Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
'ಡೇ ಜೀರೋ' ಕಡೆ ಸಾಗುತ್ತಾ ಬೆಂಗಳೂರು..! ಇದು ಕಾಂಕ್ರೀಟ್ ಬರಡು ಭೂಮಿ ಬಿಕ್ಕಟ್ಟು..!
ಬೆಂಗಳೂರಲ್ಲಿ ಟ್ರಾಫಿಕ್ ಸಮಸ್ಯೆಯ ಜೊತೆಗೆ ಈಗ ನೀರಿನ ಸಮಸ್ಯೆ ತಲೆನೋವಾಗಿ ಪರಿಣಮಿಸಿದೆ. ದಿನಬಳಕೆ ಕೆಲಸಕ್ಕೆ ಮಾತ್ರವಲ್ಲ ಕುಡಿಯಲು ಸಹ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಕಡೆಗಳಲ್ಲಿ ಟ್ಯಾಂಕರ್ ನೀರಿಗೆ ಸಾವಿರಾರು ರೂಪಾಯಿ ಹಣ ನೀಡಬೇಕಾದ ಪರಿಸ್ಥಿತಿ ಬಂದೊದಗಿದೆ. ಸದ್ಯ ಬೆಂಗಳೂರಿಗರು ಮಳೆಯ ನಿರೀಕ್ಷೆಯಲ್ಲಿದ್ದಾರೆ.
ಆದರೆ ಬೆಂಗಳೂರಿಗೆ ದಿನವೊಂದಕ್ಕೆ ಎಷ್ಟು ಲೀಟರ್ ನೀರಿನ ಅಗತ್ಯವಿದೆ ಎಂದು ತಿಳಿದರೆ ನಿಮಗೆ ನಿಜಕ್ಕೂ ಅಚ್ಚರಿಯಾಗುತ್ತೆ. ಯಾಕಂದ್ರೆ ಬೆಂಗಳೂರಲ್ಲಿ ಒಂದು ದಿನ ಬಳಕೆಯಾಗುವ ನೀರಿನ ಪ್ರಮಾಣ ರಾಜ್ಯದ ಕೆಲವು ಹಳ್ಳಿ, ಗ್ರಾಮಗಳಿಗೆ ವರ್ಷಗಳಿಗೆ ಸಾಕಾಗುತ್ತದೆ. ಹೌದು ಬೆಂಗಳೂರಲ್ಲಿ ಜನಸಂಖ್ಯೆ ಮಿತಿಮೀರಿರುವ ಪರಿಣಾಮ ನಿತ್ಯ ಸಾವಿರಾರು ಲೀಟರ್ ನೀರು ಅಗತ್ಯವಿದೆ.

ಬೆಂಗಳೂರು ಪ್ರಾಥಮಿಕವಾಗಿ ಎರಡು ಮೂಲಗಳಿಂದ ನೀರು ಪಡೆಯುತ್ತದೆ. ಒಂದು ಕಾವೇರಿ ನದಿ ನೀರು ಮತ್ತೊಂದು ಬೋರ್ವೆಲ್ ನೀರು. ಕಾವೇರಿ ನೀರಿನ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶದಂತೆ ತಮಿಳುನಾಡಿಗೆ ನೀರು ಹರಿಸಿದ್ದ ಕಾರಣ ಜಲಾಶಯದಲ್ಲಿ ನೀರಿಲ್ಲದೆ ಇರುವುದು ಬೆಂಗಳೂರಿಗೆ ಅಗತ್ಯವಾಗಿ ಬೇಕಾದ ನೀರು ಸಿಗುತ್ತಿಲ್ಲ ಎಂಬುದು ತಿಳಿದಿರುವ ಸಂಗತಿ. ಆದರೆ ಬೋರ್ವೆಲ್ ವಾಟರ್ ಸಹ ಈ ಬಾರಿ ಕುಸಿತ ಕಂಡಿರುವುದು ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲು ಕಾರಣವಾಗಿದೆ.
ಬೆಂಗಳೂರಿಗೆ ಪ್ರತಿದಿನ 2,600-2,800 ಮಿಲಿಯನ್ ಲೀಟರ್ ನೀರು ಬೇಕಾಗುತ್ತದೆ ಮತ್ತು ಪ್ರಸ್ತುತ ಪೂರೈಕೆಯು ಅಗತ್ಯಕ್ಕಿಂತ ಅರ್ಧದಷ್ಟು ಇದೆ ಎಂದು ತಿಳಿದುಬಂದಿದೆ.
'ಡೇ ಜೀರೋ' ಕಡೆ ಸಾಗುತ್ತಾ ಬೆಂಗಳೂರು..?
ಬೆಂಗಳೂರು ಮಾತ್ರ ನೀರಿನ ಸಮಸ್ಯೆಯಿಂದ ಅಲುಗಾಡುತ್ತಿರುವುದಲ್ಲ. ಇದಕ್ಕೂ ಮೊದಲು ಸೌತ್ ಆಫ್ರಿಕಾದ ಕ್ಯಾಪಿಟಲ್ ಕೇಪ್ ಟೌನ್ ಸಹ ಈ ರೀತಿ ನೀರಿನ ಬವಣೆ ಎದುರಿಸಿತ್ತು. ಅಲ್ಲಿ ಕುಡಿಯುವ ನೀರಿಗಾಗಿ ಕಿ.ಮೀ ದೂರದ ಸಾಲು ನಿಲ್ಲಬೇಕಿತ್ತು. ಇದು ಒಂದೆರಡು ದಿನ ಮಾತ್ರವಲ್ಲ ತಿಂಗಳುಗಳ ಕಾಲ ಮುಂದುವರೆದಿತ್ತು.
ಕೇಪ್ಟೌನ್ ಸಿಟಿಗೂ ಬೆಂಗಳೂರಿನ ಇಂದಿನ ಪರಿಸ್ಥಿತಿಗೂ ತೀರ ಹೋಲಿಕೆ ಇದೆ. ಆದ್ರೆ ಅಲ್ಲಿ 2018ರಲ್ಲಿ 'ಡೇ ಜೀರೋ' ಎಂಬ ಬಿಕ್ಕಟ್ಟು ಸಹ ಹುಟ್ಟಿಕೊಂಡಿತ್ತು. ಹಾಗಾದರೆ ಏನಿದು ಡೇ ಜೀರೋ, ಬೆಂಗಳೂರಿಗೂ ಈ ರೀತಿ ಆಗುತ್ತಾ? ಡೇ ಜೀರೋ ಅಂದ್ರೆ ಎಲ್ಲಾ ಕೊಳಾಯಿಗಳು ಒಂದು ಹನಿ ನೀರಿಲ್ಲದೆ ಒಣಗುವುದು, ಅಂದ್ರೆ ಆ ಸಿಟಿಯಲ್ಲಿ ಎಲ್ಲಿಯೂ ನೀರಿಲ್ಲದ ಪರಿಸ್ಥಿತಿ. ಅಂದ್ರೆ ಅದೊಂದು ಕಾಂಕ್ರೀಟ್ ತುಂಬಿರುವ ಬರಡು ಭೂಮಿ.
ಕೇಪ್ ಟೌನ್ 2016ರಿಂದ 18ರ ವರೆಗೆ ಇದೇ ರೀತಿ ನೀರಿನ ಸಮಸ್ಯೆಗೆ ಒಳಗಾಗಿತ್ತು. ಅಲ್ಲಿ ಒಂದು ಹನಿ ನೀರಿರಲಿಲ್ಲ. ಬಹುತೇಕ ಎಲ್ಲಾ ನದಿಗಳು, ಬೋರ್ವೆಲ್ಗಳು ಬತ್ತಿ ಹೋಗಿದ್ದವು. ಸರ್ಕಾರ ಬೇರೆ ಕಡೆಗಳಿಂದ ಟ್ಯಾಂಕರ್ ನೀರು ತಂದು ಜನರಿಗೆ ನೀಡಬೇಕಿತ್ತು. ಅದಕ್ಕೂ ನೂರಾರು ನಿಯಮಗಳ ಹೇರಲಾಗಿತ್ತು.
ನಿಮಗೀಗ ಅರ್ಥವಾಗಿರಬಹುದು, ಬೆಂಗಳೂರಲ್ಲೂ ಇದೇ ರೀತಿ ದಿನಗಳಿಗೆ ಸಾಗುತ್ತಿದ್ದೇವೆ. ಡೇ ಜೀರೋ ಕ್ರೈಸಿಸ್ ಉಂಟಾದರೆ ಅದರಿಂದ ಹೊರಬರುವುದು ಕಷ್ಟ ಸಾಧ್ಯ. ಬೆಂಗಳೂರಲ್ಲೂ ಎಲ್ಲಾ ನೀರನ ಮೂಲಗಳು ಬರಿದಾಗುತ್ತಿವೆ. ಬೋರ್ವೆಲ್ ನೀರು ಸಹ ಬತ್ತಿ ಹೋಗುತ್ತಿವೆ. ಇದು ಆತಂಕ ಹೆಚ್ಚಾಗಲು ಕಾರಣವಾಗುದೆ.
ನೀರಿನ ಸಮಸ್ಯೆಗೆ ಪರಿಹಾರವೇನು?
ನೀರಿನ ಸಮಸ್ಯೆಗೆ ಒಂದೇ ಪರಿಹಾರ ಅದು ಮಳೆ. ಕೇಪ್ಟೌನ್ ನಗರ ಸಹ ಇಂತಹ ಸಮಸ್ಯೆ ಎದುರಿಸಿದಾಗ ಮಳೆ ಬಂದ ನಂತರವೇ ಸಹಜ ಸ್ಥಿತಿಗೆ ಮರಳಿತ್ತು. ಬೆಂಗಳೂರಿನಲ್ಲೂ ಸಹ ಮಳೆಯಾದರೆ ನೀರಿನ ಸಮಸ್ಯೆ ದೂರಾಗಲಿದೆ. ಆದರೆ ಸೂಕ್ತ ಸಮಯಕ್ಕೆ ಮಳೆಯಾಗದಿದ್ದರೆ ಬೆಂಗಳೂರು ಸೇರಿ ಇಡೀ ರಾಜ್ಯದಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಲಿದೆ.
ಇದನ್ನು ಹೊರತುಪಡಿಸಿ ನೀರಿನ ಬಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ನೀರಿದ್ದಾಗ ಎತ್ತೇಚ್ಚವಾಗಿ ಬಳಸುವುದು, ನೀರನ್ನು ಪೋಲು ಮಾಡುವುದು, ಅತಿಯಾದ ಬಳಕೆಗೆ ಕಡಿವಾಣ ಹಾಕಬೇಕಾದ ಸಮಯ ಈಗ ಬಂದೊದಗಿದೆ.



Click it and Unblock the Notifications