Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆಂಗಳೂರು 2ನೇ ವಿಮಾನ ನಿಲ್ದಾಣ: ಮೂರು ಸ್ಥಳಗಳಲ್ಲಿ ಸವಾಲು, ಕಾರ್ಯಾಚರಣೆ ಅನುಮಾನ?
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಬೆಂಗಳೂರಿನಲ್ಲಿ ಎರಡನೇ ಏರ್ಪೋರ್ಟ್ ತೆರೆಯಲು ರಾಜ್ಯ ಸರ್ಕಾರ ಮುಂದಾಗಿತ್ತು. ಹೀಗಾಗಿ ರಾಜ್ಯ ಸರ್ಕಾರ ಈಗಾಗಲೇ ವಿಮಾನ ನಿಲ್ದಾಣ ಪ್ರಕ್ರಿಯೆಗಾಗಿ ಸರ್ವೇ ಕಾರ್ಯ ಆರಂಭಿಸಿ ಮೂರು ಸ್ಥಳಗಳನ್ನು ಸೂಚಿಸಿತ್ತು.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಈ ಸ್ಥಳಗಳಲ್ಲಿ ಈಗಾಗಲೇ ಪರಿಶಿಲನೆ ಕೂಡ ನಡೆದಿದೆ. ಸದ್ಯ ಈಗ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ತನ್ನ ವರದಿಯನ್ನು ಕೇಂದ್ರದ ನಾಗರಿಕ ವಿಮಾನಯಾನ ಇಲಾಖೆ ಹಾಗೂ ರಾಜ್ಯ ಸರ್ಕಾರದೊಂದಿಗೆ ಹಂಚಿಕೊಂಡಿದೆ. ಅಲ್ಲದೆ ಸರ್ಕಾರ ಸೂಚಿಸಿದ್ದ ಮೂರು ಸ್ಥಳದಲ್ಲಿ ಯಾವುದನ್ನು ಪುರಸ್ಕರಿಸಿಲ್ಲ ಎಂದು ವರದಿಯಾಗಿದೆ.

ಕನಕಪುರ ರಸ್ತೆಯ 2 ಸ್ಥಳಗಳು ಹಾಗೂ ನೆಲಮಂಗಲ- ಕುಣಿಗಲ್ ರಸ್ತೆಯ ಒಂದು ಸ್ಥಳದಲ್ಲಿ ಬೆಂಗಳೂರಿನ 2ನೇ ಏರ್ ಪೋರ್ಟ್ ನಿರ್ಮಾಣಕ್ಕೆ ಸವಾಲುಗಳಿರುವ ಕುರಿತಾಗಿ ವರದಿಯಲ್ಲಿ ಹೇಳಲಾಗಿದೆ. ಚೂಡಹಳ್ಳಿ (ಹಾರೋಹಳ್ಳಿ ಬಳಿ)ಸೋಮನಹಳ್ಳಿ (ಹಾರೋಹಳ್ಳಿ ಬಳಿ) ನೆಲಮಂಗಲ (ಕುಣಿಗಲ್ ರಸ್ತೆಯಲ್ಲಿ) ಸೂಚಿಸಿದ್ದ ಸ್ಥಳದಲ್ಲಿ ವಾಯುಮಾರ್ಗದ ಅಪಾಯ ಕುರಿತು ವರದಿಯಲ್ಲಿ ಹೇಳಲಾಗಿದೆ.
ಏಪ್ರಿಲ್ನಲ್ಲಿಯೇ ಪ್ರಾಧಿಕಾರವು ಸ್ಥಳಗಳ ಕುರಿತು ಪರಿಶೀಲನೆ ನಡೆಸಿದ್ದರು. ಆದ್ರೆ ಈ ಮೂರು ಸ್ಥಳಗಳನ್ನು ಅನುಮೋದಿಸಿಲ್ಲ. ಹಾಗಾದ್ರೆ ವಿಮಾಣ ನಿಲ್ದಾಣಕ್ಕೆ ಸೂಚಿಸಿದ್ದ ಸ್ಥಳದಲ್ಲಿ ಇರುವ ಸಮಸ್ಯೆ ಏನು? ಬೆಂಗಳೂರಿಗೆ ಎರಡನೇ ಏರ್ಪೋರ್ಟ್ ಆಗೋದು ಅನುಮಾನ ಹುಟ್ಟಿಸಿರುವುದು ಏಕೆ ಎಂಬ ಕುರಿತ ಸಂಪೂರ್ಣ ಮಾಹಿತಿ ಇಲ್ಲಿ ತಿಳಿದುಕೊಳ್ಳೋಣ.
ವರದಿಯ ಪ್ರಕಾರ, ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣದ ಯೋಜನೆಯು ಹಲವು ಅಡ್ಡಿಗಳ ಎದುರಿಸುತ್ತಿದೆ. ಈ ಮೂರು ಪ್ರಸ್ತಾವಿತ ಸ್ಥಳಗಳು ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಬಹಳ ಹತ್ತಿರವಾಗಿವೆ. ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ವಿಮಾನ ಕಾರ್ಯಾಚರಣೆಯ ಹಲವು ಸಮಸ್ಯೆಗಳನ್ನು ಹುಟ್ಟುಹಾಕಬಹುದು ಎಂದು ವಿವರಿಸಲಾಗಿದೆ.
ಇನ್ನು ಈ ಪ್ರದೇಶಗಳು ಸಮತಟ್ಟಾದ ಪ್ರದೇಶದಲ್ಲಿಲ್ಲ. ಬದಲಿಗೆ ಈ ಪ್ರದೇಶದಲ್ಲಿ ಬಂಡೆ ಕಲ್ಲುಗಳು, ಇಳಿಜಾರು ಪ್ರದೇಶ ನೋಡಬಹುದು. ಇದು ನಿರ್ಮಾಣ ಕಾಮಗಾರಿಯ ಉದ್ದೇಶಿತ ವೆಚ್ಚವನ್ನು ಹೆಚ್ಚು ಮಾಡುವಂತಹ ಆತಂಕವಿದೆ. ಹಾಗೆ ಈ ಪ್ರಸ್ತಾಪಿತ ಸ್ಥಳದಲ್ಲಿ ಬಹುತೇಕ ಭಾಗವು ಹಾಲ್ (ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್) ವಾಯುಪ್ರದೇಶದೊಳಗೆ ಬರಲಿದೆ. ಹೀಗಾಗಿ ಇದು ಹೊಸ ಒಪ್ಪಂದಗಳ ಮೂಲಕ ಮುಂದುವರೆಯಬೇಕಾಗುತ್ತದೆ. ಹೀಗಾಗಿ ಈಗ ಪ್ರಸ್ತಾಪಿತ ಮೂರು ಸ್ಥಳಗಳನ್ನು ಪ್ರಾಧಿಕಾರ ತಿರಸ್ಕರಿಸದೇ ಇದ್ದರೂ ಯಾವುದೇ ಸ್ಥಳವನ್ನೂ ಸಹ ಅನುಮೋದಿಸಿಲ್ಲ. ಆದ್ರೆ ಎರಡನೇ ವಿಮಾಣ ನಿಲ್ದಾಣಕ್ಕೆ ಯಾವ ಜಾಗ ಸೂಕ್ತ ಎಂಬುದು ಇನ್ನೂ ಚರ್ಚಾ ವಿಷಯವಾಗಿಯೇ ಉಳಿದಿದೆ.
ಸದ್ಯ ಈಗ ಎರಡನೇ ವಿಮಾನ ನಿಲ್ದಾಣದ ಕಾರ್ಯ ಆರಂಭದಲ್ಲೇ ಹಲವು ವಿಘ್ನಗಳು ಎದುರಾಗುತ್ತಿವೆ. ಈಗ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ನೀಡಿರುವ ಹಲವು ಸೂಚನೆಗಳನ್ನು ಮತ್ತೆ ರಾಜ್ಯ ಸರ್ಕಾರ ಪರಿಶೀಲಿಸಿ ಅದಕ್ಕೆ ಸೂಕ್ತ ಪರಿಹಾರ ಮಾರ್ಗಗಳ ಸೂಚಿಸಬೇಕಿದೆ. ಬಳಿಕ 3 ಸ್ಥಳಗಳ ಪೈಕಿ ಒಂದು ಸ್ಥಳವನ್ನು ಅಂತಿಮಗೊಳಿಸಬೇಕು. ಆ ಸ್ಥಳದಲ್ಲಿ ಸುಮಾರು 6-7 ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡಲು ಯಾವುದಾದರೂ ಖಾಸಗಿ ಕಂಪನಿ ಮುಂದೆ ಬರಬೇಕಿದೆ.
ಹಾಗೆ ಸ್ಥಳ ಅಂತಿಮವಾದ ಬಳಿಕ ರಾಜ್ಯ ಸರ್ಕಾರ ಶೇ.50ರಷ್ಟು ಜಂಟಿಯಾಗಿ ಹೂಡಿಕೆ ಮಾಡಲಿದೆ. ಅದ್ರಲ್ಲೂ ಸುಮಾರು 5 ಸಾವಿರ ಕೋಟಿ ರೂಪಾಯಿಯನ್ನು ಭೂ ಸ್ವಾಧೀನ ಪ್ರಕ್ರಿಯೆಗೆ ಮೀಸಲಿಡಬೇಕಾಗುತ್ತದೆ. ಸದ್ಯ ಈಗ ಜಾಗ ಅಂತಿಮಗೊಳಿಸುವ ಪ್ರಕ್ರಿಯೆಯೇ ಅಂತ್ಯವಾಗಿಲ್ಲ ಆದ್ರೆ 2033ರ ಒಳಗೆ ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ ಕಾರ್ಯಾಚರಣೆ ಮಾಡಬೇಕು ಎಂದು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.



Click it and Unblock the Notifications


