Latest Updates
-
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್
ರಸ್ತೆ ಗುಂಡಿಗೂ ರೇಟಿಂಗ್ ನೀಡಲು ಅಪ್ಲಿಕೇಷನ್..! ಬೆಂಗಳೂರು ವ್ಯಕ್ತಿಯ ಹೊಸ ಅನ್ವೇಷಣೆ!
ಭಾರತದ ಯಾವುದೇ ರಾಜ್ಯಕ್ಕೆ ನೀವು ಹೋದರು ಅಲ್ಲಿ ರಸ್ತೆಗಳ ಪರಿಸ್ಥಿತಿ ಒಂದೇ ಎನ್ನಬಹುದು. ಹೊಂಡ ಗುಂಡಿಗಳು ಇಲ್ಲದ ರಸ್ತೆಗಳನ್ನು ನೋಡದೆ ಇರುವುದು ಬಲು ಅಪರೂಪ. ಏಕೆಂದರೆ ಭಾರತದ ಹಲವು ಕಡೆ ರಸ್ತೆಗಳ ಪರಿಸ್ಥಿತಿ ಎಷ್ಟು ಕೆಟ್ಟದಾಗಿರುತ್ತೆ ಅಂದ್ರೆ ಗುಂಡಿಗಳ ಬಿಟ್ಟು ಬೇರೇನು ಕಾಣಿಸುವುದಿಲ್ಲ. ಹಾಗೆ ದಶಕಗಳು ಕಳೆದರು ಆ ರಸ್ತೆ ರಿಪೇರಿ ಆಗುವುದೇ ಇಲ್ಲ.
ಇದಕ್ಕೆ ಬೆಂಗಳೂರು ಕೂಡ ಹೊರತಾಗಿಲ್ಲ. ಬೆಂಗಳೂರು ವಿಚಾರಗಳು ಬಂದಾಗಲೆಲ್ಲ ಹೊಂಡ ಗುಂಡಿಗಳು ಸುದ್ದಿಯಾಗುತ್ತವೆ. ಬೆಂಗಳೂರಿನ ಹಲವು ಕಡೆಗಳಲ್ಲಿ ರಸ್ತೆ ಗುಂಡಿಗಳು ಬಾಯ್ತೆರೆದು ಅಪಾಯಗಳಿಗೆ ದಾರಿ ಮಾಡಿಕೊಡುತ್ತಿರುತ್ತವೆ. ಹತ್ತಾರು ಅಪಘಾತಗಳು, ಪ್ರಾಣ ಹಾನಿಗೂ ಕೂಡ ಈ ರಸ್ತೆ ಗುಂಡಿಗಳು ಕಾರಣವಾಗುತ್ತಿರುತ್ತವೆ. ಹೀಗಾಗಿ ಗುಂಡಿಗಳಿರುವ ರಸ್ತೆಯಲ್ಲಿ ಪ್ರಯಾಣ ಅಂದ್ರೆ ಜೀವ ಕೈಯಲ್ಲಿ ಹಿಡಿದು ಸಾಗಬೇಕಾದ ಪರಿಸ್ಥಿತಿ ಇದೆ.

ಬಿಬಿಎಂಪಿ ಹಲವು ವರ್ಷಗಳಿಂದ ರಸ್ತೆ ಗುಂಡಿ ಮುಚ್ಚುವ ಕುರಿತು ಹೊಸ ಯೋಜನೆಗಳು ನೂರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಲೇ ಇದೆ. ಹಾಗೆ ಹೈಕೋರ್ಟ್ ಈ ಗುಂಡಿಗಳ ಮುಚ್ಚಲು ಹೊಸ ಗಡುವು ನೀಡುತ್ತಲೇ ಇದೆ. ಇಷ್ಟಾದರೂ ಗುಂಡಿಗಳಿಂದ ರಸ್ತೆಗಳು ಮುಕ್ತಿ ಪಡದೇ ಇಲ್ಲ. ಈಗಲೂ ವಾಹನ ಸವಾರರು ಶಾಪ ಹಾಕಿಕೊಂಡು ಚಲಿಸಬೇಕಾಗಿದೆ.
ಆದ್ರೆ ರಸ್ತೆ ಗುಂಡಿಗಳ ಕುರಿತು ಜನರೇ ಈಗ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ. ಕೆಲವು ಕಡೆ ಜನರೇ ಸೇರಿ ಗುಂಡಿಗಳ ಮುಚ್ಚುವ ಕಾರ್ಯ ಮಾಡುತ್ತಿರುವುದನ್ನು ನಾವು ನೋಡಿರುತ್ತೇವೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ರಸ್ತೆ ಗುಂಡಿಗಳನ್ನು ಸ್ವಲ್ಪ ತಮಾಷೆಯಾಗಿ ಪ್ರತಿಭಟಿಸುವ ಮೂಲಕ ಜನರಿಗೆ ಹಾಗೂ ಜನಪ್ರತಿನಿಧಿಗಳಿಗೆ ತೋರಿಸಲು ಉಂದಾಗಿದ್ದಾನೆ.
ಆನ್ಲೈನ್ ಅಪ್ಲಿಕೇಷನ್ ರಚಿಸಿ ಅದರಲ್ಲಿ ರಸ್ತೆ ಗುಂಡಿಗಳಿಗೆ ರೇಟಿಂಗ್ ನೀಡುವ ವ್ಯವಸ್ಥೆ ಜಾರಿ ಮಾಡಿದ್ದಾನೆ. ಫೈಲ್ ಎಂಬ ಸಂಸ್ಥೆಯ ಸಹ ಸಂಸ್ಥಾಪಕ ಮತ್ತು ಸಿಟಿಒ ಆಗಿರುವ ಶಿವರಾಮ ಕೃಷ್ಣನ್ ನಾರಾಯಣ್ ಎಂಬಾತ ಈ ರೀತಿ ರಸ್ತೆ ಗುಂಡಿಗಳಿಗೆ ರೇಟಿಂಗ್ ನೀಡುವ ಅಪ್ಲಿಕೇಷನ್ ಹೊರತಂದಿದ್ದಾರೆ. ಅವರು ಎಕ್ಸ್ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ನಾವು ಗುಂಡಿಗಳನ್ನು ರೇಟ್ ಮಾಡಲು ಮತ್ತು ಪರಿಶೀಲಿಸಲು ಅಪ್ಲಿಕೇಶನ್ ಅನ್ನು ನಿರ್ಮಿಸಲು ಯೋಜಿಸುತ್ತಿದ್ದೇವೆ. ನೀವು ಈ ಗುಂಡಿಗಳ ಫೋಟೋ ತೆಗೆದು ಹಾಕಿ ಅದಕ್ಕೆ ರೇಟಿಂಗ್ ನೀಡಬಹುದು. ಇದು ಬೆಂಗಳೂರು ಮಾತ್ರವಲ್ಲ ಇಡೀ ದೇಶದ ಯಾವುದೇ ಮೂಲೆಯ ರಸ್ತೆ ಗುಂಡಿಯನ್ನು ಅಪ್ಲೋಡ್ ಮಾಡಬಹುದು, ಹಾಗೆ ಅದಕ್ಕೊಂದು ಐಡಿಯನ್ನು ನೀಡಬೇಕು. ದೆಹಲಿ ಆಗಿದ್ದರೆ D110001_P00001 ಎಂದು ಮುಂಬೈ ಆಗಿದ್ದರೆ M400001_G000001 ಎಂದು ಹಾಗೆ ಬೆಂಗಳೂರಿನ ಗುಂಡಿಗಳನ್ನು ಕೂಡ ಹಂಚಿಕೊಳ್ಳಬಹುದು.
ಈ ರೀತಿ ಮಾಡುವುದರಿಂದ ಆ ಗುಂಡಿ ಎಷ್ಟು ವರ್ಷಗಳಿಂದ ಹಾಗೆಯೇ ಇದೆ. ಅದನ್ನು ರಿಪೇರಿ ಮಾಡಲಾಗಿದೆಯೇ? ಮತ್ತೆ ಅಲ್ಲಿಯೇ ಹೊಸದಾಗಿ ಗುಂಡಿ ಬಿದ್ದಿದೆಯಾ ಎಂಬುದನ್ನು ಪತ್ತೆ ಮಾಡಬಹುದಂತೆ. ಈ ಐಡಿಯಾ ನೋಡಿದ ಮಂದಿ ಅಚ್ಚರಿಯ ಜೊತೆಗೆ ನಗೆಗಡಲಲ್ಲಿ ಮುಳುಗಿದ್ದಾರೆ. ಜನರಿಗೆ ಎಷ್ಟೊಂದು ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲು ರಸ್ತೆ ಗುಂಡಿಗೆ ಅಪ್ಲಿಕೇಷನ್ ಮಾಡುವ ಅನಿವಾರ್ಯತೆ ಏನಿತ್ತು ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ನೀವು ಇದೇ ಬುದ್ದಿವಂತಿಕೆಯನ್ನು ಜನರಿಗೆ ಸಹಾಯವಾಗುವ ರೀತಿ ಬಳಸಬಹುದಿತ್ತು ಎಂದು ಮತ್ತೊಬ್ಬರು ಬರೆದಿದ್ದಾರೆ.
ಇದು ನಿಜವಾಗಿಯೂ ಅದ್ಭುತ ಪರಿಕಲ್ಪನೆಯಾಗಿದೆ. ನಮ್ಮ ಅಧಿಕಾರಿಗಳು ಮಾಡಬೇಕಿದ್ದ ಕೆಲಸ ಇವರು ಮಾಡಿದ್ದಾರೆ. ಇನ್ನು ಮುಂದೆ ಗುಂಡಿಗಳ ಮಾಹಿತಿ ಆನ್ಲೈನ್ನಲ್ಲಿ ನೋಡಬಹುದು ಎಂದು ಮತ್ತೊಬ್ಬರು ಬರೆದಿದ್ದಾರೆ.



Click it and Unblock the Notifications