Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಅಯೋಧ್ಯೆಯಲ್ಲಿ ಅಡಗಿವೆ ಹತ್ತಾರು ಕಥೆಗಳು..! ನಿಮಗೆ ಗೊತ್ತಿಲ್ಲದ ಮಾಹಿತಿ ಇಲ್ಲಿದೆ ನೋಡಿ..
ಅಯೋಧ್ಯೆ ರಾಮ ಜನ್ಮಭೂಮಿಯಲ್ಲಿ ಭವ್ಯವಾಗಿ ನಿರ್ಮಾಣಗೊಂಡಿರುವ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭಗೊಂಡಿದೆ. ಮುಂಬರುವ ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಂದಿರ ಉದ್ಘಾಟನೆಗೆ ಮೂಹೂರ್ತ ಕೂಡಿಬಂದಿದೆ. ಈ ನಡುವೆ ಇಡೀ ಅಯೋಧ್ಯೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಬೀದಿ ಬೀದಿಯೂ ಹೊಸತನದಿಂದ ಕಂಗೊಳಿಸುತ್ತಿದೆ. ರಾಮಜನ್ಮಭೂಮಿ ಮುಂದೆ ಉತ್ತರ ಪ್ರದೇಶದ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣವಾಗಿ ಮಾರ್ಪಡುವಲ್ಲಿ ಯಾವ ಅನುಮಾನವೂ ಇಲ್ಲ.
ಅಯೋಧ್ಯೆಯ ಐತಿಹಾಸಿಕ ವಿಕಸನವು ಅದರ ಪ್ರಾಚೀನ ಹೆಸರಿನೊಂದಿಗೆ ಬೆಸೆದುಕೊಂಡಿದೆ. ಪುರಾತತ್ತ್ವ ಶಾಸ್ತ್ರದ ಮತ್ತು ಸಾಹಿತ್ಯಿಕ ಪುರಾವೆಗಳು ಸುಮಾರು ಐದನೇ ಅಥವಾ ಆರನೇ ಶತಮಾನದಲ್ಲೂ ದೊರೆತಿದೆ. ಅಂದರೆ ಅಯೋಧ್ಯೆ ಅತ್ಯಂತ ಹಳೆಯ ನಗರ ಎಂಬುದಕ್ಕೆ ಪುರಾವೆಗಳಿವೆ. ಅಯೋಧ್ಯೆ ನಗರದ ಕುರಿತು ಮಹಾಭಾರತ ಹಾಗೂ ರಾಮಾಯಣದಲ್ಲೂ ಉಲ್ಲೇಖವಿದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಅಯೋಧ್ಯೆಯು ಪ್ರಾಚೀನ ಕೋಸಲ ಸಾಮ್ರಾಜ್ಯದ ರಾಜಧಾನಿಯಾಗಿತ್ತು ಮತ್ತು ಭಗವಾನ್ ವಿಷ್ಣುವಿನ ಏಳನೇ ಅವತಾರವಾದ ಭಗವಾನ್ ರಾಮನ ಜನ್ಮಸ್ಥಳವಾಗಿತ್ತು. ನಗರವನ್ನು ರಾಮನ ತಂದೆಯಾದ ಪ್ರಸಿದ್ಧ ರಾಜ ದಶರಥನು ಆಳುತ್ತಿದ್ದನು ಮತ್ತು ಇದನ್ನು ಸಾಮಾನ್ಯವಾಗಿ ಸಮೃದ್ಧ ಮತ್ತು ಸಾಮರಸ್ಯದ ರಾಜ್ಯವೆಂದು ವಿವರಿಸಲಾಗಿದೆ. ಈ ಕಥೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ.

ಶತಮಾನಗಳ ನಂತರ, ಮೌರ್ಯ ಮತ್ತು ಗುಪ್ತ ರಾಜವಂಶಗಳ ಆಳ್ವಿಕೆಯಲ್ಲಿ ಅಯೋಧ್ಯೆಯು ಬೌದ್ಧಧರ್ಮದ ಅಭಿವೃದ್ಧಿಶೀಲ ಕೇಂದ್ರವಾಯಿತು. ನಗರವು ಹಲವಾರು ಬೌದ್ಧ ಮಠಗಳು ಮತ್ತು ಸ್ತೂಪಗಳ ನಿರ್ಮಾಣಕ್ಕೆ ಸಾಕ್ಷಿಯಾಯಿತು, ಅದರ ಸಾಂಸ್ಕೃತಿಕ ಸಂಯೋಜನೆ ಮತ್ತು ವೈವಿಧ್ಯಮಯ ಇತಿಹಾಸವನ್ನು ದೃಢೀಕರಿಸುತ್ತದೆ.
ತ್ರೇತಾ ಯುಗದ ಸಂಪರ್ಕ
ಹಿಂದೂ ವಿಶ್ವಕೋಶದ ಪ್ರಕಾರ, ಅಯೋಧ್ಯೆಯು ನಾಲ್ಕು ಯುಗಗಳ ಚಕ್ರದಲ್ಲಿ ಎರಡನೇ ಯುಗವಾದ ತ್ರೇತಾ ಯುಗದಿಂದ ಅಸ್ತಿತ್ವದಲ್ಲಿದೆ ಎಂದು ನಂಬಲಾಗಿದೆ. ಪ್ರಾಚೀನ ಯುಗಗಳಿಗೆ ಈ ಸಂಪರ್ಕವು ನಗರದ ಐತಿಹಾಸಿಕ ಪ್ರಾಮುಖ್ಯತೆಯನ್ನು ವರ್ಧಿಸುತ್ತದೆ. ಹೀಗಾಗಿ ಈ ನಗರ ಭಾರತದ ಅತ್ಯಂತ ಪ್ರಾಚೀನ ಎಂಬುದಾಗಿ ಕರೆಯಲ್ಪಟ್ಟಿದೆ.
ಹನುಮಾನ್ ಗರ್ಹಿ
ಸಾಮಾನ್ಯವಾಗಿ ಅಯೋಧ್ಯೆ ರಾಮಮಂದಿರದ ಮೇಲೆ ಕೇಂದ್ರೀಕೃತವಾಗಿರುವ ನಡುವೆ, ಇದೇ ಅಯೋಧ್ಯೆ ಹನುಮಾನ್ ಗರ್ಹಿಯ ನೆಲೆಯಾಗಿದೆ, ಇದು ಹನುಮಂತನಿಗೆ ಸಮರ್ಪಿತವಾದ ದೇವಾಲಯವಾಗಿದೆ. ಬೆಟ್ಟದ ಮೇಲಿರುವ ಈ ದೇವಾಲಯವು ಅಯೋಧ್ಯೆಯ ವಿಹಂಗಮ ನೋಟಗಳನ್ನು ಒದಗಿಸುತ್ತದೆ ಮತ್ತು ಹನುಮಂತನ ಭಕ್ತರಿಗೆ ಪೂಜ್ಯ ತಾಣವಾಗಿದೆ.
ಸೀತಾ ಕಿ ರಸೋಯಿ (ಸೀತಾ ಮಾತೆಯ ಅಡುಗೆ ಮನೆ)
ನಗರದೊಳಗಿನ ಈ ಸ್ಥಳವು ಸೀತಾ ದೇವಿಯು ಅಯೋಧ್ಯೆಯಲ್ಲಿ ತಂಗಿದ್ದಾಗ ಊಟ ಮಾಡಿದ ಸ್ಥಳವೆಂದು ನಂಬಲಾಗಿದೆ. ಈ ಸ್ಥಳವನ್ನು ಸಾಂಕೇತಿಕ ಅಡುಗೆಮನೆಯಿಂದ ಗುರುತಿಸಲಾಗಿದೆ ಮತ್ತು ಯಾತ್ರಿಕರು ತಮ್ಮ ಧಾರ್ಮಿಕ ಪ್ರಯಾಣದ ಭಾಗವಾಗಿ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.
ವಾರ್ಷಿಕ ದೀಪೋತ್ಸವ
ಅಯೋಧ್ಯೆಯು ತನ್ನ ಅದ್ಭುತವಾದ ದೀಪೋತ್ಸವಕ್ಕೆ ಹೆಸರುವಾಸಿಯಾಗಿದೆ, ಇದು ವಾರ್ಷಿಕ ಉತ್ಸವವಾಗಿದ್ದು, ಸಾವಿರಾರು ಮಣ್ಣಿನ ದೀಪಗಳಿಂದ ನಗರವನ್ನು ಬೆಳಗಿಸುತ್ತದೆ. ಈ ಬಾರಿಯ ದೀಪಾವಳಿಯಲ್ಲಿ ಲಕ್ಷ ಲಕ್ಷ ದೀಪ ಬೆಳಗಿ ವಿಶ್ವ ದಾಖಲೆ ನಿರ್ಮಿಸಲಾಗಿದೆ. ಮುಂದೆ ಸರಯು ನದಿ ತೀರ ಈ ರೀತಿಯ ಧಾರ್ಮಿಕ ಆಚರಣೆಗಳಿಂದ ಹೆಸರಾಗಲಿದೆ. ಅಯೋಧ್ಯೆಯ ಇತಿಹಾಸವು ಪುರಾಣ, ಸಾಂಸ್ಕೃತಿಕ ವಿಕಾಸ ಮತ್ತು ಧಾರ್ಮಿಕ ಪ್ರಾಮುಖ್ಯತೆಯೊಂದಿಗೆ ಹೆಣೆಯಲ್ಪಟ್ಟಿದೆ. ಯಾತ್ರಿಕರು ಮತ್ತು ಪ್ರವಾಸಿಗರು ಅಯೋಧ್ಯೆಗೆ ಸೇರುವುದನ್ನು ಮುಂದುವರೆಸಿದಾಗ, ನಗರವು ನಂಬಿಕೆಯ ನಿರಂತರ ಮನೋಭಾವಕ್ಕೆ ಜೀವಂತ ಸಾಕ್ಷಿಯಾಗಿದೆ.
ಭೂಕಂಪನಕ್ಕೂ ಅಲುಗಾಡುವುದಿಲ್ಲ ನೂತನ ರಾಮಮಂದಿರ
ಜನವರಿಯಲ್ಲಿ ಉದ್ಘಾನೆಯಾಗಲಿರುವ ಅಯೋಧ್ಯೆಯ ಭವ್ಯ ರಾಮಮಂದಿರ ಎಂತಹ ಭೂಕಂಪನವಾದರು ಹಾನಿಗೊಳಗಾಗದೆ ಹಾಗೆಯೇ ನಿಂತಿರಲಿದೆ. ಸುಮಾರು 6.5ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿದರೂ ಕಿಂಚಿತ್ತು ಹಾನಿಯಾಗುವುದಿಲ್ಲ ಎಂದು ಶ್ರೀರಾಮ ಜನ್ಮಭೂಮಿ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಹೇಳಿಕೊಂಡಿದ್ದಾರೆ.
50 ಅಡಿಯಷ್ಟು ಆಳದ ವರೆಗೂ ದೇವಾಲಯಕ್ಕೆ ಅಡಿಪಾಯ ಹಾಕಲಾಗಿದ್ಯಂತೆ. ಸಿಮೆಂಟ್, ಕಲ್ಲು, ಮರಳು ಸೇರಿ ಬಲವಾಗಿ ಅಡಿಪಾಯ ಹಾಕಲಾಗಿದೆ. ದೇವಾಲಯ ನಿರ್ಮಾಣಕ್ಕೆ ಒಟ್ಟು 17000 ಗ್ರಾನೈಟ್ಗಳ ಬಳಸಲಾಗಿದೆ.



Click it and Unblock the Notifications