Latest Updates
-
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
5 ದಿನದಲ್ಲಿ 330 ಭೂಕಂಪನ-ಜ್ವಾಲಾಮುಖಿ ಸ್ಪೋಟ: ಜಪಾನ್ನಲ್ಲಿ ನಿಜವಾಗುತ್ತಿದೆ ಟುತ್ಸುಕಿ ಭವಿಷ್ಯ
ಜಪಾನ್ ಅಂದರೆ ದ್ವೀಪ ರಾಷ್ಟ್ರ. ಸಣ್ಣ ದೇಶ, ಹಾಗೆ ಭೂಕಂಪನಗಳ ನಾಡು ಎಂದು ನೆನಪಾಗುತ್ತದೆ. ಜಪಾನ್ನಲ್ಲಿ ಪ್ರತಿ ವರ್ಷ 1500ಕ್ಕೂ ಹೆಚ್ಚು ಭೂಕಂಪನಗಳು ಸಂಭವಿಸುತ್ತದೆ. ಅದ್ರಲ್ಲೂ 2011ರಲ್ಲಿ ಸಂಭವಿಸಿದ್ದ ಸುನಾಮಿಯ ಭೀಕರತೆ ಇಂದಿಗೂ ಭಯ ಹುಟ್ಟಿಸುತ್ತೆ. ಜಪಾನ್ ಟೆಕ್ಟಾನಿಕ್ ಪ್ಲೇಟ್ನ ರಿಂಗ್ಸ್ ಆಫ್ ಫೈರ್ ಎಂಬ ಸ್ಥಾನದಲ್ಲಿ ಬರುವ ಕಾರಣ ಅಲ್ಲಿ ಯಾವಾಗಲು ಭೂಕಂಪನ ಉಂಟಾಗುತ್ತಲೇ ಇರುತ್ತದೆ.
ಜಪಾನ್ ಭೂಕಂನದಿಂದ ಅದೆಷ್ಟು ಬಾರಿ ಸಮಸ್ಯೆಗೆ ಒಳಗಾದರು ಅವರು ಮತ್ತೆ ಮತ್ತೆ ಪಟ್ಟಣ, ನಗರಗಳ ಕಟ್ಟುತ್ತಾರೆ, ಮತ್ತೆ ಜೀವನ ನಡೆಸುತ್ತಾರೆ. ಹಾಗೆ ಈಗ ಜಪಾನ್ನಲ್ಲಿ ಹೊಸ ರೀತಿಯ ಭಯ ಆತಂಕ ಎದುರಾಗುತ್ತಿದೆ. ಅಲ್ಲಿ ಮತ್ತೆ ಪ್ರಬಲ ಭೂಕಂಪನ ಅಥವಾ ನೈಸರ್ಗಿಕ ವಿಕೋಪ ಸಂಭವಿಸುವ ಕುರಿತ ಆತಂಕ ಎದುರಾಗಿದೆ.

ಈಗ ಜಪಾನ್ನ ಮಾಂಗಾ ಕಲಾವಿದೆಯ ಭವಿಷ್ಯವಾಣಿ ನಿಜವಾಗುವ ಆತಂಕ ಎದುರಾಗಿದೆ. ಹೌದು ಬಲ್ಗೇರಿಯಾದ ಅತೀಂದ್ರಿಯ ಶಕ್ತಿ ಹೊಂದಿದ್ದ ಬಾಬಾ ವಂಗಾರಂತೆ ಜಪಾನ್ನಲ್ಲಿಯೂ ಮಾಂಗಾ ಕಲಾವಿದೆಯಾಗಿರುವ ಟುತ್ಸುಕಿ ಹೇಳಿರುವ ಭವಿಷ್ಯವೀಗ ನಿಜವಾಗುವ ಆತಂಕ ಎದುರಾಗಿದೆ.
ಸ್ಥಳೀಯ ವರದಿಗಳ ಪ್ರಕಾರ ಮಂಗಳವಾರ ಬೆಳಗ್ಗೆ 4 ಗಂಟೆಯ ನಂತರ 5ರ ತೀವ್ರತೆಯ ಭೂಕಂಪ ಸೇರಿದಂತೆ ಕಳೆದ ಐದು ದಿನಗಳಲ್ಲಿ 330 ಕ್ಕೂ ಹೆಚ್ಚು ಕಂಪನಗಳು ಟೋಕಾರಾ ಸುತ್ತಮುತ್ತ ಸಂಭವಿಸಿದೆ.
ಜಪಾನ್ನ ದೂರದ ಟೋಕಾರಾ ದ್ವೀಪಗಳ ಸುತ್ತ ಭೂಕಂಪಗಳ ಸಮೂಹ ಮತ್ತು ಕ್ಯೂಶುದಲ್ಲಿ ಜ್ವಾಲಾಮುಖಿ ಸ್ಪೋಟಗೊಂಡಿದೆ. ಈ ಕುರಿತು ದುರಂತಗಳ ಭವಿಷ್ಯ ನುಡಿದಿದ್ದ ಜಪಾನಚ್ನ ಟುತ್ಸುಕಿ ಮೊದಲೇ ಹೇಳಿದ್ದಾರೆ. ಜಪಾನ್ನಲ್ಲಿ ಮುಂದಿನ ಜುಲೈನಲ್ಲಿ ಬಹುದೊಡ್ಡ ದುರಂತ ಸಂಭವಿಸಬಹುದು. ಅದ್ರಲ್ಲೂ ನೈಸರ್ಗಿಕ ವಿಕೋಪಗಳು ಸಾವು ನೋವಿಗೆ ಕಾರಣವಾಗಬಹುದು ಎಂದು ಅವರು ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.
ಕಳೆದ 7 ವರ್ಷಗಳಿಂದಲೂ ಸುಪ್ತಾವಸ್ಥೆಯಲ್ಲಿದ್ದ ಶಿನ್ಮೋ ಜ್ವಾಲಾಮುಖಿ ಏಕಾಏಕಿ ಸ್ಪೋಟಗೊಂಡಿದೆ. ಇದರಿಂದ 500 ಮೀಟರ್ ಎತ್ತರಕ್ಕೂ ಬೂದಿ ಧುಮುಕಿತ್ತು. ಸುತ್ತಲಿನ ಪ್ರದೇಶದಲ್ಲಿ ದಟ್ಟ ಬೂದಿ ಹರಡಿಕೊಂಡಿತ್ತು. ಇದರಿಂದ ಇಡಿ ಜಪಾನ್ನಲ್ಲಿ ಆತಂಕದ ವಾತಾವರಣಕ್ಕೆ ಕಾರಣವಾಗಿದೆ.
ಮಾಂಗಾ ಕಲಾವಿದೆ ಟುತ್ಸುಕಿ ಪುಸ್ತಕದಲ್ಲಿ ಹೇಳಿರುವುದೇನು?
ರಿಯೋ ಟುತ್ಸುಕಿ ಭವಿಷ್ಯವಾಣಿಗಳನ್ನು ತನ್ನ ಪುಸ್ತಕದಲ್ಲಿ ದಾಖಲಿಸಿ ಇಡುವ ಕೆಲಸ ಮಾಡುತ್ತಾರೆ. ಅವರನ್ನು ಜಪಾನ್ನ ಬಾಬಾ ವಂಗಾ ಅಂತಲೂ ಕರೆಯುತ್ತಾರೆ. ಆಕೆ ರಾತ್ರಿ ಕನಸಿನಲ್ಲಿ ಕಾಣುವಂತಹ ದುರಂತಗಳನ್ನು ದಿ ಫ್ಯೂಚರ್ ಆಫ್ ಐ ಸೀ ಇಟ್ ಎಂಬ ಪುಸ್ತಕದಲ್ಲಿ ದಾಖಲಿಸಿರುವುದು ನೋಡಬಹುದು. ಅದರಲ್ಲಿ ಆಕೆ ಭೂಕಂಪನಗಳ ನಾಡು ಎಂದೇ ಕರೆಯಲ್ಪಡುವ ಜಪಾನ್ನಲ್ಲಿ ಮತ್ತೆ ಭೂಕಂಪ ಸಂಭವಿಸಲಿದೆ ಎಂದು ತಿಳಿಸಿದ್ದಾಳೆ. ಅದರಲ್ಲೂ ಜುಲೈ 2025ರಲ್ಲಿ ಜಪಾನ್ನಲ್ಲಿ ಭೀಕರ ಭೂಕಂಪನ ಸಂಭವಿಸಬಹುದು ಎಂದಿದ್ದಾರೆ. ಹಾಗೆ ಫುಕುಶಿಮಾ ಪರಮಾಣು ಸ್ಥಾವರಕ್ಕೆ ಹಾನಿಯಾಗುವ ಭೀತಿ ಇದೆ ಎಂದು ಆಕೆ ಹೇಳಿರುವುದು ಆತಂಕಕ್ಕೆ ಕಾರಣವಾಗಿದೆ.
ಜೂನ್ನಲ್ಲಿ ನಾವು ಏರ್ ಇಂಡಿಯಾ ದುರಂತ, ಇರಾನ್ ಇಸ್ರೇಲ್ ನಡುವಿನ ಯುದ್ದದ ಆತಂಕ ನೋಡಿದ್ದೇವೆ. ಹಾಗೆ ಜುಲೈನಲ್ಲಿಯೂ ಕೂಡ ಇಂತಹ ಹಲವು ಘಟನೆಗಳು ನಡೆಯಬಹುದು ಎಂದು ಆಕೆ ಹೇಳಿದ್ದಾರೆ. ಅದ್ರಲ್ಲೂ ಜುಲೈ 5ರಂದು ಜಪಾನ್ನಲ್ಲಿ ಬಹುದೊಡ್ಡ ವಿಪತ್ತು ಸಂಭವಿಸಬಹುದು ಎಂದಿದ್ದಾರೆ. ಈ ಭವಿಷ್ಯವಾಣಿಯ ನಡುವೆ ಈಗ ಜಪಾನ್ನಲ್ಲಿ ಭೂಕಂಪನ ಹಾಗೂ ಜ್ವಾಲಾಮುಖಿ ಸ್ಪೋಟಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ಮೊದಲು ಇಂಗ್ಲೆಂಡ್ನ ರಾಜಕುಮಾರಿ ಡಯಾನ ಮರಣ, ಗಾಯಕಿ ಫ್ರೆಡ್ಡಿ ಮರ್ಕ್ಯುರಿ ಸಾವು ಮತ್ತು 2019ರ ಸಮಯದಲ್ಲಿ ಆಘಾತ ತಂದಿದ್ದ ಕೋವಿಡ್ ವೈರಸ್ ಕುರಿತಂತೆಯು ಆಕೆ ಪುಸ್ತಕದಲ್ಲಿ ಉಲ್ಲೇಖಿಸಿರುವುದು ನೋಡಬಹುದು. ಹೀಗಾಗಿ ಆಕೆಯ ಭವಿಷ್ಯವಾಣಿ ನಿಜವಾಗುವ ಆತಂಕ ಈಗ ಮತ್ತಷ್ಟು ಹೆಚ್ಚಾಗಿದೆ. ಇನ್ನು ಟುತ್ಸುಕಿ ಬರೆದಿರುವ ಈ ಪುಸ್ತಕಕ್ಕೆ ಈಗ ಭಾರೀ ಬೇಡಿಕೆಯೂ ಬಂದಿದ್ಯಂತೆ.



Click it and Unblock the Notifications
