Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ರಸ್ತೆ ಗುಂಡಿಗೂ ರೇಟಿಂಗ್ ನೀಡಲು ಅಪ್ಲಿಕೇಷನ್..! ಬೆಂಗಳೂರು ವ್ಯಕ್ತಿಯ ಹೊಸ ಅನ್ವೇಷಣೆ!
ಭಾರತದ ಯಾವುದೇ ರಾಜ್ಯಕ್ಕೆ ನೀವು ಹೋದರು ಅಲ್ಲಿ ರಸ್ತೆಗಳ ಪರಿಸ್ಥಿತಿ ಒಂದೇ ಎನ್ನಬಹುದು. ಹೊಂಡ ಗುಂಡಿಗಳು ಇಲ್ಲದ ರಸ್ತೆಗಳನ್ನು ನೋಡದೆ ಇರುವುದು ಬಲು ಅಪರೂಪ. ಏಕೆಂದರೆ ಭಾರತದ ಹಲವು ಕಡೆ ರಸ್ತೆಗಳ ಪರಿಸ್ಥಿತಿ ಎಷ್ಟು ಕೆಟ್ಟದಾಗಿರುತ್ತೆ ಅಂದ್ರೆ ಗುಂಡಿಗಳ ಬಿಟ್ಟು ಬೇರೇನು ಕಾಣಿಸುವುದಿಲ್ಲ. ಹಾಗೆ ದಶಕಗಳು ಕಳೆದರು ಆ ರಸ್ತೆ ರಿಪೇರಿ ಆಗುವುದೇ ಇಲ್ಲ.
ಇದಕ್ಕೆ ಬೆಂಗಳೂರು ಕೂಡ ಹೊರತಾಗಿಲ್ಲ. ಬೆಂಗಳೂರು ವಿಚಾರಗಳು ಬಂದಾಗಲೆಲ್ಲ ಹೊಂಡ ಗುಂಡಿಗಳು ಸುದ್ದಿಯಾಗುತ್ತವೆ. ಬೆಂಗಳೂರಿನ ಹಲವು ಕಡೆಗಳಲ್ಲಿ ರಸ್ತೆ ಗುಂಡಿಗಳು ಬಾಯ್ತೆರೆದು ಅಪಾಯಗಳಿಗೆ ದಾರಿ ಮಾಡಿಕೊಡುತ್ತಿರುತ್ತವೆ. ಹತ್ತಾರು ಅಪಘಾತಗಳು, ಪ್ರಾಣ ಹಾನಿಗೂ ಕೂಡ ಈ ರಸ್ತೆ ಗುಂಡಿಗಳು ಕಾರಣವಾಗುತ್ತಿರುತ್ತವೆ. ಹೀಗಾಗಿ ಗುಂಡಿಗಳಿರುವ ರಸ್ತೆಯಲ್ಲಿ ಪ್ರಯಾಣ ಅಂದ್ರೆ ಜೀವ ಕೈಯಲ್ಲಿ ಹಿಡಿದು ಸಾಗಬೇಕಾದ ಪರಿಸ್ಥಿತಿ ಇದೆ.

ಬಿಬಿಎಂಪಿ ಹಲವು ವರ್ಷಗಳಿಂದ ರಸ್ತೆ ಗುಂಡಿ ಮುಚ್ಚುವ ಕುರಿತು ಹೊಸ ಯೋಜನೆಗಳು ನೂರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಲೇ ಇದೆ. ಹಾಗೆ ಹೈಕೋರ್ಟ್ ಈ ಗುಂಡಿಗಳ ಮುಚ್ಚಲು ಹೊಸ ಗಡುವು ನೀಡುತ್ತಲೇ ಇದೆ. ಇಷ್ಟಾದರೂ ಗುಂಡಿಗಳಿಂದ ರಸ್ತೆಗಳು ಮುಕ್ತಿ ಪಡದೇ ಇಲ್ಲ. ಈಗಲೂ ವಾಹನ ಸವಾರರು ಶಾಪ ಹಾಕಿಕೊಂಡು ಚಲಿಸಬೇಕಾಗಿದೆ.
ಆದ್ರೆ ರಸ್ತೆ ಗುಂಡಿಗಳ ಕುರಿತು ಜನರೇ ಈಗ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ. ಕೆಲವು ಕಡೆ ಜನರೇ ಸೇರಿ ಗುಂಡಿಗಳ ಮುಚ್ಚುವ ಕಾರ್ಯ ಮಾಡುತ್ತಿರುವುದನ್ನು ನಾವು ನೋಡಿರುತ್ತೇವೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ರಸ್ತೆ ಗುಂಡಿಗಳನ್ನು ಸ್ವಲ್ಪ ತಮಾಷೆಯಾಗಿ ಪ್ರತಿಭಟಿಸುವ ಮೂಲಕ ಜನರಿಗೆ ಹಾಗೂ ಜನಪ್ರತಿನಿಧಿಗಳಿಗೆ ತೋರಿಸಲು ಉಂದಾಗಿದ್ದಾನೆ.
ಆನ್ಲೈನ್ ಅಪ್ಲಿಕೇಷನ್ ರಚಿಸಿ ಅದರಲ್ಲಿ ರಸ್ತೆ ಗುಂಡಿಗಳಿಗೆ ರೇಟಿಂಗ್ ನೀಡುವ ವ್ಯವಸ್ಥೆ ಜಾರಿ ಮಾಡಿದ್ದಾನೆ. ಫೈಲ್ ಎಂಬ ಸಂಸ್ಥೆಯ ಸಹ ಸಂಸ್ಥಾಪಕ ಮತ್ತು ಸಿಟಿಒ ಆಗಿರುವ ಶಿವರಾಮ ಕೃಷ್ಣನ್ ನಾರಾಯಣ್ ಎಂಬಾತ ಈ ರೀತಿ ರಸ್ತೆ ಗುಂಡಿಗಳಿಗೆ ರೇಟಿಂಗ್ ನೀಡುವ ಅಪ್ಲಿಕೇಷನ್ ಹೊರತಂದಿದ್ದಾರೆ. ಅವರು ಎಕ್ಸ್ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ನಾವು ಗುಂಡಿಗಳನ್ನು ರೇಟ್ ಮಾಡಲು ಮತ್ತು ಪರಿಶೀಲಿಸಲು ಅಪ್ಲಿಕೇಶನ್ ಅನ್ನು ನಿರ್ಮಿಸಲು ಯೋಜಿಸುತ್ತಿದ್ದೇವೆ. ನೀವು ಈ ಗುಂಡಿಗಳ ಫೋಟೋ ತೆಗೆದು ಹಾಕಿ ಅದಕ್ಕೆ ರೇಟಿಂಗ್ ನೀಡಬಹುದು. ಇದು ಬೆಂಗಳೂರು ಮಾತ್ರವಲ್ಲ ಇಡೀ ದೇಶದ ಯಾವುದೇ ಮೂಲೆಯ ರಸ್ತೆ ಗುಂಡಿಯನ್ನು ಅಪ್ಲೋಡ್ ಮಾಡಬಹುದು, ಹಾಗೆ ಅದಕ್ಕೊಂದು ಐಡಿಯನ್ನು ನೀಡಬೇಕು. ದೆಹಲಿ ಆಗಿದ್ದರೆ D110001_P00001 ಎಂದು ಮುಂಬೈ ಆಗಿದ್ದರೆ M400001_G000001 ಎಂದು ಹಾಗೆ ಬೆಂಗಳೂರಿನ ಗುಂಡಿಗಳನ್ನು ಕೂಡ ಹಂಚಿಕೊಳ್ಳಬಹುದು.
ಈ ರೀತಿ ಮಾಡುವುದರಿಂದ ಆ ಗುಂಡಿ ಎಷ್ಟು ವರ್ಷಗಳಿಂದ ಹಾಗೆಯೇ ಇದೆ. ಅದನ್ನು ರಿಪೇರಿ ಮಾಡಲಾಗಿದೆಯೇ? ಮತ್ತೆ ಅಲ್ಲಿಯೇ ಹೊಸದಾಗಿ ಗುಂಡಿ ಬಿದ್ದಿದೆಯಾ ಎಂಬುದನ್ನು ಪತ್ತೆ ಮಾಡಬಹುದಂತೆ. ಈ ಐಡಿಯಾ ನೋಡಿದ ಮಂದಿ ಅಚ್ಚರಿಯ ಜೊತೆಗೆ ನಗೆಗಡಲಲ್ಲಿ ಮುಳುಗಿದ್ದಾರೆ. ಜನರಿಗೆ ಎಷ್ಟೊಂದು ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲು ರಸ್ತೆ ಗುಂಡಿಗೆ ಅಪ್ಲಿಕೇಷನ್ ಮಾಡುವ ಅನಿವಾರ್ಯತೆ ಏನಿತ್ತು ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ನೀವು ಇದೇ ಬುದ್ದಿವಂತಿಕೆಯನ್ನು ಜನರಿಗೆ ಸಹಾಯವಾಗುವ ರೀತಿ ಬಳಸಬಹುದಿತ್ತು ಎಂದು ಮತ್ತೊಬ್ಬರು ಬರೆದಿದ್ದಾರೆ.
ಇದು ನಿಜವಾಗಿಯೂ ಅದ್ಭುತ ಪರಿಕಲ್ಪನೆಯಾಗಿದೆ. ನಮ್ಮ ಅಧಿಕಾರಿಗಳು ಮಾಡಬೇಕಿದ್ದ ಕೆಲಸ ಇವರು ಮಾಡಿದ್ದಾರೆ. ಇನ್ನು ಮುಂದೆ ಗುಂಡಿಗಳ ಮಾಹಿತಿ ಆನ್ಲೈನ್ನಲ್ಲಿ ನೋಡಬಹುದು ಎಂದು ಮತ್ತೊಬ್ಬರು ಬರೆದಿದ್ದಾರೆ.



Click it and Unblock the Notifications