Latest Updates
-
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್!
1 ರೂಪಾಯಿಗಾಗಿ ಗ್ಯಾಸ್ ಏಜೆನ್ಸಿ ಜೊತೆ 8 ವರ್ಷ ಹೋರಾಡಿದ ವ್ಯಕ್ತಿ.! ಪರಿಹಾರ ಸಿಕ್ಕಿದ್ದೆಷ್ಟು..?
ಒಂದು ರೂಪಾಯಿಗೆ ಈ ಕಾಲದಲ್ಲಿ ಏನು ಬರುತ್ತೆ ಎಂದು ಯೋಚಿಸಿದ್ರೆ ಒಂದು ಚಾಕೊಲೆಟ್ ಬರಬಹುದು ಅದಕ್ಕಿಂತ ದೊಡ್ಡ ಉಪಯೋಗವೇನು ಇಲ್ಲ ಎಂಬ ಮಾತನಾಡುವುದು ಸಾಮಾನ್ಯ. ಹಾಗೆ 1 ರೂಪಾಯಿ ಚಿಲ್ಲರೆ ಇಲ್ಲವೆಂದು ಅಂಗಡಿಯಲ್ಲಿ ಚಾಕೊಲೆಟ್ ನೀಡುವುದು, ಬಸ್ನಲ್ಲಿ ಕಂಡಕ್ಟರ್ ಚಿಲ್ಲರೆ ನೀಡಲು ನಿರಾಕರಿಸುವುದು ನಾವು ನೋಡಿರುತ್ತೇವೆ. ನಾವು ಕೂಡ 1 ರೂಪಾಯಿ ಹೋದರೆ ಹೋಗಲಿ ಎಂಬ ಮನೋಭಾವದಲ್ಲೇ ಇರುತ್ತೇವೆ.
ಆದ್ರೆ ಇಲ್ಲೊಬ್ಬ ವ್ಯಕ್ತಿ ಇದೇ 1 ರೂಪಾಯಿಗಾಗಿ ಬರೋಬ್ಬರಿ 8 ವರ್ಷಗಳ ಕಾಲ ಕೋರ್ಟು ಕಚೇರಿ ಎಂದು ಸುತ್ತಾಡಿ ಕೊನೆಗೂ ಕೇಸ್ ಗೆದ್ದಿರುವ ಅಚ್ಚರಿಯ ಪ್ರಕರಣವಿದು. ನಿಮಗೇನಾದರು 1 ರೂಪಾಯಿ ಯಾರಾದರು ಚಿಲ್ಲರೆ ನೀಡಲಿಲ್ಲ ಅಂದರೆ ಇಟ್ಟುಕೊಳ್ಳಿ ಎಂದು ಹೇಳಬಹುದು. ಇಲ್ಲವೆ ಅದನ್ನು ಕೇಳಲು ಸಹ ಹೋಗುವುದಿಲ್ಲ.

ಆದ್ರೆ ಇಲ್ಲೊಬ್ಬ ತನಗಾದ 1 ರೂಪಾಯಿ 50 ಪೈಸೆ ಚಿಲ್ಲರೆ ವಸೂಲಿಗಿಳಿದು 8 ವರ್ಷದ ಬಳಿಕ ಪ್ರಕರಣದಲ್ಲಿ ಗೆದ್ದು ಪರಿಹಾರ ಕೂಡ ಪಡೆದುಕೊಂಡಿದ್ದಾನೆ. ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಚಕ್ರೇಶ್ ಜೈನ್ ಎಂಬಾತ ಇಂತಹ ಚಿಲ್ಲರೆ ಇಲ್ಲ ಎಂದು ಹೇಳಿದ್ದ ಗ್ಯಾಸ್ ಏಜೆನ್ಸಿ ವಿರುದ್ಧ ಗ್ರಾಹಕರ ಹಕ್ಕುಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಗೆದ್ದು ಬೀಗಿದ್ದಾರೆ.
ಏನಿದು 1 ರೂಪಾಯಿ ಪ್ರಕರಣ?
ಚಕ್ರೇಶ್ ಜೈನ್ ಭಾರತ್ ಗ್ಯಾಸ್ ಏಜೆನ್ಸಿ ಮೂಲಕ ಗ್ಯಾಸ್ ಬುಕ್ ಮಾಡಿದ್ದ ಪ್ರಕರಣವಿದು. ನವೆಂಬರ್ 14, 2017ರಂದು ಗ್ಯಾಸ್ ಸಿಬ್ಬಂದಿ 753.50 ರೂಪಾಯಿ ಬಿಲ್ ಬದಲಿಗೆ ಚಕ್ರೇಶ್ ಬಳಿ 755 ರೂಪಾಯಿ ಪಡೆದಿದ್ದರು, ಹಾಗೆ 1.50 ಪೈಸೆ ಇಲ್ಲವೆಂದು ತಿಳಿಸಿ ಅಲ್ಲಿಂದ ತೆರಳಿದ್ದರು. ಹಾಗೆ ಚಿಲ್ಲರೆ ಬೇಕಾದರೆ ಏಜೆನ್ಸಿಗೆ ಬಂದು ಪಡೆಯಿರಿ ಎಂಬ ಉದ್ಧಟತನ ಮೆರೆದು ಆತ ಅಲ್ಲಿಂದ ತೆರಳಿದ್ದ.
ಇದರಿಂದ ಕೋಪಗೊಂಡಿದ್ದ ಚಕ್ರೇಶ್ ವಕೀಲರ ಬಳಿ ಚರ್ಚಿಸಿ ಗ್ರಾಹಕರ ಹಕ್ಕುಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದರು, ಇಷ್ಟಾದ ಬಳಿಕವೂ ಗ್ಯಾಸ್ ಏಜೆನ್ಸಿ ಚಕ್ರೇಶ್ ಅವರ ನಿರ್ಧಾರ ಕುರಿತು ಕುಹಕವಾಡಿತ್ತು, ಕೇವಲ ಚಿಲ್ಲರೆಗಾಗಿ ಕೋರ್ಟ್ ಮೆಟ್ಟಿಲೇರಿರುವ ವ್ಯಕ್ತಿಯ ಕುರಿತು ತಮಾಷೆಯಾಗಿ ತೆಗೆದುಕೊಂಡಿತ್ತು. ಈ ಪ್ರಕರಣದ ಆರಂಭದಲ್ಲಿ ಚಕ್ರೇಶ್ ಪರವಾಗಿ ಯಾವ ಕಲಸವೂ ನಡೆಯಲಿಲ್ಲ. ಹೀಗಾಗಿ ಚಕ್ರೇಶ್ 2019ರಲ್ಲಿ ಜಿಲ್ಲಾ ಗ್ರಾಹಕರ ವೇದಿಕೆ ಮೆಟ್ಟಿಲೇರಿದರು.
ಇಲ್ಲಿ ಸುಧೀರ್ಘ 5 ವರ್ಷಗಳ ವಿಚಾರಣೆ ನಡೆದಿತ್ತು. ಚಕ್ರೇಶ್ ಕೋರ್ಟ್ನಲ್ಲಿ ವಿಚಾರಣೆಗಾಗಿ ಅಲೆದಾಡುತ್ತಲೇ ಇದ್ದರು. ಹಾಗೆ ಎಲ್ಲಾ ವಿಚಾರಣೆಗಳ ಬಳಿಕ ಗ್ರಾಹಕರ ವೇದಿಕೆ ಚಕ್ರೇಶ್ ಅವರ ಪ್ರಕರಣದಲ್ಲಿ ಅವರ ಪರವಾಗಿಯೇ ತೀರ್ಪು ಸಹ ನೀಡಿತು, ಇಲ್ಲಿ ಗ್ಯಾಸ್ ಏಜೆನ್ಸಿ ಚಿಲ್ಲರೆ ವಿಚಾರವಾಗಿ ಉದ್ದೇಶ ಪೂರ್ವಕವಾಗಿ ನಡೆದುಕೊಂಡಿದೆ.
ಚಕ್ರೇಶ್ಗೆ 1.50 ಪೈಸೆಯನ್ನು ವಾರ್ಷಿಕ ಶೇ.6ರಷ್ಟು ಬಡ್ಡಿ ಸಮೇತ ವಾಪಾಸು ನೀಡಬೇಕು. ಎರಡು ತಿಂಗಳ ಒಳಗೆ ಈ ಹಣ ನೀಡಬೇಕು. ಹಾಗೆ ಜೈನ್ ಅವರು ಎದುರಿಸಿದ ಮಾನಸಿಕ, ದೈಹಿಕ , ಆರ್ಥಿಕ ಸಮಸ್ಯೆ, ಸೇವಾ ಸಂಬಂಧಿತ ಸಂಕಷ್ಟಗಳಿಗೆ ಪರಿಹಾರವಾಗಿ 2 ಸಾವಿರ ರೂಪಾಯಿ, ಹಾಗೂ ಅವರ ಕಾನೂನಾತ್ಮಕ ವೆಚ್ಚಗಳನ್ನು ಏಜೆನ್ಸಿಯೇ ಭರಿಸಬೇಕು ಎಂಬ ಮಹತ್ವದ ತೀರ್ಪು ನೀಡಿತು.
ಇದು ಕೇವಲ 1 ರೂಪಾಯಿಗಾಗಿ ನಡೆದ ಹೋರಾಟ ಆಗಿರಲಿಲ್ಲ ಬದಲಿಗೆ ನಮ್ಮ ಹಕ್ಕುಗಳಿಗಾಗಿ ನಡೆದ ಹೋರಾಟವಾಗಿತ್ತು ಎಂದು ಪ್ರಕರಣ ಗೆದ್ದ ಚಕ್ರೇಶ್ ಹೇಳಿಕೊಂಡಿದ್ದಾರೆ.



Click it and Unblock the Notifications