Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
Ahmedabad Plane Crash: ವಿಮಾನ ದುರಂತ ವಾರಕ್ಕೂ ಮುನ್ನವೇ ಊಹಿಸಿದ್ದ ಜ್ಯೋತಿಷಿ: ಪೋಸ್ಟ್ ವೈರಲ್!
Ahmedabad Plane Crash: ಅಹಮದಾಬಾದ್ನಲ್ಲಿ ನಡೆದಿರುವ ವಿಮಾನ ದುರಂತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ ಏರುತ್ತಲೇ ಇದೆ. ಆದ್ರೆ ಈ ಘಟನೆಯನ್ನು ಜ್ಯೋತಿಷಿಯೊಬ್ಬರು ಮೊದಲೇ ಊಹಿಸಿದ್ದರು ಎಂಬುದು ನಿಮಗೆ ಗೊತ್ತಾ. ಈ ದುರಂತ ಭಾರತದಲ್ಲಿ ನಡೆಯಲಿದೆ ಎಂದು ಮೊದಲೇ ಊಹಿಸಿದ್ದರು. ಅದರಂತೆ ಅವರು ನುಡಿದಿರುವ ಭವಿಷ್ಯ ಈಗ ನಿಜವಾಗಿರುವುದು ಎಲ್ಲರಿಗೂ ಆಘಾತ ತಂದಿದೆ.
ಎಕ್ಸ್ನಲ್ಲಿ @AstroSharmistha ಹ್ಯಾಂಡಲ್ ಬಳಸುವ ಜ್ಯೋತಿಷಿ ಶರ್ಮಿಷ್ಠ, ಜೂನ್ 5 ರಂದು ಸಂಭಾವ್ಯ ವಿಮಾನ ಅಪಘಾತ ಸೇರಿದಂತೆ ಸಂಭಾವ್ಯ ವಾಯುಯಾನ ಘಟನೆಗಳ ಬಗ್ಗೆ ಎಚ್ಚರಿಕೆ ನೀಡಿದ್ದರು. ಈ ಎಚ್ಚರಿಕೆಯ ಬೆನ್ನಲ್ಲೇ ಈಗ ಏರ್ ಇಂಡಿಯಾ ವಿಮಾನ ಪತನಗೊಂಡಿರುವುದು ಅವರ ಪೋಸ್ಟ್ ವೈರಲ್ ಆಗುವಂತೆ ಮಾಡಿದೆ. ಅದರಲ್ಲೂ ಎಲ್ಲರಿಗೂ ಶಾಕ್ ನೀಡಿದೆ.

ಶರ್ಮಿಷ್ಠ ಅವರು ಜ್ಯೋತಿಷಿಯಾಗಿದ್ದು 2024ರಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದರು. 2025ರ ವರ್ಷವು ವಿಮಾನಯಾನ ವಲಯಕ್ಕೆ ಉತ್ತಮವಾಗಿದೆ. ಆದರೆ ವಿಮಾನ ಅಪಘಾತದಂತಹ ಸುದ್ದಿಗಳು ನಮಗೆ ಆಘಾತ ತರಬಹುದು. ಏಕೆಂದರೆ ಮೃಗಶಿರ ನಕ್ಷತ್ರದಲ್ಲಿ ಹಾಗೂ ಆರ್ಧ್ರ ನಕ್ಷತ್ರದಲ್ಲಿ ಗುರುವಿನ ಸ್ಥಾನ ಪಲ್ಲಟವನ್ನು ಅವರು ಉಲ್ಲೇಖಿಸಿದ್ದರು.
ಸದ್ಯ ಈಗ ನಡೆದಿರುವ ಈ ಘಟನೆಯೊಂದಿಗೆ ಅವರ ಟ್ವೀಟ್ ಕೂಡ ಬಹಳ ವೈರಲ್ ಆಗುತ್ತಿದೆ. ಅದರಲ್ಲೂ ಅವರ ಪೋಸ್ಟ್ ನೋಡಿದ ಮಂದಿ ಆಘಾತಕ್ಕೆ ಒಳಗಾಗಿದ್ದಾರೆ. ಆದ್ರೆ ಕೆಲವರು ಇದು ಕಾಕತಾಳಿಯ ಎಂದು ಹೇಳಿದರೆ ಮತ್ತೆ ಕೆಲವರು ಇದನ್ನು ಅಚ್ಚರಿ ಎಂದು ಕರೆದಿದ್ದಾರೆ. ಶರ್ಮಿಷ್ಠಾ ಅವರು ಹೈದರಾಬಾದ್ನಲ್ಲಿ ಟಾಟಾದ ರಫೇಲ್ ವಿಮಾನ ನಿರ್ಮಾಣ ಯೋಜನೆ ಮತ್ತು ಮುಂದಿನ ಎರಡು ವರ್ಷಗಳಲ್ಲಿ ಬಾಹ್ಯಾಕಾಶ ಪ್ರವಾಸೋದ್ಯಮ ಸೇರಿದಂತೆ ಇಸ್ರೋದ ಬಾಹ್ಯಾಕಾಶ ಎಂಜಿನಿಯರಿಂಗ್ನಲ್ಲಿನ ಪ್ರಗತಿಯನ್ನು ಉಲ್ಲೇಖಿಸಿದ್ದರು.
ಅಂಗಾರಕ ಯೋಗದಲ್ಲಿ ದುರಂತ
ಜ್ಯೋತಿಷ್ಯಶಾಸ್ತ್ರದಲ್ಲಿ ರಾಹುವನ್ನು ಕೆಡುಕಿನ ಗ್ರಹ ಎಂದು ಪರಿಗಣಿಸಲಾಗಿದೆ. ಇನ್ನು ಈಗ ಮಂಗಳ ಮತ್ತು ಕೇತುಗಳ ಸಂಯೋಗವಾದಾಗಲೆಲ್ಲಾ ಅಂಗಾರಕ ಯೋಗವು ರೂಪುಗೊಳ್ಳುತ್ತದೆ ಎಂದು ಜ್ಯೋತಿಷಿ ದೀಪಕ್ ದುಬೆ ಹೇಳಿದ್ದಾರೆ. ಈ ಸಮಯದಲ್ಲಿ ಬೆಂಕಿ ಅವಘಡ, ನೋವು, ಪ್ರಾಣ ಹಾನಿಯ ಬಲವಾದ ಸಾಧ್ಯತೆ ಇರಲಿದೆ ಎಂದಿದ್ದಾರೆ.
ಪಂಡಿತ್ ದೀಪಕ್ ದುಬೆ ಅವರು ಮಂಗಳ ಮತ್ತು ಕೇತುಗಳ ಸಂಯೋಗದಿಂದ ಅಂಗಾರಕ ಯೋಗವು ರೂಪುಗೊಳ್ಳುತ್ತದೆ ಎಂದು ಹೇಳಿದರು. ಅಂಗಾರಕ ಪದದಿಂದ ಅದು ಬೆಂಕಿಯ ಅರ್ಥ ಎಂದು ಸ್ಪಷ್ಟವಾಗುತ್ತದೆ. ಇಂತಹ ಸಮಯದಲ್ಲಿ ಬೆಂಕಿ ಅವಘಡ ಹೆಚ್ಚು. ಅದರಲ್ಲೂ ಅಂಗಾರಕ ಯೋಗವು ಸಿಂಹ ರಾಶಿಯಲ್ಲಿದ್ದರೆ, ಅದು ತುಂಬಾ ಅಪಾಯಕಾರಿ ಎಂದು ದೀಪಕ್ ದುಬೆ ಹೇಳಿದರು. ಅಂಗಾರಕ ಯೋಗವು ಪ್ರಸ್ತುತ ಸಿಂಹ ರಾಶಿಯಲ್ಲಿದೆ ಮತ್ತು ಮಂಗಳವು ಕೇತು ನಕ್ಷತ್ರಪುಂಜದಲ್ಲಿದೆ. ಅದೇ ಸಮಯದಲ್ಲಿ ಮಂಗಳ ಮತ್ತು ಶನಿಯ ನಡುವೆ ಖಡಾಷ್ಟಕ ಯೋಗವೂ ಇದೆ. ಈ ಎಲ್ಲಾ ಅಂಶಗಳು ಅವಘಡಗಳ ಸೂಚಕ ಎಂದು ಅವರು ಹೇಳಿದ್ದಾರೆ. ಈ ಅಂಗಾರಕ ಯೋಗವು ಜೂನ್ 7ರಿಂದ ಆರಂಭಗೊಂಡಿದೆ. ಈ ಯೋಗದಲ್ಲಿ ದೊಡ್ಡ ಅವಘಡ ನಡೆಯಲಿದೆ ಎಂದು ಮೊದಲೇ ಊಹಿಸಲಾಗಿತ್ತು.



Click it and Unblock the Notifications