Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಳೆ ಸುರಿಸುವಂತೆ ಕೋರಿ ಇಂದ್ರ ದೇವನಿಗೆ ಪತ್ರ ಬರೆದ ವಕೀಲ..!
ದೇಶದ ಹಲವು ಭಾಗಗಳಲ್ಲಿ ಮಳೆಯಾಗುತ್ತಿದೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಮುಂಗಾರು ಮಳೆ ಆರಂಭಗೊಂಡಿದೆ. ಆದರೆ ಉತ್ತರ ಭಾರತದಲ್ಲಿ ಮಾತ್ರ ತಾಪಮಾನ ಏರಿಕೆಯಾಗಿದ್ದು, ಅಲ್ಲಿನ ಜನರು ಬಿಸಿಲಿನ ಝಳಕ್ಕೆ ತತ್ತರಿಸಿ ಹೋಗಿದ್ದಾರೆ. ವಿಪರೀತ ತಾಪಮಾನ ಏರಿಕೆ ಅಲ್ಲಿನ ಜನರ ಜೀವ ಹಿಂಡುತ್ತಿದೆ. ಅಲ್ಲದೆ ಮನೆಯಿಂದ ಅವರು ಹೊರ ಬರಲು ಆಗದ ಸ್ಥಿತಿಗೆ ತಲುಪಿದ್ದಾರೆ.
ದೆಹಲಿ, ಉತ್ತರ ಪ್ರದೇಶದಲ್ಲಿ ಮಳೆ ಬಂದರೆ ಸಾಕಪ್ಪ ಎಂದು ಜನರು ದೇವರ ಪ್ರಾರ್ಥಿಸುತ್ತಿದ್ದಾರೆ. ಏಕೆಂದರೆ ಬಿಸಿಲಿನಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಅಲ್ಲದೆ ಬಿಸಿಲಿನಿಂದ ಜನರು ಕುಸಿದು ಬೀಳುತ್ತಿರುವ ಪ್ರಕರಣಗಳು ಸಹ ವರದಿಯಾಗುತ್ತಿವೆ.

ಇತ್ತ ಸಕಾಲಕ್ಕೆ ಮಳೆ ಬಾರದೆ ಇದ್ದರೆ ಜನರು ಮಳೆಗಾಗಿ ಕಪ್ಪೆಗಳ ಮದುವೆ ಮಾಡುವುದು ಇಲ್ಲದೆ ಕತ್ತೆಗಳ ಮದುವೆ ಹೀಗೆ ನೂರಾರು ಸಂಪ್ರದಾಯ ಆಚರಿಸಿಕೊಂಡು ಬಂದಿದ್ದಾರೆ. ಅದರಲ್ಲೂ ಹಳ್ಳಿಗಳಲ್ಲಿ ಇಂತವ ವಾಡಿಕೆ ಇದೆ. ಈ ರೀತಿ ಮಾಡುವುದರಿಂದ ಮಳೆಯಾಗಲಿದೆ ಎಂಬುದು ಅವರ ನಂಬಿಕೆಯಾಗಿದೆ.
ಆದರೆ ಇಲ್ಲೊಬ್ಬ ವ್ಯಕ್ತಿ ಮಾತ್ರ ಮಳೆಯಾಗಲಿ ಎಂದು ಮಾಡಿದ ಕಾರ್ಯ ಈಗ ಸಿಕ್ಕಾಪಟ್ಟೆ ಸುದ್ದಿಯಾಗುವ ಜೊತೆಗೆ ಅಚ್ಚರಿಗೂ ಕಾರಣವಾಗಿದೆ. ಆತ ಬಿಸಿಲಿನ ಝಲ ತಾಳಲಾಗದೆ ಮಳೆಯಾಗಲಿ ಎಂದು ದೇವರನ್ನು ಪಾರ್ಥಿಸಿ ಇಂದ್ರ ದೇವನಿಗೆ ಪತ್ರ ಬರೆದಿದ್ದಾನೆ.
ಉತ್ತರ ಪ್ರದೇಶ ಕಾನ್ಪುರದ ಬಿಲ್ಹೌರ್ನ ವಕೀಲ ಅತುಲ್ ಸನ್ವಾರೆ ಎಂಬುವವರು ಭಗವಾನ್ ಇಂದ್ರನಿಗೆ ಪತ್ರ ಬರೆದಿದ್ದಾರೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಭಗವಾನ್ ಇಂದ್ರ ಹಿಂದೂ ಧರ್ಮದಲ್ಲಿ ಮಳೆ ಮತ್ತು ಗಾಳಿಯ ತರುವಂತಹ ದೇವರಂತೆ.
ಕಾನ್ಪುರಕ್ಕೆ ಶಾಖದಿಂದ ಬಿಡುವು ನೀಡುವಂತೆ ವಕೀಲರು ಪತ್ರದಲ್ಲಿ ದೇವರನ್ನು ಕೋರಿದ್ದಾರೆ. ಕಳೆದ ಹಲವು ದಿನಗಳಿಂದ ಕಾನ್ಪುರ ಬಿಸಿಲಿನ ತಾಪವನ್ನು ಅನುಭವಿಸುತ್ತಿದೆ, ಇದರಿಂದಾಗಿ ಜನರು ತೀವ್ರ ಅಸಮಾಧಾನಗೊಂಡಿದ್ದಾರೆ ಎಂದು ಅತುಲ್ ಬರೆದಿದ್ದಾರೆ.
ಕಾನ್ಪುರದಲ್ಲಿ ಬರೋಬ್ಬರಿ 45 ಡಿಗ್ರಿ ಸೆಲ್ಸಿಯಸ್ಗಿಂತಲೂ ಅಧಿಕ ತಾಮಪಾನ ದಾಖಲಾಗುತ್ತದೆ. ಹೀಗಾಗಿ ತಾಪಮಾನದಿಂದ ಮನುಷ್ಯರನ್ನು ರಕ್ಷಿಸು ಎಂದು ಇಂದ್ರನಿಗೆ ಪತ್ರ ಬರೆಯಲಾಗಿದೆ.
ಸ್ವರ್ಗದ ಅಧಿಪತಿ ಎಂದು ಪರಿಗಣಿಸಲ್ಪಟ್ಟಿರುವ ಇಂದ್ರದೇವ ಮಹಾರಾಜ್ ಅವರ ಹೆಸರಿನಲ್ಲಿ ವಂದನೆಯೊಂದಿಗೆ ಪತ್ರವು ಪ್ರಾರಂಭವಾಗುತ್ತವೆ. ಜೂನ್ನ ಉರಿಯುತ್ತಿರುವ ಶಾಖವು ಜೀವಿಗಳಿಗೆ ಆಘಾತವನ್ನುಂಟು ಮಾಡಿದೆ ಮತ್ತು ಅವುಗಳು ತಮ್ಮ ಪ್ರಾಣವನ್ನೂ ಕಳೆದುಕೊಳ್ಳುತ್ತಿವೆ, ಹೀಗಾಗಿ ಬೇಗನೆ ಮಳೆ ಸುರಿಸು.
ಪ್ರಾಣಿಗಳು ಮತ್ತು ಮನುಷ್ಯರನ್ನು ರಕ್ಷಿಸಲು ಭಾರೀ ಮಳೆಯು ಬಹಳ ಮುಖ್ಯ ಎಂದು ನಿಮಗೆ ವಿನಮ್ರ ವಿನಂತಿ ಎಂದು ಅತುಲ್ ಪತ್ರದಲ್ಲಿ ಬರೆದಿದ್ದಾರೆ. ಜೊತೆಗೆ ಬಾರೀ ಮಳೆಯಾಗುವಾಗ ಆಲಿಕಲ್ಲು ಬೀಳಬಾರದು ಎಂದು ಮನವಿ ಮಾಡಿದ್ದಾರೆ.
ಸದ್ಯ ಅವರು ಬರೆದಿರುವ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಜೊತೆಗೆ ಹಲವರು ಹಲವು ರೀತಿ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಈ ರೀತಿಯ ಪತ್ರ ಬರೆದಿರುವ ವಕೀಲರ ಕುರಿತು ಹಲವು ರೀತಿ ಕಾಮೆಂಟ್ ಹರಿದುಬಂದಿದೆ.
ನೀವು ಪತ್ರ ಬರೆಯುವಾಗ ಯಾವ ಅಡ್ರೆಸ್ ಬರೆದಿದ್ದೀರಿ ತೋರಿಸಿ, ಸರಿ ಅಡ್ರೆಸ್ ಬರೆದರೆ ಖಂಡಿತ ಮಳೆ ಬರುತ್ತದೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಈ ರೀತಿ ಪತ್ರ ಬರೆಯುವ ಬದಲು ಮರ ನೆಡುವ ಆಲೋಚನೆ ಮಾಡಿದ್ದರೆ ತಾನಾಗಿಯೇ ಮಳೆ ಬರುತ್ತಿತ್ತು ಎಂದಿದ್ದಾರೆ.
ಅಲ್ಲದೆ ಈ ಪತ್ರ ಇಂದ್ರನಿಗೆ ತಲುಪಿಲಿದೆ ಎಂದು ನಂಬುವುದು ಹೇಗೆ? ಮಳೆ ಬಂದರೆ ಇಂದ್ರನಿಂದ ಬಂದಿದೆ ಎಂದು ನಾವು ತಿಳಿಯಬೇಕು ಬಾರದೆ ಇದ್ದರೆ ಈ ಪತ್ರ ದೇವಲೋಕ ತಲುಪಿಲ್ಲ ಎಂದರ್ಥ ಎಂದು ಮತ್ತೊಬ್ಬ ಬಳಕೆದಾರರು ಬರೆದುಕೊಂಡಿದ್ದಾರೆ.



Click it and Unblock the Notifications










