Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಯೋಧ್ಯೆಗೆ ಬಂತು 286 ಕೆ.ಜಿ ತೂಕದ ಬಿಲ್ಲು ಬಾಣ: ಇದರ ವಿಶೇಷಗಳೇನು ಗೊತ್ತಾ?
ಹಿಂದೂಗಳಿಗೆ ಬಹಳ ಪವಿತ್ರ ಸ್ಥಳಗಳಲ್ಲಿ ಅಯೋಧ್ಯೆ ಕೂಡ ಒಂದಾಗಿದೆ. ರಾಮ ಜನ್ಮಭೂಮಿಯಿ ಕಾರಣದಿಂದ ಅಲ್ಲಿಗೆ ದಿನವೂ ಸಾವಿರಾರು ಮಂದಿ ಭಕ್ತರು ಭೇಟಿ ನೋಡುತ್ತಾರೆ. ಹಾಗೆ ಅಯೋಧ್ಯೆ ಈಗ ದೇಶದ ಪ್ರಮುಖ ಯಾತ್ರಾ ಸ್ಥಳವಾಗಿ ಮಾರ್ಪಟ್ಟಿದೆ. ರಾಮ ಮಂದಿರದಲ್ಲಿ ದಿನವೂ ವಿಶೇಷ ಪೂಜೆ, ಅಲಂಕಾರ, ಕಾರ್ಯಕ್ರಮಗಳು ನಡೆಯುವುದು ನೋಡಬಹುದು, ಇತ್ತೀಚಿಗೆ ದೀಪಾವಳಿಯ ಸಮಯದಲ್ಲಿ ಅಯೋಧ್ಯೆಯಲ್ಲಿ ಲಕ್ಷಾಂತರ ಭಕ್ತರು ಶ್ರೀರಾಮನ ದರ್ಶನ ಪಡೆದಿದ್ದರು.
ಹಾಗೆ ಭಕ್ತರು ರಾಮನಿಗೆ ವಿಶೇಷ ಉಡುಗೊರೆಗಳ ನೀಡುವುದು ನೋಡಿದ್ದೇವೆ. ದೇವಾಲಯ ಉದ್ಘಾಟನೆಗೊಂಡಾಗಿನಿಂದ ಒಂದಲ್ಲಾ ಒಂದು ರೀತಿಯ ದುಬಾರಿ ಉಡುಗೊರೆಗಳು ದೇವಾಲಯಕ್ಕೆ ಹರಿದುಬರುತ್ತಿದೆ. ಆರಂಭದಲ್ಲಿ ಚಿನ್ನದ ಲೇಪನವಿದ್ದ ರಾಮಾಯಣ ಗ್ರಂಥ, ಬೆಳ್ಳಿಯ ಪೊರಕೆ, ಪಾದುಕೆಗಳು ಸಹ ಇದ್ದಕೆ ಸೇರಿದ್ದವು ಆದ್ರೆ ಈಗ ಈ ಸಾಲಿಗೆ ಹೊಸದಾಗಿ ಚಿನ್ನದ ಬಿಲ್ಲು ಬಾಣ ಸಹ ಸೇರಿಕೊಂಡಿದೆ.

ಅಯೋಧ್ಯೆಯ ರಾಮನಿಗೆ ಈಗ ದುಬಾರಿ ಬೆಲೆ ಚಿನ್ನದ ಬಿಲ್ಲು ಬಾಣ ಆಗಮಿಸಿದೆ. ಈ ಬಿಲ್ಲು ಮತ್ತು ಬಾಣವನ್ನು ಒಡಿಶಾದಿಂದ ತರಲಾಗಿದ್ದು, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಸಮರ್ಪಿಸಲಾಗಿದೆ. ಈ ಕ್ಷಣವನ್ನು ರಾಮನ ಭಕ್ತರಿಗೆ ಅತ್ಯಂತ ಭಾವನಾತ್ಮಕ ಮತ್ತು ಐತಿಹಾಸಿಕವೆಂದು ಪರಿಗಣಿಸಲಾಗಿದೆ. ಈ ಐದು ಲೋಹದ ಬಿಲ್ಲು ಮತ್ತು ಬಾಣವು ಕೇವಲ ಲೋಹದಿಂದ ಮಾಡಿದ ಬಿಲ್ಲು ಮತ್ತು ಬಾಣವಲ್ಲ, ಆದರೆ ಶಾಶ್ವತ ಸಂಸ್ಕೃತಿ, ಭಕ್ತಿ ಮತ್ತು ಸಂಪ್ರದಾಯದ ಸಂಕೇತವಾಗಿದೆ.
ಒಡಿಶಾದ ನುರಿತ ಕುಶಲಕರ್ಮಿಗಳು ಸತತ 8 ತಿಂಗಳ ಕಾಲ ಶ್ರಮಿಸಿ ಈ ಅದ್ಭುತ ಕಲಾತ್ಮಕ ಬಿಲ್ಲನ್ನು ರಚಿಸಿದ್ದಾರೆ. ನಿರ್ಮಾಣದ ಸಮಯದಲ್ಲಿ ಧಾರ್ಮಿಕ ನಂಬಿಕೆಗಳು ಮತ್ತು ಶಾಸ್ತ್ರೀಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆಯಂತೆ. ಹಾಗೆ ಈ ಬಿಲ್ಲು ಬಾಣವು ಬರೋಬ್ಬರಿ 286 ಕೆ.ಜಿ ತೂಕವಿದೆ. ಸುಮಾರು 8 ಅಡಿ ಅಷ್ಟು ಎತ್ತರವಾಗಿದೆ. ಇದನ್ನು ಚಿನ್ನ, ಬೆಳ್ಳಿ, ತಾಮ್ರ, ಸತು ಮತ್ತು ಕಬ್ಬಿಣ ಸೇರಿಸಿ ಪಂಚಲೋಹದಿಂದ ಮಾಡಲಾಗಿದೆ. ಹಿಂದೂ ಧರ್ಮದಲ್ಲಿ ಈ 5 ಲೋಹಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಹಾಗೆ ಇದನ್ನು ಪವಿತ್ರ ಎಂದು ನಂಬಲಾಗಿದೆ. ಈ ಲೋಹಗಳನ್ನು ದೇವರ ವಿಗ್ರಹ ಕೆತ್ತನೆ, ಹಾಗೆ ದೇವರ ಆಯುಧ ರಚನೆಯ ವೇಳೆ ಬಳಸಲಾಗುತ್ತದೆ.
ಹಾಗೆ ಈ ಬಿಲ್ಲು ಬಾಣದಲ್ಲಿ ಯಾವ ಲೋಹವನ್ನು ಎಷ್ಟು ಪ್ರಮಾಣದಲ್ಲಿ ಬಳಸಲಾಗಿದೆ ಎಂಬುದನ್ನು ಹೇಳಲಾಗಿಲ್ಲ. ಆದ್ರೆ ತೂಕವನ್ನು ಪೂರ್ವನಿರ್ಧರಿತವಾಗಿಸಿ ತಯಾರಿಸಲಾಗಿದೆಯಂತೆ. ಈ ಬಿಲ್ಲು ಮತ್ತು ಬಾಣದ ಸೃಷ್ಟಿಗೆ ಸುಮಾರು 40 ಅನುಭವಿ ಕಲಾವಿದರು ಕೊಡುಗೆ ನೀಡಿದ್ದಾರೆ. ಎಲ್ಲಾ ಕಲಾವಿದರು ಸಾಂಪ್ರದಾಯಿಕ ತಂತ್ರಗಳನ್ನು ಬಳಸಿದರು. ಅಯೋಧ್ಯೆಗೆ ಬಂದ ನಂತರ ಈ ಪಂಚಲೋಹದ ಬಿಲ್ಲು ಬಾಣ, ದೇವಾಲಯದಲ್ಲಿ ಪ್ರತಿಷ್ಠಾಪನೆಯಾಗಲಿದೆ.
30 ಕೋಟಿ ರೂ ಮೌಲ್ಯದ ರಾಮನ ವಿಗ್ರಹ ಉಡುಗೊರೆ
ಕಳೆದೊಂದು ತಿಂಗಳ ಹಿಂದಷ್ಟೇ ಅಯೋಧ್ಯೆಯ ರಾಮಮಂದಿರಕ್ಕೆ ಭಕ್ತರೊಬ್ಬರು ದುಬಾರಿ ಉಡುಗೊರೆ ನೀಡಿದ್ದರು. ಸುಮಾರು 30 ಕೋಟಿ ರೂಪಾಯೊ ಮೌಲ್ಯದ ರಾಮನ ಮೂರ್ತಿ ನೀಡಿದ್ದರು. ಇದು ಸಂಪೂರ್ಣ ಚಿನ್ನದಿಂದ ಮಾಡಿದ್ದ ಮೂರ್ತಿಯಾಗಿತ್ತು. 30 ಕೋಟಿ ಮೌಲ್ಯದ ಅಮೂಲ್ಯ ರತ್ನಗಳಿಂದ ಕೂಡಿದ 10 ಅಡಿ ಎತ್ತರ, 8 ಅಡಿ ಅಗಲದ ಶ್ರೀರಾಮನ ವಿಗ್ರಹವನ್ನು ಅನಾಮಧೇಯ ಭಕ್ತರೊಬ್ಬರು ದೇವಾಲಯಕ್ಕೆ ಉಡುಗೊರೆಯಾಗಿ ನೀಡಿದ್ದರು.
ಈ ವಿಗ್ರಹವನ್ನು ಕರ್ನಾಟಕದ ಪ್ರಸಿದ್ಧ ಕಲಾವಿದೆ ಜಯಶ್ರೀ ಫಣೀಶ್ ರಚಿಸಿದ್ದರು. ಈ ವಿಗ್ರಹ ರಚನೆಗೆ ಅವರಿಗೆ ಸುಮಾರು 2,800 ಗಂಟೆಗಳ ಸಮಯ ಹಿಡಿದಿತ್ತಂತೆ. ಈ ವಿಗ್ರಹ ಕೂಡ ಟ್ರಸ್ಟ್ ಗೆ ತಲುಪಿತ್ತು. ಆದ್ರೆ ಅದನ್ನು ನೀಡಿದ ದಾನಿ ಯಾರು ಎಂಬುದನ್ನು ಟ್ರಸ್ಟ್ ತಿಳಿಸಿಲ್ಲ.



Click it and Unblock the Notifications