Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
2024 ಮಾರ್ಚ್ 20ಕ್ಕೆ ಅಮಲಕಿ ಏಕಾದಶಿ: ಈ ದಿನ ನೆಲ್ಲಿಕಾಯಿ ಗಿಡ ಪೂಜಿಸುವುದೇಕೆ? ಈ ಏಕಾದಶಿಯ ಮಹತ್ವವೇನು?
ಪ್ರತಿ ತಿಂಗಳು ಎರಡು ಏಕಾದಶಿ ಬರುತ್ತದೆ, ವರ್ಷದಲ್ಲಿ 24 ಏಕಾದಶಿ. ಈ ಏಕಾದಶಿ ಶ್ರೀ ವಿಷ್ಣುವಿಗೆ ಮೀಸಲಾದ ವಿಶೇಷ ದಿನ, ಆದರೆ ಪ್ರತಿಯೊಂದು ಏಕಾದಶಿಯನ್ನು ಭಿನ್ನವಾಗಿ ಆಚರಿಸಲಾಗುವುದು ಹಾಗೂ ಈ ಏಕಾದಶಿ ಅದರದ್ದೇ ಆದ ಮಹತ್ವ ಹೊಂದಿದೆ. ಈ ಮಾರ್ಚ್ 20ಕ್ಕೆ ಅಮಲಕಿ ಏಕಾದಶಿಯನ್ನು ಆಚರಿಸಲಾಗುವುದು.
ಈ ಅಮಲಕಿ ಏಕಾದಶಿಯಂದು ನೆಲ್ಲಿಕಾಯಿ ಗಿಡಕ್ಕೆ ತುಂಬಾನೇ ಮಹತ್ವ ನೀಡಲಾಗಿದೆ, ಪೂಜಾ ಸಮಯ, ಪೂಜಾ ವಿಧಿ ಹಾಗೂ ಅಮಲಕಿ ಏಕಾದಶಿಯ ಮಹತ್ವವವೇನು ಎಂದು ನೋಡೋಣ ಬನ್ನಿ:

ಅಮಲಕಿ ಏಕಾದಶಿ
ದಿನಾಂಕ: ಮಾರ್ಚ್ 20
ಏಕಾದಶಿ ತಿಥಿ ಪ್ರಾರಂಭ: ಮಾರ್ಚ್ 19 ರಾತ್ರಿ 12:21
ಏಕಾದಶಿ ತಿಥಿ ಮುಕ್ತಾಯ: ಮಾರ್ಚ್ 21 ಮುಂಜಾನೆ 02:22ರವರೆಗೆ
ಪಾರಣ ಸಮಯ: ಮಾರ್ಚ್ 21, ಬೆಳಗ್ಗೆ 08:58ರ ನಂತರ
ಅಮಲಕಿ ಏಕಾದಶಿಯಂದು ನೆಲ್ಲಿಕಾಯಿ ಗಿಡಕ್ಕೆ ಪೂಜೆ
ಅಮಲಕಿ ಏಕಾದಶಿಯಂದು ನೆಲ್ಲಿಕಾಯಿ ಗಿಡಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಈ ದಿನ ನೆಲ್ಲಿಕಾಯಿ ಗಿಡವನ್ನು ಮನೆ ತಂದು ನೆಟ್ಟು ಅಥವಾ ಮನೆಯಲ್ಲಿರುವ ನೆಲ್ಲಿಕಾಯಿ ಗಿಡಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುವುದು.
ಅಮಲಕಿ ಏಕಾದಶಿಯಂದು ನೆಲ್ಲಿಕಾಯಿ ಪೂಜಿಸುವುದು ಏಕೆ?
ನೆಲ್ಲಿಕಾಯಿ ಗಿಡವು ಶ್ರೀ ವಿಷ್ಣುವಿಗೆ ಪ್ರಿಯವಾದ ಗಿಡ, ಈ ಗಿಡದಲ್ಲಿ ಮಹಾಲಕ್ಷ್ಮಿ ಹಾಗೂ ಶ್ರೀ ವಿಷ್ಣು ನೆಲೆಸಿರುತ್ತಾರೆ ಎಂದು ಹೇಳಲಾಗುವುದು. ಹಾಗಾಗಿ ಅಮಲಕಿ ಏಕಾದಶಿಯಂದು ಶ್ರೀ ವಿಷ್ಣುವನ್ನು ಆರಾಧಿಸಲಾಗುವುದು.
ಸಂತಾನ ಭಾಗ್ಯ ದೊರೆಯುವುದು
ಅಮಲಕಿ ಏಕಾದಶಿಯ ಮಹತ್ವವೆಂದರೆ ದಂಪತಿ ಸಂತಾನ ಭಾಗ್ಯಕ್ಕಾಗಿ ಉಪವಾಸವಿದ್ದು ಈ ಏಕಾದಶಿಯನ್ನು ಆಚರಿಸಲಾಗುವುದು. ಈ ಏಕಾದಶಿ ಆಚರಿಸುವುದರಿಂದ ಸಂತಾ ಭಾಗ್ಯ ಲಭಿಸುವುದು ಎಂದು ನಂಬಲಾಗಿದೆ. ಈ ದಿನ ಯಾರು ಶ್ರೀ ವಿಷ್ಣುವನ್ನು ಪೂಜಿಸುತ್ತಾರೆ ಅವರಿಗೆ ಪುಣ್ಯ ಕ್ಷೇತ್ರಗಳಿಗೆ ಹೋದಾಗ ಸಿಗುವ, ಯಜ್ಞ -ಯಾಗ ಮಾಡಿದಾಗ ಸಿಗುವ ಪುಣ್ಯ ಸಿಗಲಿದೆ.
ಅಮಲಕಿ ಏಕಾದಶಿಯ ಪೂಜಾ ವಿಧಿಗಳೇನು?
- ಅಮಲಕಿ ಏಕಾದಶಿಯಂದು ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನ ಮಾಡಿ, ಪೂಜೆಗೆ ಸಿದ್ಧತೆಗಳನ್ನು ಮಾಡಿ ಉಪವಾಸಕ್ಕೆ ಸಂಕಲ್ಪ ಮಾಡಬೇಕು.
- ನಂತರ ಶ್ರೀ ವಿಷ್ಣುವಿಗೆ ತುಪ್ಪದ ದೀಪ ಹಚ್ಚಿ
- ನೆಲ್ಲಿಕಾಯಿ ಹಾಗೂ ತುಳಸಿ ಗಿಡವನ್ನು ಹೂವುಗಳಿಂದ ಅಲಂಕರಿಸಿ, ಶ್ರೀ ವಿಷ್ಣುವಿನ ಫೋಟೋ ಬಳಿ ನೆಲ್ಲಿಕಾಯಿ ಇರುವ ಕೊಂಬೆಗಳನ್ನು ಅರ್ಪಿಸಲಾಗುವುದುನೆಲ್ಲಿಕಾಯಿ ಗಿಡದ ಕೆಳಗಡೆ ಕಲಶ ಸ್ಥಾಪಿಸಿ
- ಈ ದಿನ ನೈವೇದ್ಯ ಮಾಡಿದ ಮೇಲೆ ಅದರಲ್ಲಿ ನೆಲ್ಲಿಕಾಯಿ ಇಟ್ಟು ದೇವರಿಗೆ ಅರ್ಪಿಸಿ
- ಶ್ರೀ ವಿಷ್ಣು ಜೊತೆಗೆ ಲಕ್ಷ್ಮಿಗೂ ಪೂಜೆ ಸಲ್ಲಿಸಿ, ಸಂಜೆ ಲಕ್ಷ್ಮಿಗೆ ವಿಶೇಷ ಪೂಜೆ ಸಲ್ಲಿಸಿ
- ದೇವರಿಗೆ ಇಟ್ಟ ನೈವೇದ್ಯವನ್ನು ಬಡವರಿಗೆ ದಾನ ಮಾಡಿ.
- ನಂತರ ಪಾರಣ ಸಮಯದಲ್ಲಿ ಸ್ವಲ್ಪ ಪ್ರಸಾದ ಬಾಯಿಗೆ ಹಾಕಿ ಉಪವಾಸ ಮುರಿಯಿರಿ.
- ಈ ದಿನ ಬಡವರಿಗೆ ನಿಮ್ಮ ಶಕ್ತಿಗೆ ಅನುಸಾರ ದಾನ ಮಾಡಿ.
ವಿಷ್ಣು ಮಂತ್ರ
ಓಂ ನಮೋ ಭಗವತೇ ವಾಸುದೇವಾಯ
ಅರ್ಥ: ಓ ವಾಸುದೇವನೇ ನಿನಗೆ ನನ್ನ ಪ್ರಣಾಮಗಳು
ವಿಷ್ಣು ಗಾಯತ್ರಿ ಮಂತ್ರ:
ಓಂ ನಾರಾಯಣಯೇ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ವಿಷ್ಣು ಪ್ರಚೋದಯಾತ್
ಮುಕ್ತಿ ಮಂತ್ರ:
ಓಂ ಭಗವತೇ ವಾಸುದೇವಾಯ ನಮಃ
ಈ ಮಂತ್ರ ಪಠಣೆ ಮಾಡುವುದರಿಂದ ಒಬ್ಬರ ಜೀವನದ ಅಡೆತಡೆಗಳು ದೂರಾಗುತ್ತದೆ.
ವಿಷ್ಣು ಶಾಂತಾಕಾರಂ ಮಂತ್ರ:
ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ ವಿಶ್ವಧಾರಂ ಗಗನಸದ್ರಿಶಂ,
ಮೇಘವರ್ಣಂ ಶುಭಾಂಗಂ ಲಕ್ಷ್ಮಿಂಕಾತಂ ಕಮಲಾನಯನಂ,
ಯೋಗಿಭಿರ್ಧ್ಯಾನಗಮ್ಯಂ ವಂದೇ ವಿಷ್ಣುಂ ಭವಭಯಹರಂ, ಸರ್ವಲೋಕೈಕನಾಥಂ
ವಿಷ್ಣು ಮಂಗಳಂ ಮಂತ್ರ:
ಮಂಗಳಂ ಭಗವಾನ್ ವಿಷ್ಣು, ಮಂಗಳಂ ಗರುಡಾಧ್ವಜಾ |
ಮಂಗಳಂ ಪುಂಡರೀಕಾಕ್ಷಾ, ಮಂಗಳಂ ತನ್ನೋಂ ಹರಿಹೀ ||



Click it and Unblock the Notifications