Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅನಂತ ಪದ್ಮಸ್ವಾಮಿ ದೇವಾಲಯದ ಪ್ರಾಂಗಣಕ್ಕೆ ಬಂದ ಮೊಸಳೆ: ಬಬಿಯಾ ಮರುಜನ್ಮವೆತ್ತಿ ಬಂದಿದೆ ಎನ್ನುತ್ತಿರುವ ಭಕ್ತರು
ಕೇರಳದ ಅನಂತ ಪದ್ನನಾಭ ದೇವಾಲಯದ ಹಲವು ವಿಶೇಷತೆಗಳಲ್ಲೊಂದು ಅಲ್ಲಿದ್ದ ಸಸ್ಯಾಹಾರಿ ಮೊಸಳೆ, ಅದಕ್ಕೆ ಬಬಿಯಾ ಎಂದು ಹೆಸರಿಡಲಾಗಿತ್ತು. ಈ ಬಬಿಯ 70 ವರ್ಷಕ್ಕೂ ಅಧಿಕ ಸಮಯ ಬದುಕಿತ್ತು. ಬಬಿಯಾ ವಿಷ್ಣುವಿನಲ್ಲಿ ಐಕ್ಯವಾದ ಮೇಲೆ ಕಳೆದ ವರ್ಷ ಮತ್ತೊಂದು ಮರಿ ಮೊಸಳೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿತ್ತು, ಆದರೆ ಅದು ಹೆಚ್ಚಿನವರ ಕಣ್ಣಿಗೆ ಬಿದ್ದಿರಲಿಲ್ಲ, ಆದರೆ ಜೂನ್ 14ರಂದು ಮೊಸಳೆ ದೇವಾಲಯ ಪ್ರಾಂಗಣ ಪ್ರವೇಶಿಸಿ ಅಚ್ಚರಿ ಮೂಡಿಸಿದೆ.

ಈ ಮೊಸಳೆ ದೇವಾಲಯದ ಗರ್ಭಗುಡಿಯ ಸಮೀಪ ಬಂದು ವಿಶ್ರಾಂತಿ ಪಡೆದಿದೆ. ಈ ಮೊಸಳೆ ಬಂದಾಗ ಯಾರೂ ಗಮನಿಸಿರಲಿಲ್ಲ, ಏಕೆಂದರೆ ಅಷ್ಟೊತ್ತಿಗೆ ದೇಗುಲದ ನಡೆ ಮುಚ್ಚಿತ್ತು, ಸಮಜೆ ಕ್ಷೇತ್ರದ ಅರ್ಚಕರು ಪೂಜೆಗೆ ಬಂದಾಗ ಈ ಭವ್ಯ ದೃಶ್ಯ ಕಂಡು ಬಂದಿದೆ, ಅವರು ಅದನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ, ಇದೀಗ ಆ ವೀಡಿಯೋ ವೈರಲ್ ಆಗಿದೆ.
ಬಬಿಯಾ ಕಣ್ಮರೆಯಾಗಿ ಸರಿಯಾಗಿ ಇಂದು ವರ್ಷಕ್ಕೆ ಕಾಣಿಸಿಕೊಂಡಿದ್ದ ಬಬಿಯಾ 3
ಬಿಬಿಯಾ ವಿಷ್ಣುವಿನಲ್ಲಿ ಐಕ್ಯವಾದಾಗ ದೇವಾಲಯದ ಅರ್ಚಕರು, ಅಲ್ಲಿಗೆ ಬರುತ್ತಿದ್ದ ಕಣ್ಣೀರು ಹಾಕಿ ಬಬಿಯಾಗೆ ವಿಧಿ ವಿಧಾನಗಳ ಮೂಲಕ ಮಣ್ಣು ಮಾಡಿದ್ದರು. ಅದಾಗಿ ಒಂದು ವರ್ಷಕ್ಕೆ ಒಂದು ಮರಿ ಮೊಸಳೆ ಕಣ್ಣಿಗೆ ಬಿದ್ದಾಗ ಎಲ್ಲರಿಗೂ ಅಚ್ಚರಿ ಉಂಟಾಗಿತ್ತು, ಬಬಿಯಾ ಮತ್ತೆ ಬರುತ್ತದೆ ಎಂಬ ಕತೆ ಸತ್ಯವಾಯ್ತು, ಆದರೆ ಈ ಮರಿ ಮೊಸಳೆ ಕೆಲವೇ ಕೆಲವರ ಕಣ್ಣಿಗೆ ಮಾತ್ರ ಬಿದ್ದಿತ್ತು.
ಈ ದೇವಾಲಯದ ಕೊಳದಲ್ಲಿ ಒಂದು ಮೊಸಳೆ ಹೋದರೆ ಮತ್ತೊಂದು ತಾನಾಗಿಯೇ ಬರುತ್ತದೆ ಎಂಬ ಮಾತು ಈ ಮೂಲಕ ಸತ್ಯವಾಯ್ತು
ಬಬಿಯಾ ತುಂಬಾನೇ ಪ್ರಸಿದ್ಧ ಪಡೆದ ಮೊಸಳೆ, ಆದರೆ ಅದಕ್ಕಿಂತ ಮೊದಲು ಮೊಸಳೆಯಿತ್ತು, ಆದರೆ ಆ ಮೊಸಳೆಯನ್ನು ಬ್ರಿಟಿಷರು ಗುಂಡಿಕ್ಕಿ ಕೊಂದರು, ಅದಾದ ಸ್ವಲ್ಪ ದಿನಗಳಲ್ಲಿ ಅಲ್ಲಿ ಮತ್ತೊಂದು ಮೊಸಳೆ ಮರಿ ಕಾಣಿಸಿಕೊಂಡಿತು, ಆ ಮೊಸಳೆಗೆ ಬಬಿಯಾ ಎಂದು ಹೆಸರು ಇಡಲಾಯ್ತು,. ಬಬಿಯಾ ಜನರೊಂದಿಗೆ ಅಷ್ಟು ಚೆನ್ನಾಗಿ ಬರೆಯುತ್ತಿತ್ತು, ಅರ್ಚಕರು ಬಂದು ಬಬಿಯಾ ಅಂತ ಕರೆದರೆ ಸಾಕು, ನೀರಿನಿಂದ ಹೊರ ಬರ್ತಾ ಇತ್ತು, ಅವರ ಅದಯ ಮೈ ಮುಟ್ಟಿ, ನಂತರ ಅದಕ್ಕೆ ಪ್ರಸಾದ ನೀಡುತ್ತಿದ್ದರು, ಮೊಸಳೆಗೆ ಗಂಧದ ಮೊಟ್ಟು ಕೂಡ ಇಡುತ್ತಿದ್ದರು. ಈ ದೃಶ್ಯವನ್ನು ನೋಡಲೆಂದೇ ಭಕ್ತರು ನರೆಯುತ್ತಿದ್ದರು, ಎಲ್ಲರ ಪ್ರೀತಿ ಪಾತ್ರವಾಗಿದ್ದ ಬಬಿತಾ 70ಕ್ಕೂ ಅಧಿಕ ವರ್ಷ ಜೀವಿಸಿತ್ತು. ಬಬಿಯಾ ಇನ್ನಿಲ್ಲ ಎಂದು ಸುದ್ದಿ ತಿಳಿದಾಗ ಭಕ್ತರು, ದೇವಾಸ್ಥಾನ ಸಿಬ್ಬಂದಿಗಳು ಕಣ್ಣೀರು ಹಾಕಿದ್ದರು, ಬಬಿಯಾ ಬಳಿಕ ಪ್ರತಿದಿನವೂ ಬಬಿಯಾವನ್ನು ತುಂಬಾನೇ ಮಿಸ್ ಮಾಡುತ್ತಿದ್ದರು. ಅಲ್ಲಿಯ ಜನರಿಗೆ ಬಬಿಯಾ ಮತ್ತೊಮ್ಮೆ ಜನ್ಮವೆತ್ತಿ ಬರುತ್ತದೆ ಎಂದು ನಂಬಿದ್ದರು, ಆದರೆ ಅವರ ನಂಬಿಕೆ ಹುಸಿಯಾಗಿಲ್ಲ, ಸರಿಯಾಗಿ ಒಂದು ವರ್ಷಕ್ಕೆ ಮರಿ ಮೊಸಳೆ ಕಾಣಿಸಿಕೊಂಡಾಗ ಬಬಿಯಾ ಮರಳಿ ಬಂತು ಅಂತ ಜನರು ಖುಷಿಪಟ್ಟರು.
ಮೊದಲು ಪುಟ್ಟ ಮಗುವಿಗೆ ಕಾಣಿಸಿಕೊಂಡಿದ್ದ ಮೊಸಳೆ
ಈ ಮರಿ ಮೊಸಳೆ ಅಂದರೆ ಬಬಿಯಾ 3 ಮೊದಲು ಕಾಣಿಸಿಕೊಂಡಿದ್ದು ಒಂದು ಮಗುವಿಗಂತೆ. ಕಾಙಂಗಾಡಿನಿಂದ ಒಂದು ಕುಟುಂಬ ದೇವಾಲಯಕ್ಕೆ ಬಂದಿದ್ದರು, ಆವಾಗ ಅವರ ಜೊತೆ ಬಂದಿದ್ದ ಮಗುವಿಗೆ ಅಲ್ಲಿ ಮೊಸಳೆ ಇರುವ ಕತೆ ಯಾರೋ ಹೇಳಿರಬೇಕು, ಹಾಗಾಗಿ ಆ ಮಗು ಅಲ್ಲಿಗೆ ಬಂದಾಗ ನನಗೆ ಮೊಸಳೆ ತೋರಿಸು ಎಂದಿದೆ, ಅದಕ್ಕೆ ಮನೆಯವರು ಈವಾಗ ಮೊಸಳೆ ಇಲ್ಲ ಎಂದಿದ್ದಾರೆ, ಆ ಮಗು ಕೇಳಲಿಲ್ಲ, ಮೊಸಳೆ ನೋಡಲೇಬೇಕು ಎಂದು ಹಠ ಮಾಡಿದೆ. ಆವಾಗ ನೋಡು ನಿನಗೆ ಹೇಳಿದರೂ ಕೇಳಲ್ಲ , ಈಗ ಮೊಸಳೆ ಇಲ್ಲ ಎಂದು ಕೊಳದ ಬಳಿ ಕರೆದುಕೊಂಡು ಹೋದಾಗ ಅಚ್ಚರಿ ಎಂಬಂತೆ ಮರಿ ಮೊಸಳೆ ಆ ಮಗು ಹಾಗೂ ಮನೆಯವರ ಕಣ್ಣಿಗೆ ಬಿದ್ದಿದೆ, ಅವರು ಅದನ್ನು ದೇವಾಲಯದ ಅರ್ಚಕರಿಗೆ ತಿಳಿಸಿದಾಗ ಯಾರೂ ನಂಬಲಿಲ್ಲ, ಏಕೆಂದರೆ ಯಾರಿಗೂ ಆ ಮೊಸಳೆ ಕಂಡು ಬಂದಿರಲಿಲ್ಲ.
ನಂತರ ಈ ಮರಿ ಮೊಸಳೆ ಆಗಾಗ ಕಣ್ಣಿಗೆ ಬಿದ್ದಾಗ ಎಲ್ಲರಿಗೂ ಖುಷಿಯಾಗಿತ್ತು. ಈಗ ನೋಡಿದರೆ ದೇವಾಯದ ಪ್ರಾಂಗಣದವರೆಗೆ ಬಂದಿದೆ. ಬಬಿಯಾನೇ ಬಂದಿದೆ ಎಂಬುವುದರಲ್ಲಿ ಸಂಶಯವೇ ಬೇಡ ಅಲ್ವಾ?
ಇಂಥ ಪವಾಡದಿಂದಲೇ ಈ ದೇವಾಲಯ ಹೆಸರುವಾಸಿಯಾಗಿದೆ.



Click it and Unblock the Notifications