Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೇ 15ಕ್ಕೆ ಅಪರಾ ಏಕಾದಶಿ: ಈ ಏಕಾದಶಿ ಆಚರಣೆ ಮಾಡಿದರೆ ಸಿಗುವ ಮಹತ್ವದ ಫಲವೇನು ಗೊತ್ತೇ?
ಹಿಂದೂ ಕ್ಯಾಲೆಂಡರ್ ಪ್ರಕಾರ ಅಪರಾ ಏಕಾದಶಿ ಮೇ-ಜೂನ್ ನಡುವೆ ಬರುತ್ತದೆ. ಈ ವರ್ಷ ಮೇ 15ರಂದು ಅಪರಾ ಏಕಾದಶಿ ಆಚರಿಸಲಾಗುವುದು. ಜ್ಯೇಷ್ಠ ಮಾಸದ ಕೃಷ್ಣಪಕ್ಷದಲ್ಲಿ ಬರುವ ಏಕಾದಶಿಯನ್ನು ಅಪರಾ ಏಕಾದಶಿಯೆಂದು ಕರೆಯಲಾಗುವುದು.
ಅಪರಾ ಏಕಾದಶಿ ಮಹತ್ವವೇನು? ಪೂಜೆಗೆ ಶುಭಮುಹೂರ್ತ ಯಾವಾಗ? ಪಾರಣ ಸಮಯ ಯಾವಾಗ ಎಂಬೆಲ್ಲಾ ಮಾಹಿತಿ ತಿಳಿಯೋಣ ಬನ್ನಿ:
ಅಪರಾ ಏಕಾದಶಿ ದಿನಾಂಕ, ತಿಥಿ, ಶುಭಮುಹೂರ್ತ
ದಿನಾಂಕ ಮೇ 15
ತಿಥಿ ಪ್ರಾರಂಭ: ಮೇ 14 ರಾತ್ರಿ 02:46ರಿಂದ
ತಿಥಿ ಮುಕ್ತಾಯ: ಮೇ 15 ರಾತ್ರಿ 01:03ಕ್ಕೆ
ಪಾರಣ ಸಮಯ: ಮೇ 16 ಬೆಳಗ್ಗೆ 06:41ರಿಂದ 08:13ರವರೆಗೆ

ಅಪರ ಏಕಾದಶಿ ಉಪವಾಸದ ಪೂಜಾ ವಿಧಾನ
ಅಪರ ಏಕಾದಶಿಯಂದು ಉಪವಾಸ ಮಾಡುವುದರಿಂದ ಜನರು ಪಾಪಗಳಿಂದ ಮುಕ್ತಿ ಹೊಂದುತ್ತಾರೆ ಮತ್ತು ಭಾವಸಾಗರವನ್ನು ದಾಟುತ್ತಾರೆ. ಈ ಉಪವಾಸದ ಪೂಜಾ ವಿಧಾನ ಹೀಗಿದೆ:
*ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳಬೇಕು
* ನಂತರ ಮಡಿ ಬಟ್ಟೆ ಧರಿಸಬೇಕು
* ನಂತರ ದೇವರ ಕೋಣೆ ಸ್ವಚ್ಛ ಮಾಡಿ, ಶ್ರೀ ವಿಷ್ಣುವಿಗೆ ತುಪ್ಪದ ದೀಪ ಹಚ್ಚಿ
* ದೇವರಿಗೆ ಹಣ್ಣುಗಳು, ನೈವೇದ್ಯ ಅರ್ಪಿಸಿ.
* ಶ್ರೀವಿಷ್ಣುವಿನ ಪೂಜೆಯಲ್ಲಿ ತುಳಸಿ ಇರಲೇಬೇಕು.
* ಓಂ ನಮೋ ಭಗವತೀ ವಾಸುದೇವಾಯ ಮಂತ್ರ ಪಠಿಸಿ.
ಈ ದಿನ ಅಪರಾ ಏಕಾದಶಿ ಕತೆಯನ್ನು ಓದಿ.
* ಅಪರಾ ಏಕಾದಶಿಯ ಒಂದು ದಿನ ಮೊದಲು ಅಂದರೆ ದಶಮಿಯ ದಿನ ಸೂರ್ಯಾಸ್ತದ ನಂತರ ಆಹಾರ ಸೇವಿಸಬಾರದು. ರಾತ್ರಿ ದೇವರ ಧ್ಯಾನ ಮಾಡುತ್ತಾ ಮಲಗಬೇಕು.
*ಉಪವಾಸವನ್ನು ಮಾಡುವವರು ಮೋಸ, ಕೆಟ್ಟ ಕೆಲಸ ಮಾತನಾಡಬಾರದು. ಈ ದಿನ ಅನ್ನ ತಿನ್ನುವಂತಿಲ್ಲ, ಸುಳ್ಳು ಹೇಳುವಂತಿಲ್ಲ.
* ವಿಷ್ಣು ಸಹಸ್ರನಾಮವನ್ನು ಪಠಿಸಬೇಕು. ಏಕಾದಶಿಯಂದು ವಿಷ್ಣು ಸಹಸ್ರನಾಮವನ್ನು ಪಠಿಸುವ ವ್ಯಕ್ತಿಯು ವಿಷ್ಣುವಿನ ವಿಶೇಷ ಅನುಗ್ರಹವನ್ನು ಪಡೆಯುತ್ತಾನೆ.
ಅಪರಾ ಏಕಾದಶಿ ಉಪವಾಸದ ಮಹತ್ವ
ಪುರಾಣಗಳಲ್ಲಿ ಅಪಾರ ಏಕಾದಶಿಯ ಮಹತ್ವದ ಬಗ್ಗೆ ಹೇಳಲಾಗಿದೆ. ಧಾರ್ಮಿಕ ನಂಬಿಕೆ ಪ್ರಕಾರ ಈ ಏಕಾದಶಿ ಆಚರಿಸುವುದರಿಂದ ಪಿತೃದೋಷದಿಂದ ಮುಕ್ತಿ ಸಿಗುವುದು ಎಂದು ಹೇಳಲಾಗಿದೆ. ಗಂಗಾನದಿಯ ದಡದಲ್ಲಿ ಪೂರ್ವಜರಿಗೆ ಪಿಂಡವನ್ನು ಅರ್ಪಿಸುವುದರಿಂದ ಸಿಗುವ ಫಲ ಈ ಏಕಾದಶಿ ಆಚರಿಸುವುದರಿಂದ ಸಿಗಲಿದೆ. ದೇವಾಲಯಕ್ಕೆ ಹೋಗಿ ಹೋಮ, ಹವನಗಳನ್ನು ಮಾಡಿಸುವ ಫಲ ಈ ಏಕಾದಶಿ ಆಚರಣೆಯಿಂದ ಸಿಗುವುದು.
ಪೌರಾಣಿಕ ಕತೆ
ಪ್ರಾಚೀನ ಕಾಲದಲ್ಲಿ ಮಹಿಧ್ವಜ ಎಂಬ ಧರ್ಮನಿಷ್ಠ ರಾಜನಿದ್ದ. ಅವನ ಕಿರಿಯ ಸಹೋದರ ವಜ್ರಧ್ವಜನು ತನ್ನ ಅಣ್ಣನ ಮೇಲೆ ದ್ವೇಷ ಸಾಧಿಸಲು ಹೊಂಚು ಹಾಕುತ್ತಿದ್ದ. ಅವಕಾಶವಾದಿ ತಮ್ಮ ವಜ್ರಧ್ವಜನು ಅಣ್ಣನನ್ನು ಕೊಂದು ಅವನ ದೇಹವನ್ನು ಕಾಡಿನಲ್ಲಿಆಲದ ಮರದ ಕೆಳಗೆ ಹೂಳಿದನು. ಅಕಾಲಿಕ ಮರಣದಿಂದಾಗಿ, ರಾಜನ ಆತ್ಮವು ಪ್ರೇತವಾಗಿ ಆಲದ ಮರದಲ್ಲಿ ನೆಲೆಸಿತು. ಆ ಪ್ರೇತ ಜನರಿಗೆ ತೊಂದರೆಯನ್ನು ಕೊಡಲಾರಂಬಿಸಿತು. ಒಂದು ದಿನ ಋಷಿಯೊಬ್ಬರು ಅದೇ ದಾರಿಯಲ್ಲಿ ಹೋಗುವಾಗ ಪ್ರೇತ ಅವರಿಗೂ ತೊಂದರೆ ಕೊಡಲು ಮುಂದಾಗುತ್ತೆ, ಋಷಿಗೆ ತನ್ನ ದಿವ್ಯ ಶಕ್ತಿಯಿಂದ ನಡೆದ ಘಟನೆ ತಿಳಿದು, ಅಪರಾ ಏಕಾದಶಿಯಂದು ಉಪವಾಸವಿದ್ದು ಆ ಆತ್ಮಕ್ಕೆ ಮೋಕ್ಷ ಕೊಡಿಸುತ್ತಾರೆ.



Click it and Unblock the Notifications