Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಈ ಅಘೋರಿ ನುಡಿದ ಭವಿಷ್ಯ ಕೇಳಿದ್ರೆ ಕೈ ಕಾಲು ನಡುಗುತ್ತೆ..! ಕುಂಭಮೇಳದ ಬಾಬಾ ಹೇಳಿದ್ದೇನು?
ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳವು ಹಲವು ವಿಚಾರಗಳ ಕಾರಣದಿಂದಾಗಿ ಫೇಮಸ್ ಆಗುತ್ತಿದೆ. ವಿಶ್ವದಾದ್ಯಂತ ಖ್ಯಾತಿ ಪಡೆದಿರುವ ಈ ಕುಂಭಮೇಳ ಈ ಬಾರಿ ವಿಚಿತ್ರ ಕಾರಣದಿಂದಲೇ ಸುದ್ದಿಯಾಗುತ್ತಿದೆ. ಅದರಲ್ಲೂ ಕುಂಭಮೇಳದಲ್ಲಿ ಈ ಬಾರಿ ಕಾಣಿಸಿಕೊಂಡಿರುವ ಅಘೋರಿಗಳು ಗಮನಸೆಳೆದಿದ್ದಾರೆ. ಹಾಗೆ ಈ ಅಘೋರಿಗಳ ನೋಡಲೆಂದೇ ದೇಶದ ಮೂಲೆ ಮೂಲೆಯಿಂದ ಭಕ್ತರು ಅಲ್ಲಿಗೆ ತರಳುತ್ತಾರೆ.
ಹಾಗೆ ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲು ವಿದೇಶದಿಂದಲೂ ಬಾಬಾಗಳು ಬರುತ್ತಾರೆ. ಹೀಗಾಗಿ ಈ ಜಾಗ ಇಂದಿಗೂ ಪವಿತ್ರ ಎಂದು ಪರಿಗಣಿಸಲಾಗಿದೆ. ಆದ್ರೆ ಪ್ರಯಾಗ್ರಾಜ್ನಲ್ಲಿ ಅಘೋರಿಯೊಬ್ಬರು ನುಡಿದಿರುವ ಭವಿಷ್ಯ ಈಗ ಎಲ್ಲರಲ್ಲು ನಡುಕ ಹುಟ್ಟಿಸಿದೆ. ಹಿಮಾಲಯ ತಪ್ಪಲಿನಿಂದ ಬಂದಿರುವ ಅಘೋರಿಗಳು ಈ ಬಾರಿ ನುಡಿದಿರುವ ಭವಿಷ್ಯ ಎಲ್ಲರಲ್ಲೂ ಭಯ ಬೀಳಿಸಿದೆ.

ಈ ಅಘೋರಿ ಹತ್ತಾರು ವರ್ಷಗಳಿಂದ ಕೇವಲ ಕುಂಭಮೇಳಕ್ಕೆ ಮಾತ್ರ ಆಗಮಿಸುತ್ತಾರೆ, ಹಿಮಾಲಯದ ಚಳಿಯಲ್ಲಿ ತಪಸ್ವಿಗಳಾಗಿರುವ ಅವರು ಈಗ ಭಯ ಬೀಳಿಸುವಂತಹ ಭವಿಷ್ಯ ನುಡಿದಿದ್ದಾರೆ. ಹಿಮಾಲಯದ ತುತ್ತತುದಿಯಲ್ಲಿರುವ ಸಿದ್ದಾಶ್ರಮದಲ್ಲಿ ನೆಲೆಸಿರುವ ಅವರು ಕುಂಭಮೇಳದ ಸಮಯದಲ್ಲಿ ಪ್ರತಿ ವರ್ಷ ಭವಿಷ್ಯ ನುಡಿಯುತ್ತಾರೆ. ಆದ್ರೆ ಈ ಬಾರಿ ನುಡಿದ ಭವಿಷ್ಯ ಬೆಚ್ಚಿ ಬೀಳಿಸಿದೆ.
ಕಳೆದ 84 ವರ್ಷಗಳಲ್ಲಿ ಈ ನಾಗಾ ಸಾಧು 7 ಕುಂಭಮೇಳಗಳಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಅವರ ಭವಿಷ್ಯವಾಣಿ ಕೇಳಲು ಪ್ರತಿವರ್ಷ ಅಲ್ಲಿ ಭಕ್ತರು ನೆರೆಯುತ್ತಾರೆ. ಈ ಭಾರಿ ಅವರು ನುಡಿದಿರುವ ಭವಿಷ್ಯ ಕೇಳಿ ಶಾಕ್ಗೆ ಒಳಗಾಗಿದ್ದಾರೆ. ಹಾಗಾದ್ರೆ ಈ ಅಘೋರಿ ನುಡಿದ ಭವಿಷ್ಯ ಏನು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬಿಡುವಿಲ್ಲದ ಚಿತಾಗಾರ..ಕಪ್ಪಾಗಲಿದೆ ಆಕಾಶ..!
ಆ ಅಘೋರಿ ಈ ಭೂಮಿ ನಡೆಯಲಿರುವ ಅತ್ಯಂತ ಕರಾಳ ದಿನಗಳ ಕುರಿತು ಭವಿಷ್ಯ ನುಡಿದಿದ್ದಾರೆ. ಮುಂದಿನ ಕುಂಭಮೇಳಕ್ಕೆ ಬರುವ ಹೊತ್ತಿಗೆ ಹೆಣಗಳ ರಾಶಿ ನೋಡಲಿದ್ದಾರಂತೆ. ಬಿಡುವೇ ಇಲ್ಲದೆ ಚಿತಾಗಾರ ಉರಿಯುತ್ತಿರುತ್ತದೆಯಂತೆ. ಉಸಿರಾಡುವ ಗಾಳಿ ವಿಷವಾಗಲಿದೆಯಂತೆ, ಆಕಾಶ ಕೂಡ ಕಪ್ಪಾಗಲಿದೆ ಎಂದು ಅಘೋರಿ ಭವಿಷ್ಯ ನುಡಿದಿದ್ದಾರೆ. ಹಾಗೆ ಜನರ ಪಾಪ ತೊಳೆಯುವ ಗಂಗೆ ಅಳುತ್ತಾಳೆ ಎಂಬ ಅಚ್ಚರಿಯ ಭವಿಷ್ಯ ನುಡಿದಿದ್ದಾರೆ.
ಅವರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಬರುವ ಸಮಯದಲ್ಲಿ ಆಕಾಶದಲ್ಲಿ ಕಾಗೆಗಳು ಕರ್ಕಶ ಧ್ವನಿಯಲ್ಲಿ ಕೂಗುತ್ತಿದ್ದವಂತೆ. ಅವರು ಪವಿತ್ರ ಸ್ನಾನ ಮಾಡಿ ನದಿ ತಟದಲ್ಲಿ ಕಣ್ಮುಚ್ಚಿ ಕುಳಿತು ಈ ಭವಿಷ್ಯ ನುಡಿದ್ದಾರೆ. ಹಾಗೆ ನಗರಗಳು ಎರವಲು ಪಡೆದ ಭೂಮಿಯನ್ನು ಸಮುದ್ರ ದೇವತೆಗೆ ವಾಪಾಸು ನೀಡುವ ಕಾಲ ಬರಲಿದೆಯಂತೆ. ಅಂದರೆ ನಗರಗಳ ಸಮುದ್ರದಲ್ಲಿ ಮುಳುಗಲಿವೆ ಎಂಬುದು ಅದರ ಒಳಾರ್ಥವಾಗಿದೆ.
ಪರ್ವತಗಳ ಮೇಲಿನ ಹಿಮವು ಕಣ್ಮರೆಯಾಗುತ್ತದೆ. ಹಲವಾರು ಪ್ರಾಚೀನ ದೇವಾಲಯಗಳು ಮತ್ತೆ ಭೂಮಿ ಮೇಲೆದ್ದು ಬರುತ್ತವೆ. ನದಿಗಳು ಹೊಸ ಮಾರ್ಗ ಕಂಡುಕೊಳ್ಳಲಿದೆ. ಇಂದು ಯುದ್ಧಭೂಮಿ ಇರುವಲ್ಲಿ ಮುಂದೆ ಕುಂಭಮೇಳ ನಡೆಯಲಿದೆ ಎಂಬ ಭವಿಷ್ಯ ನುಡಿದಿದ್ದಾರೆ. ಅಂದರೆ ಗಂಗೆ ತ್ರಿವೇಣಿ ಸಂಗಮದ ರೂಪ ಬದಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಈ ಅಘೋರಿಗೆ ಈಗ 95 ವರ್ಷವಾಗಿದೆ, ಆತನ ಪ್ರಕಾರ ಇನ್ನು ಹಲವು ಕುಂಭಕ್ಕೆ ಆಗಮಿಸಲಿದ್ದಾರಂತೆ.



Click it and Unblock the Notifications