Latest Updates
-
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ!
ಬಿಗ್ಬಾಸ್ನಿಂದ ಹೊರ ಬರಲು ಇದೇ ನಿಜವಾದ ಕಾರಣ ಎಂದು ತಿಳಿಸಿದ ಗೋಲ್ಡ್ ಸುರೇಶ್
ಬಿಗ್ಬಾಸ್ 11ರ ಸ್ಪರ್ಧಿಗಳಲ್ಲಿ ಪ್ರಮುಖ ಸ್ಪರ್ಧಿಗಳಾಗಿ ಗುರುತಿಸಿಕೊಂಡವರಲ್ಲೊಬ್ಬರು ಗೋಲ್ಡ್ ಸುರೇಶ್. ತಮ್ಮದೇ ವಿಭಿನ್ನ ಶೈಲಿಯ ಆಟದ ಮೂಲಕ ಗಮನ ಸೆಳೆದಿದ್ದರು. ಎಷ್ಟೋ ಬಾರಿ ನಾಮಿನೇಷನ್ಗೆ ಬಂದಿದ್ದರೂ ಎಲಿಮಿನೇಷನ್ನಿಂದ ಪಾರಾಗಿದ್ದರು, ಇದು ಗೋಲ್ಡ್ ಸುರೇಶ್ ಅವರಿಗೆ ವೀಕ್ಷಕರ ಬೆಂಬಲವೂ ಸಿಕ್ಕಿದೆ ಎಂಬುವುದಕ್ಕೆ ಸಾಕ್ಷಿಯಾಗಿತ್ತು.

ಮನೆಯೊಳಗಡೆ ಕುತಂತ್ರ ಮಾಡುತ್ತಾರೆ ಎಂದು ಹೇಳಿಸಿಕೊಂಡಿದ್ದರೂ ಅದೇ ಮನೆಯವರಿಂದ ಉತ್ತಮ ಕೂಡ ಗಳಿಸಿದ್ದರು, ಒಟ್ಟಿನಲ್ಲಿ ಬಿಗ್ಬಾಸ್ ಆಟವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾಗ ತುರ್ತು ಪರಿಸ್ಥಿತಿಯಿಂದಾಗಿ ಗೋಲ್ಡ್ ಸುರೇಶ್ ಬಿಗ್ಬಾಸ್ ಮನೆಯಿಂದ ಹೊರಡಬೇಕಾಗಿದೆ ಎಂದು ಬಿಗ್ಬಾಸ್ ತಿಳಿಸಿದಾಗ ಬಿಗ್ಬಾಸ್ ಮನೆಯವರಿಗೆ ಶಾಕ್, ಗೋಲ್ಡ್ ಸುರೇಶ್ಗೂ ಹೊರಗಡೆ ಏನಾಯ್ತಪ್ಪಾ ಎಂಬ ಆತಂಕ ಉಂಟಾಗಿತ್ತು, ಹೀಗೆ ಅನಿವಾರ್ಯ ಕಾರಣದಿಂದ ಬಿಗ್ಬಾಸ್ನಿಂದ ಹೊರಬಂದ ಗೋಲ್ಡ್ ಸುರೇಶ್ ಯಾವ ಕಾರಣಕ್ಕೆ ಹೊರ ಬಂದಿದ್ದಾರೆ ಎಂದು ಬಿಗ್ಬಾಸ್ ಹೇಳಿರಲಿಲ್ಲ, ಗೋಲ್ಡ್ ಸುರೇಶ್ ಕೂಡ ಹೇಳಿರಲಿಲ್ಲ, ಹೀಗಾಗಿ ನಾನಾ ಕಾರಣಗಳ ಊಹಾ ಪೋಹಾ ಹರಡಲಾರಂಭಿಸಿತು.
ಬಿಗ್ಬಾಸ್ ಮನೆಯಿಂದ ಹೊರ ಬರಲು ಕಾರಣವೇನು ಎಂಬುವುದನ್ನು ಸ್ವತಃ ತಿಳಿಸಿದ ಗೋಲ್ಡ್ ಸುರೇಶ್
ಬಿಗ್ಬಾಸ್ ಮನೆಯಿಂದ ಹೊರ ಬಂದ ಮೇಲೆ ಗೋಲ್ಡ್ ಸುರೇಶ್ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ, ಅವರ ತಂದೆಗೆ ಹುಷಾರಿಲ್ಲ ಎಂಬ ವದಂತಿ ಕೂಡ ಹಬ್ಬಿತ್ತು, ಅದಕ್ಕೆ ಅವರ ತಂದೆ ನಾನು ಚೆನ್ನಾಗಿದ್ದೇನೆ ಎಂದು ಹೇಳುವ ಮೂಲಕ ಆ ಊಹಾಪೋಹಾಗಳಿಗೆ ತೆರೆ ಎಳೆದರು. ಅದಾದ ಬಳಿಕ ಅವರು ಸಿಕ್ಕಾಪಟ್ಟೆ ಸಾಲ ಮಾಡಿದ್ದಾರೆ ಎಂಬ ರೂಮರ್ ವೇಗವಾಗಿ ಹರಡಿತು. ಇದೀಗ ಲೈವ್ಗೆ ಬಂದ ಗೋಲ್ಡ್ ಸುರೇಶ್ ನಾನು ಆರ್ಥಿಕ ಕಾರಣಗಳಿಂದಾಗಿ ಮನೆಯಿಂದ ಹೊರಬಂದೆ ಎಂಬುವುದನ್ನು ಸ್ಪಷ್ಟಪಡಿಸಿದ್ದು ಆದರೆ ಎಲ್ಲರೂ ಅಂದುಕೊಂಡಂತೆ ಸಾಲದ ಕಾರಣದಿಂದ ಅಲ್ಲ ಎಂಬುವುದನ್ನು ಸ್ಪಷ್ಟ ಪಡಿಸಿದ್ದಾರೆ.
ಗೋಲ್ಡ್ ಸುರೇಶ್ ಬ್ಯುಸ್ನೆಸ್ ವ್ಯಕ್ತಿ ಎಂಬುವುದು ಗೊತ್ತಿರುವ ವಿಷಯ, ಅವರ ಬ್ಯುಸ್ನೆಸ್ ಅವರು ನಡೆಸಿಕೊಂಡು ಹೋಗುತ್ತಿದ್ದರು, ಅವರಿಗೆ ಬಿಗ್ಬಾಸ್ ಆಫರ್ ಬಂದಾಗ ಆ ಬ್ಯುಸ್ನೆಸ್ ನಿಭಾಯಿಸಲು ಬೇರೆಯವರಿಗೆ ಹೇಳಿ ಹೋಗಿರುತ್ತಾರೆ, ಆ ವ್ಯಕ್ತಿಗೆ ಅದನ್ನು ಸರಿಯಾಗಿ ನಿಭಾಯಿಸಿಕೊಂಡು ಹೋಗಲು ಸಾಧ್ಯವಾಗದೇ ಇದ್ದಾಗ, ಇದರಿಂದ ತುಂಬಾನೇ ಆರ್ಥಿಕ ಹೊಡೆತ ಬೀಳುತ್ತದೆ ಎಂದು ಮನಗಂಡ ಅವರ ಪತ್ನಿ ಬಿಗ್ಬಾಸ್ ಟೀಂಗೆ ಹೇಳಿ ಮನೆಯಿಂದ ಹೊರಗಡೆ ಕರೆಸಿಕೊಂಡಿದ್ದಾರೆ.
ಬಿಗ್ಬಾಸ್ ಆಟಕ್ಕಿಂತ ತಾವು ಬೆಳೆಸಿದ ಸಾಮ್ರಾಜ್ಯ ಉಳಿಸಿಕೊಳ್ಳುವುದು ಮುಖ್ಯವಾಗಿತ್ತು
ಬಿಗ್ಬಾಸ್ ಎಂಬುವುದು ಆಟ, ಆದರೆ ಅದುವೇ ಜೀವನವಲ್ಲ, ಆದರೆ ಗೋಲ್ಡ್ ಸುರೇಶ್ ಅವರು ಈ ಮಟ್ಟಕ್ಕೆ ಬೆಳೆಯಲು ಕಾರಣ ಅವರ ಶ್ರಮ, ಬುದ್ಧಿವಂತಿಕೆ, ವ್ಯಾಪಾರ ತಂತ್ರಗಾರಿಕೆ. ಬಿಗ್ಬಾಸ್ಗೆ ಗೋಲ್ಡ್ ಸುರೇಶ್ ಕೆಜಿಗಟ್ಟಲೆ ಚಿನ್ನ ಹಾಕಿ ಬಂದಾಗ ಅವರ ಅಪ್ಪ ತುಂಬಾ ಆಸ್ತಿಮಾಡಿರಬಹುದು ಎಂದು ಅಂದುಕೊಂಡಿದ್ದರು, ಆದರೆ ನಂತರ ಅವರೇ ಅವರ ಕತೆ ಹೇಳಿದಾಗ ಕ ದಶಕದ ಹಿಂದೆ ಖಾಲಿ ಹೊಟ್ಟೆಯಲ್ಲಿ ಮೆಜೆಸ್ಟಿಕ್ನಲ್ಲಿ ಕಳೆದ ವ್ಯಕ್ತಿ ಇಂದು ಕೆಜಿಗಟ್ಟಲೆ ಚಿನ್ನ ಹಾಕಿಕೊಳ್ಳುವಷ್ಟು ದೊಡ್ಡ ಮಟ್ಟಿಗೆ ಬೆಳೆದಿದ್ದಾರೆ.
ಬ್ಯುಸ್ನೆಸ್ ಎಂಬುವುದು ಎಲ್ಲರೂ ಮಾಡಕ್ಕಾಗಲ್ಲ, ಕೆಲವರಿಗಷ್ಟೇ ಬ್ಯುಸ್ನೆಸ್ ಹೇಗೆ ಬೆಳೆಸಿಕೊಂಡು ಹೋಗುವುದು ಎಂಬ ತಂತ್ರಗಾರಿಕೆ ಗೊತ್ತಿರುತ್ತದೆ, ಇಲ್ಲದಿದ್ದರೆ ಎಲ್ಲರೂ ಬ್ಯುಸ್ನೆಸ್ ಮಾಡ್ತಾ ಇದ್ದರು ಅಲ್ವಾ? ಅವರ ನಡೆಸುತ್ತಿರು ಬ್ಯುಸಸ್ನೆಸ್ ಬೇರೆಯವರಿಗೆ ನಿಭಾಯಿಸಲು ಸಾಧ್ಯವಾಗುತ್ತಿಲ್ಲ, ಇವರು ಬರದಿದ್ದರೆ ತುಂಬಾನೇ ಗೊಂಲಗಳು ಉಂಟಾಗುತ್ತಿತ್ತು ಈ ಕಾರಣಕ್ಕೆ ಬಿಗ್ಬಾಸ್ ಮನೆಯಿಂದ ಹೊರ ಬಂದಿದ್ದಾರೆ.
ಬಿಗ್ಬಾಸ್ನಲ್ಲಿ ಫಿನಾಲೆಯವರೆಗೆ ಇರಲು ಸಾಧ್ಯವಾಗದೆ ಇದ್ದರೂ ಈ ಶೋ ಮೂಲಕ ಕರ್ನಾಟಕದಲ್ಲಿ ಗುರುತಿಸಿಕೊಳ್ಳುವಂತಾಗಿದೆ....



Click it and Unblock the Notifications