Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಜಪಾನ್ ಬಾಬಾ ವಂಗಾ ಹೇಳಿದ್ದ ಭವಿಷ್ಯ ನಿಜವಾಯ್ತು..! ಒಂದು ದಿನ ಮುನ್ನವೇ ಸುಳಿವು ಬಂದಿತ್ತು!
ಅತೀಂದ್ರಿಯ ಶಕ್ತಿ ಹೊಂದಿರುವ ಬಾಬಾ ವಂಗಾ ನುಡಿಯುವ ಭವಿಷ್ಯ ಕುರಿತು ನೀವು ಕೇಳಿರಬಹುದು. ಆಕೆ ಮುಂದೆ ನಡೆಯುವ ಬಹುದೊಡ್ಡ ದುರಂತಗಳನ್ನು ಮೊದಲೇ ಭವಿಷ್ಯ ನುಡಿದ್ದಾಳೆ. ಸದ್ಯ ಈಗ ರಷ್ಯಾ ದ್ವೀಪದಲ್ಲಿ ಸಂಭವಿಸಿದ 8.8ರ ತೀವ್ರತೆಯ ಭೂಕಂಪನ ಉಂಟಾಗಿರುವ ಕುರಿತಾಗಿ ಹಾಗೆ ಜಪಾನ್ನ ಸುನಾಮಿ ಕುರಿತು ಮೊದಲೇ ನುಡಿದಿರುವುದು ಅಚ್ಚರಿ ಮೂಡಿಸಿದೆ.
ಬುಧವಾರ ಮುಂಜಾನೆ ರಷ್ಯಾದ ಕಮ್ಚಟ್ಕಾ ದ್ವೀಪದಲ್ಲಿ 8.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಇದು ಜಪಾನ್ನ ಉತ್ತರ ದ್ವೀಪ ಹೊಕ್ಕೈಡೊ ಮತ್ತು ರಷ್ಯಾದ ಕುರಿಲ್ ದ್ವೀಪಗಳ ಮೇಲೆ ಸುನಾಮಿ ಅಲೆಗಳ ಎಬ್ಬಿಸಿತು. ಈ ಘಟನೆಗಳು ಬಾಬಾ ವಂಗಾ ಹೇಳಿರುವ ಭವಿಷ್ಯವಾಣಿಗಳು ಮತ್ತೆ ಮುನ್ನಲೆಗೆ ಬರುವಂತೆ ಮಾಡಿದೆ.

ಹಾಗೆ ಜಪಾನ್ನ ರಿಯೋ ಟುಟ್ಸುಕಿ ಹೇಳಿರುವ ಭವಿಷ್ಯವಾಣಿ ಕೂಡ ನಿಜವಾಗಿದೆ. ಆಕೆ ತನ್ನ 'ದಿ ಫ್ಯೂಚರ್ ಐ ಸಾ' ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾಳೆ. ಆಕೆ ತನಗೆ ಬೀಳುವ ಕನಸುಗಳನ್ನು ಈ ಪುಸ್ತಕದಲ್ಲಿ ದಾಖಲು ಮಾಡಿದ್ದಾಳೆ. ಅದರ ಪ್ರಕಾರ ಆಕೆ ಜುಲೈ 5ರಂದು ಜಪಾನ್ನಲ್ಲಿ ದೊಡ್ಡ ನೈಸರ್ಗಿಕ ದುರಂತ ಸಂಭವಿಸಲಿದೆ ಎಂದಿದ್ದಳು.
ರಿಯೋ ಹೇಳಿದಂತೆ ಜುಲೈ 5ರಂದು ಈ ಘಟನೆ ನಡೆಯಲಿಲ್ಲ. ಆದ್ರೆ ಜುಲೈ 30ರಂದು ಸಂಭವಿಸಿದೆ. ಜುಲೈ 5ರಿಂದಲೂ ಈ ಕುರಿತಾದ ಭಯದ ವಾತಾವರಣ ಇದ್ದೇ ಇತ್ತು. ಆದ್ರೆ ಈಗ ಈ ಘಟನೆಯು ನಡೆದಿರುವುದು ಆಕೆಯ ಭವಿಷ್ಯವಾಣಿ ನಿಜವಾಗಿದ್ದರ ಸಂಕೇತವಾಗಿದೆ. ಹಾಗೆ ಆಕೆ ಈ ಮೊದಲು ನುಡಿದಿರುವ ಹಲವು ದುರಂತಗಳ ಕುರಿತ ಭವಿಷ್ಯ ಕೂಡ ನಿಜವಾಗಿವೆ.
ಆಕೆ ಹೇಳಿದ್ದ ಈ ಭವಿಷ್ಯ ಕೇಳಿ ಎಲ್ಲರಿಗೂ ಮೊದಲು ಶಾಕ್ ಆಗಿತ್ತು. ಜಪಾನ್ಗೆ ಪ್ರವಾಸಿಗರ ಬಿಸಿ ತಟ್ಟಿತ್ತು, ಹೋಟೆಲ್ಗಳು, ವಿಮಾನಗಳು ಖಾಲಿಯಾದವು. ಹಾಗೆ ಆಕೆಯ ಭವಿಷ್ಯವಾಣಿಯ ಕುರಿತು ತಜ್ಞರು ಅಲ್ಲಗೆಳೆದಿದ್ದರು. ಈ ಭವಿಷ್ಯವಾಣಿಗಳು ಯಾವುದು ನಿಜವಲ್ಲ ಇದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದಿದ್ದರು.
ಟೋಕಿಯೊ ವಿಶ್ವವಿದ್ಯಾಲಯದ ಪ್ರೊಫೆಸರ್ ಸೆಕಿಯಾ ನವೋಯಾ ಸೇರಿ ಹಲವು ತಜ್ಞರು ಅಂತಹ ಭವಿಷ್ಯವಾಣಿಗಳನ್ನು ಅವೈಜ್ಞಾನಿಕವೆಂದು, ಈ ದುರಂತಗಳನ್ನು ಮೊದಲೇ ಊಹಿಸಲು ಸಾಧ್ಯವಿಲ್ಲ ಎಂದಿದ್ದರು. ಇವು ಆಧಾರರಹಿತವಾಗಿದ್ದು, ಯಾರು ಕೂಡ ನಂಬದೆ ನಿರ್ಲಕ್ಷಿಸಬೇಕು ಎಂದಿದ್ದರು.
ಸುನಾಮಿಗೂ ಮುನ್ನ ದಡಕ್ಕೆ ಅಪ್ಪಳಿಸಿದ್ದವು ಬೆಲುಗಾ ಫಿಶ್
ರಷ್ಯಾದ ದ್ವೀಪದಲ್ಲಿ ಉಂಟಾದ ಭೂಕಂಪನವು ಇಡೀ ರಷ್ಯಾ ಹಾಗೆ ಜಪಾನ್ಗೆ ಆತಂಕ ಸೃಷ್ಟಿಸಿತ್ತು. ಆದ್ರೆ ಈ ಘಟನೆಗೂ ಮುನ್ನವೇ ಬೆಲುಗಾ ಫಿಶ್ಗಳ ಸಣ್ಣ ಗುಂಪು ಸಮುದ್ರದ ದಡದಲ್ಲಿ ಬಿದ್ದಿದ್ದವು. ಭೂಕಂಪನ ಸಂಭವಿಸುವ ಒಂದು ದಿನ ಮೊದಲು ಈ ಮೀನುಗಳು ದಡದಲ್ಲಿ ಪತ್ತೆಯಾದವು ಎಂದು ಹೇಳಲಾಗಿದೆ.
ಕೆಲವು ಮೀನುಗಾರರು ಈ ತಿಮಿಂಗಿಲ ಜಾತಿಯ ಬೆಲುಗಾ ಫಿಶ್ಗಳನ್ನು ಮರಳಿ ಸಮುದ್ರಕ್ಕೆ ಬಿಡಲು ಮುಂದಾಗುತ್ತಿರುವ ವಿಡಿಯೋಗಳು ಹರಿದಾಡಿವೆ ಇದು ರಷ್ಯಾದ ಕಡಲ ತೀರದಲ್ಲಿ ಸೆರೆಹಿಡಿದ ದೃಶ್ಯ ಅಂತಲೂ ಹೇಳಲಾಗಿದೆ. ಒಟ್ಟಾರೆ 5 ಬೆಲುಗಾ ಮರಿಗಳು ಕಡಲ ತೀರಕ್ಕೆ ಬಂದಿದ್ದವು, ಆದ್ರೆ ಯಾವ ಕಾರಣಕ್ಕೆ ಇವು ದಡಕ್ಕೆ ಬಂದಿವೆ ಎಂಬುದು ತಿಳಿದುಬಂದಿಲ್ಲ. ಆದ್ರೆ ಹಲವರು ಈ ಬೆಲುಗಾ ಮೀನಿಗಳು ಅಪಾಯದ ಮುನ್ಸೂಚನೆ ಸಿಕ್ಕಿರುವ ಕಾರಣದಿಂದಲೇ ಸಮುದ್ರ ದಡಕ್ಕೆ ಬಂದಿವೆ ಎಂಬ ಮಾತುಗಳು ಸಹ ಕೇಳಿಬಂದಿವೆ.
ಬಿಳಿ ತಿಮಿಂಗಿಲ ಎಂದೂ ಕರೆಯಲ್ಪಡುವ ಬೆಲುಗಾ, ಅದರ ಬಿಳಿಯ ಬಣ್ಣದ ಕಾರಣದಿಂದಾಗಿ ಇತರ ತಿಮಿಂಗಿಲಗಳಿಗಿಂತ ಭಿನ್ನವಾಗಿದೆ. ಬೆಲುಗಾ ಮರಿಗಳು ಬೂದು ಬಣ್ಣದಲ್ಲಿರಲಿದೆ. ಆದ್ರೆ ಬೆಳವಣಿಗೆಯಾದಂತೆ ಬಿಳಿ ಬಣ್ಣಕ್ಕೆ ತಿರುಗಲಿದೆ.



Click it and Unblock the Notifications