Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಅಪಘಾತ 'ದೇವರ ಕೃತ್ಯ'ವಲ್ಲ: ಸಂತ್ರಸ್ತ ಕುಟುಂಬಕ್ಕೆ ₹20 ಲಕ್ಷ ಪರಿಹಾರ ನೀಡಲು ಕೋರ್ಟ್ ತೀರ್ಪು
ನೀವು ಹಿಂದಿಯ 'ಓ ಮೈ ಗಾಡ್' ಮತ್ತು ಕನ್ನಡದಲ್ಲಿ ತೆರೆಕಂಡಿದ್ದ 'ಮುಕುಂದ ಮುರಾರಿ' ಸಿನಿಮಾ ನೋಡಿದ್ದೀರಾ..? ಯಾಕಂದ್ರೆ ಇಲ್ಲಿ ಹೇಳ ಹೊರಟಿರೋ ಈ ಸುದ್ದಿ ನಿಮಗೆ ಸುಲಭವಾಗಿ ಅರ್ಥವಾಗಬೇಕಾದ್ರೆ ಈ ಸಿನಿಮಾ ನೋಡಿದ್ರೆ ಬಹುಬೇಗ ತಿಳಿಯುತ್ತೆ. ಆ ಸಿನಿಮಾದಲ್ಲಿ ದೇವರ ಫೋಟೋ ಮೂರ್ತಿ ಮಾರುತ್ತಿದ್ದವನ ಅಂಗಡಿ ಭೂಕಂಪನವಾಗಿ ಕುಸಿದು ಬಿದ್ದ ಘಟನೆ ನಡೆದಿರುತ್ತದೆ.
ಆದರೆ ಇನ್ಸೂರೆನ್ಸ್ ಕಂಪನಿ ಇದನ್ನು ಆಕ್ಟ್ ಆಫ್ ಗಾಡ್ ಎಂದು ಘೋಷಿಸಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ನಿರಾಕರಿಸುವುದನ್ನು ನಾವು ನೋಡಿರಬಹುದು. ಆಕ್ಟ್ ಆಫ್ ಗಾಡ್ ಎಂದರೆ ದೇವರ ಕೃತ್ಯ ಎಂದಾಗುತ್ತದೆ. ಅಂದರೆ ಈ ಭೂಕಂಪನ ಸಂಭವಿಸಿದ್ದು ದೇವರ ಕೃತ್ಯ ಹೀಗಾಗಿ ವಿಮಾ ಹಣ ನೀಡಲು ಬರುವುದಿಲ್ಲ ಎಂಬುದು ಅಲ್ಲಿನ ವಾದವಾಗಿರುತ್ತೆ.

ಅದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು, ಕಾರು ಮತ್ತು ಬಸ್ ನಡುವಿನ ಅಪಘಾತ ದೇವರ ಕೃತ್ಯ ಇಲ್ಲಿ ಪರಿಹಾರ ಹಣ ನೀಡಲು ಸಾಧ್ಯವಿಲ್ಲ ಎಂದು ಕಂಪನಿ ನಿರಾಕರಿಸಿದ್ದ ಘಟನೆ ನಡೆದಿತ್ತು. ಹಾಗಾದ್ರೆ ಏನಿದು ಘಟನೆ ಬಳಿಕ ಏನಾಯಿತು, ಪರಿಹಾರ ಸಿಕ್ಕತಾ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
1997ರಲ್ಲಿ ನಡೆದಿದ್ದ ಅಪಘಾತ ಪ್ರಕರಣಕ್ಕೆ ಕಳೆದ ವಾರದ ಹಿಂದೆ ತೀರ್ಪು ಬಂದಿದೆ. ಆದ್ರೆ ಮುಂಬೈ ಮೋಟಾರ್ ಅಪಘಾತ ಕ್ಲೇಮ್ಸ್ ಟ್ರಿಬ್ಯೂನಲ್ಗೆ ಮುಖಭಂಗವಾಗಿದ್ದು, ಕಾರಿನಲ್ಲಿದ್ದ ಸಂತ್ರಸ್ತರಿಗೆ ಪರಿಹಾರ ಹಣ ನೀಡುವಂತೆ ಮುಂಬೈ ಹೈಕೋರ್ಟ್ ತೀರ್ಪು ನೀಡಿದೆ. ಜೊತೆಗೆ ಅಪಘಾತವಾಗುವುದು ದೇವರ ಕೃತ್ಯವಲ್ಲ ಎಂದು ತಿಳಿಸಿದೆ.
ಆಗಿದ್ದೇನು?
1997ರಲ್ಲಿ ನಾಲ್ಕು ಜನ ಪ್ರಯಾಣಿಸುತ್ತಿದ್ದ ಮಾರುತಿ ಕಾರು ಹಾಗೂ ಮುಂಬೈ ಸರ್ಕಾರಿ ಬಸ್ ನಡುವೆ ಅಪಘಾತ ಸಂಭವಿಸಿತ್ತು, ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿದ್ದರು, ಚಾಲಕ ಗಂಭಿರವಾಗಿ ಗಾಯಗೊಂಡು 5 ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದರು.
ಆದರೆ ಈ ರಸ್ತೆ ಅಪಘಾತವು ದೇವರ ಕೃತ್ಯವಾಗಿದ್ದು ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಮುಂಬೈ ಮೋಟಾರ್ ಅಪಘಾತ ಕ್ಲೇಮ್ಸ್ ಟ್ರಿಬ್ಯೂನಲ್ ಸೂಚಿಸಿತ್ತು. ಮೃತರು ಹಾಗೂ ಗಾಯಗೊಂಡವರ ಸಂಬಂಧಿಕರ ಮನವಿಯನ್ನು ತಿರಸ್ಕರಿಸಲಾಗಿತ್ತು. ಆದರೆ ಕುಟುಂಬಸ್ಥರು ಮಂಬೈ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.
1997ರಲ್ಲಿ ಮಾರುತಿ ಕಾರು ಮತ್ತು ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸಂತ್ರಸ್ತರಿಗೆ ಪರಿಹಾರವನ್ನು ನಿರಾಕರಿಸಿದ MACT ತೀರ್ಪನ್ನು ತಳ್ಳಿಹಾಕುವ ಸಂದರ್ಭದಲ್ಲಿ ನ್ಯಾಯಮೂರ್ತಿ ಎಎಸ್ ಚಂದೂರ್ಕರ್ ಮತ್ತು ನ್ಯಾಯಮೂರ್ತಿ ಜಿತೇಂದ್ರ ಜೈನ್ ಅವರ ಬಾಂಬೆ ಹೈಕೋರ್ಟ್ ವಿಭಾಗೀಯ ಪೀಠವು ಈ ಅಭಿಪ್ರಾಯವನ್ನು ನೀಡಿದೆ.
ರಿಲಯನ್ಸ್ ಇಂಡಸ್ಟ್ರೀಸ್ನಲ್ಲಿ ಡೆಪ್ಯೂಟಿ ಫೈನಾನ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಶೇಜ್ಪಾಲ್ ಅವರು ಆರಂಭದಲ್ಲಿ 1 ಕೋಟಿ ರೂಪಾಯಿ ಪರಿಹಾರವನ್ನು ಕೋರಿ MACT (ಮುಂಬೈ ಮೋಟಾರ್ ಅಪಘಾತ ಕ್ಲೇಮ್ಸ್ ಟ್ರಿಬ್ಯೂನಲ್ ) ಅನ್ನು ಸಂಪರ್ಕಿಸಿದ್ದರು, ನಂತರ ಅದನ್ನು 10 ಕೋಟಿಗೆ ಈ ಪರಿಹಾರದ ಮೊತ್ತ ಹೆಚ್ಚಿಸಲಾಯಿತು.
ದೇವರ ಕೃತ್ಯ
ಆದಾಗ್ಯೂ, 2005 ರಲ್ಲಿ MACT ಈ ಮನವಿಯನ್ನು ತಿರಸ್ಕರಿಸಿತು ಮತ್ತು ಇದರಲ್ಲಿ ಭಾಗಿಯಾಗಿರುವ ಇಬ್ಬರು ಚಾಲಕರಲ್ಲಿ ಯಾರೊಬ್ಬರೂ ತಪ್ಪಿಲ್ಲದ ಕಾರಣ, ಅಪಘಾತವು 'ದೇವರ ಕಾರ್ಯ' ಎಂದು ಪರಿಗಣಿಸಿತು. ಇದರಲ್ಲಿ ಇಬ್ಬರು ಚಾಲಕರ ತಪ್ಪೂ ಇದೆ, ಹೀಗಾಗಿ ಇದೊಂದು ದೇವರ ಕೃತ್ಯ ಹೀಗಾಗಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದಿತ್ತು.
ಇಬ್ಬರೂ ಚಾಲಕರ ತಪ್ಪು
ಈ ಅಪಘಾತಕ್ಕೆ ಇಬ್ಬರು ಚಾಲಕರು ಕಾರಣ ಎಂದು ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಮತ್ತು ಎಂಎಸ್ಆರ್ಟಿಸಿಗೆ ನ್ಯಾಯಾಲಯ ಸೂಚಿಸಿತ್ತು. ಇದರಲ್ಲಿ 20.17 ಲಕ್ಷ ರೂಪಾಯಿ ಶೆಜ್ಪಾಲ್ ಅವರ ಕುಟುಂಬ ಸದಸ್ಯರಿಗೆ ನೀಡುವಂತೆ ಕೋರ್ಟ್ ತೀರ್ಪು ನೀಡಿತು.



Click it and Unblock the Notifications