Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಈ ದಿನಗಳಲ್ಲಿ ಸಾಲ ಕೊಟ್ಟರೆ ನಿಮ್ಮ ಕೈ ಖಾಲಿಯಾಗೋದು ಗ್ಯಾರಂಟಿ!
ಪ್ರತಿಯೊಬ್ಬರಿಗೂ ಸಾಲದ ಅವಶ್ಯಕತೆ ಇದ್ದೇ ಇರುತ್ತೆ. ಕೆಲವೊಂದು ಜನ ಬ್ಯಾಂಕ್ ನಲ್ಲಿ ಸಾಲ ಮಾಡುತ್ತಾರೆ, ಇನ್ನೂ ಕೆಲವರು ಬಡ್ಡಿಗೆ ಸಾಲ ಪಡೆಯುವವರು ಇದ್ದಾರೆ. ಮತ್ತೂ ಕೆಲವರು ತಮ್ಮ ಆಪ್ತ ಸಂಬಂಧಿಕರು ಹಾಗೂ ಸ್ನೇಹಿತರ ಬಳಿ ಸಾಲ ಕೇಳಿ ತೆಗೆದುಕೊಳ್ಳುತ್ತಾರೆ. ನೀವೇನಾದರೂ ಈ ರೀತಿ ಸಾಲ ಕೊಡುವುದಾದರೆ ಕೆಲವೊಂದು ದಿನಗಳಲ್ಲಿ ಸಾಲ ಕೊಡಲೇಬಾರದು. ಈ ದಿನಗಳಲ್ಲಿ ಸಾಲ ಕೊಟ್ಟರೆ ಖಂಡಿತ ನೀವು ಕೊಟ್ಟಿರೋ ಸಾಲದ ಹಣ ವಾಪಾಸ್ಸ್ ಆಗೋದಿಲ್ಲ. ಅಷ್ಟಕ್ಕು ಯಾವ ದಿನಗಳಲ್ಲಿ ಸಾಲ ಕೊಡಲೇಬಾರದು ಅನ್ನೋದನ್ನು ತಿಳಿಯೋಣ.
ಮಂಗಳವಾರ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳವಾರ ಯಾರಿಂದಲೂ ಸಾಲ ಪಡೆಯಬಾರದು. ಮತ್ತೂ ಯಾರಿಗೂ ಸಾಲ ನೀಡಬಾರದಂತೆ. ಒಂದು ವೇಳೆ ಮಂಗಳವಾರ ನೀವು ಸಾಲ ಕೊಟ್ಟರೆ ಸಾಲದ ಹಣ ವಾಪಾಸ್ಸ್ ಆಗುವುದು ಅನುಮಾನವಂತೆ. ಅಷ್ಟೇ ಅಲ್ಲ, ಮಂಗಳವಾರ ನೀವು ಯಾರಿಂದಲಾದರೂ ಸಾಲ ಪಡೆದಿದ್ದರೂ ಆ ಸಾಲದ ಹಣದಿಂದ ನಿಮಗೆ ಯಾವುದೇ ರೀತಿ ಪ್ರಯೋಜನ ಆಗೋದಿಲ್ವಂತೆ.
ಮಂಗಳವಾರದ ದಿನ ಸಾಲವನ್ನು ತೆಗೆದುಕೊಳ್ಳುವುದನ್ನು ಧರ್ಮಗ್ರಂಥಗಳಲ್ಲಿ ನಿಷೇಧಿಸಲಾಗಿದೆ. ಮಂಗಳವಾರ ಸಾಲ ಪಡೆಯುವ ಬದಲು ಹಳೆ ಸಾಲವಿದ್ದರೆ ಮರುಪಾವತಿ ಮಾಡಬೇಕಂತೆ. ಇದರಿಂದ ಒಳ್ಳೆಯದಾಗುತ್ತೆ ಅನ್ನೋ ನಂಬಿಕೆಯಿದೆ.

ಗುರುವಾರ
ಗುರುವಾರವು ಕೂಡ ಯಾರಿಂದಲೂ ಸಾಲ ಪಡೆಯಬಾರದು. ಹಾಗೂ ಯಾರಿಗೂ ಸಾಲ ಕೊಡಬಾರದು. ಅಂತೂ ಇಂತೂ ಗುರುವಾರ ಸಾಲದ ವ್ಯವಹಾರಕ್ಕೆ ಕೈ ಹಾಕಲೇಬಾರದು. ಒಂದು ವೇಳೆ ಯಾರಾದರೂ ಒಬ್ಬ ವ್ಯಕ್ತಿ ನಿಮ್ಮಿದ ಲಕ್ಷಾಂತರ ರೂಪಾಯಿ ಪಡೆದಿದ್ದರೆ, ಅವನು ಅದನ್ನು ಬಹು ಬೇಗನೆ ತೀರಿಸೋದಿಲ್ಲ. ಅಥವಾ ಅದನ್ನು ಸಾಲವಾಗಿ ಹಾಗೆಯೇ ಉಳಿಸಿಕೊಳ್ಳುತ್ತಾನೆ.
ಸಾಲ ಪಡೆಯಲು ಹಾಗೂ ಸಾಲ ಕೊಡೋದಕ್ಕೆ ಗುರುವಾರ ಶುಭಕರ ದಿನವಲ್ಲ. ಒಂದು ವೇಳೆ ನೀವು ಗುರುವಾರ ಯಾರಿಗಾದರೂ ಸಾಲ ಕೊಟ್ಟರೂ ಅದು ವಾಪಾಸ್ಸ್ ಬರುತ್ತೆ ಅನ್ನೋ ನಂಬಿಕೆಯಿಲ್ಲ. ಈ ದಿನ ಸಣ್ಣ-ಪುಟ್ಟ ಸಾಲಗಾರರು ಮಾತ್ರವಲ್ಲ. ಲಕ್ಷಾಂತರ ರೂಪಾಯಿ ಸಾಲ ಪಡೆದವನು ನಿಮಗೆ ವಾಪಾಸ್ಸ್ ನೀಡೋದಿಲ್ಲ.
ಶನಿವಾರ
ಶನಿವಾರದ ದಿನವೂ ಯಾರಿಗೂ ಸಾಲ ನೀಡೋದಕ್ಕೆ ಹೋಗಬೇಡಿ. ಇದರಿಂದ ನಿಮಗೆ ಬಹುದೊಡ್ಡ ನಷ್ಟ ಉಂಟಾಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿವಾರ ಸಾಲ ಕೊಟ್ಟರೆ ನಿಮಗೆ ಆ ಹಣ ವಾಪಾಸ್ಸ್ ಸಿಗೋದು ಕಷ್ಟ. ಅಷ್ಟೇ ಯಾಕೆ, ಒಂದು ವೇಳೆ ನೀವು ಶನಿವಾರದ ದಿನ ಯಾರಿಂದಲಾದರೂ ಹಣವನ್ನು ಸಾಲವಾಗಿ ಪಡೆದರೆ ನೀವು ಆ ಹಣವನ್ನು ಅವರಿಗೆ ಮರು ಪಾವತಿ ಮಾಡೋದಿಲ್ಲ. ನೀವು ಆ ಹಣವನ್ನು ಕೊಡಬೇಕು ಅಂತ ಬಯಸಿದ್ರೂ ಕೂಡ ನಿಮ್ಮ ಕೈಯಿಂದ ಕೊಡೋದಕ್ಕೆ ಸಾಧ್ಯವಾಗೋದಿಲ್ಲ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದು ವೇಳೆ ನಿಮಗೆ ಸಾಲ ಪಡೆದುಕೊಳ್ಳುವುದು ಅಗತ್ಯವಾಗಿದ್ದರೆ ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಭಾನುವಾರ ಪಡೆದುಕೊಳ್ಳಿ. ಈ ದಿನಗಳಲ್ಲಿ ಸಾಲ ಪಡೆದುಕೊಂಡರೆ ನೀವು ಅದನ್ನು ಬೇಗನೇ ಮರು ಪಾವತಿ ಮಾಡುತ್ತೀರಿ. ಅಷ್ಟೇ ಅಲ್ಲದೇ, ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.
ಅಮಾವಾಸ್ಯೆ ದಿನ
ನಿಮ್ಮ ಆಪ್ತರಿಗೆ ಹಣದ ಅವಶ್ಯಕತೆ ತುಂಬಾನೇ ಇದೆ. ನೀವು ಸಾಲ ಕೊಡಬೇಕು ಅಂತಾನೂ ಬಯಸಿದ್ದೀರಿ. ಆದರೆ ಯಾವುದೇ ಕಾರಣಕ್ಕೂ ಅಮಾವಾಸ್ಯೆ ದಿನ ಸಾಲ ಕೊಡೋದಕ್ಕೆ ಹೋಗಲೇಬೇಡಿ. ಅಮಾವಾಸ್ಯೆಯ ದಿನ ಋಣಾತ್ಮಕ ಶಕ್ತಿಗಳು ಹೆಚ್ಚಾಗಿರೋದ್ರಿಂದ ಆ ದಿನ ಸಾಲ ಕೊಟ್ಟರೆ ನಿಮ್ಮ ಸಂಪತ್ತಿನ ಮೇಲೆ ಪರಿಣಾಮ ಬೀರುತ್ತಂತೆ. ಹೀಗಾಗಿ ಅಮಾವಾಸ್ಯೆಯ ದಿನ ತಪ್ಪಿಯೂ ಯಾರಿಗೂ ದುಡ್ಡು ಕೊಡೋದಕ್ಕೆ ಹೋಗಲೇಬೇಡಿ.
ಭದ್ರಕಾಲ
ಭದ್ರಕಾಲದ ಸಮಯದಲ್ಲಿ ಯಾವುದೇ ಶುಭ ಕಾರ್ಯವನ್ನು ಮಾಡಬಾರದಂತೆ. ಭದ್ರಕಾಲವನ್ನು ಅಶುಭ ಗಳಿಗೆ ಎಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಏನೇ ಮಾಡಿದರೂ ಅದರಿಂದ ಸಂಘರ್ಷ ಹಾಗೂ ಜಗಳ ಸೃಷ್ಟಿಯಾಗುತ್ತಂತೆ. ಒಂದು ವೇಳೆ ನೀವು ಭದ್ರಕಾಲದಲ್ಲಿ ಹಣ ನೀಡಿದರೆ ನೀವು ಸಾಲದ ಹಣವನ್ನು ಮರಳಿ ಪಡೆಯುವುದೇ ಅನುಮಾನ. ಅಷ್ಟೇ ಅಲ್ಲದೇ, ಆ ವ್ಯಕ್ತಿಯ ಜೊತೆಗೆ ನಿಮ್ಮ ಸಂಬಂಧವು ಹಾಳಾಗುತ್ತದೆ.
ಸಂಜೆಯ ವೇಳೆ
ಸೂರ್ಯಾಸ್ತದ ಸಮಯದಲ್ಲಿ ನಾವು ಯಾರಿಗೂ ಸಾಲ ಕೊಡಬಾರದು ಹಾಗೂ ಯಾರಿಂದಲೂ ಸಾಲವನ್ನು ಪಡೆಯಬಾರದು. ಇದರ ಪರಿಣಾಮವಾಗಿ ನೀವು ಇದ್ದ ಹಣವನ್ನೆಲ್ಲಾ ಕಳೆದುಕೊಂಡು ಸಾಲಗಾರರಾಗುತ್ತೀರಿ. ಹಣ ಮಾತ್ರವಲ್ಲ, ಸಂಜೆಯ ವೇಳೆ ಹಾಲು, ಮೊಸರು, ತುಪ್ಪ, ಎಣ್ಣೆ ಮತ್ತು ಉಪ್ಪನ್ನು ಯಾರಿಂದಲೂ ಸಾಲವಾಗಿ ಪಡೆದುಕೊಳ್ಳಬಾರದು.
ಕೆಲವೊಂದು ಸಲ ಮನುಷ್ಯ ತುಂಬಾನೇ ಕಷ್ಟ ಪಡುತ್ತಾನೆ. ತನಗಾಗಿ ಹಾಗೂ ತನ್ನ ಕುಟುಂಬಕ್ಕಾಗಿ ದುಡಿಯುತ್ತಾನೆ. ಆದರೂ ಕೂಡ ಆತನ ಕೈಯಿಂದ ಒಂಚೂರು ಹಣವನ್ನು ಉಳಿಸೋದಕ್ಕೆ ಸಾಧ್ಯವಾಗೋದಿಲ್ಲ. ಕೆಲವೊಂದು ಸಲ ಅದೃಷ್ಟ ಕೈ ಕೊಡುತ್ತದೆ. ಇನ್ನೂ ಕೆಲವು ಸಲ ನಾವು ಮಾಡುವ ಸಣ್ಣ-ಪುಟ್ಟ ತಪ್ಪುಗಳೇ ನಮ್ಮ ಆಸ್ತಿ ನಷ್ಟಕ್ಕೆ ಕಾರಣವಾಗಬಹುದು. ಆದ್ದರಿಂದ ಸಾಲದ ವ್ಯವಹಾರ ಮಾಡುವಾಗ ತುಂಬಾನೇ ಜಾಗರೂಕರಾಗಿ ಇರಬೇಕು.



Click it and Unblock the Notifications
