Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಅಯೋಧ್ಯೆಗೆ ಬಂತು 286 ಕೆ.ಜಿ ತೂಕದ ಬಿಲ್ಲು ಬಾಣ: ಇದರ ವಿಶೇಷಗಳೇನು ಗೊತ್ತಾ?
ಹಿಂದೂಗಳಿಗೆ ಬಹಳ ಪವಿತ್ರ ಸ್ಥಳಗಳಲ್ಲಿ ಅಯೋಧ್ಯೆ ಕೂಡ ಒಂದಾಗಿದೆ. ರಾಮ ಜನ್ಮಭೂಮಿಯಿ ಕಾರಣದಿಂದ ಅಲ್ಲಿಗೆ ದಿನವೂ ಸಾವಿರಾರು ಮಂದಿ ಭಕ್ತರು ಭೇಟಿ ನೋಡುತ್ತಾರೆ. ಹಾಗೆ ಅಯೋಧ್ಯೆ ಈಗ ದೇಶದ ಪ್ರಮುಖ ಯಾತ್ರಾ ಸ್ಥಳವಾಗಿ ಮಾರ್ಪಟ್ಟಿದೆ. ರಾಮ ಮಂದಿರದಲ್ಲಿ ದಿನವೂ ವಿಶೇಷ ಪೂಜೆ, ಅಲಂಕಾರ, ಕಾರ್ಯಕ್ರಮಗಳು ನಡೆಯುವುದು ನೋಡಬಹುದು, ಇತ್ತೀಚಿಗೆ ದೀಪಾವಳಿಯ ಸಮಯದಲ್ಲಿ ಅಯೋಧ್ಯೆಯಲ್ಲಿ ಲಕ್ಷಾಂತರ ಭಕ್ತರು ಶ್ರೀರಾಮನ ದರ್ಶನ ಪಡೆದಿದ್ದರು.
ಹಾಗೆ ಭಕ್ತರು ರಾಮನಿಗೆ ವಿಶೇಷ ಉಡುಗೊರೆಗಳ ನೀಡುವುದು ನೋಡಿದ್ದೇವೆ. ದೇವಾಲಯ ಉದ್ಘಾಟನೆಗೊಂಡಾಗಿನಿಂದ ಒಂದಲ್ಲಾ ಒಂದು ರೀತಿಯ ದುಬಾರಿ ಉಡುಗೊರೆಗಳು ದೇವಾಲಯಕ್ಕೆ ಹರಿದುಬರುತ್ತಿದೆ. ಆರಂಭದಲ್ಲಿ ಚಿನ್ನದ ಲೇಪನವಿದ್ದ ರಾಮಾಯಣ ಗ್ರಂಥ, ಬೆಳ್ಳಿಯ ಪೊರಕೆ, ಪಾದುಕೆಗಳು ಸಹ ಇದ್ದಕೆ ಸೇರಿದ್ದವು ಆದ್ರೆ ಈಗ ಈ ಸಾಲಿಗೆ ಹೊಸದಾಗಿ ಚಿನ್ನದ ಬಿಲ್ಲು ಬಾಣ ಸಹ ಸೇರಿಕೊಂಡಿದೆ.

ಅಯೋಧ್ಯೆಯ ರಾಮನಿಗೆ ಈಗ ದುಬಾರಿ ಬೆಲೆ ಚಿನ್ನದ ಬಿಲ್ಲು ಬಾಣ ಆಗಮಿಸಿದೆ. ಈ ಬಿಲ್ಲು ಮತ್ತು ಬಾಣವನ್ನು ಒಡಿಶಾದಿಂದ ತರಲಾಗಿದ್ದು, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಸಮರ್ಪಿಸಲಾಗಿದೆ. ಈ ಕ್ಷಣವನ್ನು ರಾಮನ ಭಕ್ತರಿಗೆ ಅತ್ಯಂತ ಭಾವನಾತ್ಮಕ ಮತ್ತು ಐತಿಹಾಸಿಕವೆಂದು ಪರಿಗಣಿಸಲಾಗಿದೆ. ಈ ಐದು ಲೋಹದ ಬಿಲ್ಲು ಮತ್ತು ಬಾಣವು ಕೇವಲ ಲೋಹದಿಂದ ಮಾಡಿದ ಬಿಲ್ಲು ಮತ್ತು ಬಾಣವಲ್ಲ, ಆದರೆ ಶಾಶ್ವತ ಸಂಸ್ಕೃತಿ, ಭಕ್ತಿ ಮತ್ತು ಸಂಪ್ರದಾಯದ ಸಂಕೇತವಾಗಿದೆ.
ಒಡಿಶಾದ ನುರಿತ ಕುಶಲಕರ್ಮಿಗಳು ಸತತ 8 ತಿಂಗಳ ಕಾಲ ಶ್ರಮಿಸಿ ಈ ಅದ್ಭುತ ಕಲಾತ್ಮಕ ಬಿಲ್ಲನ್ನು ರಚಿಸಿದ್ದಾರೆ. ನಿರ್ಮಾಣದ ಸಮಯದಲ್ಲಿ ಧಾರ್ಮಿಕ ನಂಬಿಕೆಗಳು ಮತ್ತು ಶಾಸ್ತ್ರೀಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆಯಂತೆ. ಹಾಗೆ ಈ ಬಿಲ್ಲು ಬಾಣವು ಬರೋಬ್ಬರಿ 286 ಕೆ.ಜಿ ತೂಕವಿದೆ. ಸುಮಾರು 8 ಅಡಿ ಅಷ್ಟು ಎತ್ತರವಾಗಿದೆ. ಇದನ್ನು ಚಿನ್ನ, ಬೆಳ್ಳಿ, ತಾಮ್ರ, ಸತು ಮತ್ತು ಕಬ್ಬಿಣ ಸೇರಿಸಿ ಪಂಚಲೋಹದಿಂದ ಮಾಡಲಾಗಿದೆ. ಹಿಂದೂ ಧರ್ಮದಲ್ಲಿ ಈ 5 ಲೋಹಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಹಾಗೆ ಇದನ್ನು ಪವಿತ್ರ ಎಂದು ನಂಬಲಾಗಿದೆ. ಈ ಲೋಹಗಳನ್ನು ದೇವರ ವಿಗ್ರಹ ಕೆತ್ತನೆ, ಹಾಗೆ ದೇವರ ಆಯುಧ ರಚನೆಯ ವೇಳೆ ಬಳಸಲಾಗುತ್ತದೆ.
ಹಾಗೆ ಈ ಬಿಲ್ಲು ಬಾಣದಲ್ಲಿ ಯಾವ ಲೋಹವನ್ನು ಎಷ್ಟು ಪ್ರಮಾಣದಲ್ಲಿ ಬಳಸಲಾಗಿದೆ ಎಂಬುದನ್ನು ಹೇಳಲಾಗಿಲ್ಲ. ಆದ್ರೆ ತೂಕವನ್ನು ಪೂರ್ವನಿರ್ಧರಿತವಾಗಿಸಿ ತಯಾರಿಸಲಾಗಿದೆಯಂತೆ. ಈ ಬಿಲ್ಲು ಮತ್ತು ಬಾಣದ ಸೃಷ್ಟಿಗೆ ಸುಮಾರು 40 ಅನುಭವಿ ಕಲಾವಿದರು ಕೊಡುಗೆ ನೀಡಿದ್ದಾರೆ. ಎಲ್ಲಾ ಕಲಾವಿದರು ಸಾಂಪ್ರದಾಯಿಕ ತಂತ್ರಗಳನ್ನು ಬಳಸಿದರು. ಅಯೋಧ್ಯೆಗೆ ಬಂದ ನಂತರ ಈ ಪಂಚಲೋಹದ ಬಿಲ್ಲು ಬಾಣ, ದೇವಾಲಯದಲ್ಲಿ ಪ್ರತಿಷ್ಠಾಪನೆಯಾಗಲಿದೆ.
30 ಕೋಟಿ ರೂ ಮೌಲ್ಯದ ರಾಮನ ವಿಗ್ರಹ ಉಡುಗೊರೆ
ಕಳೆದೊಂದು ತಿಂಗಳ ಹಿಂದಷ್ಟೇ ಅಯೋಧ್ಯೆಯ ರಾಮಮಂದಿರಕ್ಕೆ ಭಕ್ತರೊಬ್ಬರು ದುಬಾರಿ ಉಡುಗೊರೆ ನೀಡಿದ್ದರು. ಸುಮಾರು 30 ಕೋಟಿ ರೂಪಾಯೊ ಮೌಲ್ಯದ ರಾಮನ ಮೂರ್ತಿ ನೀಡಿದ್ದರು. ಇದು ಸಂಪೂರ್ಣ ಚಿನ್ನದಿಂದ ಮಾಡಿದ್ದ ಮೂರ್ತಿಯಾಗಿತ್ತು. 30 ಕೋಟಿ ಮೌಲ್ಯದ ಅಮೂಲ್ಯ ರತ್ನಗಳಿಂದ ಕೂಡಿದ 10 ಅಡಿ ಎತ್ತರ, 8 ಅಡಿ ಅಗಲದ ಶ್ರೀರಾಮನ ವಿಗ್ರಹವನ್ನು ಅನಾಮಧೇಯ ಭಕ್ತರೊಬ್ಬರು ದೇವಾಲಯಕ್ಕೆ ಉಡುಗೊರೆಯಾಗಿ ನೀಡಿದ್ದರು.
ಈ ವಿಗ್ರಹವನ್ನು ಕರ್ನಾಟಕದ ಪ್ರಸಿದ್ಧ ಕಲಾವಿದೆ ಜಯಶ್ರೀ ಫಣೀಶ್ ರಚಿಸಿದ್ದರು. ಈ ವಿಗ್ರಹ ರಚನೆಗೆ ಅವರಿಗೆ ಸುಮಾರು 2,800 ಗಂಟೆಗಳ ಸಮಯ ಹಿಡಿದಿತ್ತಂತೆ. ಈ ವಿಗ್ರಹ ಕೂಡ ಟ್ರಸ್ಟ್ ಗೆ ತಲುಪಿತ್ತು. ಆದ್ರೆ ಅದನ್ನು ನೀಡಿದ ದಾನಿ ಯಾರು ಎಂಬುದನ್ನು ಟ್ರಸ್ಟ್ ತಿಳಿಸಿಲ್ಲ.



Click it and Unblock the Notifications