Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
ರೈಲಿನಲ್ಲಿ ಒಣಕೊಬ್ಬರಿ ತೆಗೆದುಕೊಂಡು ಹೋದರೆ ಜೈಲು ಫಿಕ್ಸ್!! ಈ ನಿಯಮ ಏಕಿದೆ ಗೊತ್ತಾ?
ವಿಶ್ವದ ಅತಿದೊಡ್ಡ ರೈಲ್ವೆ ಜಾಲವಾಗಿರುವ ಭಾರತೀಯ ರೈಲ್ವೆಯು ನಿತ್ಯ ಲಕ್ಷಾಂತರ ಪ್ರಯಾಣಿಕರ ಹೊತ್ತು ಸಾಗುತ್ತದೆ. ಭಾರತದ ಬಹುತೇಕ ಕಡೆಗಳಿಗೆ ಈಗ ರೈಲ್ಬೆ ಸಂಪರ್ಕವಿದೆ. ಅದ್ರಲ್ಲೂ ಭಾರತದ ಹಲವು ಭಾಗದಲ್ಲಿ ರೈಲು ಬಿಟ್ಟು ಬೇರೆ ಯಾವುದೇ ಸಂಪರ್ಕ ಸೇತುವೆಗಳಿಲ್ಲ. ಹೀಗಾಗಿ ಭಾರತೀಯ ರೈಲ್ವೆಯು ಜನರ ಜೀವಾಳವಾಗಿದೆ. ಇನ್ನು ಬಹುತೇಕ ಎಲ್ಲಾ ನಗರಗಳಲ್ಲಿ ಹಾದು ಹೋಗುವ ರೈಲು ಮಾರ್ಗ ಜನರ ನಿತ್ಯದ ಬದುಕು ಕಟ್ಟಿಕೊಡುತ್ತದೆ.
ಹಾಗೆ ಈಗ ಆಧುನಿಕರಣಗೊಳ್ಳುತ್ತಿರುವ ರೈಲ್ವೆಯು ಹೊಸ ನಿಯಮಗಳು, ಸುರಕ್ಷತಾ ವಿಧಾನಗಳ ಜಾರಿ ಮಾಡುವುದು ನೋಡಬಹುದು. ರೈಲು ಅಪಘಾತಗಳ ತಡೆಯಲು ತಂತ್ರಜ್ಞಾನಗಳು, ಸುಧಾರಿತ ಸಿಗ್ನಲಿಂಗ್ ವ್ಯವಸ್ಥೆ, ಸೂಕ್ತ ತರಬೇತಿಯಂತಹ ಕ್ರಮಕ್ಕೂ ಅದು ಮುಂದಾಗುವುದು ನೋಡಬಹುದು. ಇನ್ನು ಈ ಸಮಯದಲ್ಲಿ ಅಪಘಾತ ತಡೆಯಲು ಸಾರ್ವಜನಿಕರ ಸಹಕಾರ ಕೂಡ ಅಷ್ಟೇ ಮುಖ್ಯ.

ಹಾಗೆ ಭಾರತೀಯ ರೈಲ್ವೆಯು ಪ್ರಯಾಣಿಕರ ಹಿತದೃಷ್ಟಿಯಿಂದ ಕೆಲವೊಂದು ವಸ್ತುಗಳನ್ನು ರೈಲು ಪ್ರಯಾಣದ ವೇಳೆ ಬಳಸದಂತೆ ಸೂಚಿಸುತ್ತದೆ. ಮತ್ತೆ ಕೆಲವು ವಸ್ತುಗಳನ್ನು ರೈಲಿನಲ್ಲಿ ತೆಗೆದುಕೊಂಡು ಹೋಗುವುದು ನಿಷಿದ್ಧಗೊಂಡಿದ್ದು, ದಂಡಕ್ಕೂ ಇದು ದಾರಿಯಾಗುತ್ತದೆ. ಅಂತಹ ಕೆಲವು ವಸ್ತುಗಳಲ್ಲಿ ಒಣ ಕೊಬ್ಬರಿ ಕೂಡ ಒಂದಾಗಿದೆ. ಕೊಬ್ಬರಿಯು ಅಪಾಯಗಳ ತರಬಹುದು ಎಂಬ ಕಾರಣದಿಂದ ಸಾಗಾಟ ನಿಷೇಧಿಸಲಾಗಿದೆ.
ನಿಮಗೆ ಅಚ್ಚರಿಯಾಗಬಹುದು ಭಾರತೀಯ ರೈಲ್ಬೆಯು ಪ್ರಯಾಣಿಕರು ಒಣ ಕೊಬ್ಬರಿಯನ್ನು ರೈಲಿನಲ್ಲಿ ಸಾಗಿಸುವುದನ್ನು ನಿಷೇಧಿಸುತ್ತದೆ. ರೈಲ್ವೆ ನಿಯಮಗಳ ಪ್ರಕಾರ ಈ ರೀತಿಯ ಒಣ ಕೊಬ್ಬರಿಯನ್ನು ತೆಗೆದುಕೊಂಡು ಹೋಗುವುದು ಅಪಾಯಕಾರಿ ಎಂದು ಹೇಳಿದೆ. ರೈಲ್ವೆಯ ಪ್ರಮುಖ ನಿಯಮಗಳ ಪ್ರಕಾರ ಸ್ಟೌವ್ಗಳು, ಗ್ಯಾಸ್ ಸಿಲಿಂಡರ್ಗಳು, ರಾಸಾಯನಿಕಗಳು, ಪಟಾಕಿ, ಚರ್ಮ ಅಥವಾ ಒದ್ದೆಯಾದ ಚರ್ಮ, ಗ್ರೀಸ್, ಸಿಗರೇಟ್ ಮತ್ತು ಸ್ಫೋಟಕಗಳಂತಹ ವಸ್ತುಗಳನ್ನು ರೈಲುಗಳಲ್ಲಿ ಸಾಗಿಸಬಾರದು.
ಅದರಲ್ಲೂ ಒಣ ಕೊಬ್ಬರಿಯು ಅದರ ಸುತ್ತಲೂ ಒಣಗಿರುವ ನಾರಿನ ಪದಾರ್ಥ ಹೊಂದಿರಲಿದೆ. ಒಮ್ಮೆ ಇದಕ್ಕೆ ಬೆಂಕಿ ತಗುಲಿದರೆ ಅದರನ್ನು ನಂದಿಸುವುದು ಬಹಳ ಕಷ್ಟ, ಹೀಗಾಗಿ ಒಣ ಕೊಬ್ಬರಿಯನ್ನ ತೆಗೆದುಕೊಂಡು ಹೋಗುವುದು ನಿಷೇಧವಾಗಿದೆ. ಯಾವುದೇ ಪ್ರಯಾಣಿಕನು ರೈಲಿನಲ್ಲಿ ನಿಷೇಧಿತ ವಸ್ತುಗಳೊಂದಿಗೆ ಪ್ರಯಾಣಿಸುತ್ತಿರುವುದು ಕಂಡುಬಂದರೆ, ರೈಲ್ವೆ ಅವನ ವಿರುದ್ಧ ಕ್ರಮ ಕೈಗೊಳ್ಳಬಹುದು. ಅಂತಹ ಸಂದರ್ಭದಲ್ಲಿ ಪ್ರಯಾಣಿಕನಿಗೆ 1,000 ರೂ. ದಂಡ ಇಲ್ಲವೆ 3 ವರ್ಷಗಳ ಕಾಲ ಜೈಲು ಶಿಕ್ಷೆ ಇಲ್ಲವೆ ಎರಡನ್ನೂ ವಿಧಿಸುವ ಅಧಿಕಾರ ಹೊಂದಿದೆ. ಹಾಗೆ ಈ ವಸ್ತುಗಳ ತೆಗೆದುಕೊಂಡು ಹೋಗುವಾಗ ಅಹಿತಕರ ಘಟನೆಗಳು ಸಂಭವಿಸಿದರೆ, ರೈಲ್ವೆಗೆ ಹಾನಿಯಾದರೆ ಆ ನಷ್ಟ ಕೂಡ ಪ್ರಯಾಣಿಕರೆ ಭರಿಸಬೇಕಾಗುತ್ತದೆ. ಇನ್ನು ಹಸಿ ತೆಂಗಿನಕಾಯಿಗಳನ್ನು ರೈಲಿನಲ್ಲಿ ತೆಗೆದುಕೊಂಡು ಹೋಗಬಹುದು.
ಹಾಗೆ ಭಾರತೀಯ ರೈಲ್ವೆ ನಿಯಮಗಳ ಪ್ರಕಾರ ರೈಲು ಪ್ರಯಾಣದ ವೇಳೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳನ್ನು ಕೂಡ ತೆಗೆದುಕೊಂಡು ಹೋಗುವಂತಿಲ್ಲ. ಆದ್ರೆ ವೈದ್ಯಕೀಯ ತುರ್ತು ಪರಿಸ್ಥಿತಿ, ಹಾಗೆ ಕೆಲವು ಮಾರ್ಗಸೂಚಿಗಳ ಅನುಸರಿಸುವ ಮೂಲಕ ತೆಗೆದುಕೊಂಡು ಹೋಗಬಹುದು. ಹಾಗೆ ಯಾವುದೇ ಪ್ರಯಾಣಿಕರು ರೈಲು ಅಥವಾ ರೈಲ್ವೆ ಆವರಣದಲ್ಲಿ ಮಾದಕ ದ್ರವ್ಯಗಳನ್ನು ಸೇವಿಸಿದರೆ ದಂಡ ವಿಧಿಸಲಾಗುತ್ತದೆ.
ಮದ್ಯಪಾನ ಮಾಡಿದ ನಂತರದಲ್ಲಿ ಅಥವಾ ಮದ್ಯದ ಬಾಟಲಿಯೊಂದಿಗೆ ರೈಲು ಪ್ರಯಾಣದಲ್ಲಿ ತೊಡಗುವಂತಿಲ್ಲ. ಹೀಗೆ ಮದ್ಯದೊಂದಿಗೆ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದರೆ 6 ತಿಂಗಳ ಜೈಲು ಶಿಕ್ಷೆ ಹಾಗೂ 500 ರೂಪಾಯಿ ದಂಡ ವಿಧಿಸಬಹುದು. ಹಾಗೆ ಅಸಭ್ಯ ವರ್ತನೆ, ಕಿರುಕುಳ, ಸಕಾರಾತ್ಮಕ ಉದ್ದೇಶವಿಲ್ಲದೆ ಚೈನ್ ಪುಲ್ಲಿಂಗ್, ಟಿಟಿಯೊಂದಿಗೆ ಸಹಕರಿಸದಿದ್ದರೂ ಕೂಡ ದಂಡ ಹಾಗೂ ಶಿಕ್ಷೆಗೆ ಗುರಿಯಾಗಬಹುದು.



Click it and Unblock the Notifications












