ಪ್ರಧಾನಿ ಒಳಉಡುಪು ಕೂಡ ಬಿಡದೆ ದೋಚಿದ ಪ್ರತಿಭಟನೆಕಾರರು, ಬಾಂಗ್ಲಾದೇಶದ ಅರಾಜಕತೆಗೆ ಕಾರಣವೇನು?

ಬಾಂಗ್ಲಾದೇಶದಲ್ಲಿನ ಅರಾಜಕತೆಯನ್ನು ಇಡಿ ವಿಶ್ವವೇ ಅಚ್ಚರಿಯಿಂದ ನೋಡುತ್ತಿದೆ, ಅದರಲ್ಲಿ ಬಾಂಗ್ಲಾದೇಶ ಪ್ರದಾನಿ ಕಚೇರಿಗೆ ನುಗ್ಗಿ ಅವರ ಉಡುಪುಗಳನ್ನು, ಒಳ ಉಡುಪುಗಳನ್ನು ಕೂಡ ಬಿಡದೆ ಕೊಂಡೊಯ್ಯುತ್ತಿರುವ ವಿಡಿಯೋಗಳು ತುಂಬಾನೇ ವೈರಲ್‌ ಆಗುತ್ತಿದೆ.

Bangladesh Protester

ಶೇಕ್‌ ಹಸೀನಾ ಬಾಂಗ್ಲಾದೇಶ ಪ್ರಧಾನಿ ಹುದ್ದೆಗೆ ರಾಜಿನಾಮೆ ನೀಡಿದರೂ ಪ್ರತಿಭಟನೆಕಾರರ ಆಕ್ರೋಶ ಕಡಿಮೆಯಾಗುತ್ತಿಲ್ಲ, ಪ್ರಧಾನಿ ನೆಲೆಸಿದ್ದ ಕಟ್ಟಡದೊಳಗೆ ನುಗ್ಗಿದ ಪ್ರತಿಭಟನೆಕಾರರು ಅಲ್ಲಿರುವ ವಸ್ತುಗಳಿಗೆ ಹಾನಿ ಮಾಡಿದ್ದಾರೆ, ಅಲ್ಲದೆ ಅಲ್ಲಿರುವ ವಸ್ತುಗಳನ್ನು ಧೈರ್ಯದಿಂದ ದೋಚಿದ್ದು ಮಾತ್ರವಲ್ಲ ವೀಡಿಯೋ ಕೂಡ ಮಾಡಿ ಹಾಕುತ್ತಿದ್ದಾರೆ.

ಕೆಲವರು ಶೇಕ್ ಹಸೀನಾರ ಸೀರೆ ಬ್ಲೌಸ್‌ ಕೈಯಲ್ಲಿ ಹಿಡಿದುಕೊಂಡು ಅದನ್ನು ಕ್ಯಾಮರಾ ಮುಂದೆ ತೋರಿಸುತ್ತಿದ್ದಾರೆ. ಅವರ ಬ್ಯಾಗ್, ಚಪ್ಪಲಿ ಹೀಗೆ ಯಾವುದೇ ವಸ್ತುಗಳನ್ನು ಬಿಟ್ಟಿಲ್ಲ, ಕೈಗೆ ಏನು ಸಿಗುತ್ತದೋ ಅದನ್ನೆಲ್ಲಾ ದೋಚಿದ್ದಾರೆ. ಅವರಲ್ಲಿ ಕೆಲವರು ಒಳ ಉಡುಪುಗಳನ್ನು ಹಿಡಿದು ವೀಡಿಯೋ ಮಾಡಿ ಹಾಕಿರುವುದನ್ನು ನೊಡುವಾಗ ಅಲ್ಲಿಯವರ ಮನಸ್ಥಿತಿ ಹಾಗೂ ಅರಾಜಕತೆ ಎಷ್ಟರಮಟ್ಟಿಗಿದೆ ಎಂಬುವುದು ಸ್ಪಷ್ಟವಾಗಿದೆ.

ಅಲ್ಲಿಯ ನಾಗರಿಕರ ವರ್ತನೆ ನೋಡಿ ನೆಟ್ಟಿಗರ ಆಕ್ರೋಶ

ಅಲ್ಲಿಯ ಪ್ರಧಾನಿ ವಿರುದ್ಧ ತಿರುಗಿಬಿದ್ದು ಪ್ರತಿಭಟನೆ ಮಾಡುತ್ತಿರುವವರು ಇಷ್ಟೊಂದು ಕೀಳು ಮಟ್ಟದಲ್ಲಿ ವರ್ತಿಸುತ್ತಿರುವುದನ್ನು ನೋಡಿ ನಿಜವಾಗಲೂ ನಾಗರಿಕ ಸಮಾಜದಲ್ಲಿ ವಾಸಿಸುತ್ತಿದ್ದಾರಾ ಎಂದು ಕೇಳುತ್ತಿದ್ದಾರೆ.

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಕ್‌ ಹಸೀನಾರ ಸೀರೆಗಳನ್ನು ತುಂಬಿರುವ ಟ್ರೋಲಿ ಹೊತ್ತುಕೊಂಡು ಹೆಂಡತಿಯನ್ನು ಪ್ರಧಾನಿ ಮಾಡುತ್ತೇನೆ ಎಂದ ಭೂಪ
ಅವರೆಲ್ಲಾ ಯುವಕರು ದೇಶದ ಭವಿಷ್ಯವನ್ನು ಕಟ್ಟಬೇಕಾದವರು, ಆದರೆ ಅವರ ವರ್ತನೆ ನೋಡಿ ಬಾಂಗ್ಲಾ ದೇಶದ ಯುವಕರು ಇಷ್ಟೊಂದು ಅನಾಗರಿಕರೇ ಎಂದು ಕೇಳುತ್ತಿದ್ದಾರೆ, ಹಾಗಿದೆ ಅವರ ವರ್ತನೆ, ತಲೆಮೇಲೆ ಸೀರೆಯ ತುಂಬಿರುವ ಟ್ರೋಲಿ ಹೊತ್ತಿಕೊಂಡು ಈ ಸೀರೆಗಳನ್ನು ನನ್ನ ಹೆಂಡತಿಗೆ ಕೊಡುತ್ತೇನೆ, ಅವಳನ್ನ ಪ್ರಧಾನಿ ಮಾಡುತ್ತೇನೆ ಎಂದು ಹೇಳುತ್ತಿದ್ದಾನೆ.


ಬಾಂಗ್ಲಾದೇಶದ ಈ ಪರಿಸ್ಥಿತಿಗೆ ಕಾರಣವೇನು?

ಬಾಂಗ್ಲಾದೇಶದಲ್ಲಿ ಪ್ರತಿಭಟನೆ ಕಳೆದ ತಿಂಗಳಿನಿಂದ ಶುರುವಾಗಿದೆ, ಕೆಲಸದಲ್ಲಿ ಮೀಸಲಾತಿಗೆ ಕುರಿತಂತೆ ಪ್ರಾರಂಭವಾದ ಪ್ರತಿಭಟನೆಯದು. ಸರ್ಕಾರಿ ಕೆಲಸದಲ್ಲಿ ಮುಕ್ತಿಜೋಧಾಸ್ ಕುಟುಂಬದವರಿಗೆ ಶೇ. 30ರಷ್ಟು ಮೀಸಲಾತಿ ನೀಡಲಾಗಿತ್ತು, ಈ ಮುಕ್ತಿಜೋಧಾಸ್‌ 1971ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟದ ಮಾಡಿದ ವ್ಯಕ್ತಿ.

ಆಡಳಿತದಲ್ಲಿ ಅವಾಮಿ ಲೀಗ್‌ನ ಬೆಂಬಲಿಗರಿಗೆ ಕೆಲಸ ಕೊಡಿಸಲು ಮೆರಿಟ್‌ ಬದಲಿಗೆ ಇಂಥದ್ದೊಂದು ಕಾನೂನು ಜಾರಿಗೆ ತಂದಿದೆ ಎಂದು ಜನ ಆಕ್ರೋಶ ವ್ಯಕ್ತ ಪಡಿಸಲಾರಂಭಿಸಿದರು, ಪ್ರತಿಭಟನೆಗಳು ಶುರುವಾದವು, ಆವಾಗ ಶೇಕ್‌ ಹಸೀನ್ ಸ್ವಾತಂತ್ರ್ಯ ಹೋರಾಟಗಾರರ ಮೊಮ್ಮಕ್ಕಳಿಗೆ ಮೀಸಲಾತಿ ನೀಡದೆ ಇನ್ಯಾರಿಗೆ ನೀಡಬೇಕು, ರಾಜಾಕಾರ್ಸ್‌ನ ಮೊಮ್ಮಕ್ಕಳಿಗೆ ನೀಡಬೇಕೆ? ಎಂದು ಕೇಳಿದರು. ರಾಜಾಕಾರ್ಸ್ ಬಾಂಗ್ಲಾ ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಟಗಾರರ ಮೇಲೆ ದಾಳಿ ಮಾಡಿ ತುಂಬಾ ಹಿಂಸೆ ನೀಡಿದ ವ್ಯಕ್ತಿ, ಈತನ ಅಟ್ಟಹಾಸಕ್ಕೆ ಮಿತಿ ಇರಲಿಲ್ಲ, ಹೋರಾಟಗಾರರನ್ನು ಕೊಲ್ಲಿಸಿದ್ದ, ಹೋರಾಟಗಾರರ ಮನೆಯ ಹೆಣ್ಮಕ್ಕಳ ಮೇಲೆ ಅತ್ಯಾಚಾರ ಮಾಡಿದ್ದ, ಮಾಡಿಸಿದ್ದ.

ಇವರ ಈ ಮಾತಿನ ಬಳಿಕ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡು ಪ್ರಧಾನಿಗೆ ಪಲಾಯನ ಮಾಡುವ ಪರಿಸ್ಥಿತಿ ಉಂಟಾಗಿತ್ತು, ಭಾರತಕ್ಕೆ ಪಲಾಯನ ಮಾಡಿರುವ ಶೇಖ್‌ ಹಸೀನ್‌ ತನ್ನ ಹುದ್ದೆಯಿಂದ ಕೆಳಗಿಳಿದಿದ್ದಾರೆ, ಅಲ್ಲಿ ಸೇನಾಡಳಿತ ಬರಲಿದೆ.

Story first published: Wednesday, August 7, 2024, 7:30 [IST]
X
Desktop Bottom Promotion