Latest Updates
-
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ವಿಶ್ವದ ಏಳು ನದಿಗಳಲ್ಲಿ ಚಿನ್ನ ದೊರೆಯುತ್ತದೆ, ಮೂರು ನದಿ ಭಾರತದಲ್ಲಿದೆ
ಚಿನ್ನ ಗಣಿಯಲ್ಲಿ ಸಿಗುತ್ತದೆ ಎಂಬುವುದು ಗೊತ್ತು, ಆದರೆ ವಿಶ್ವದಲ್ಲಿ ಕೆಲ ನದಿಗಳಿವೆ, ಆ ನದಿಗಳು ಕೂಡ ಚಿನ್ನವನ್ನು ಉತ್ಪತ್ತಿ ಮಾಡುತ್ತದೆ, ಅದರಲ್ಲಿ ಮೂರು ನದಿ ನಮ್ಮ ಭಾರತದಲ್ಲಿದೆ, ಚಿನ್ನ ಸಿಗುವ ಆ ನದಿಗಳಾವುವು ಎಂದು ನೋಡೋಣ:

ಮಿಶೋರಿ ನದಿ
19ನೇ ಶತಮಾನದಲ್ಲಿ ಈ ನದಿಯಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಯ್ತು, ಈ ನದಿಯಲ್ಲಿ ಚಿನ್ನಗಳು ಮಾತ್ರವಲ್ಲ ಬೆಲೆ ಬಾಳುವ ಹರಳುಗಳು ಪತ್ತೆಯಾಗಿದ್ದೆವು.
ಬಿಗ್ ಹೋಲ್ ರಿವರ್
ಈ ನದಿಯಲ್ಲಿ 1864ರಲ್ಲಿ ಚಿನ್ನ ಪತ್ತೆಯಾಗಿತ್ತು. ಈ ನದಿಯಲ್ಲಿ $5 ಮಿಲಿಯನ್ ಚಿನ್ನ ತೆಗೆಯಲಾಗಿತ್ತು.
ಸುವರ್ಣರೇಖಾ ನದಿ
ಈ ನದಿಯ ಹೆಸರೇ ಚಿನ್ನ ಎಂದು ಹೇಳುತ್ತದೆ, ಸುವರ್ಣ ಎಂದರೆ ಚಿನ್ನ, ಈ ನದಿ ಭಾರತದ ಜಾರ್ಖಂಡ್ನಲ್ಲಿದೆ. ಶತಕದಿಂದ ಈ ನದಿಯಲ್ಲಿ ಚಿನ್ನ ತೆಗೆಯಲಾಗುತ್ತಿದೆ. ಇಲ್ಲಿಯ ಸ್ಥಳೀಯರಿಗೆ ನದಿಯಲ್ಲಿ ಹೊಳೆಯುವ ಚಿಕ್ಕ ವಸ್ತುಗಳು ಸಿಕ್ಕು ಅದನ್ನು ಪರೀಕ್ಷಿಸಿದಾಗ ಚಿನ್ನ ಎಂಬುವುದು ತಿಳಿಯುತ್ತದೆ, ನದಿಯಲ್ಲಿ ಸಿಗುತ್ತಿದ್ದ ಚಿನ್ನ ಇಲ್ಲಿಯ ನಿವಾಸಿಗಲ ಹೊಟ್ಟೆ ತುಂಬಿಸಲು ಸಹಾಯ ಮಾಡುತ್ತಿತ್ತಂತೆ.
ಯುಬ ನದಿ
ಇದು ಕ್ಯಾಲಿಫೋರ್ನಿಯಾದಲ್ಲಿದೆ, 1850ರಲ್ಲಿ ಇಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಯ್ತು, ಕ್ಯಾಲಿಫೋರ್ನಿಯಾದ ಚಿನ್ನದ ಸಂಪತ್ತಿನಲ್ಲಿ ಈ ನದಿಯ ಪಾತ್ರ ಹೆಚ್ಚಿದೆ.
ಕ್ಲೋಂಡಿಕೆ ನದಿ
ಈ ನದಿ ಕೆನಡಾದಲ್ಲಿ ಇದೆ. ಈ ನದಿಯಲ್ಲಿ ಚಿನ್ನವಿದೆ ಎಂದು 1890ರಲ್ಲಿ ಪತ್ತೆಯಾಯ್ತು, ವಿಶ್ವದ ಪ್ರಮುಖ ಚಿನ್ನದ ನಿಕ್ಷೇಪದಲ್ಲಿ ಇದು ಕೂಡ ಒಂದಾಗಿತ್ತು, ಇಲ್ಲಿ ಪತ್ತೆಯಾದ ಚಿನ್ನ ದೇಶದ ಸಂಪತ್ತು ಹೆಚ್ಚಿಸುವಲ್ಲಿ ಸಹಾಯ ಮಾಡಿತು.
ಬ್ರಹ್ಮಪುತ್ರ ನದಿ
ಹೌದು ಭಾರತದ ಪುಣ್ಯ ನದಿಯಲ್ಲಿ ಒಂದಾಗಿರುವ ಬ್ರಹ್ಮಪುತ್ರದಲ್ಲಿಯೂ ಚಿನ್ನವಿದೆ. ಈ ನದಿಯ ದಡದಲ್ಲಿರುವ ಮರಳಿನಲ್ಲಿ ಚಿನ್ನ ಕಂಡು ಬರುತ್ತಿತ್ತು ಎಂದು ಹೇಳಲಾಗಿದೆ. ಅಲ್ಲಿಯ ಸ್ಥಳೀಯರು ಇದನ್ನು ಹೆಕ್ಕಿ ತೆಗೆದುಕೊಂಡು ಜೀವನ ನಡೆಸುತ್ತಿದ್ದರು ಎಂದು ಹೇಳಲಾಗುವುದು.
ದಾಮೋದರಾ ನದಿ
ಈ ನದಿ ಕೂಡ ಪಶ್ಚಿಮ ಬಂಗಾಳದ ಜಾರ್ಖಂಡ್ನಲ್ಲಿದೆ, ನೂರಾರು ವರ್ಷಗಳ ಹಿಂದೆಯೇ ಜನರು ಈ ನದಿಯಿಂದ ಚಿನ್ನವನ್ನು ಆಯ್ದು ತೆಗೆದುಕೊಳ್ಳುತ್ತಿದ್ದರು. ಈ ಚಿನ್ನ ಹೊಟ್ಟೆಪಾಡು ತುಂಬಿಸಿಕೊಳ್ಳಲು ಸಹಾಯ ಮಾಡುತ್ತದೆ.
ನದಿಯಲ್ಲಿ ಚಿನ್ನವನ್ನು ಹೇಗೆ ತೆಗೆಯಲಾಗುವುದು?
ನದಿಯಲ್ಲಿ ಚಿನ್ನವನ್ನು ತೆಗೆಯಲು ಹಿಂದಿನ ಹಲವು ವಿಧಾನಗಳನ್ನು ಬಳಸಿ ತೆಗೆಯುತ್ತಿದ್ದರು. ಮರಳಿನಿಂದ ಆಯ್ದು ತೆಗೆದುಕೊಳ್ಳಲಾಗುವುದು. ಈಜು ಬರುವವರು ನದಿ ಅಡಿಯಿಂದ ತೆಗೆಯಲಾಗುವುದು. ಈ ಚಿನ್ನ ಎಲ್ಲರಿಗೆ ಸಿಗುವುದಿಲ್ಲ, ಅದೃಷ್ಟ ಇರುವವರಿಗೆ ಮಾತ್ರ ಚಿನ್ನ ಸಿಗುವುದು ಎಂದು ಹೇಳಲಾಗುವುದು, ಈ ನದಿಯಲ್ಲಿ ಈಗಲೂ ಚಿನ್ನಕ್ಕಾಗಿ ಹುಡುಕಾಟ ನಡೆಯುತ್ತಲೇ ಇದೆ.



Click it and Unblock the Notifications