Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಉತ್ತರದವರು ಬೆಂಗಳೂರು ತೊರೆದರೆ ನಗರ ಖಾಲಿಯಾಗುತ್ತೆ ಎಂದ ಯುವತಿ..! ಜಾಗ ಖಾಲಿ ಮಾಡಿ ಎಂದ ನೆಟ್ಟಿಗರು
ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲು ಸದ್ದು ಮಾಡುವ ವಿಚಾರ ಅಂದರೆ ಅಂದು ಉತ್ತರ ಹಾಗೂ ದಕ್ಷಿಣ ಭಾರತ ಎಂಬ ಎರಡು ಟಾಪಿಕ್ಗಳು, ಅದರಲ್ಲೂ ಬೆಂಗಳೂರು ಹಾಗೂ ಕನ್ನಡಿಗರು ಮತ್ತು ಹಿಂದಿ ವಿಚಾರವಾಗಿ ಯಾವಾಗಲು ಒಂದಲ್ಲಾ ಒಂದು ಘಟನೆ ವರದಿಯಾಗುತ್ತಲೇ ಇರುತ್ತೆ.
ಇತ್ತೀಚಿಗೆ ಹಿಂದಿ ಹೇರಿಕೆಯ ವಿರುದ್ಧ ಧ್ವನಿ ಹೆಚ್ಚಾಗುತ್ತಿದ್ದರೆ ಬೆಂಗಳೂರಲ್ಲಿ ನೆಲೆಸಿರುವ ಉತ್ತರ ಭಾರತೀಯರು ಈ ನಡೆ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕುವುದು, ಇಡೀ ಕನ್ನಡಿಗರನ್ನು ತೆಗಳುವುದು ನಡೆಯುತ್ತಲೇ ಇದೆ. ಇದಕ್ಕೆ ಉದಾಹರಣೆಯಾಗಿ ನಿತ್ಯವೂ ಹತ್ತಾರು ಘಟನೆಗಳು ನಡೆಯುತ್ತಿರುತ್ತವೆ.

ಹಾಗೆ ಇಲ್ಲೊಬ್ಬಾಕೆ ತನ್ನ ಇನ್ಸ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಈಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಕನ್ನಡಿಗರ ಆಕ್ರೋಶಕ್ಕೂ ಕಾರಣವಾಗಿದೆ. ಬಹುದಿನಗಳಿಂದ ಆಕೆ ಬೆಂಗಳೂರು ಕುರಿತಂತೆ ಹಲವು ವಿಡಿಯೋಗಳ ಹಂಚಿಕೊಂಡಿದ್ದು ಈ ವಿಡಿಯೋ ಈಗ ವೈರಲ್ ಆಗಿದೆ.
ಆಕೆಯ ಪ್ರಕಾರ ಉತ್ತರ ಭಾರತೀಯರು ಬೆಂಗಳೂರು ಬಿಟ್ಟು ಹೋದರೆ ಬೆಂಗಳೂರು ನಗರ ಖಾಲಿಯಾಗಲಿದೆಯಂತೆ, ಹಾಗೆ ಪಿಜಿಗಳು ಮೊದಲು ಖಾಲಿಯಾಗುತ್ತವೆ ಎಂದು ಆಕೆ ಹೇಳುತ್ತಿದ್ದಾಳೆ. ಹೀಗಾಗಿ ಮಾತನಾಡುವಾಗ ಸ್ವಲ್ಪ ಆಲೋಚನೆ ಮಾಡಿ ಮಾತನಾಡಿ ಎಂದು ಆಕೆ ಹೇಳುತ್ತಿರುವುದು ವಿಡಿಯೋದಲ್ಲಿ ನೋಡಬಹುದು.
ಸುಗಂಧ್ ಶರ್ಮಾ ಎಂಬಾಕೆ ವಿಡಿಯೋದಲ್ಲಿ ಬೆಂಗಳೂರಿನ ಕೋರಮಂಗಲದ ಪಬ್ಗಳ ಉದಾಹರಣೆಯಾಗಿ ನೀಡಿದ್ದಾರೆ. ಉತ್ತರ ಭಾರತೀಯರು ಬೆಂಗಳೂರು ತೊರೆದರೆ, ಪಾವತಿಸುವ ಅತಿಥಿ ವಸತಿಗಳು (ಪಿಜಿಗಳು) ಖಾಲಿಯಾಗುತ್ತವೆ . ಕೋರಮಂಗಲದ ನೂರಾರು ಪಬ್ಗಳು ಖಾಲಿಯಾಗುತ್ತವೆ. ಪಬ್ಗಳಿಗೆ ಸುಂದರ ಹುಡುಗಿಯರು ನೋಡಲು ಸಿಗಲ್ಲ, ಅಲ್ಲಿ ಹುಡುಗಿಯರು ಪಂಜಾಬಿ ಹಾಡಿಗೆ ಡ್ಯಾನ್ಸ್ ಮಾಡುವುದು ನೋಡಲು ಸಿಗಲ್ಲ. ಹೀಗಾಗಿ ನೀವು ಮಾತನಾಡುವಾಗ ಸ್ವಲ್ಪ ಆಲೋಚಿಸಿ ಮಾತನಾಡಿ ಎಂದು ಏಕೆ ಹೇಳುತ್ತಿದ್ದಾಳೆ.
ಆಕೆಯ ವಿಡಿಯೋ ವಿವಾದ ಹುಟ್ಟುಹಾಕಿದೆ, ಹಾಗೆ ಹಲವರು ಆಕೆಯ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ, ಇದು ಹಿಂದು ಹಾಗೂ ಕನ್ನಡ ಹಾಗೆ ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಎಂದು ನಡೆಯುತ್ತಿರುವ ಚರ್ಚಯ ಬೆಂಕಿಗೆ ಮತ್ತಷ್ಟು ತುಪ್ಪಸುರಿದಿದೆ. ಹೀಗಾಗಿ ಆಕೆಯ ವಿಡಿಯೋ ಕೆಳಗೆ ಕನ್ನಡಿಗರು ಕಮೆಂಟ್ಗಳ ಸುರಿಮಳೆಗೈದಿದ್ದಾರೆ.
ನೀವು ಹೇಳುತ್ತಿರುವುದನ್ನು ಕೇಳಲು ಇಷ್ಟೊಂದು ಚೆನ್ನಾಗಿದೆ, ದಯವಿಟ್ಟು ನೀವೆಲ್ಲಾ ಯಾವಾಗ ಬೆಂಗಳೂರು ತೊರೆಯುತ್ತೀರಿ ಎಂಬುದನ್ನು ಖಚಿತ ಪಡಿಸಿ ಎಂದು ಬಳಕೆದಾರರೊಬ್ಬರು ಬರೆದುಕೊಂಡಿರುವುದು ನೋಡಬಹುದು. ಈ ಕಮೆಂಟ್ಗೆ ಅತ್ಯಧಿಕ ಲೈಕ್ಸ್ ಸಹ ಬಂದಿದೆ.
ನೀವು ಹುಟ್ಟುವ ಮುನ್ನವೇ ಬೆಂಗಳೂರು ನಗರವಿತ್ತು, ನೀವು ಇಲ್ಲಿಂದ ಬಿಟ್ಟು ಹೋದರು ಬೆಂಗಳೂರು ನಗರ ಇರಲಿದೆ. ಭ್ರಮೆಯಲ್ಲಿ ಬದುಕಬೇಡಿ, ಆದಷ್ಟು ಬೇಗ ನಮ್ಮ ನಗರ ಬಿಟ್ಟು ಹೊರಡಿ ಎಂದು ಮತ್ತೊಬ್ಬರು ಬರೆದಿದ್ದಾರೆ.
ಕನ್ನಡ ಅಣಕಿಸಿ ಪೊಲೀಸರ ಕಣ್ಣಿಗೆ ಬಿದ್ದ
ಇನ್ನೋರ್ವ ಯುವಕ ಇನ್ಸ್ಸ್ಟಾಗ್ರಾಮ್ನಲ್ಲಿ ಕನ್ನಡಿಗರ ಅವಮಾನಿಸುವಂತಹ ವಿಡಿಯೋ ಹಂಚಿಕೊಂಡು ಪೊಲೀಸರ ಕಣ್ಣಿಗೂ ಬಿದ್ದಿದ್ದಾನೆ, ಆತನ ವಿರುದ್ಧ ಕ್ರಮದ ಭರವಸೆ ನೀಡಿದ್ದಾರೆ. ಆತ ಮಗುವೊಂದು ಹಿಂದಿಯಲ್ಲಿ ಮಾತನಾಡುತ್ತಿದೆ ಎಂದು ಇದು ಕರ್ನಾಟಕ ಕನ್ನಡದಲ್ಲಿ ಮಾತನಾಡು ಎಂದು ಹೇಳಿ ಗೊಂಬೆಯನ್ನು ಹೊರಗೆ ಎಸೆಯುವ ವಿಡಿಯೋ ಮಾಡಿದ್ದಾನೆ.
ಸದ್ಯ ಇದು ಆನ್ಲೈನ್ನಲ್ಲಿ ಕನ್ನಡಿಗರ ಕೆಣಕಿದೆ. ರೀಜನಲ್ ಸೆಂಟಿಮೆಂಟ್ ಹಾಗೂ ಕನ್ನಡಿಗರನ್ನು ಪ್ರವೋಕ್ ಮಾಡುತ್ತಿರು ಆತನ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿತ್ತು ವಿಡಿಯೋ ನೋಡಿದ ಬೆಂಗಳೂರು ಪೊಲೀಸರು ಆತನ ವಿರುದ್ಧ ಕ್ರಮದ ಭರವಸೆ ನೀಡಿದ್ದಾರೆ. ಸದ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಇಂತಹ ಹತ್ತಾರು ವಿಡಿಯೋಗಳು ಹರಿದಾಡುತ್ತಿದ್ದು, ಕನ್ನಡಿಗರು ಹಾಗೂ ಬೆಂಗಳೂರನ್ನು ತೆಗಳುವ ಮೂಲಕ ಒಂದಿಷ್ಟು ಮಂದಿ ವಿವಾದ ಹುಟ್ಟುಹಾಕುತ್ತಿದ್ದಾರೆ.



Click it and Unblock the Notifications