Latest Updates
-
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ!
ಭಾದ್ರಪದ ಪೂರ್ಣಿಮೆ: ಚಂದ್ರದೋಷಕ್ಕೆ ಈ ದಿನ ಪರಿಹಾರವೇನು?
ಆಗಸ್ಟ್ 29ಕ್ಕೆ ಭಾದ್ರಪದ ಪೂರ್ಣಿಮೆ. ಈ ದಿನ ತುಂಬಾ ವಿಶೇಷವಾದದ್ದು. ಈ ದಿನದಂದು ಕೆಲವೊಂದು ವಸ್ತುಗಳನ್ನು ದಾನ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುವುದು. ಈ ಭಾದ್ರಪದ ಪೂರ್ಣಿಮೆಯ ವಿಶೇಷತೆಗಳೇನು? ಏಕೆ ಈ ದಿನ ತುಂಬಾ ವಿಶೇಷವಾದದ್ದು ಎಂದು ನೋಡೋಣ:

ಭಾದ್ರಪದ ಪೂರ್ಣಿಮೆಯಿಂದು ಈ 3 ಶುಭ ಯೋಗಗಳಿವೆ
ಭಾದ್ರಪದ ಪೂರ್ಣಿಮೆಯ ದಿನದಂದು ವೃದ್ಧಿ ಯೋಗ, ಅಮೃತ ಸಿದ್ಧಿ ಯೋಗ ಮತ್ತು ಸರ್ವಾರ್ಥ ಸಿದ್ಧಿ ಯೋಗಗಳು ರೂಪುಗೊಂಡಿದೆ.
ಸರ್ವಾಥ ಸಿದ್ಧಿ ಯೋಗ: ಬೆಳಗ್ಗೆಯಿಂದ ರಾತ್ರಿ 08:03 ರವರೆಗೆ
ಸರ್ವಾರ್ಥ ಸಿದ್ಧಿ ಯೋಗ: ಬೆಳಗ್ಗೆ 06:13 ವರೆಗೆ ಇತ್ತು
ಅಮೃತ ಸಿದ್ಧಿ ಯೋಗ: ಇಂದಯ ಬೆಳಿಗ್ಗೆ 11:18 ರಿಂದ 06:13 ರವರೆಗೆ ಅಮೃತ ಸಿದ್ಧಿ ಯೋಗವಿದೆ.
ಈ ದಿನ ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಭಾದ್ರಪದ ಹುಣ್ಣಿಮೆಯಂದು ಈ ವಸ್ತುಗಳನ್ನು ದಾನ ಮಾಡಿದರೆ ಒಳ್ಳೆಯದು ಎಂದು ಹೇಳಲಾಗಿದೆ:
ಈ ದಿನ ಚಂದ್ರನು 16 ಹಂತಗಳೊಂದಿಗೆ ಪೂರ್ಣನಾಗುತ್ತಾನೆ. ಪೂರ್ಣಿಮೆಯಂದು ಸ್ನಾನ ಮಾಡಿದ ನಂತರ ಚಂದ್ರನಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಬೇಕು. ಇದರಿಂದ ಜೀವನದಲ್ಲಿ ಸಂತೋಷ, ಸಮೃದ್ಧಿ ಹೆಚ್ಚಾಗುವುದು ಎಂದು ನಂಬಲಾಗಿದೆ
ಚಂದ್ರನಿಗೆ ಸಂಬಂಧಿಸಿದ ಈ ವಸ್ತುಗಳನ್ನು ದಾನ ಮಾಡಿ
* ಈ ದಿನ ಬಿಳಿ ವಸ್ತ್ರಗಳನ್ನು ದಾನ ಮಾಡಿ
* ಸಕ್ಕರೆಯನ್ನು ದಾನ ಮಾಡಿ
* ಬಿಳಿ ಸಿಹಿ ತಿಂಡಿಗಳನ್ನು ದಾನ ಮಾಡಿ
* ಈ ದಿನ ಬೆಳ್ಳಿ ವಸ್ತುಗಳನ್ನು ದಾನ ಮಾಡಿದರೆ ಒಳ್ಳೆಯದು
* ಮುತ್ತುಗಳನ್ನು ಕೂಡ ದಾನ ಮಾಡಿದರೆ ಒಳ್ಳೆಯದು ಎಂಬ ನಂಬಿಕೆಯಿದೆ.
ಚಂದ್ರ ದೋಷವಿದ್ದರೆ ಅದರ ಪರಿಹಾರಕ್ಕೆ ಈ ದಿನ ಶುಭವಾಗಿದೆ.
ಚಂದ್ರದೋಷದ ಲಕ್ಷಣಗಳು
* ಚಂದ್ರದೋಷವಿದ್ದರೆ ವೃತ್ತಿ ಜೀವನದಲ್ಲಿ ಸಮಸ್ಯೆಗಳು ಉಂಟಾಗುವುದು
* ಚಂದ್ರದೋಷವಿದ್ದರೆ ವೈಯಕ್ತಿಕ ಬದುಕಿನಲ್ಲಿ ಸಮಸ್ಯೆ ಉಂಟಾಗುವುದು
* ಆರೋಗ್ಯ ಸಮಸ್ಯೆಗಳು ಕಾಡುವುದು
ಚಂದ್ರ ದೋಷಕ್ಕೆ ಪರಿಹಾರ
ಓಂ ನಮಃ ಶಿವಾಯ ಎಂದು 108 ಬಾರಿ ಪಠಿಸಿ
ಸೋಮವಾರ ಹಾಲು, ತುಪ್ಪವನ್ನು ಶಿವನ ದೇವಾಲಯಕ್ಕೆ ನೀಡಿ
ಚಿಕ್ಕ ಬೆರಳಿಗೆ ಮುತ್ತಿನ ಉಂಗುರು ಧರಿಸಿ
ಹುಣ್ಣಿಮೆಯಂದು ದೇವಾಲಯಕ್ಕೆ ಬೆಳ್ಳಿಯನ್ನು ನೀಡಿ
ಹುಣ್ಣಿಮೆಯಂದು ಹನುಮಂತನನ್ನು ಆರಾಧಿಸಿ



Click it and Unblock the Notifications