Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಭಾದ್ರಪದ ಪೂರ್ಣಿಮೆ: ಚಂದ್ರದೋಷಕ್ಕೆ ಈ ದಿನ ಪರಿಹಾರವೇನು?
ಆಗಸ್ಟ್ 29ಕ್ಕೆ ಭಾದ್ರಪದ ಪೂರ್ಣಿಮೆ. ಈ ದಿನ ತುಂಬಾ ವಿಶೇಷವಾದದ್ದು. ಈ ದಿನದಂದು ಕೆಲವೊಂದು ವಸ್ತುಗಳನ್ನು ದಾನ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುವುದು. ಈ ಭಾದ್ರಪದ ಪೂರ್ಣಿಮೆಯ ವಿಶೇಷತೆಗಳೇನು? ಏಕೆ ಈ ದಿನ ತುಂಬಾ ವಿಶೇಷವಾದದ್ದು ಎಂದು ನೋಡೋಣ:

ಭಾದ್ರಪದ ಪೂರ್ಣಿಮೆಯಿಂದು ಈ 3 ಶುಭ ಯೋಗಗಳಿವೆ
ಭಾದ್ರಪದ ಪೂರ್ಣಿಮೆಯ ದಿನದಂದು ವೃದ್ಧಿ ಯೋಗ, ಅಮೃತ ಸಿದ್ಧಿ ಯೋಗ ಮತ್ತು ಸರ್ವಾರ್ಥ ಸಿದ್ಧಿ ಯೋಗಗಳು ರೂಪುಗೊಂಡಿದೆ.
ಸರ್ವಾಥ ಸಿದ್ಧಿ ಯೋಗ: ಬೆಳಗ್ಗೆಯಿಂದ ರಾತ್ರಿ 08:03 ರವರೆಗೆ
ಸರ್ವಾರ್ಥ ಸಿದ್ಧಿ ಯೋಗ: ಬೆಳಗ್ಗೆ 06:13 ವರೆಗೆ ಇತ್ತು
ಅಮೃತ ಸಿದ್ಧಿ ಯೋಗ: ಇಂದಯ ಬೆಳಿಗ್ಗೆ 11:18 ರಿಂದ 06:13 ರವರೆಗೆ ಅಮೃತ ಸಿದ್ಧಿ ಯೋಗವಿದೆ.
ಈ ದಿನ ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಭಾದ್ರಪದ ಹುಣ್ಣಿಮೆಯಂದು ಈ ವಸ್ತುಗಳನ್ನು ದಾನ ಮಾಡಿದರೆ ಒಳ್ಳೆಯದು ಎಂದು ಹೇಳಲಾಗಿದೆ:
ಈ ದಿನ ಚಂದ್ರನು 16 ಹಂತಗಳೊಂದಿಗೆ ಪೂರ್ಣನಾಗುತ್ತಾನೆ. ಪೂರ್ಣಿಮೆಯಂದು ಸ್ನಾನ ಮಾಡಿದ ನಂತರ ಚಂದ್ರನಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಬೇಕು. ಇದರಿಂದ ಜೀವನದಲ್ಲಿ ಸಂತೋಷ, ಸಮೃದ್ಧಿ ಹೆಚ್ಚಾಗುವುದು ಎಂದು ನಂಬಲಾಗಿದೆ
ಚಂದ್ರನಿಗೆ ಸಂಬಂಧಿಸಿದ ಈ ವಸ್ತುಗಳನ್ನು ದಾನ ಮಾಡಿ
* ಈ ದಿನ ಬಿಳಿ ವಸ್ತ್ರಗಳನ್ನು ದಾನ ಮಾಡಿ
* ಸಕ್ಕರೆಯನ್ನು ದಾನ ಮಾಡಿ
* ಬಿಳಿ ಸಿಹಿ ತಿಂಡಿಗಳನ್ನು ದಾನ ಮಾಡಿ
* ಈ ದಿನ ಬೆಳ್ಳಿ ವಸ್ತುಗಳನ್ನು ದಾನ ಮಾಡಿದರೆ ಒಳ್ಳೆಯದು
* ಮುತ್ತುಗಳನ್ನು ಕೂಡ ದಾನ ಮಾಡಿದರೆ ಒಳ್ಳೆಯದು ಎಂಬ ನಂಬಿಕೆಯಿದೆ.
ಚಂದ್ರ ದೋಷವಿದ್ದರೆ ಅದರ ಪರಿಹಾರಕ್ಕೆ ಈ ದಿನ ಶುಭವಾಗಿದೆ.
ಚಂದ್ರದೋಷದ ಲಕ್ಷಣಗಳು
* ಚಂದ್ರದೋಷವಿದ್ದರೆ ವೃತ್ತಿ ಜೀವನದಲ್ಲಿ ಸಮಸ್ಯೆಗಳು ಉಂಟಾಗುವುದು
* ಚಂದ್ರದೋಷವಿದ್ದರೆ ವೈಯಕ್ತಿಕ ಬದುಕಿನಲ್ಲಿ ಸಮಸ್ಯೆ ಉಂಟಾಗುವುದು
* ಆರೋಗ್ಯ ಸಮಸ್ಯೆಗಳು ಕಾಡುವುದು
ಚಂದ್ರ ದೋಷಕ್ಕೆ ಪರಿಹಾರ
ಓಂ ನಮಃ ಶಿವಾಯ ಎಂದು 108 ಬಾರಿ ಪಠಿಸಿ
ಸೋಮವಾರ ಹಾಲು, ತುಪ್ಪವನ್ನು ಶಿವನ ದೇವಾಲಯಕ್ಕೆ ನೀಡಿ
ಚಿಕ್ಕ ಬೆರಳಿಗೆ ಮುತ್ತಿನ ಉಂಗುರು ಧರಿಸಿ
ಹುಣ್ಣಿಮೆಯಂದು ದೇವಾಲಯಕ್ಕೆ ಬೆಳ್ಳಿಯನ್ನು ನೀಡಿ
ಹುಣ್ಣಿಮೆಯಂದು ಹನುಮಂತನನ್ನು ಆರಾಧಿಸಿ



Click it and Unblock the Notifications