Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅತ್ಯಂತ ಶುಭಯೋಗದಲ್ಲಿ ಬಂದಿದೆ ಕೃಷ್ಣ ಜನ್ಮಾಷ್ಟಮಿ: ರಾತ್ರಿ ಈ ಶುಭ ಮುಹೂರ್ತದಲ್ಲಿ ಪೂಜೆ ಮಾಡಿ
ಈ ವರ್ಷ ಕೃಷ್ಣ ಜನ್ಮಾಷ್ಟಮಿಯನ್ನು ಸೆಪ್ಟೆಂಬರ್ 6 ಮತ್ತು 7ರಂದು ಆಚರಿಸಲಾಗುವುದು. ಈ ವರ್ಷದ ಕೃಷ್ಣ ಜನ್ಮಾಷ್ಟಮಿ ತುಂಬಾನೇ ವಿಶೇಷವಾಗಿದೆ, ಏಕೆಂದರೆ ಹಲವು ವರ್ಷಗಳ ಬಳಿಕ ರೋಹಿಣಿ ನಕ್ಷತ್ರದಲ್ಲಿ ಕೃಷ್ನ ಜನ್ಮಾಷ್ಟಮಿ ಬಂದಿದೆ. ಅದಲ್ಲದೆ ಸರ್ವಾರ್ಥ ಸಿದ್ದಿ ಯೋಗ ಕೂಡ ಏರ್ಪಟ್ಟಿದೆ. ಈ ಮೂರು ಕಾರಣದಿಂದ ಈ ವರ್ಷ ನಾವು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಅತ್ಯಂತ ಶುಭಯೋಗದಲ್ಲಿ ಆಚರಿಸುವ ಯೋಗ ಬಂದಿದೆ.
ಈ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿ ಅಷ್ಟಮಿ ತಿಥಿ ರೋಹಿಣಿ ನಕ್ಷತ್ರದಲ್ಲಿ ಬಂದಿದ್ದು, ಸರ್ವಾರ್ಥ ಸಿದ್ಧಿ ಯೋಗ ಸೃಷ್ಟಿಯಾಗುತ್ತಿದೆ, ಈ ಸರ್ವಾರ್ಥ ಸಿದ್ಧಿಯೋಗದ ಮಹತ್ವವೇನು? ಏಕೆ ಈ ವರ್ಷ ರೋಹಿಣಿ ನಕ್ಷತ್ರದಲ್ಲಿ ಜನ್ಮಾಷ್ಟಮಿ ಬಂದಿರುವುದು ವಿಶೇಷ ಎಂದು ಹೇಳಲಾಗುತ್ತಿದೆ ಎಂದು ನೋಡೋಣ ಬನ್ನಿ:

ಸರ್ವಾರ್ಥ ಸಿದ್ಧಿಯೋಗ ಎಂದರೇನು?
ಕೆಲವೊಂದು ನಕ್ಷತ್ರ ಕೆಲವೊಂದು ದಿನ ಬಂದರೆ ಸರ್ವಾರ್ಥ ಸಿದ್ಧಿ ಯೋಗ ಏರ್ಪಡುವುದು, ಈ ಅವಧಿಯಲ್ಲಿ ಹೊಸ ಕೆಲಸವನ್ನು ಪ್ರಾರಂಭಿಸಲು ಈ ಯೋಗ ಶುಭವಾಗಿದೆ. ಏನಾದರೂ ಆಸ್ತಿ ಖರೀದಿಸುವುದಾದರೆ, ಗಾಡಿ ಖರೀದಿಸುವುದಾದರೆ ಈ ಯೋಗ ತುಂಬಾನೇ ಶುಭವಾಗಿದೆ. ಸೆಪ್ಟೆಂಬರ್ ರಂದು ಬೆಳಗ್ಗೆ 09:20ರಿಂದ ಸೆಪ್ಟೆಂಬರ್ 7 ಬೆಳಗ್ಗೆ 06:14ರವರೆಗೆ ಸರ್ವಾರ್ಥ ಸಿದ್ಧಿಯೋಗವಿದೆ.
ರವಿಯೋಗವೂ ಏರ್ಪಟ್ಟಿದೆ
ಜ್ಯೋತಿಷ್ಯದಲ್ಲಿ ರವಿಯೋಗವನ್ನು ಕೂಡ ಅತ್ಯಂತ ಶುಭಯೋಗ ಎಂದು ಪರಿಗಣಿಸಲಾಗಿದೆ. ಇಂದು ರಾತ್ರಿ 09:20ರವರೆಗೆ ರವಿಯೋಗವಿದೆ.
ಅಷ್ಟಮಿ ತಿಥಿಯಂದು ರೋಹಿಣಿ ನಕ್ಷತ್ರ
ಈ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿ, ಅಷ್ಟಮಿ ತಿಥಿಯಂದು ರೋಹಿಣಿ ನಕ್ಷತ್ರ ಮಧ್ಯರಾತ್ರಿ ಬಂದಿದೆ. ರೋಹಿಣಿ ನಕ್ಷತ್ರವು ಸೆಪ್ಟೆಂಬರ್ 6 ರಂದು ಬೆಳಿಗ್ಗೆ 9.20 ರಿಂದ ಸೆಪ್ಟೆಂಬರ್ 7 ರ ಬೆಳಿಗ್ಗೆ 10.25 ರವರೆಗೆ ಇರಲಿದೆ. ಪೌರಾಣಿಕ ಕಥೆಯ ಪ್ರಕಾರ ಶ್ರೀಕೃಷ್ಣನು ಭಾದ್ರಪದ ಮಾಸದ ದಕ್ಷಿಣ ಭಾರತದಲ್ಲಿ ಶ್ರಾವಣ ಮಾಸದ ಅಷ್ಟಮಿ ತಿಥಿಯಂದು ಮಧ್ಯರಾತ್ರಿ ರೋಹಿಣಿ ನಕ್ಷತ್ರದಲ್ಲಿ ಜನಿಸಿದನು. ಈ ವರ್ಷ ಅಂಥದ್ದೇ ಮುಹೂರ್ತ ರೂಪುಗೊಂಡಿರುವುದರಿಂದ ತುಂಬಾನೇ ವಿಶೇಷವಾಗಿದೆ.
ಶ್ರೀ ಕೃಷ್ಣನನ್ನು ಹೇಗೆ ಪೂಜಿಸಬೇಕು?
ಅಷ್ಟಮಿ ತಿಥಿಯು ಸೆಪ್ಟೆಂಬರ್ 6 ಬುಧವಾರದಂದು ಮಧ್ಯಾಹ್ನ 3.37 ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 7 ರಂದು ಸಂಜೆ 4.14 ಕ್ಕೆ ಕೊನೆಗೊಳ್ಳುತ್ತದೆ. ಜನ್ಮಾಷ್ಟಮಿ ಪೂಜೆಗೆ ಶುಭ ಮುಹೂರ್ತವು ರಾತ್ರಿ 11.44 ರಿಂದ 12.29 ರವರೆಗೆ ಇರುತ್ತದೆ. ಈ ಶುಭ ಸಮಯದಲ್ಲಿ ಬಾಲ ಗೋಪಾಲನನ್ನು ಪೂಜಿಸಿ.
ಜನ್ಮಾಷ್ಟಮಿ ಶುಭ ಯೋಗದ 3 ಪ್ರಮುಖ ಪ್ರಯೋಜನಗಳು
* ಈ ದಿನ ಉಪವಾಸವಿದ್ದು ನೀವು ಕೃಷ್ಣನ ಪೂಜೆ ಮಾಡಿದರೆ ಎಲ್ಲಾ ಪಾಪಗಳಿಂದ ಮುಕ್ತಿ ದೊರೆಯಲಿದೆ.
* ಈ ದಿನ ಶ್ರೀಕೃಷ್ಣನ ಪೂಜೆ ಮಾಡುವುದರಿಂದ ಆರೋಗ್ಯ ಚೆನ್ನಾಗಿರಲಿದೆ, ಸಂಪತ್ತು ವೃದ್ಧಿಸಲಿದೆ
* ಅಲ್ಲದೆ ಅತ್ಯಂತ ಶುಭ ಯೋಗದಲ್ಲಿ ಕೃಷ್ಣ ಜಯಂತಿ ಇರುವುದರಿಂದ ನೀವು ಈ ದಿನ ಮಾಡುವ ವ್ರತಕ್ಕೆ ಹೆಚ್ಚಿನ ಫಲ ಸಿಗಲಿದೆ.
ಈ ದಿನ ಮಕ್ಕಳ ಅಪೇಕ್ಷಿತ ದಂಪತಿ ಸಂತಾನ ಗೋಪಾಲ ಸ್ತೋತ್ರ ಪಠಿಸಿ.
ಯಾರು ಶ್ರದ್ಧೆಯಿಂದ ಈ ಮಂತ್ರವನ್ಉ ಪಠಿಸುತ್ತಾರೋ ಅವರಿಗೆ ಖಂಡಿತವಾಗಲು ಸಂತಾನ ಭಾಗ್ಯ ದೊರೆಯಲಿದೆ ಎಂಬುವುದು ಬಲವಾದ ನಂಬಿಕೆ.



Click it and Unblock the Notifications