Latest Updates
-
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ!
ರಸ್ತೆ ಗುಂಡಿಗೂ ರೇಟಿಂಗ್ ನೀಡಲು ಅಪ್ಲಿಕೇಷನ್..! ಬೆಂಗಳೂರು ವ್ಯಕ್ತಿಯ ಹೊಸ ಅನ್ವೇಷಣೆ!
ಭಾರತದ ಯಾವುದೇ ರಾಜ್ಯಕ್ಕೆ ನೀವು ಹೋದರು ಅಲ್ಲಿ ರಸ್ತೆಗಳ ಪರಿಸ್ಥಿತಿ ಒಂದೇ ಎನ್ನಬಹುದು. ಹೊಂಡ ಗುಂಡಿಗಳು ಇಲ್ಲದ ರಸ್ತೆಗಳನ್ನು ನೋಡದೆ ಇರುವುದು ಬಲು ಅಪರೂಪ. ಏಕೆಂದರೆ ಭಾರತದ ಹಲವು ಕಡೆ ರಸ್ತೆಗಳ ಪರಿಸ್ಥಿತಿ ಎಷ್ಟು ಕೆಟ್ಟದಾಗಿರುತ್ತೆ ಅಂದ್ರೆ ಗುಂಡಿಗಳ ಬಿಟ್ಟು ಬೇರೇನು ಕಾಣಿಸುವುದಿಲ್ಲ. ಹಾಗೆ ದಶಕಗಳು ಕಳೆದರು ಆ ರಸ್ತೆ ರಿಪೇರಿ ಆಗುವುದೇ ಇಲ್ಲ.
ಇದಕ್ಕೆ ಬೆಂಗಳೂರು ಕೂಡ ಹೊರತಾಗಿಲ್ಲ. ಬೆಂಗಳೂರು ವಿಚಾರಗಳು ಬಂದಾಗಲೆಲ್ಲ ಹೊಂಡ ಗುಂಡಿಗಳು ಸುದ್ದಿಯಾಗುತ್ತವೆ. ಬೆಂಗಳೂರಿನ ಹಲವು ಕಡೆಗಳಲ್ಲಿ ರಸ್ತೆ ಗುಂಡಿಗಳು ಬಾಯ್ತೆರೆದು ಅಪಾಯಗಳಿಗೆ ದಾರಿ ಮಾಡಿಕೊಡುತ್ತಿರುತ್ತವೆ. ಹತ್ತಾರು ಅಪಘಾತಗಳು, ಪ್ರಾಣ ಹಾನಿಗೂ ಕೂಡ ಈ ರಸ್ತೆ ಗುಂಡಿಗಳು ಕಾರಣವಾಗುತ್ತಿರುತ್ತವೆ. ಹೀಗಾಗಿ ಗುಂಡಿಗಳಿರುವ ರಸ್ತೆಯಲ್ಲಿ ಪ್ರಯಾಣ ಅಂದ್ರೆ ಜೀವ ಕೈಯಲ್ಲಿ ಹಿಡಿದು ಸಾಗಬೇಕಾದ ಪರಿಸ್ಥಿತಿ ಇದೆ.

ಬಿಬಿಎಂಪಿ ಹಲವು ವರ್ಷಗಳಿಂದ ರಸ್ತೆ ಗುಂಡಿ ಮುಚ್ಚುವ ಕುರಿತು ಹೊಸ ಯೋಜನೆಗಳು ನೂರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಲೇ ಇದೆ. ಹಾಗೆ ಹೈಕೋರ್ಟ್ ಈ ಗುಂಡಿಗಳ ಮುಚ್ಚಲು ಹೊಸ ಗಡುವು ನೀಡುತ್ತಲೇ ಇದೆ. ಇಷ್ಟಾದರೂ ಗುಂಡಿಗಳಿಂದ ರಸ್ತೆಗಳು ಮುಕ್ತಿ ಪಡದೇ ಇಲ್ಲ. ಈಗಲೂ ವಾಹನ ಸವಾರರು ಶಾಪ ಹಾಕಿಕೊಂಡು ಚಲಿಸಬೇಕಾಗಿದೆ.
ಆದ್ರೆ ರಸ್ತೆ ಗುಂಡಿಗಳ ಕುರಿತು ಜನರೇ ಈಗ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ. ಕೆಲವು ಕಡೆ ಜನರೇ ಸೇರಿ ಗುಂಡಿಗಳ ಮುಚ್ಚುವ ಕಾರ್ಯ ಮಾಡುತ್ತಿರುವುದನ್ನು ನಾವು ನೋಡಿರುತ್ತೇವೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ರಸ್ತೆ ಗುಂಡಿಗಳನ್ನು ಸ್ವಲ್ಪ ತಮಾಷೆಯಾಗಿ ಪ್ರತಿಭಟಿಸುವ ಮೂಲಕ ಜನರಿಗೆ ಹಾಗೂ ಜನಪ್ರತಿನಿಧಿಗಳಿಗೆ ತೋರಿಸಲು ಉಂದಾಗಿದ್ದಾನೆ.
ಆನ್ಲೈನ್ ಅಪ್ಲಿಕೇಷನ್ ರಚಿಸಿ ಅದರಲ್ಲಿ ರಸ್ತೆ ಗುಂಡಿಗಳಿಗೆ ರೇಟಿಂಗ್ ನೀಡುವ ವ್ಯವಸ್ಥೆ ಜಾರಿ ಮಾಡಿದ್ದಾನೆ. ಫೈಲ್ ಎಂಬ ಸಂಸ್ಥೆಯ ಸಹ ಸಂಸ್ಥಾಪಕ ಮತ್ತು ಸಿಟಿಒ ಆಗಿರುವ ಶಿವರಾಮ ಕೃಷ್ಣನ್ ನಾರಾಯಣ್ ಎಂಬಾತ ಈ ರೀತಿ ರಸ್ತೆ ಗುಂಡಿಗಳಿಗೆ ರೇಟಿಂಗ್ ನೀಡುವ ಅಪ್ಲಿಕೇಷನ್ ಹೊರತಂದಿದ್ದಾರೆ. ಅವರು ಎಕ್ಸ್ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ನಾವು ಗುಂಡಿಗಳನ್ನು ರೇಟ್ ಮಾಡಲು ಮತ್ತು ಪರಿಶೀಲಿಸಲು ಅಪ್ಲಿಕೇಶನ್ ಅನ್ನು ನಿರ್ಮಿಸಲು ಯೋಜಿಸುತ್ತಿದ್ದೇವೆ. ನೀವು ಈ ಗುಂಡಿಗಳ ಫೋಟೋ ತೆಗೆದು ಹಾಕಿ ಅದಕ್ಕೆ ರೇಟಿಂಗ್ ನೀಡಬಹುದು. ಇದು ಬೆಂಗಳೂರು ಮಾತ್ರವಲ್ಲ ಇಡೀ ದೇಶದ ಯಾವುದೇ ಮೂಲೆಯ ರಸ್ತೆ ಗುಂಡಿಯನ್ನು ಅಪ್ಲೋಡ್ ಮಾಡಬಹುದು, ಹಾಗೆ ಅದಕ್ಕೊಂದು ಐಡಿಯನ್ನು ನೀಡಬೇಕು. ದೆಹಲಿ ಆಗಿದ್ದರೆ D110001_P00001 ಎಂದು ಮುಂಬೈ ಆಗಿದ್ದರೆ M400001_G000001 ಎಂದು ಹಾಗೆ ಬೆಂಗಳೂರಿನ ಗುಂಡಿಗಳನ್ನು ಕೂಡ ಹಂಚಿಕೊಳ್ಳಬಹುದು.
ಈ ರೀತಿ ಮಾಡುವುದರಿಂದ ಆ ಗುಂಡಿ ಎಷ್ಟು ವರ್ಷಗಳಿಂದ ಹಾಗೆಯೇ ಇದೆ. ಅದನ್ನು ರಿಪೇರಿ ಮಾಡಲಾಗಿದೆಯೇ? ಮತ್ತೆ ಅಲ್ಲಿಯೇ ಹೊಸದಾಗಿ ಗುಂಡಿ ಬಿದ್ದಿದೆಯಾ ಎಂಬುದನ್ನು ಪತ್ತೆ ಮಾಡಬಹುದಂತೆ. ಈ ಐಡಿಯಾ ನೋಡಿದ ಮಂದಿ ಅಚ್ಚರಿಯ ಜೊತೆಗೆ ನಗೆಗಡಲಲ್ಲಿ ಮುಳುಗಿದ್ದಾರೆ. ಜನರಿಗೆ ಎಷ್ಟೊಂದು ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲು ರಸ್ತೆ ಗುಂಡಿಗೆ ಅಪ್ಲಿಕೇಷನ್ ಮಾಡುವ ಅನಿವಾರ್ಯತೆ ಏನಿತ್ತು ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ನೀವು ಇದೇ ಬುದ್ದಿವಂತಿಕೆಯನ್ನು ಜನರಿಗೆ ಸಹಾಯವಾಗುವ ರೀತಿ ಬಳಸಬಹುದಿತ್ತು ಎಂದು ಮತ್ತೊಬ್ಬರು ಬರೆದಿದ್ದಾರೆ.
ಇದು ನಿಜವಾಗಿಯೂ ಅದ್ಭುತ ಪರಿಕಲ್ಪನೆಯಾಗಿದೆ. ನಮ್ಮ ಅಧಿಕಾರಿಗಳು ಮಾಡಬೇಕಿದ್ದ ಕೆಲಸ ಇವರು ಮಾಡಿದ್ದಾರೆ. ಇನ್ನು ಮುಂದೆ ಗುಂಡಿಗಳ ಮಾಹಿತಿ ಆನ್ಲೈನ್ನಲ್ಲಿ ನೋಡಬಹುದು ಎಂದು ಮತ್ತೊಬ್ಬರು ಬರೆದಿದ್ದಾರೆ.



Click it and Unblock the Notifications











