Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಭಾದ್ರಪದ ಮಾಸ ಯಾವಾಗ ಶುರು: ಈ ಮಾಸದಲ್ಲಿ ಬರುವ ಹಬ್ಬಗಳು, ವ್ರತಗಳು
ಭಾದ್ರಪದ ಮಾಸ ನಮಗೆಲ್ಲಾ ಸಡಗರದ ಮಾಸ, ಏಕೆಂದರೆ ಈ ಮಾಸದಲ್ಲಿ ತಾನೆ ಗಣಪ ಮನೆ ಮನೆಗೆ ಬರುವುದು, ಈ ಭಾದ್ರಪದ ಮಾಸ ಮೂರ್ತಿ ಸಂಭ್ರಮವೋ ಸಂಭ್ರಮ, ಉತ್ತರ ಭಾರತದ ಕಡೆ ಭಾದ್ರಪದ ಮಾಸ ಆಗಸ್ಟ್ 23ರಿಂದ ಶುರುವಾದರೆ ಕರ್ನಾಟಕದಲ್ಲಿ ಸೆಪ್ಟೆಂಬರ್ 4ರಿಂದ ಶುರುವಾಗುವುದು.
ಭಾದ್ರಪದ ಮಾಸ ಎಲ್ಲಿಂದ ಎಲ್ಲಿಯವರೆಗೆ ಇರಲಿದೆ? ಈ ಮಾಸದಲ್ಲಿ ಬರುವ ಹಬ್ಬಗಳು, ವ್ರತಗಳು ಹಾಗೂ ವ್ರತ ನಿಯಮಗಳೇನು ಎಂದು ನೋಡೋಣ ಬನ್ನಿ:

ಭಾದ್ರಪದ ಮಾಸದಲ್ಲಿ ಬರುವ ಹಬ್ಬಗಳುಗಳು ಹಾಗೂ ಶುಭ ದಿನಗಳು
ಸೆಪ್ಟೆಂಬರ್ 5: ಬಲರಾಮ ಜಯಂತಿ, ಧನ್ವಂತರಿ ಜಯಂತಿ
ಸೆಪ್ಟೆಮಬರ್ 6: ವರಹ ಜಯಂತಿ
ಸೆಪ್ಟೆಂಬರ್ 6: ಸ್ವರ್ಣಗೌರಿ ವ್ರತ
ಸೆಪ್ಟೆಂಬರ್ 7: ಗಣೇಶ ಚತುರ್ಥಿ
ಸೆಪ್ಟೆಂಬರ್ 8: ರಿಷಿ ಪಂಚಮಿ
ಸೆಪ್ಟೆಂಬರ್ 15: ವಾಮನ ಜಯಂತಿ
ಸೆಪ್ಟೆಂಬರ್ 17: ಅನಂತ ಚತುರ್ದಶಿ
ಸೆಪ್ಟೆಂಬರ್ 18-ಅಕ್ಟೋಬರ್ 2ರವರೆಗೆ ಪಿತೃಪಕ್ಷ
ಸೆಪ್ಟೆಂಬರ್ 24: ಕಾಲಾಷ್ಟಮಿ
ಅಕ್ಟೋಬರ್ 14: ಮಹಾಲಯ ಶ್ರಾದ್ಧ
ಭಾದ್ರಪದ ಮಾಸದಲ್ಲಿ ಸಂಕಷ್ಟಹರ ಚತುರ್ಥಿ
ಸೆಪ್ಟೆಂಬರ್ 21ರಂದು ಆಚರಿಸಲಾಗುವುದು.
ಚಂದ್ರೋದಯ ಸಮಯ: ರಾತ್ರಿ 8:43
ಭಾದ್ರಪದದಲ್ಲಿ ಏಕಾದಶಿ ದಿನಗಳು
ಪರಿವರ್ತನಿ ಏಕಾದಶಿ: ಸೆಪ್ಟೆಂಬರ್ 14
ಇಂದಿರಾ ಏಕಾದಶಿ: ಸೆಪ್ಟೆಂಬರ್ 28
ಭಾದ್ರಪದ ಮಾಸದಲ್ಲಿ ಪ್ರದೋಷ ವ್ರತದ ದಿನಗಳು
ಸೆಪ್ಟೆಂಬರ್ 15, ಸೆಪ್ಟೆಂಬರ್ 30
ಭಾದ್ರಪದ ಮಾಸದ ಮಹತ್ವ
ಭಾದ್ರಪದ ಮಾಸವೆಂದರೆ ಗಣಪತಿಯನ್ನು ಶಾಸ್ತ್ರೋಕ್ತವಾಗಿ ಪೂಜಿಸಲು ಇರುವ ಮಾಸವಾಗಿದೆ. ಭಾದ್ರಪದ ಮಾಸದಲ್ಲಿ ಪೂಜೆ ಮತ್ತು ಭಕ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.
ಭಾದ್ರಪದ ಮಾಸದಲ್ಲಿ ದಾನಕ್ಕೆ ತುಂಬಾನೇ ಮಹತ್ವವಿದೆ
ಈ ಮಾಸದಲ್ಲಿ ದಾನಕ್ಕೆ ತುಂಬಾನೇ ಮಹತ್ವವಿದೆ. ಈ ದಿನ ಬಡವರಿಗೆ ದಾನ ಮಾಡಬೇಕು, ಗೋಧಿ, ಅಕ್ಕಿ, ಬೇಳೆಕಾಳು ಇತ್ಯಾದಿಗಳನ್ನು ದಾನ ಮಾಡುವುದು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಆಹಾರವಸ್ತುಗಳನ್ನು, ಬಟ್ಟೆಗಳನ್ನು ದಾನ ಮಾಡುವುದರಿಂದ ಶ್ರೀ ಗಣೇಶನ ಕೃಪೆಗೆ ಪಾತ್ರರಾಗುತ್ತೇವೆ. ಶ್ರೀ ಗಣೇಶನ ಕೃಪೆಯಿದ್ದರೆ ಬದುಕಿನಲ್ಲಿನ ಎಲ್ಲಾ ಕಷ್ಟಗಳು ದೂರಾಗುವುದು ಎಂದು ಹೇಳಲಾಗಿದೆ.
ಓಂ ಗಮ್ ಗಣಪತಯೇ ನಮಃ
ಈ ಬೀಜ ಮಂತ್ರ ಪ್ರತಿದಿನ ಪಠಿಸಿ
ಓಂ ಶ್ರೀ ಗಣೇಶಾಯ ನಮಃ
ಓಂ ಸುಮುಖಾಯ ನಮಃ
ಓಂ ಕ್ಷಿಪ್ರ ಪ್ರಸಾದಾಯ ನಮಃ
ಓಂ ಗಣಾಧ್ಯಕ್ಷಾಯ ನಮಃ
ಓಂ ವಿಘ್ನನಾಶಾಯ ನಮಃ
ಓಂ ಲಂಬೋಧರಾಯ ನಮಃ
ಓಂ ಗಜಕರ್ಣಿಕಾಯ ನಮಃ
ಓಂ ಕಪಿಲಾಯ ನಮಃ
ಓಂ ವಿಕ್ತ್ರಾಯ ನಮಃ



Click it and Unblock the Notifications
