರ್ಣಿಮೆಯಿಂದು ಈ 3 ಶುಭ ಯೋಗಗಳಿವೆ
ಭಾದ್ರಪದ ಪೂರ್ಣಿಮೆಯ ದಿನದಂದು ವೃದ್ಧಿ ಯೋಗ, ಅಮೃತ ಸಿದ್ಧಿ ಯೋಗ ಮತ್ತು ಸರ್ವಾರ್ಥ ಸಿದ್ಧಿ ಯೋಗಗಳು ರೂಪುಗೊಂಡಿದೆ.
ಸರ್ವಾಥ ಸಿದ್ಧಿ ಯೋಗ: ಬೆಳಗ್ಗೆಯಿಂದ ರಾತ್ರಿ 08:03 ರವರೆಗೆ
ಸರ್ವಾರ್ಥ ಸಿದ್ಧಿ ಯೋಗ: ಬೆಳಗ್ಗೆ 06:13 ವರೆಗೆ ಇತ್ತು
ಅಮೃತ ಸಿದ್ಧಿ ಯೋಗ: ಇಂದಯ ಬೆಳಿಗ್ಗೆ 11:18 ರಿಂದ 06:13 ರವರೆಗೆ ಅಮೃತ ಸಿದ್ಧಿ ಯೋಗವಿದೆ.

ಈ ದಿನ ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಭಾದ್ರಪದ ಹುಣ್ಣಿಮೆಯಂದು ಈ ವಸ್ತುಗಳನ್ನು ದಾನ ಮಾಡಿದರೆ ಒಳ್ಳೆಯದು ಎಂದು ಹೇಳಲಾಗಿದೆ:
ಈ ದಿನ ಚಂದ್ರನು 16 ಹಂತಗಳೊಂದಿಗೆ ಪೂರ್ಣನಾಗುತ್ತಾನೆ. ಪೂರ್ಣಿಮೆಯಂದು ಸ್ನಾನ ಮಾಡಿದ ನಂತರ ಚಂದ್ರನಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಬೇಕು. ಇದರಿಂದ ಜೀವನದಲ್ಲಿ ಸಂತೋಷ, ಸಮೃದ್ಧಿ ಹೆಚ್ಚಾಗುವುದು ಎಂದು ನಂಬಲಾಗಿದೆ

ಚಂದ್ರನಿಗೆ ಸಂಬಂಧಿಸಿದ ಈ ವಸ್ತುಗಳನ್ನು ದಾನ ಮಾಡಿ
* ಈ ದಿನ ಬಿಳಿ ವಸ್ತ್ರಗಳನ್ನು ದಾನ ಮಾಡಿ
* ಸಕ್ಕರೆಯನ್ನು ದಾನ ಮಾಡಿ
* ಬಿಳಿ ಸಿಹಿ ತಿಂಡಿಗಳನ್ನು ದಾನ ಮಾಡಿ
* ಈ ದಿನ ಬೆಳ್ಳಿ ವಸ್ತುಗಳನ್ನು ದಾನ ಮಾಡಿದರೆ ಒಳ್ಳೆಯದು
* ಮುತ್ತುಗಳನ್ನು ಕೂಡ ದಾನ ಮಾಡಿದರೆ ಒಳ್ಳೆಯದು ಎಂಬ ನಂಬಿಕೆಯಿದೆ.
ಚಂದ್ರ ದೋಷವಿದ್ದರೆ ಅದರ ಪರಿಹಾರಕ್ಕೆ ಈ ದಿನ ಶುಭವಾಗಿದೆ.
ಚಂದ್ರದೋಷದ ಲಕ್ಷಣಗಳು
* ಚಂದ್ರದೋಷವಿದ್ದರೆ ವೃತ್ತಿ ಜೀವನದಲ್ಲಿ ಸಮಸ್ಯೆಗಳು ಉಂಟಾಗುವುದು
* ಚಂದ್ರದೋಷವಿದ್ದರೆ ವೈಯಕ್ತಿಕ ಬದುಕಿನಲ್ಲಿ ಸಮಸ್ಯೆ ಉಂಟಾಗುವುದು
* ಆರೋಗ್ಯ ಸಮಸ್ಯೆಗಳು ಕಾಡುವುದು

ಚಂದ್ರ ದೋಷಕ್ಕೆ ಪರಿಹಾರ
ಓಂ ನಮಃ ಶಿವಾಯ ಎಂದು 108 ಬಾರಿ ಪಠಿಸಿ
ಸೋಮವಾರ ಹಾಲು, ತುಪ್ಪವನ್ನು ಶಿವನ ದೇವಾಲಯಕ್ಕೆ ನೀಡಿ
ಚಿಕ್ಕ ಬೆರಳಿಗೆ ಮುತ್ತಿನ ಉಂಗುರು ಧರಿಸಿ
ಹುಣ್ಣಿಮೆಯಂದು ದೇವಾಲಯಕ್ಕೆ ಬೆಳ್ಳಿಯನ್ನು ನೀಡಿ
ಹುಣ್ಣಿಮೆಯಂದು ಹನುಮಂತನನ್ನು ಆರಾಧಿಸಿ

English summary

Bhadrapada poornima : Remedies For Chandra Dosha In Kannada

Bhadrapada poornima: Chandra Dosha Affects and remedies, read on...
Story first published: Friday, September 29, 2023, 12:59 [IST]
X
Desktop Bottom Promotion