Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಾಳೆಹಣ್ಣು ನಿಷೇಧಿಸಿದ ರಾಜ್ಯದ ದೇವಾಲಯ..! ಕಾರಣ ಕೇಳಿದ್ರೆ ನಿಮಗೂ ಸರಿ ಎನಿಸುತ್ತೆ..!!
ಬಾಳೆಹಣ್ಣು ನಮ್ಮ ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮ. ನಿತ್ಯ ಒಂದು ಬಾಳೆಹಣ್ಣು ಸವಿಯುವುದು ದೇಹಕ್ಕೆ ಬೇಕಾದ ಅಗತ್ಯ ಪ್ರೋಟಿನ್ ಹಾಗೂ ಕ್ಯಾಲೋರಿ ನೀಡಲು ಕಾರಣವಾಗುತ್ತದೆ. ಹಾಗೆ ಹಿಂದೂ ನಂಬಿಕೆಯಲ್ಲಿ ಬಾಳೆಹಣ್ಣು ಬಹಳ ಶ್ರೇಷ್ಠ ಹಣ್ಣಾಗಿದೆ. ಏಕೆಂದರೆ ಯಾವುದೇ ರೀತಿಯ ಪೂಜೆ ಇದ್ದರೂ ಬಾಳೆಹಣ್ಣುಗಳಿಲ್ಲದೆ ಆ ಪೂಜೆ ಪೂರ್ಣ ಆಗುವುದಿಲ್ಲ.
ಹೀಗಾಗಿ ಎಲ್ಲಾ ಶುಭ ಕಾರ್ಯದಲ್ಲಿ ಬಾಳೆಹಣ್ಣು ಇದ್ದೇ ಇರುತ್ತೆ. ಅದರಲ್ಲು ದೇವಾಲಯಕ್ಕೆ ನಾವು ಹೋಗುವಾಗ ಹಣ್ಣು ಕಾಯಿಯ ಜೊತೆಗೆ ಬಾಳೆಹಣ್ಣು ತೆಗೆದುಕೊಂಡು ಹೋಗುವುದು ಸಾಮಾನ್ಯ. ಹಾಗೆ ಪೂಜೆ ಸಮಯದಲ್ಲಿ ಬಾಳೆಹಣ್ಣು ಇಟ್ಟು ಪೂಜೆ ಸಲ್ಲಿಸಿ ಬಳಿಕ ಅದನ್ನು ಪ್ರಸಾದವಾಗಿ ನೀಡುವುದು ಕೂಡ ನೋಡಬಹುದು.

ಆದ್ರೆ ಈಗ ರಾಜ್ಯದ ಒಂದು ದೇವಾಲಯ ಈ ಬಾಳೆಹಣ್ಣನ್ನೇ ನಿಷೇಧ ಮಾಡಿಬಿಟ್ಟಿದೆ. ನಿಮಗಿದು ಅಚ್ಚರಿ ತರಿಸಬಹುದು. ದೇವಾಲಯವೇ ಬಾಳೆಹಣ್ಣನ್ನು ನಿಷೇಧಿಸಲು ಕಾರಣವೇನು? ಎಂಬ ಪ್ರಶ್ನೆ ನಿಮ್ಮಲ್ಲೂ ಮೂಡಬಹುದು. ಅಚ್ಚರಿ ಎನಿಸಿದರು ಇದು ಸತ್ಯ, ಹಾಗೆ ಅದರ ಕಾರಣ ಕೇಳಿದ್ರೆ ನಿಮಗೂ ಸರಿ ಎನಿಸಬಹುದು.
ದೇವಾಯಗಳಿಗೆ ಬಾಳೆಹಣ್ಣು ತವರು ಭಕ್ತರು ಪೂಜೆಯ ಬಳಕ ಅದನ್ನು ದೇವಾಲಯದಲ್ಲಿತೇ ತಿನ್ನುತ್ತಾರೆ. ಇಲ್ಲವೆ ಅಲ್ಲಿರುವ ಕೋತಿಗಳಿಗೆ, ಹಸುಗಳಿಗೆ, ಆನೆಗೆ ನೀಡುವ ಕಾರ್ಯ ಮಾಡುತ್ತಾರೆ. ಇದು ಒಳ್ಳೆಯದು ಎಂದು ಕೆಲವರು ಹೇಳಬಹುದು, ಆದ್ರೆ ಇದರಿಂದ ಸಮಸ್ಯೆಗಳಿವೆ ಎಂಬುದು ನಿಮಗೆ ಗೊತ್ತಾ? ಇದೇ ಕಾರಣಕ್ಕೆ ಈ ದೇವಾಲಯ ಈಗ ಬಾಳೆಹಣ್ಣು ತರಬಾರದು ಎಂದು ಆದೇಶ ಹೊರಡಿಸಿದೆ.
ಹೌದು ಹಂಪಿಯ ಶಿವನ ದೇವಾಲಯ ಆಡಳಿತ ಮಂಡಳಿ ಈ ರೀತಿಯ ಆದೇಶ ಹೊರಡಿಸಿದೆ. ಇದಕ್ಕೆ ಕಾರಣವೂ ಇದೆ. 7ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಶಿವನ ದೇವಾಲಯಕ್ಕೆ ನಿತ್ಯ ಸಾವಿರಾರು ಮಂದಿ ಆಗಮಿಸುತ್ತಾರೆ. ಈ ದೇವಾಲಯದ ಪ್ರಮುಖ ಆಕರ್ಷಣೆ ಅಂದರೆ ಅಲ್ಲಿರುವ ಆನೆ.
ಈ ಆನೆ ನೋಡಲು ಬರುವವರು ಆನೆಗೆ ಬಾಳೆಹಣ್ಣು ತಿನ್ನಿಸಲು ಮುಂದೆ ಬೀಳುತ್ತಾರೆ, ಹಾಗೆ ಆನೆಗೆಂದು ತರವು ಬಾಳೆಹಣ್ಣಿನಲ್ಲಿ ಕೆಲವನ್ನು ಅವರೇ ತಿಂದು ಎಲ್ಲೆಂದರಲ್ಲಿ ಸಿಪ್ಪೆಯನ್ನು ಎಸೆಯುತ್ತಾರೆ ಎಂಬುದು ದೇವಾಲಯ ಆಡಳಿತ ಮಂಡಳಿತ ತಲೆನೋವಾಗಿತ್ತು. ಅಲ್ಲದೆ ಆನೆಗೆ ಬಾಳೆಹಣ್ಣು ನೀಡುವ ಭರದಲ್ಲಿ ಅಪಾಯಗಳ ತಂದುಕೊಳ್ಳುವುದು ಕೂಡ ನಡೆಯುತ್ತಿದೆ. ಇದಕ್ಕೆಲ್ಲ ಕಡಿವಾಣ ಹಾಕಲು ಬಾಳೆಹಣ್ಣು ತರದಂತೆ ಸೂಚಿಸಲಾಗಿದೆ.
ಆನೆ ಹಾಗೂ ಭಕ್ತರ ಹಿತದೃಷ್ಟಿಯಿಂದ ಬಾಳೆಹಣ್ಣಿಗೆ ನಿಷೇಧ ಹೇರಲು ನಿರ್ಧರಿಸಲಾಗಿದೆ ಎಂದು ವಿರೂಪಾಕ್ಷ ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ. 'ಭಕ್ತರು ಉತ್ಸಾಹದಿಂದ ಆನೆಗೆ ಅತಿಯಾಗಿ ಬಾಳೆಹಣ್ಣು ನೀಡುತ್ತಾರೆ. ಇದು ಅಲ್ಲಿನ ಸ್ಥಳವನ್ನು ಕೊಳಕು ಮಾಡುವ ಜೊತೆಗೆ ಆನೆಯ ಆರೋಗ್ಯಕ್ಕೂ ಹಾನಿಕಾರಕ. ಹಾಗೆ ಬಾಳೆಹಣ್ಣುಗಳ ತಂದಿರುವ ಪ್ಲಾಸ್ಟಿಕ್ ಚೀಲಗಳನ್ನು ಇಲ್ಲಿ ಬಿಟ್ಟು ತೆರಳುತ್ತಿದ್ದು ಅದನ್ನು ವಿಲೇವಾರಿ ಮಾಡುವುದು ದೊಡ್ಡ ಕೆಲಸ ಎಂದು ದತ್ತಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೇವಸ್ಥಾನದ ಈ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ಕೇಳಿಬಂದರೂ. ಇದೊಂದು ಮಾದರಿ ನಡೆಯಾಗಿದೆ ಎಂದು ಹಲವರು ಸ್ವಾಗತಿಸಿದ್ದಾರೆ. ದೇವಾಲಯದ ಪರಿಸರ, ಆನೆಯ ಆರೋಗ್ಯ ಹಾಗು ಭಕ್ತರ ಹಿತದೃಷ್ಟಿಯಿಂದ ಈ ನಿರ್ಧಾರ ಪ್ರಕಟಿಸಿರುವುದು ಉತ್ತಮ ನಡೆ ಎಂಬ ಪ್ರಶಂಸೆ ಕೂಡ ಕೇಳಿಬಂದಿದೆ.



Click it and Unblock the Notifications