Latest Updates
-
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ! -
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ!
ಅತ್ಯಂತ ಶುಭಯೋಗದಲ್ಲಿ ಬಂದಿದೆ ಕೃಷ್ಣ ಜನ್ಮಾಷ್ಟಮಿ: ರಾತ್ರಿ ಈ ಶುಭ ಮುಹೂರ್ತದಲ್ಲಿ ಪೂಜೆ ಮಾಡಿ
ಈ ವರ್ಷ ಕೃಷ್ಣ ಜನ್ಮಾಷ್ಟಮಿಯನ್ನು ಸೆಪ್ಟೆಂಬರ್ 6 ಮತ್ತು 7ರಂದು ಆಚರಿಸಲಾಗುವುದು. ಈ ವರ್ಷದ ಕೃಷ್ಣ ಜನ್ಮಾಷ್ಟಮಿ ತುಂಬಾನೇ ವಿಶೇಷವಾಗಿದೆ, ಏಕೆಂದರೆ ಹಲವು ವರ್ಷಗಳ ಬಳಿಕ ರೋಹಿಣಿ ನಕ್ಷತ್ರದಲ್ಲಿ ಕೃಷ್ನ ಜನ್ಮಾಷ್ಟಮಿ ಬಂದಿದೆ. ಅದಲ್ಲದೆ ಸರ್ವಾರ್ಥ ಸಿದ್ದಿ ಯೋಗ ಕೂಡ ಏರ್ಪಟ್ಟಿದೆ. ಈ ಮೂರು ಕಾರಣದಿಂದ ಈ ವರ್ಷ ನಾವು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಅತ್ಯಂತ ಶುಭಯೋಗದಲ್ಲಿ ಆಚರಿಸುವ ಯೋಗ ಬಂದಿದೆ.
ಈ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿ ಅಷ್ಟಮಿ ತಿಥಿ ರೋಹಿಣಿ ನಕ್ಷತ್ರದಲ್ಲಿ ಬಂದಿದ್ದು, ಸರ್ವಾರ್ಥ ಸಿದ್ಧಿ ಯೋಗ ಸೃಷ್ಟಿಯಾಗುತ್ತಿದೆ, ಈ ಸರ್ವಾರ್ಥ ಸಿದ್ಧಿಯೋಗದ ಮಹತ್ವವೇನು? ಏಕೆ ಈ ವರ್ಷ ರೋಹಿಣಿ ನಕ್ಷತ್ರದಲ್ಲಿ ಜನ್ಮಾಷ್ಟಮಿ ಬಂದಿರುವುದು ವಿಶೇಷ ಎಂದು ಹೇಳಲಾಗುತ್ತಿದೆ ಎಂದು ನೋಡೋಣ ಬನ್ನಿ:

ಸರ್ವಾರ್ಥ ಸಿದ್ಧಿಯೋಗ ಎಂದರೇನು?
ಕೆಲವೊಂದು ನಕ್ಷತ್ರ ಕೆಲವೊಂದು ದಿನ ಬಂದರೆ ಸರ್ವಾರ್ಥ ಸಿದ್ಧಿ ಯೋಗ ಏರ್ಪಡುವುದು, ಈ ಅವಧಿಯಲ್ಲಿ ಹೊಸ ಕೆಲಸವನ್ನು ಪ್ರಾರಂಭಿಸಲು ಈ ಯೋಗ ಶುಭವಾಗಿದೆ. ಏನಾದರೂ ಆಸ್ತಿ ಖರೀದಿಸುವುದಾದರೆ, ಗಾಡಿ ಖರೀದಿಸುವುದಾದರೆ ಈ ಯೋಗ ತುಂಬಾನೇ ಶುಭವಾಗಿದೆ. ಸೆಪ್ಟೆಂಬರ್ ರಂದು ಬೆಳಗ್ಗೆ 09:20ರಿಂದ ಸೆಪ್ಟೆಂಬರ್ 7 ಬೆಳಗ್ಗೆ 06:14ರವರೆಗೆ ಸರ್ವಾರ್ಥ ಸಿದ್ಧಿಯೋಗವಿದೆ.
ರವಿಯೋಗವೂ ಏರ್ಪಟ್ಟಿದೆ
ಜ್ಯೋತಿಷ್ಯದಲ್ಲಿ ರವಿಯೋಗವನ್ನು ಕೂಡ ಅತ್ಯಂತ ಶುಭಯೋಗ ಎಂದು ಪರಿಗಣಿಸಲಾಗಿದೆ. ಇಂದು ರಾತ್ರಿ 09:20ರವರೆಗೆ ರವಿಯೋಗವಿದೆ.
ಅಷ್ಟಮಿ ತಿಥಿಯಂದು ರೋಹಿಣಿ ನಕ್ಷತ್ರ
ಈ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿ, ಅಷ್ಟಮಿ ತಿಥಿಯಂದು ರೋಹಿಣಿ ನಕ್ಷತ್ರ ಮಧ್ಯರಾತ್ರಿ ಬಂದಿದೆ. ರೋಹಿಣಿ ನಕ್ಷತ್ರವು ಸೆಪ್ಟೆಂಬರ್ 6 ರಂದು ಬೆಳಿಗ್ಗೆ 9.20 ರಿಂದ ಸೆಪ್ಟೆಂಬರ್ 7 ರ ಬೆಳಿಗ್ಗೆ 10.25 ರವರೆಗೆ ಇರಲಿದೆ. ಪೌರಾಣಿಕ ಕಥೆಯ ಪ್ರಕಾರ ಶ್ರೀಕೃಷ್ಣನು ಭಾದ್ರಪದ ಮಾಸದ ದಕ್ಷಿಣ ಭಾರತದಲ್ಲಿ ಶ್ರಾವಣ ಮಾಸದ ಅಷ್ಟಮಿ ತಿಥಿಯಂದು ಮಧ್ಯರಾತ್ರಿ ರೋಹಿಣಿ ನಕ್ಷತ್ರದಲ್ಲಿ ಜನಿಸಿದನು. ಈ ವರ್ಷ ಅಂಥದ್ದೇ ಮುಹೂರ್ತ ರೂಪುಗೊಂಡಿರುವುದರಿಂದ ತುಂಬಾನೇ ವಿಶೇಷವಾಗಿದೆ.
ಶ್ರೀ ಕೃಷ್ಣನನ್ನು ಹೇಗೆ ಪೂಜಿಸಬೇಕು?
ಅಷ್ಟಮಿ ತಿಥಿಯು ಸೆಪ್ಟೆಂಬರ್ 6 ಬುಧವಾರದಂದು ಮಧ್ಯಾಹ್ನ 3.37 ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 7 ರಂದು ಸಂಜೆ 4.14 ಕ್ಕೆ ಕೊನೆಗೊಳ್ಳುತ್ತದೆ. ಜನ್ಮಾಷ್ಟಮಿ ಪೂಜೆಗೆ ಶುಭ ಮುಹೂರ್ತವು ರಾತ್ರಿ 11.44 ರಿಂದ 12.29 ರವರೆಗೆ ಇರುತ್ತದೆ. ಈ ಶುಭ ಸಮಯದಲ್ಲಿ ಬಾಲ ಗೋಪಾಲನನ್ನು ಪೂಜಿಸಿ.
ಜನ್ಮಾಷ್ಟಮಿ ಶುಭ ಯೋಗದ 3 ಪ್ರಮುಖ ಪ್ರಯೋಜನಗಳು
* ಈ ದಿನ ಉಪವಾಸವಿದ್ದು ನೀವು ಕೃಷ್ಣನ ಪೂಜೆ ಮಾಡಿದರೆ ಎಲ್ಲಾ ಪಾಪಗಳಿಂದ ಮುಕ್ತಿ ದೊರೆಯಲಿದೆ.
* ಈ ದಿನ ಶ್ರೀಕೃಷ್ಣನ ಪೂಜೆ ಮಾಡುವುದರಿಂದ ಆರೋಗ್ಯ ಚೆನ್ನಾಗಿರಲಿದೆ, ಸಂಪತ್ತು ವೃದ್ಧಿಸಲಿದೆ
* ಅಲ್ಲದೆ ಅತ್ಯಂತ ಶುಭ ಯೋಗದಲ್ಲಿ ಕೃಷ್ಣ ಜಯಂತಿ ಇರುವುದರಿಂದ ನೀವು ಈ ದಿನ ಮಾಡುವ ವ್ರತಕ್ಕೆ ಹೆಚ್ಚಿನ ಫಲ ಸಿಗಲಿದೆ.
ಈ ದಿನ ಮಕ್ಕಳ ಅಪೇಕ್ಷಿತ ದಂಪತಿ ಸಂತಾನ ಗೋಪಾಲ ಸ್ತೋತ್ರ ಪಠಿಸಿ.
ಯಾರು ಶ್ರದ್ಧೆಯಿಂದ ಈ ಮಂತ್ರವನ್ಉ ಪಠಿಸುತ್ತಾರೋ ಅವರಿಗೆ ಖಂಡಿತವಾಗಲು ಸಂತಾನ ಭಾಗ್ಯ ದೊರೆಯಲಿದೆ ಎಂಬುವುದು ಬಲವಾದ ನಂಬಿಕೆ.



Click it and Unblock the Notifications