Latest Updates
-
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್!
'ಡೇ ಜೀರೋ' ಕಡೆ ಸಾಗುತ್ತಾ ಬೆಂಗಳೂರು..! ಇದು ಕಾಂಕ್ರೀಟ್ ಬರಡು ಭೂಮಿ ಬಿಕ್ಕಟ್ಟು..!
ಬೆಂಗಳೂರಲ್ಲಿ ಟ್ರಾಫಿಕ್ ಸಮಸ್ಯೆಯ ಜೊತೆಗೆ ಈಗ ನೀರಿನ ಸಮಸ್ಯೆ ತಲೆನೋವಾಗಿ ಪರಿಣಮಿಸಿದೆ. ದಿನಬಳಕೆ ಕೆಲಸಕ್ಕೆ ಮಾತ್ರವಲ್ಲ ಕುಡಿಯಲು ಸಹ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಕಡೆಗಳಲ್ಲಿ ಟ್ಯಾಂಕರ್ ನೀರಿಗೆ ಸಾವಿರಾರು ರೂಪಾಯಿ ಹಣ ನೀಡಬೇಕಾದ ಪರಿಸ್ಥಿತಿ ಬಂದೊದಗಿದೆ. ಸದ್ಯ ಬೆಂಗಳೂರಿಗರು ಮಳೆಯ ನಿರೀಕ್ಷೆಯಲ್ಲಿದ್ದಾರೆ.
ಆದರೆ ಬೆಂಗಳೂರಿಗೆ ದಿನವೊಂದಕ್ಕೆ ಎಷ್ಟು ಲೀಟರ್ ನೀರಿನ ಅಗತ್ಯವಿದೆ ಎಂದು ತಿಳಿದರೆ ನಿಮಗೆ ನಿಜಕ್ಕೂ ಅಚ್ಚರಿಯಾಗುತ್ತೆ. ಯಾಕಂದ್ರೆ ಬೆಂಗಳೂರಲ್ಲಿ ಒಂದು ದಿನ ಬಳಕೆಯಾಗುವ ನೀರಿನ ಪ್ರಮಾಣ ರಾಜ್ಯದ ಕೆಲವು ಹಳ್ಳಿ, ಗ್ರಾಮಗಳಿಗೆ ವರ್ಷಗಳಿಗೆ ಸಾಕಾಗುತ್ತದೆ. ಹೌದು ಬೆಂಗಳೂರಲ್ಲಿ ಜನಸಂಖ್ಯೆ ಮಿತಿಮೀರಿರುವ ಪರಿಣಾಮ ನಿತ್ಯ ಸಾವಿರಾರು ಲೀಟರ್ ನೀರು ಅಗತ್ಯವಿದೆ.

ಬೆಂಗಳೂರು ಪ್ರಾಥಮಿಕವಾಗಿ ಎರಡು ಮೂಲಗಳಿಂದ ನೀರು ಪಡೆಯುತ್ತದೆ. ಒಂದು ಕಾವೇರಿ ನದಿ ನೀರು ಮತ್ತೊಂದು ಬೋರ್ವೆಲ್ ನೀರು. ಕಾವೇರಿ ನೀರಿನ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶದಂತೆ ತಮಿಳುನಾಡಿಗೆ ನೀರು ಹರಿಸಿದ್ದ ಕಾರಣ ಜಲಾಶಯದಲ್ಲಿ ನೀರಿಲ್ಲದೆ ಇರುವುದು ಬೆಂಗಳೂರಿಗೆ ಅಗತ್ಯವಾಗಿ ಬೇಕಾದ ನೀರು ಸಿಗುತ್ತಿಲ್ಲ ಎಂಬುದು ತಿಳಿದಿರುವ ಸಂಗತಿ. ಆದರೆ ಬೋರ್ವೆಲ್ ವಾಟರ್ ಸಹ ಈ ಬಾರಿ ಕುಸಿತ ಕಂಡಿರುವುದು ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲು ಕಾರಣವಾಗಿದೆ.
ಬೆಂಗಳೂರಿಗೆ ಪ್ರತಿದಿನ 2,600-2,800 ಮಿಲಿಯನ್ ಲೀಟರ್ ನೀರು ಬೇಕಾಗುತ್ತದೆ ಮತ್ತು ಪ್ರಸ್ತುತ ಪೂರೈಕೆಯು ಅಗತ್ಯಕ್ಕಿಂತ ಅರ್ಧದಷ್ಟು ಇದೆ ಎಂದು ತಿಳಿದುಬಂದಿದೆ.
'ಡೇ ಜೀರೋ' ಕಡೆ ಸಾಗುತ್ತಾ ಬೆಂಗಳೂರು..?
ಬೆಂಗಳೂರು ಮಾತ್ರ ನೀರಿನ ಸಮಸ್ಯೆಯಿಂದ ಅಲುಗಾಡುತ್ತಿರುವುದಲ್ಲ. ಇದಕ್ಕೂ ಮೊದಲು ಸೌತ್ ಆಫ್ರಿಕಾದ ಕ್ಯಾಪಿಟಲ್ ಕೇಪ್ ಟೌನ್ ಸಹ ಈ ರೀತಿ ನೀರಿನ ಬವಣೆ ಎದುರಿಸಿತ್ತು. ಅಲ್ಲಿ ಕುಡಿಯುವ ನೀರಿಗಾಗಿ ಕಿ.ಮೀ ದೂರದ ಸಾಲು ನಿಲ್ಲಬೇಕಿತ್ತು. ಇದು ಒಂದೆರಡು ದಿನ ಮಾತ್ರವಲ್ಲ ತಿಂಗಳುಗಳ ಕಾಲ ಮುಂದುವರೆದಿತ್ತು.
ಕೇಪ್ಟೌನ್ ಸಿಟಿಗೂ ಬೆಂಗಳೂರಿನ ಇಂದಿನ ಪರಿಸ್ಥಿತಿಗೂ ತೀರ ಹೋಲಿಕೆ ಇದೆ. ಆದ್ರೆ ಅಲ್ಲಿ 2018ರಲ್ಲಿ 'ಡೇ ಜೀರೋ' ಎಂಬ ಬಿಕ್ಕಟ್ಟು ಸಹ ಹುಟ್ಟಿಕೊಂಡಿತ್ತು. ಹಾಗಾದರೆ ಏನಿದು ಡೇ ಜೀರೋ, ಬೆಂಗಳೂರಿಗೂ ಈ ರೀತಿ ಆಗುತ್ತಾ? ಡೇ ಜೀರೋ ಅಂದ್ರೆ ಎಲ್ಲಾ ಕೊಳಾಯಿಗಳು ಒಂದು ಹನಿ ನೀರಿಲ್ಲದೆ ಒಣಗುವುದು, ಅಂದ್ರೆ ಆ ಸಿಟಿಯಲ್ಲಿ ಎಲ್ಲಿಯೂ ನೀರಿಲ್ಲದ ಪರಿಸ್ಥಿತಿ. ಅಂದ್ರೆ ಅದೊಂದು ಕಾಂಕ್ರೀಟ್ ತುಂಬಿರುವ ಬರಡು ಭೂಮಿ.
ಕೇಪ್ ಟೌನ್ 2016ರಿಂದ 18ರ ವರೆಗೆ ಇದೇ ರೀತಿ ನೀರಿನ ಸಮಸ್ಯೆಗೆ ಒಳಗಾಗಿತ್ತು. ಅಲ್ಲಿ ಒಂದು ಹನಿ ನೀರಿರಲಿಲ್ಲ. ಬಹುತೇಕ ಎಲ್ಲಾ ನದಿಗಳು, ಬೋರ್ವೆಲ್ಗಳು ಬತ್ತಿ ಹೋಗಿದ್ದವು. ಸರ್ಕಾರ ಬೇರೆ ಕಡೆಗಳಿಂದ ಟ್ಯಾಂಕರ್ ನೀರು ತಂದು ಜನರಿಗೆ ನೀಡಬೇಕಿತ್ತು. ಅದಕ್ಕೂ ನೂರಾರು ನಿಯಮಗಳ ಹೇರಲಾಗಿತ್ತು.
ನಿಮಗೀಗ ಅರ್ಥವಾಗಿರಬಹುದು, ಬೆಂಗಳೂರಲ್ಲೂ ಇದೇ ರೀತಿ ದಿನಗಳಿಗೆ ಸಾಗುತ್ತಿದ್ದೇವೆ. ಡೇ ಜೀರೋ ಕ್ರೈಸಿಸ್ ಉಂಟಾದರೆ ಅದರಿಂದ ಹೊರಬರುವುದು ಕಷ್ಟ ಸಾಧ್ಯ. ಬೆಂಗಳೂರಲ್ಲೂ ಎಲ್ಲಾ ನೀರನ ಮೂಲಗಳು ಬರಿದಾಗುತ್ತಿವೆ. ಬೋರ್ವೆಲ್ ನೀರು ಸಹ ಬತ್ತಿ ಹೋಗುತ್ತಿವೆ. ಇದು ಆತಂಕ ಹೆಚ್ಚಾಗಲು ಕಾರಣವಾಗುದೆ.
ನೀರಿನ ಸಮಸ್ಯೆಗೆ ಪರಿಹಾರವೇನು?
ನೀರಿನ ಸಮಸ್ಯೆಗೆ ಒಂದೇ ಪರಿಹಾರ ಅದು ಮಳೆ. ಕೇಪ್ಟೌನ್ ನಗರ ಸಹ ಇಂತಹ ಸಮಸ್ಯೆ ಎದುರಿಸಿದಾಗ ಮಳೆ ಬಂದ ನಂತರವೇ ಸಹಜ ಸ್ಥಿತಿಗೆ ಮರಳಿತ್ತು. ಬೆಂಗಳೂರಿನಲ್ಲೂ ಸಹ ಮಳೆಯಾದರೆ ನೀರಿನ ಸಮಸ್ಯೆ ದೂರಾಗಲಿದೆ. ಆದರೆ ಸೂಕ್ತ ಸಮಯಕ್ಕೆ ಮಳೆಯಾಗದಿದ್ದರೆ ಬೆಂಗಳೂರು ಸೇರಿ ಇಡೀ ರಾಜ್ಯದಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಲಿದೆ.
ಇದನ್ನು ಹೊರತುಪಡಿಸಿ ನೀರಿನ ಬಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ನೀರಿದ್ದಾಗ ಎತ್ತೇಚ್ಚವಾಗಿ ಬಳಸುವುದು, ನೀರನ್ನು ಪೋಲು ಮಾಡುವುದು, ಅತಿಯಾದ ಬಳಕೆಗೆ ಕಡಿವಾಣ ಹಾಕಬೇಕಾದ ಸಮಯ ಈಗ ಬಂದೊದಗಿದೆ.



Click it and Unblock the Notifications