Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದೇವಾಲಯಕ್ಕೆ ಆನೆ ಕೊಡುಗೆ ನೀಡಿದ ನಟಿ ಪ್ರಿಯಾಮಣಿ..! ಆದ್ರೆ ಇಲ್ಲೊಂದು ಅಚ್ಚರಿ ಕಾದಿದೆ..!
ಹಿಂದೂ ದೇವಾಲಯಗಳಲ್ಲಿ ಆನೆಗಳು ಇರುವುದು ಸಾಮಾನ್ಯ. ಆನೆಗಳನ್ನು ಸಹ ಪೂಜ್ಯನೀಯ ಭಾವನೆಯಿಂದ ನೋಡಲಾಗುತ್ತದೆ. ಅವುಗಳಿಗೂ ಪೂಜೆ ನೆರವೇರುವುದು ಹಿಂದೂ ಧರ್ಮದ ಆಚರಣೆಗಳಲ್ಲಿ ಅಡಗಿದೆ. ಆದರೆ ದೇವಾಲಯದಲ್ಲಿ ಆನೆ ಸಾಕುವುದಕ್ಕೆ ವಿರೋಧ ಉಂಟಾಗಿತ್ತು. ಆನೆಗಳನ್ನು ದೇವಾಲಯಕ್ಕೆ ತರುವ ಮುನ್ನ ಅವುಗಳಿಗೆ ಬುದ್ಧ ಕಲಿಸುವ ನೆಪದಲ್ಲಿ ಹಿಂಸೆ ನೀಡಲಾಗುತ್ತದೆ ಎಂಬುದು ವಾದವಾಗಿತ್ತು.
ಇದರಿಂದ ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ ಇಂಡಿಯಾ ಆನೆ ಸಾಕುವುದನ್ನು ಹಾಗೂ ಅದರ ಮೇಲಿನ ಹಿಂಸೆಯನ್ನು ಖಂಡಿಸುತ್ತಾ ಬಂದಿತ್ತು. ಆದರೆ ಈದೀಗ ದೇವಾಲಯಕ್ಕೆ ಮೆಕಾನಿಕಲ್ ಆನೆ ಬಂದಿದ್ದು, ನಟಿ ಪ್ರಿಯಾಮಣಿ ಈ ಆನೆಯನ್ನು ದೇವಾಲಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

ಹಾಗಾದರೆ ಎಲ್ಲಿಯ ದೇವಾಲಯ? ಏನಿದು ಮೆಕಾನಿಕಲ್ ಆನೆ? ಕೊಡುಗೆ ನೀಡಿದ್ದೇಕೆ ಎಂಬ ಕುರಿತು ತಿಳಿಯೋಣ. ಕೇರಳದ ಅತ್ಯಂತ ಪುರಾತನ ದೇವಾಲಯವು ಜೀವಂತ ಆನೆಯ ಬದಲು ಅದೇ ಗಾತ್ರದ ಯಾಂತ್ರಿಕ ಆನೆಯನ್ನು ದೇವಾಲಯದ ಕಾರ್ಯಗಳಿಗೆ ಬಳಸುವ ಮೂಲಕ ಗಮನ ಸೆಳೆದಿದೆ.
ನಟಿ ಪ್ರಿಯಾಮಣಿ, ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA) ಇಂಡಿಯಾ ಜೊತೆ ಸೇರಿ ಈ ಆನೆಯನ್ನು ದೇವಾಲಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಭಾನುವಾರ ನಡೆದ ಅದ್ಧೂರಿ ಉದ್ಘಾಟನಾ ಸಮಾರಂಭದಲ್ಲಿ ಆನೆಯನ್ನು ಸ್ವಾಗತಿಸಲಾಗಿದೆ. ಆನೆ ಸಹ ಜೀವಂತ ಆನೆಯಂತೆಯೇ ಕಿವಿ ಆಡಿಸುವುದು, ಸೊಂಡಿಲು ಎತ್ತುವುದನ್ನು ಸಹ ನಾವು ನೋಡಬಹುದು.
ತೃಕ್ಕಾಯಿಲ್ ಮಹಾದೇವ ದೇವಸ್ಥಾನಕ್ಕೆ ಸೇರಿತು ಆನೆ
ಕೊಚ್ಚಿಯಲ್ಲಿ ನೆಲೆಯಾಗಿರುವ ಅತ್ಯಂತ ಹಳೆಯ ಹಾಗೂ ಪ್ರಸಿದ್ಧ ದೇವಾಲಯವಾಗಿರುವ ತೃಕ್ಕಾಯಿಲ್ ಮಹಾದೇವ ದೇವಸ್ಥಾನವು ತನ್ನ ಆಚರಣೆಗಳಿಂದ ಸುದ್ದಿಯಾಗುತ್ತದೆ. ನಿತ್ಯ ಈ ದೇವಾಲಯಕ್ಕೆ ಸಾವಿರಾರು ಮಂದಿ ಆಗಮಿಸುತ್ತಾರೆ. ಆದರೆ ದೇವಾಲಯದ ಕಾರ್ಯಗಳಲ್ಲಿ ಆನೆಯಿಲ್ಲ ಎಂಬ ಕೊರಗು ಆ ದೇವಾಲಯಕ್ಕೆ ಇತ್ತು. ಇದೇ ಸಮಯದಲ್ಲಿ ಪೇಟಾ ಸಂಸ್ಥೆ ಹಾಗೂ ನಟಿ ಪ್ರಿಯಾಮಣಿ ಈ ದೇವಾಲಯಕ್ಕೆ ಕೃತಕ ಆನೆ ಕೊಡುಗೆ ನೀಡಲು ಮುಂದಾದರು.
ಸದ್ಯ ಈ ಕೃತಕ ಯಾಂತ್ರಿಕ ಆನೆಗೆ ಮಹಾದೇವ ಎಂದು ನಾಮಕರಣ ಮಾಡಲಾಗಿದೆ. ಇದನ್ನು ಮುಂಬರುವ ದೇವಾಲಯದ ಜಾತ್ರೆ, ಉತ್ಸವ ಸೇರಿದಂತೆ ಪೂಜಾ ಕಾರ್ಯಕ್ರಮಗಳಲ್ಲಿ ಬಳಸಿಕೊಳ್ಳುವುದಾಗಿ ದೇವಾಲಯ ಆಡಳಿತ ಮಂಡಳಿ ತಿಳಿಸಿದೆ. ಸದ್ಯ ಆನೆಯನ್ನು ನೋಡಲು ಸಾವಿರಾರು ಮಂದಿ ದೇವಾಲಯದತ್ತ ಮುಖಮಾಡಿದ್ದಾರೆ. ಆನೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿ ಸಂತಸ ಹಂಚಿಕೊಳ್ಳುತ್ತಿದ್ದಾರೆ.
ನಟಿ ಪ್ರಿಯಾಮಣಿ ಕಾರ್ಯಕ್ಕೆ ಮೆಚ್ಚುಗೆ
ಇತ್ತ ನಟಿ ಪ್ರಿಯಾಮಣಿ ಇಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವ ಹಿನ್ನೆಲೆ ಭಾರೀ ಮೆಚ್ಚುಗೆ ಕೇಳಿಬಂದಿದೆ. ಅವರು ದೇವಾಲಯದ ಕೋರಿಕೆಗೆ ಆನೆಯನ್ನು ಕೊಡುಗೆಯಾಗಿ ನೀಡಲು ಪೇಟಾದೊಂದಿಗೆ ಕೈ ಜೋಡಿಸಿದ್ದರು. ಪ್ರಿಯಾಮಣಿ ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಸಿನಿಮಾದಲ್ಲಿಯೂ ನಟಿಸಿದ್ದು, ಹಿಂದಿಯಲ್ಲೂ ತಮ್ಮ ನಟನಾ ಕೌಶಲ್ಯ ತೋರಿಸಿದ್ದಾರೆ.
ಮೊದಲ ಯಾಂತ್ರಿಕ ಆನೆ ಕೇಳರದಲ್ಲಿದೆ
ಇದಕ್ಕೂ ಮೊದಲು ಕೇರಳದಲ್ಲಿ ಮೊಟ್ಟ ಮೊದಲ ಬಾರಿಗೆ ಕೃತಕ ಆನೆಯನ್ನು ಪರಿಚಯಿಸಲಾಗಿತ್ತು. ಕಳೆದ ಫೆಬ್ರವರಿಯಲ್ಲಿ ಕೇರಳದ ತ್ರಿಶೂರ್ನಲ್ಲಿರುವ ಇರಿಂಜದಪ್ಪಿಲ್ಲಿ ಶ್ರೀಕೃಷ್ಣ ದೇವಸ್ಥಾನವು ತನ್ನ ಉತ್ಸವಕ್ಕೆ ಯಾಂತ್ರಿಕ ಆನೆಯನ್ನು ಪರಿಚಯಿಸಿದ ರಾಜ್ಯದ ಮೊದಲ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ಆನೆ ಪರಿಚಯಿಸಿದ ಬಳಿಕ ದೇಶದ ಹಲವು ಭಾಗದಲ್ಲಿ ಕೃತಕ ಆನೆ ಸದ್ದು ಮಾಡಿತ್ತು. ಈಗಿರುವ ಜೀವಂತ ಆನೆಗಳ ಬದಲು ಕೃತಕ ಆನೆಗಳ ಬಳಸಬೇಕು ಎಂಬ ಕೂಗು ಹೆಚ್ಚಾಯಿತು. ಸದ್ಯ ಈಗ ಈ ಕೃತಕ ಆನೆಗಳು ಕೇರಳದ ದೇವಾಲಯದಲ್ಲಿವೆ, ಭವಿಷ್ಯದಲ್ಲಿ ಪೇಟಾ ಸಂಸ್ಥೆ ದೇಶದ ಪ್ರಮುಖ ದೇವಾಲಯದಲ್ಲಿ ಈ ಕೃತಕ ಆನೆಗಳ ಬಳಕೆ ಉತ್ತೇಜಿಸುವ ಗುರಿ ಹೊಂದಿದೆ.



Click it and Unblock the Notifications









