Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಸ್ವಪ್ನಶಾಸ್ತ್ರ ಪ್ರಕಾರ ಈ 7ಕನಸು ಬಿದ್ದರೆ ಯಾರ ಬಳಿ ಹೇಳಬೇಡಿ, ಅದರ ಫಲ ಹೋಗುತ್ತೆ
ನಾನಾ ರೀತಿಯ ಕನಸು ಬೀಳುತ್ತದೆ, ಕೆಲವೊಮ್ಮೆ ಎಚ್ಚರವಾದಾಗ ಏನು ಕನಸು ಬಿತ್ತು ಎಂಬುವುದೇ ನೆನಪಿಗೆ ಬರುವುದಿಲ್ಲ, ಆದರೆ ಕೆಲವೊಂದು ಕನಸು ತುಂಬಾನೇ ಚೆನ್ನಾಗಿ ನೆನಪಿರುತ್ತದೆ, ಅದನ್ನು ನನಗೆ ಹೀಗೆ ಕನಸು ಬಿದ್ದಿತ್ತು ಎಂದು ಯಾರ ಬಳಿಯಾದರೂ ಹಂಚಿಕೊಳ್ಳುತ್ತೇವೆ ಅಲ್ವಾ? ಆದರೆ ಈ ಕನಸು ಬಿದ್ದರೆ ಮಾತ್ರ ಯಾರ ಬಳಿಯೂ ಹಂಚಿಕೊಳ್ಳಬಾರದು ಎಂದು ಸ್ವಪ್ನಶಾಸ್ತ್ರ ಹೇಳುತ್ತದೆ:

ನಾವು ಅಥವಾ ನಮಗೆ ಬೇಕಾದವರು ಸತ್ತಂತೆ ಕನಸು ಬಿದ್ದರೆ
ಜನನದ ಕನಸು ಕಾಣಬಾರದು ಆದರೆ ಸಾವು ಕನಸು ಬಿದ್ದರೆ ಶುಭ ಎಂದು ಸ್ವಪ್ನಶಾಸ್ತ್ರ ಹೇಳುತ್ತದೆ. ನಾವು ಸತ್ತು ಹೋದಂತೆ ಅಥವಾ ನಮಗೆ ತುಂಬಾ ಬೇಕಾದವರು ತೀರಿ ಹೋದರೆ ಜನನದ ಸುದ್ದಿ ಕೇಳುತ್ತದೆ ಎಂದು ಹೇಳಲಾಗುವುದು. ಆದರೆ ಈ ರೀತಿಯ ಕನಸು ಬಿದ್ದರೆ ನಾವು ಯಾರ ಬಳಿಯೂ ಹೇಳಬಾರದಂತೆ, ಹೇಳಿದರೆ ಆ ಕನಸಿನ ಶುಭ ಫಲ ಇಲ್ಲವಾಗುತ್ತೆ ಎಂದು ಹೇಳಲಾಗುವುದು.
ಕನಸಿನಲ್ಲಿ ಪೋಷಕರನ್ನು ಕಂಡರೆ
ಕನಸಿನಲ್ಲಿ ಪೋಷಕರನ್ನು ಕಂಡರೆ ಅದು ಶುಭದ ಸಂಕೇತ. ಅವರ ಜೊತೆ ನಾವು ಖುಷಿಯಿಂದ ಮಾತನಾಡುತ್ತಿರುವಂತೆ ಕನಸು ಕಂಡರೆ ಅದು ಶುಭದ ಸೂಚನೆ, ಅವರಿಗೆ ನೀರು ಕೊಡುವಂತೆ ಕಂಡರೆ ಇನ್ನೂ ಶುಭ, ಬದುಕಿನಲ್ಲಿ ಎಲ್ಲಾ ಒಳ್ಳೆಯದಾಗುತ್ತದೆ ಎಂಬುವುದರ ಸೂಚನೆಯಾಗಿದೆ. ತಂದೆ-ತಾಯಿ ಕನಸಿನಲ್ಲಿ ಬಂದರೆ ಪ್ರಗತಿಯಾಗಲಿದೆ ಎಂಬುವುದು ಸೂಚಿಸುತ್ತದೆ.
ದೇವರ ಕನಸು ಕಂಡರೆ
ದೇವರು ಕನಸಿನಲ್ಲಿ ಬಂದರೆ ಅದು ಶುಭ, ಆದರೆ ದೇವರ ಕನಸು ಬಿದ್ದರೆ ಯಾರ ಬಳಿಯೂ ಹೇಳಬೇಡಿ. ದೇವರು ಕನಸು ಬಿದ್ದರೆ ಅದು ಶುಭ ಸೂಚನೆಯಾಗಿದೆ, ನಮ್ಮ ಮನಸ್ಸಿನಲ್ಲಿ ಏನಾದರು ದುಃಖ, ನೋವಿದ್ದರೆ ಎಲ್ಲವೂ ದೂರಾಗಲಿದೆ ಎಂದು ಹೇಳಲಾಗುವುದು. ಆದರೆ ದೇವರು ಕನಸಿನಲ್ಲಿ ಬಿದ್ದರೆ ಅದನ್ನು ಯಾರ ಜೊತೆಯೂ ಹಂಚಿಕೊಳ್ಳಬೇಡಿ, ಅದು ಆ ಶುಭ ಫಲವನ್ನು ತಡೆಯುತ್ತದೆ.
ಹೂವಿನ ತೋಟ ಕನಸಿನಲ್ಲಿ ಬಿದ್ದರೆ
ಹೂವಿನ ತೋಟ ಕನಸಿನಲ್ಲಿ ಬಂದರೆ ಶುಭ ಎಂದು ಪರಿಗಣಿಸಲಾಗುವುದು. ಈ ರೀತಿಯ ಕನಸು ಸಂತೋಷ, ಸಮೃದ್ಧಿಯನ್ನು ತರುತ್ತದೆ ಎಂಬುವುದರ ಸೂಚನೆಯಾಗಿದೆ. ಹಾಗಾಗಿ ಹೂವಿನ ತೋಟ ಅಥವಾ ಹೂವುಗಳ ಕನಸು ಬಿದ್ದರೆ ಅದು ಶುಭ ಎಂದು ಪರಿಗಣಿಸಿ.
ಸಮುದ್ರದ ಕನಸು ಬಿದ್ದರೆ
ನೀವು ಏನೋ ಸಾಧನೆ ಮಾಡುವಿರಿ ಎಂಬುವುದನ್ನು ಸೂಚಿಸುತ್ತದೆ. ಈ ಕನಸು ನೀವು ದೊಡ್ಡ ವ್ಯಕ್ತಿಯಾಗುತ್ತೀರಿ ಎಂಬುವುದರ ಸೂಚನೆಯಾಗಿದೆ, ಹಾಗಾಗಿ ಇಂಥ ಕನಸು ಬಿದ್ದರೆ ಹೇಳಬೇಡಿ.
ಹೊಗೆಯಿಲ್ಲದ ಬೆಂಕಿಯ ಕನಸು ಬಿದ್ದರೆ
ನಿಮ್ಮ ಪಾಪ ಕರ್ಮಗಳು ದೂರಾಗಿದೆ, ಮೋಕ್ಷ ಸಿಗಲಿದೆ ಎಂಬುವುದನ್ನು ಸೂಚಿಸುತ್ತದೆ. ಆದರೆ ಹೊಗೆ ತುಂಬಿದ ಬೆಂಕಿ ಕಂಡರೆ ಅದು ಅಪಾಯದ ಸೂಚನೆಯೆಂದು ಹೇಳಲಾಗುವುದು.
ಚಿನ್ನದ ಕೊಡದಲ್ಲಿ ನೀರು
ನಿಮಗೆ ಚಿನ್ನ ಅಥವಾ ಚಿನ್ನದ ಕೊಡದಲ್ಲಿ ನೀರು ಕನಸಿನಲ್ಲಿ ಬಂದರೆ ಅದು ಶುಭದ ಸಂಕೇತವಾಗಿದೆ, ನಿಮ್ಮ ಸಂಪತ್ತು ವೃದ್ಧಿಸಲಿದೆ ಎಂಬುವುದನ್ನು ಸೂಚಿಸುತ್ತದೆ.



Click it and Unblock the Notifications