Latest Updates
-
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್
ಮೇ 15ಕ್ಕೆ ಅಪರಾ ಏಕಾದಶಿ: ಈ ಏಕಾದಶಿ ಆಚರಣೆ ಮಾಡಿದರೆ ಸಿಗುವ ಮಹತ್ವದ ಫಲವೇನು ಗೊತ್ತೇ?
ಹಿಂದೂ ಕ್ಯಾಲೆಂಡರ್ ಪ್ರಕಾರ ಅಪರಾ ಏಕಾದಶಿ ಮೇ-ಜೂನ್ ನಡುವೆ ಬರುತ್ತದೆ. ಈ ವರ್ಷ ಮೇ 15ರಂದು ಅಪರಾ ಏಕಾದಶಿ ಆಚರಿಸಲಾಗುವುದು. ಜ್ಯೇಷ್ಠ ಮಾಸದ ಕೃಷ್ಣಪಕ್ಷದಲ್ಲಿ ಬರುವ ಏಕಾದಶಿಯನ್ನು ಅಪರಾ ಏಕಾದಶಿಯೆಂದು ಕರೆಯಲಾಗುವುದು.
ಅಪರಾ ಏಕಾದಶಿ ಮಹತ್ವವೇನು? ಪೂಜೆಗೆ ಶುಭಮುಹೂರ್ತ ಯಾವಾಗ? ಪಾರಣ ಸಮಯ ಯಾವಾಗ ಎಂಬೆಲ್ಲಾ ಮಾಹಿತಿ ತಿಳಿಯೋಣ ಬನ್ನಿ:
ಅಪರಾ ಏಕಾದಶಿ ದಿನಾಂಕ, ತಿಥಿ, ಶುಭಮುಹೂರ್ತ
ದಿನಾಂಕ ಮೇ 15
ತಿಥಿ ಪ್ರಾರಂಭ: ಮೇ 14 ರಾತ್ರಿ 02:46ರಿಂದ
ತಿಥಿ ಮುಕ್ತಾಯ: ಮೇ 15 ರಾತ್ರಿ 01:03ಕ್ಕೆ
ಪಾರಣ ಸಮಯ: ಮೇ 16 ಬೆಳಗ್ಗೆ 06:41ರಿಂದ 08:13ರವರೆಗೆ

ಅಪರ ಏಕಾದಶಿ ಉಪವಾಸದ ಪೂಜಾ ವಿಧಾನ
ಅಪರ ಏಕಾದಶಿಯಂದು ಉಪವಾಸ ಮಾಡುವುದರಿಂದ ಜನರು ಪಾಪಗಳಿಂದ ಮುಕ್ತಿ ಹೊಂದುತ್ತಾರೆ ಮತ್ತು ಭಾವಸಾಗರವನ್ನು ದಾಟುತ್ತಾರೆ. ಈ ಉಪವಾಸದ ಪೂಜಾ ವಿಧಾನ ಹೀಗಿದೆ:
*ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳಬೇಕು
* ನಂತರ ಮಡಿ ಬಟ್ಟೆ ಧರಿಸಬೇಕು
* ನಂತರ ದೇವರ ಕೋಣೆ ಸ್ವಚ್ಛ ಮಾಡಿ, ಶ್ರೀ ವಿಷ್ಣುವಿಗೆ ತುಪ್ಪದ ದೀಪ ಹಚ್ಚಿ
* ದೇವರಿಗೆ ಹಣ್ಣುಗಳು, ನೈವೇದ್ಯ ಅರ್ಪಿಸಿ.
* ಶ್ರೀವಿಷ್ಣುವಿನ ಪೂಜೆಯಲ್ಲಿ ತುಳಸಿ ಇರಲೇಬೇಕು.
* ಓಂ ನಮೋ ಭಗವತೀ ವಾಸುದೇವಾಯ ಮಂತ್ರ ಪಠಿಸಿ.
ಈ ದಿನ ಅಪರಾ ಏಕಾದಶಿ ಕತೆಯನ್ನು ಓದಿ.
* ಅಪರಾ ಏಕಾದಶಿಯ ಒಂದು ದಿನ ಮೊದಲು ಅಂದರೆ ದಶಮಿಯ ದಿನ ಸೂರ್ಯಾಸ್ತದ ನಂತರ ಆಹಾರ ಸೇವಿಸಬಾರದು. ರಾತ್ರಿ ದೇವರ ಧ್ಯಾನ ಮಾಡುತ್ತಾ ಮಲಗಬೇಕು.
*ಉಪವಾಸವನ್ನು ಮಾಡುವವರು ಮೋಸ, ಕೆಟ್ಟ ಕೆಲಸ ಮಾತನಾಡಬಾರದು. ಈ ದಿನ ಅನ್ನ ತಿನ್ನುವಂತಿಲ್ಲ, ಸುಳ್ಳು ಹೇಳುವಂತಿಲ್ಲ.
* ವಿಷ್ಣು ಸಹಸ್ರನಾಮವನ್ನು ಪಠಿಸಬೇಕು. ಏಕಾದಶಿಯಂದು ವಿಷ್ಣು ಸಹಸ್ರನಾಮವನ್ನು ಪಠಿಸುವ ವ್ಯಕ್ತಿಯು ವಿಷ್ಣುವಿನ ವಿಶೇಷ ಅನುಗ್ರಹವನ್ನು ಪಡೆಯುತ್ತಾನೆ.
ಅಪರಾ ಏಕಾದಶಿ ಉಪವಾಸದ ಮಹತ್ವ
ಪುರಾಣಗಳಲ್ಲಿ ಅಪಾರ ಏಕಾದಶಿಯ ಮಹತ್ವದ ಬಗ್ಗೆ ಹೇಳಲಾಗಿದೆ. ಧಾರ್ಮಿಕ ನಂಬಿಕೆ ಪ್ರಕಾರ ಈ ಏಕಾದಶಿ ಆಚರಿಸುವುದರಿಂದ ಪಿತೃದೋಷದಿಂದ ಮುಕ್ತಿ ಸಿಗುವುದು ಎಂದು ಹೇಳಲಾಗಿದೆ. ಗಂಗಾನದಿಯ ದಡದಲ್ಲಿ ಪೂರ್ವಜರಿಗೆ ಪಿಂಡವನ್ನು ಅರ್ಪಿಸುವುದರಿಂದ ಸಿಗುವ ಫಲ ಈ ಏಕಾದಶಿ ಆಚರಿಸುವುದರಿಂದ ಸಿಗಲಿದೆ. ದೇವಾಲಯಕ್ಕೆ ಹೋಗಿ ಹೋಮ, ಹವನಗಳನ್ನು ಮಾಡಿಸುವ ಫಲ ಈ ಏಕಾದಶಿ ಆಚರಣೆಯಿಂದ ಸಿಗುವುದು.
ಪೌರಾಣಿಕ ಕತೆ
ಪ್ರಾಚೀನ ಕಾಲದಲ್ಲಿ ಮಹಿಧ್ವಜ ಎಂಬ ಧರ್ಮನಿಷ್ಠ ರಾಜನಿದ್ದ. ಅವನ ಕಿರಿಯ ಸಹೋದರ ವಜ್ರಧ್ವಜನು ತನ್ನ ಅಣ್ಣನ ಮೇಲೆ ದ್ವೇಷ ಸಾಧಿಸಲು ಹೊಂಚು ಹಾಕುತ್ತಿದ್ದ. ಅವಕಾಶವಾದಿ ತಮ್ಮ ವಜ್ರಧ್ವಜನು ಅಣ್ಣನನ್ನು ಕೊಂದು ಅವನ ದೇಹವನ್ನು ಕಾಡಿನಲ್ಲಿಆಲದ ಮರದ ಕೆಳಗೆ ಹೂಳಿದನು. ಅಕಾಲಿಕ ಮರಣದಿಂದಾಗಿ, ರಾಜನ ಆತ್ಮವು ಪ್ರೇತವಾಗಿ ಆಲದ ಮರದಲ್ಲಿ ನೆಲೆಸಿತು. ಆ ಪ್ರೇತ ಜನರಿಗೆ ತೊಂದರೆಯನ್ನು ಕೊಡಲಾರಂಬಿಸಿತು. ಒಂದು ದಿನ ಋಷಿಯೊಬ್ಬರು ಅದೇ ದಾರಿಯಲ್ಲಿ ಹೋಗುವಾಗ ಪ್ರೇತ ಅವರಿಗೂ ತೊಂದರೆ ಕೊಡಲು ಮುಂದಾಗುತ್ತೆ, ಋಷಿಗೆ ತನ್ನ ದಿವ್ಯ ಶಕ್ತಿಯಿಂದ ನಡೆದ ಘಟನೆ ತಿಳಿದು, ಅಪರಾ ಏಕಾದಶಿಯಂದು ಉಪವಾಸವಿದ್ದು ಆ ಆತ್ಮಕ್ಕೆ ಮೋಕ್ಷ ಕೊಡಿಸುತ್ತಾರೆ.



Click it and Unblock the Notifications