Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಜಪಾನ್ ಬಾಬಾ ವಂಗಾ ಹೇಳಿದ್ದ ಭವಿಷ್ಯ ನಿಜವಾಯ್ತು..! ಒಂದು ದಿನ ಮುನ್ನವೇ ಸುಳಿವು ಬಂದಿತ್ತು!
ಅತೀಂದ್ರಿಯ ಶಕ್ತಿ ಹೊಂದಿರುವ ಬಾಬಾ ವಂಗಾ ನುಡಿಯುವ ಭವಿಷ್ಯ ಕುರಿತು ನೀವು ಕೇಳಿರಬಹುದು. ಆಕೆ ಮುಂದೆ ನಡೆಯುವ ಬಹುದೊಡ್ಡ ದುರಂತಗಳನ್ನು ಮೊದಲೇ ಭವಿಷ್ಯ ನುಡಿದ್ದಾಳೆ. ಸದ್ಯ ಈಗ ರಷ್ಯಾ ದ್ವೀಪದಲ್ಲಿ ಸಂಭವಿಸಿದ 8.8ರ ತೀವ್ರತೆಯ ಭೂಕಂಪನ ಉಂಟಾಗಿರುವ ಕುರಿತಾಗಿ ಹಾಗೆ ಜಪಾನ್ನ ಸುನಾಮಿ ಕುರಿತು ಮೊದಲೇ ನುಡಿದಿರುವುದು ಅಚ್ಚರಿ ಮೂಡಿಸಿದೆ.
ಬುಧವಾರ ಮುಂಜಾನೆ ರಷ್ಯಾದ ಕಮ್ಚಟ್ಕಾ ದ್ವೀಪದಲ್ಲಿ 8.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಇದು ಜಪಾನ್ನ ಉತ್ತರ ದ್ವೀಪ ಹೊಕ್ಕೈಡೊ ಮತ್ತು ರಷ್ಯಾದ ಕುರಿಲ್ ದ್ವೀಪಗಳ ಮೇಲೆ ಸುನಾಮಿ ಅಲೆಗಳ ಎಬ್ಬಿಸಿತು. ಈ ಘಟನೆಗಳು ಬಾಬಾ ವಂಗಾ ಹೇಳಿರುವ ಭವಿಷ್ಯವಾಣಿಗಳು ಮತ್ತೆ ಮುನ್ನಲೆಗೆ ಬರುವಂತೆ ಮಾಡಿದೆ.

ಹಾಗೆ ಜಪಾನ್ನ ರಿಯೋ ಟುಟ್ಸುಕಿ ಹೇಳಿರುವ ಭವಿಷ್ಯವಾಣಿ ಕೂಡ ನಿಜವಾಗಿದೆ. ಆಕೆ ತನ್ನ 'ದಿ ಫ್ಯೂಚರ್ ಐ ಸಾ' ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾಳೆ. ಆಕೆ ತನಗೆ ಬೀಳುವ ಕನಸುಗಳನ್ನು ಈ ಪುಸ್ತಕದಲ್ಲಿ ದಾಖಲು ಮಾಡಿದ್ದಾಳೆ. ಅದರ ಪ್ರಕಾರ ಆಕೆ ಜುಲೈ 5ರಂದು ಜಪಾನ್ನಲ್ಲಿ ದೊಡ್ಡ ನೈಸರ್ಗಿಕ ದುರಂತ ಸಂಭವಿಸಲಿದೆ ಎಂದಿದ್ದಳು.
ರಿಯೋ ಹೇಳಿದಂತೆ ಜುಲೈ 5ರಂದು ಈ ಘಟನೆ ನಡೆಯಲಿಲ್ಲ. ಆದ್ರೆ ಜುಲೈ 30ರಂದು ಸಂಭವಿಸಿದೆ. ಜುಲೈ 5ರಿಂದಲೂ ಈ ಕುರಿತಾದ ಭಯದ ವಾತಾವರಣ ಇದ್ದೇ ಇತ್ತು. ಆದ್ರೆ ಈಗ ಈ ಘಟನೆಯು ನಡೆದಿರುವುದು ಆಕೆಯ ಭವಿಷ್ಯವಾಣಿ ನಿಜವಾಗಿದ್ದರ ಸಂಕೇತವಾಗಿದೆ. ಹಾಗೆ ಆಕೆ ಈ ಮೊದಲು ನುಡಿದಿರುವ ಹಲವು ದುರಂತಗಳ ಕುರಿತ ಭವಿಷ್ಯ ಕೂಡ ನಿಜವಾಗಿವೆ.
ಆಕೆ ಹೇಳಿದ್ದ ಈ ಭವಿಷ್ಯ ಕೇಳಿ ಎಲ್ಲರಿಗೂ ಮೊದಲು ಶಾಕ್ ಆಗಿತ್ತು. ಜಪಾನ್ಗೆ ಪ್ರವಾಸಿಗರ ಬಿಸಿ ತಟ್ಟಿತ್ತು, ಹೋಟೆಲ್ಗಳು, ವಿಮಾನಗಳು ಖಾಲಿಯಾದವು. ಹಾಗೆ ಆಕೆಯ ಭವಿಷ್ಯವಾಣಿಯ ಕುರಿತು ತಜ್ಞರು ಅಲ್ಲಗೆಳೆದಿದ್ದರು. ಈ ಭವಿಷ್ಯವಾಣಿಗಳು ಯಾವುದು ನಿಜವಲ್ಲ ಇದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದಿದ್ದರು.
ಟೋಕಿಯೊ ವಿಶ್ವವಿದ್ಯಾಲಯದ ಪ್ರೊಫೆಸರ್ ಸೆಕಿಯಾ ನವೋಯಾ ಸೇರಿ ಹಲವು ತಜ್ಞರು ಅಂತಹ ಭವಿಷ್ಯವಾಣಿಗಳನ್ನು ಅವೈಜ್ಞಾನಿಕವೆಂದು, ಈ ದುರಂತಗಳನ್ನು ಮೊದಲೇ ಊಹಿಸಲು ಸಾಧ್ಯವಿಲ್ಲ ಎಂದಿದ್ದರು. ಇವು ಆಧಾರರಹಿತವಾಗಿದ್ದು, ಯಾರು ಕೂಡ ನಂಬದೆ ನಿರ್ಲಕ್ಷಿಸಬೇಕು ಎಂದಿದ್ದರು.
ಸುನಾಮಿಗೂ ಮುನ್ನ ದಡಕ್ಕೆ ಅಪ್ಪಳಿಸಿದ್ದವು ಬೆಲುಗಾ ಫಿಶ್
ರಷ್ಯಾದ ದ್ವೀಪದಲ್ಲಿ ಉಂಟಾದ ಭೂಕಂಪನವು ಇಡೀ ರಷ್ಯಾ ಹಾಗೆ ಜಪಾನ್ಗೆ ಆತಂಕ ಸೃಷ್ಟಿಸಿತ್ತು. ಆದ್ರೆ ಈ ಘಟನೆಗೂ ಮುನ್ನವೇ ಬೆಲುಗಾ ಫಿಶ್ಗಳ ಸಣ್ಣ ಗುಂಪು ಸಮುದ್ರದ ದಡದಲ್ಲಿ ಬಿದ್ದಿದ್ದವು. ಭೂಕಂಪನ ಸಂಭವಿಸುವ ಒಂದು ದಿನ ಮೊದಲು ಈ ಮೀನುಗಳು ದಡದಲ್ಲಿ ಪತ್ತೆಯಾದವು ಎಂದು ಹೇಳಲಾಗಿದೆ.
ಕೆಲವು ಮೀನುಗಾರರು ಈ ತಿಮಿಂಗಿಲ ಜಾತಿಯ ಬೆಲುಗಾ ಫಿಶ್ಗಳನ್ನು ಮರಳಿ ಸಮುದ್ರಕ್ಕೆ ಬಿಡಲು ಮುಂದಾಗುತ್ತಿರುವ ವಿಡಿಯೋಗಳು ಹರಿದಾಡಿವೆ ಇದು ರಷ್ಯಾದ ಕಡಲ ತೀರದಲ್ಲಿ ಸೆರೆಹಿಡಿದ ದೃಶ್ಯ ಅಂತಲೂ ಹೇಳಲಾಗಿದೆ. ಒಟ್ಟಾರೆ 5 ಬೆಲುಗಾ ಮರಿಗಳು ಕಡಲ ತೀರಕ್ಕೆ ಬಂದಿದ್ದವು, ಆದ್ರೆ ಯಾವ ಕಾರಣಕ್ಕೆ ಇವು ದಡಕ್ಕೆ ಬಂದಿವೆ ಎಂಬುದು ತಿಳಿದುಬಂದಿಲ್ಲ. ಆದ್ರೆ ಹಲವರು ಈ ಬೆಲುಗಾ ಮೀನಿಗಳು ಅಪಾಯದ ಮುನ್ಸೂಚನೆ ಸಿಕ್ಕಿರುವ ಕಾರಣದಿಂದಲೇ ಸಮುದ್ರ ದಡಕ್ಕೆ ಬಂದಿವೆ ಎಂಬ ಮಾತುಗಳು ಸಹ ಕೇಳಿಬಂದಿವೆ.
ಬಿಳಿ ತಿಮಿಂಗಿಲ ಎಂದೂ ಕರೆಯಲ್ಪಡುವ ಬೆಲುಗಾ, ಅದರ ಬಿಳಿಯ ಬಣ್ಣದ ಕಾರಣದಿಂದಾಗಿ ಇತರ ತಿಮಿಂಗಿಲಗಳಿಗಿಂತ ಭಿನ್ನವಾಗಿದೆ. ಬೆಲುಗಾ ಮರಿಗಳು ಬೂದು ಬಣ್ಣದಲ್ಲಿರಲಿದೆ. ಆದ್ರೆ ಬೆಳವಣಿಗೆಯಾದಂತೆ ಬಿಳಿ ಬಣ್ಣಕ್ಕೆ ತಿರುಗಲಿದೆ.



Click it and Unblock the Notifications