Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಅತ್ಯಂತ ಶುಭಯೋಗದಲ್ಲಿ ಬಂದಿದೆ ಕೃಷ್ಣ ಜನ್ಮಾಷ್ಟಮಿ: ರಾತ್ರಿ ಈ ಶುಭ ಮುಹೂರ್ತದಲ್ಲಿ ಪೂಜೆ ಮಾಡಿ
ಈ ವರ್ಷ ಕೃಷ್ಣ ಜನ್ಮಾಷ್ಟಮಿಯನ್ನು ಸೆಪ್ಟೆಂಬರ್ 6 ಮತ್ತು 7ರಂದು ಆಚರಿಸಲಾಗುವುದು. ಈ ವರ್ಷದ ಕೃಷ್ಣ ಜನ್ಮಾಷ್ಟಮಿ ತುಂಬಾನೇ ವಿಶೇಷವಾಗಿದೆ, ಏಕೆಂದರೆ ಹಲವು ವರ್ಷಗಳ ಬಳಿಕ ರೋಹಿಣಿ ನಕ್ಷತ್ರದಲ್ಲಿ ಕೃಷ್ನ ಜನ್ಮಾಷ್ಟಮಿ ಬಂದಿದೆ. ಅದಲ್ಲದೆ ಸರ್ವಾರ್ಥ ಸಿದ್ದಿ ಯೋಗ ಕೂಡ ಏರ್ಪಟ್ಟಿದೆ. ಈ ಮೂರು ಕಾರಣದಿಂದ ಈ ವರ್ಷ ನಾವು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಅತ್ಯಂತ ಶುಭಯೋಗದಲ್ಲಿ ಆಚರಿಸುವ ಯೋಗ ಬಂದಿದೆ.
ಈ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿ ಅಷ್ಟಮಿ ತಿಥಿ ರೋಹಿಣಿ ನಕ್ಷತ್ರದಲ್ಲಿ ಬಂದಿದ್ದು, ಸರ್ವಾರ್ಥ ಸಿದ್ಧಿ ಯೋಗ ಸೃಷ್ಟಿಯಾಗುತ್ತಿದೆ, ಈ ಸರ್ವಾರ್ಥ ಸಿದ್ಧಿಯೋಗದ ಮಹತ್ವವೇನು? ಏಕೆ ಈ ವರ್ಷ ರೋಹಿಣಿ ನಕ್ಷತ್ರದಲ್ಲಿ ಜನ್ಮಾಷ್ಟಮಿ ಬಂದಿರುವುದು ವಿಶೇಷ ಎಂದು ಹೇಳಲಾಗುತ್ತಿದೆ ಎಂದು ನೋಡೋಣ ಬನ್ನಿ:

ಸರ್ವಾರ್ಥ ಸಿದ್ಧಿಯೋಗ ಎಂದರೇನು?
ಕೆಲವೊಂದು ನಕ್ಷತ್ರ ಕೆಲವೊಂದು ದಿನ ಬಂದರೆ ಸರ್ವಾರ್ಥ ಸಿದ್ಧಿ ಯೋಗ ಏರ್ಪಡುವುದು, ಈ ಅವಧಿಯಲ್ಲಿ ಹೊಸ ಕೆಲಸವನ್ನು ಪ್ರಾರಂಭಿಸಲು ಈ ಯೋಗ ಶುಭವಾಗಿದೆ. ಏನಾದರೂ ಆಸ್ತಿ ಖರೀದಿಸುವುದಾದರೆ, ಗಾಡಿ ಖರೀದಿಸುವುದಾದರೆ ಈ ಯೋಗ ತುಂಬಾನೇ ಶುಭವಾಗಿದೆ. ಸೆಪ್ಟೆಂಬರ್ ರಂದು ಬೆಳಗ್ಗೆ 09:20ರಿಂದ ಸೆಪ್ಟೆಂಬರ್ 7 ಬೆಳಗ್ಗೆ 06:14ರವರೆಗೆ ಸರ್ವಾರ್ಥ ಸಿದ್ಧಿಯೋಗವಿದೆ.
ರವಿಯೋಗವೂ ಏರ್ಪಟ್ಟಿದೆ
ಜ್ಯೋತಿಷ್ಯದಲ್ಲಿ ರವಿಯೋಗವನ್ನು ಕೂಡ ಅತ್ಯಂತ ಶುಭಯೋಗ ಎಂದು ಪರಿಗಣಿಸಲಾಗಿದೆ. ಇಂದು ರಾತ್ರಿ 09:20ರವರೆಗೆ ರವಿಯೋಗವಿದೆ.
ಅಷ್ಟಮಿ ತಿಥಿಯಂದು ರೋಹಿಣಿ ನಕ್ಷತ್ರ
ಈ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿ, ಅಷ್ಟಮಿ ತಿಥಿಯಂದು ರೋಹಿಣಿ ನಕ್ಷತ್ರ ಮಧ್ಯರಾತ್ರಿ ಬಂದಿದೆ. ರೋಹಿಣಿ ನಕ್ಷತ್ರವು ಸೆಪ್ಟೆಂಬರ್ 6 ರಂದು ಬೆಳಿಗ್ಗೆ 9.20 ರಿಂದ ಸೆಪ್ಟೆಂಬರ್ 7 ರ ಬೆಳಿಗ್ಗೆ 10.25 ರವರೆಗೆ ಇರಲಿದೆ. ಪೌರಾಣಿಕ ಕಥೆಯ ಪ್ರಕಾರ ಶ್ರೀಕೃಷ್ಣನು ಭಾದ್ರಪದ ಮಾಸದ ದಕ್ಷಿಣ ಭಾರತದಲ್ಲಿ ಶ್ರಾವಣ ಮಾಸದ ಅಷ್ಟಮಿ ತಿಥಿಯಂದು ಮಧ್ಯರಾತ್ರಿ ರೋಹಿಣಿ ನಕ್ಷತ್ರದಲ್ಲಿ ಜನಿಸಿದನು. ಈ ವರ್ಷ ಅಂಥದ್ದೇ ಮುಹೂರ್ತ ರೂಪುಗೊಂಡಿರುವುದರಿಂದ ತುಂಬಾನೇ ವಿಶೇಷವಾಗಿದೆ.
ಶ್ರೀ ಕೃಷ್ಣನನ್ನು ಹೇಗೆ ಪೂಜಿಸಬೇಕು?
ಅಷ್ಟಮಿ ತಿಥಿಯು ಸೆಪ್ಟೆಂಬರ್ 6 ಬುಧವಾರದಂದು ಮಧ್ಯಾಹ್ನ 3.37 ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 7 ರಂದು ಸಂಜೆ 4.14 ಕ್ಕೆ ಕೊನೆಗೊಳ್ಳುತ್ತದೆ. ಜನ್ಮಾಷ್ಟಮಿ ಪೂಜೆಗೆ ಶುಭ ಮುಹೂರ್ತವು ರಾತ್ರಿ 11.44 ರಿಂದ 12.29 ರವರೆಗೆ ಇರುತ್ತದೆ. ಈ ಶುಭ ಸಮಯದಲ್ಲಿ ಬಾಲ ಗೋಪಾಲನನ್ನು ಪೂಜಿಸಿ.
ಜನ್ಮಾಷ್ಟಮಿ ಶುಭ ಯೋಗದ 3 ಪ್ರಮುಖ ಪ್ರಯೋಜನಗಳು
* ಈ ದಿನ ಉಪವಾಸವಿದ್ದು ನೀವು ಕೃಷ್ಣನ ಪೂಜೆ ಮಾಡಿದರೆ ಎಲ್ಲಾ ಪಾಪಗಳಿಂದ ಮುಕ್ತಿ ದೊರೆಯಲಿದೆ.
* ಈ ದಿನ ಶ್ರೀಕೃಷ್ಣನ ಪೂಜೆ ಮಾಡುವುದರಿಂದ ಆರೋಗ್ಯ ಚೆನ್ನಾಗಿರಲಿದೆ, ಸಂಪತ್ತು ವೃದ್ಧಿಸಲಿದೆ
* ಅಲ್ಲದೆ ಅತ್ಯಂತ ಶುಭ ಯೋಗದಲ್ಲಿ ಕೃಷ್ಣ ಜಯಂತಿ ಇರುವುದರಿಂದ ನೀವು ಈ ದಿನ ಮಾಡುವ ವ್ರತಕ್ಕೆ ಹೆಚ್ಚಿನ ಫಲ ಸಿಗಲಿದೆ.
ಈ ದಿನ ಮಕ್ಕಳ ಅಪೇಕ್ಷಿತ ದಂಪತಿ ಸಂತಾನ ಗೋಪಾಲ ಸ್ತೋತ್ರ ಪಠಿಸಿ.
ಯಾರು ಶ್ರದ್ಧೆಯಿಂದ ಈ ಮಂತ್ರವನ್ಉ ಪಠಿಸುತ್ತಾರೋ ಅವರಿಗೆ ಖಂಡಿತವಾಗಲು ಸಂತಾನ ಭಾಗ್ಯ ದೊರೆಯಲಿದೆ ಎಂಬುವುದು ಬಲವಾದ ನಂಬಿಕೆ.



Click it and Unblock the Notifications
