Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆಯುಧ ಪೂಜೆ: ಈ ವರ್ಷ ಆಯುಧ ಪೂಜೆ 11ಕ್ಕಾ 12ಕ್ಕಾ? ವಿಜಯ ಮುಹೂರ್ತ ಸಮಯ ಯಾವಾಗ?
ನವರಾತ್ರಿಯ 9ನೆ ದಿನಕ್ಕೆ ಸಿದ್ಧಿದಾತ್ರಿ ದೇವಿಯ ಪೂಜೆ ಮಾಡಲಾಗುವುದು. ಈ ದಿನದಂದು ಆಯುಧ ಪೂಜೆ ಆಚರಿಸಲಾಗುವುದು. ಆಯುದ್ಧ ಪೂಜೆಯನ್ನು ತುಂಬಾನೇ ಅದ್ಧೂರಿಯಾಗಿ ಆಚರಿಸಲಾಗುವುದು. ಮನೆ-ಮನೆಗಳಲ್ಲಿ, ಆಫೀಸ್ಗಳಲ್ಲಿ ಆಯುಧ ಪೂಜೆಯ ಸಂಭ್ರಮವಿರುತ್ತದೆ. ನಾವು ನಮ್ಮ ವೃತ್ತಿಗೆ ಬಳಸುವ ವಸ್ತುಗಳನ್ನು ಆ ದಿನ ಪೂಜಿಸುತ್ತೇವೆ. ಲ್ಯಾಪ್ಟ್ಯಾಪ್, ಕೋವಿ, ಗುದ್ದಲಿ, ಕತ್ತಿ, ಗಾಡಿಗಳು ಹೀಗೆ ಕೃಷಿಗೆ ಬಳಸುವ, ತಾಂತ್ರಿಕ ಕೆಲಸಕ್ಕೆ ಬಳಸುವ ಎಲ್ಲಾ ವಸ್ತುಗಳನ್ನು ಪೂಜಿಸುತ್ತೇವೆ.

ನವರಾತ್ರಿಯಲ್ಲಿ ಆಯುಧ ಪೂಜೆಗೆ ಶುಭ ಮುಹೂರ್ತ ಯಾವಾಗ? ನವಮಿ ತಿಥಿ ಪ್ರಾರಂಭ ಯಾವಾಗ?
ನವಮಿ ತಿಥಿ ಪ್ರಾರಂಭ: ಅಕ್ಟೋಬರ್ 11 ಮಧ್ಯಾಹ್ನ 12:06ಕ್ಕೆ
ನವಮಿ ತಿಥಿ ಮುಕ್ತಾಯ : ಅಕ್ಟೋಬರ್ 12 ಬೆಳಗ್ಗೆ 10:58ಕ್ಕೆ
ಆಯುಧ ಪೂಜೆಯನ್ನು ಶನಿವಾರ ಆಚರಿಸಲಾಗುವುದು
ಆಯಧ ಪೂಜೆ ವಿಜಯ ಮುಹೂರ್ತ: ಮಧ್ಯಾಹ್ನ 02:05ರಿಂದ 02:52ರೊಳಗೆ ಪೂಜೆ ಸಲ್ಲಿಸಿ
ಆಯುಧ ಪೂಜೆಗೆ 48 ನಿಮಿಷಗಳು ಸಿಗುತ್ತದೆ.
ಅಕ್ಟೋಬರ್ 12 ಪಂಚಾಂಗ
ತಿಥಿ ನವಮಿ
ನಕ್ಷತ್ರ: ಶ್ರವಣ
ಬ್ರಹ್ಮ ಮುಹೂರ್ತ: ಬೆಳಗ್ಗೆ 04:33ರಿಂದ 05:21
ಗೋಧೂಳಿ ಮುಹೂರ್ತ: ಸಂಜೆ 06:02-06:26ರವರೆಗೆ ಇದೆ
ಇಡೀ ದಿನ ರವಿಯೋಗವಿದೆ
ವಿಜಯ ಮುಹೂರ್ತ: ಮಧ್ಯಾಹ್ನ 02:05ರಿಂದ 02:25ರವರೆಗೆ ಇದೆ
ರಾಹುಕಾಲ: ಬೆಳಗ್ಗೆ 09:08ರಿಂದ 10:37ರವರೆಗೆ ಇದೆ.
ಆಯುಧ ಪೂಜೆಯ ಹಿಂದಿರುವ ಪೌರಾಣಿಕ ಹಿನ್ನೆಲೆಯೇನು?
ತಾಯು ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹಾರ ಮಾಡಿದ ಮೇಲೆ ಆಯುಧವನ್ನು ಭೂಮಿಯಲ್ಲಿಯೇ ಬಿಟ್ಟು ಹೋಗುತ್ತಾಳೆ, ಆ ಆಯುಧವನ್ನು ಪೂಜಿಸಲಾಗುವುದು, ಅಲ್ಲಿಂದ ಆಯುಧ ಪುಜೆ ಜಾರಿಗೆ ಬಂತು ಎಂದು ಹೇಳಲಾಗುವುದು.
ಆಯುಧ ಪೂಜೆಯ ಪೂಜಾ ವಿಧಿಗಳೇನು?
ಈ ದಿನ ಮನೆ, ಆಫೀಸ್ ಸ್ವಚ್ಛಗೊಳಿಸಲಾಗುವುದು. ನಂತರ ತಳಿರು-ತೋರಣಗಳಿಂದ ಸಿಂಗರಿಸಲಾಗುವುದು
ಬಳಿಕ ಆಯುಧಗಳು, ಗಾಡಿ ಇವುಗಳನ್ನೆಲ್ಲಾ ಸ್ವಚ್ಛಗೊಳಿಸಿ ಪೂಜೆಗೆ ಸಿದ್ಧಪಡಿಸಲಾಗುವುದು.
ಬೂದು ಕುಂಬಳಕಾಯಿಗೆ ಕುಂಕು ಹಾಗೂ ನಾಣ್ಯ ಹಾಕಲಾಗುವುದು
ಬಳಿಕ ಕುಂಬಳಕಾಯಿ ಮೇಲೆ ಕರ್ಪೂರ ಹಚ್ಚಿ ಆರತಿ ಮಾಡಿ ಅದನ್ನು ಒಡೆಯಲಾಗುವುದು, ತಯಾರಿಸಿಟ್ಟ ಪ್ರಸಾದವನ್ನು ಹಂಚಿ ಆಯುಧ ಪೂಜೆಯನ್ನು ಮಾಡಲಾಗುವುದು.
ಆಯುಧಗಳನ್ನು ಪೂಜೆ ಮಾಡುವಾಗ ನಮ್ಮ ಕೆಲಸದಲ್ಲಿ ಪ್ರಗತಿ ನೀಡು ಎಂದು ನವದುರ್ಗೆಯರ ಬಳಿ ಆಶೀರ್ವಾದ ಕೇಳಲಾಗುವುದು.
ಆಯುಧಗಳಿಗೆ ಪೂಜೆ ಮಾಡುವಾಗ ಮನಸ್ಸಿನಲ್ಲಿ ಒಂದಿಷ್ಟೂ ದುರಾಸೆ ಇರಬಾರದು, ಒಳಿತನ್ನು ಬೇಡಿ ಪೂಜೆ ಸಲ್ಲಿಸಿ.
ಆಯುಧ ಪೂಜೆ ಬರಿ ಒಂದು ಆಚರಣೆಯಲ್ಲ, ಈ ಪೂಜೆ ಭಾವನಾತ್ಮಕವಾಗಿಯೂ ನಮ್ಮನ್ನು ನಮ್ಮ ವೃತ್ತಿಯೊಂದಿಗೆ ಬೆಸೆಯುವ ಹಬ್ಬವಾಗಿದೆ
ಈ ದಿನ ನಾವು ಯಾವ ವೃತ್ತಿಯಲ್ಲಿ ಇದ್ದೇವೋ ಅದಕ್ಕೆ ಬಳಸುವ ವಸ್ತುಗಳನ್ನು ಪೂಜಿಸುತ್ತೇವೆ. ಗಾಡಿಯನ್ನು ಎಲ್ಲರೂ ಪೂಜಿಸುತ್ತೇವೆ, ಅದೇ ಡ್ರೈವರ್ ವೃತ್ತಿಯಲ್ಲಿರುವವರು ಗಾಡಿಯನ್ನು ಸಾಕ್ಷಾತ್ ದೇಚರ ರೂಪದಲ್ಲಿ ಕಂಡು ಆರಾಧಿಸುತ್ತಾರೆ, ಇದನ್ನು ನೋಡುವುದೇ ಕಣ್ಣಿಗೆ ಹಬ್ಬ, ತಮ್ಮ ಗಾಡಿಗೆ ಅಲಂಕರಿಸಲು ಅವರು ಆ ವಾರದ ದುಡಿಮೆ ಹಾಕಲು ಹಿಂದೆ ಮುಮದೆ ನೋಡಲ್ಲ. ಕೃಷಿಕರು ತಮ್ಮ ಕೃಷಿ ಕೆಲಸಕ್ಕೆ ಬಳಸುವ ವಸ್ತುವನ್ನು ಇಟ್ಟು ಪೂಜಿಸುತ್ತಾರೆ, ಐಟಿ ಕ್ಷೇತ್ರದಲ್ಲಿ ಇರುವವರಿಗೆ ಲ್ಯಾಪ್ಟ್ಯಾಪ್ ಅವರ ಅಸ್ತ್ರ ಹೀಗೆ ತಮ್ಮ ವೃತ್ತಿ ಕ್ಷೇತ್ರಕ್ಕೆ ಸಂಬಂಧಿಸಿದ ವಸ್ತುಗಳನ್ನು ಭಕ್ತಿ-ಆರಾಧನೆಯಿಂದ ಆಚರಿಸುತ್ತಾರೆ.
ಆ ದೇವಿ ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಎಲ್ಲವೂ ಪ್ರಗತಿ ತರಲಿ, ಆಯುಧ ಪೂಜೆಯ ಶುಭಾಶಯಗಳು....



Click it and Unblock the Notifications