Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ದೇವತೆಗಳು ಸಂಚರಿಸುವ ಈ ವಾಹನಗಳ ಸಂಕೇತವೇನು?
ಹಿಂದೂ ಧರ್ಮದಲ್ಲಿ ಪ್ರಾಣಿಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಹಿಂದೂ ಧರ್ಮದಲ್ಲಿ ನಾವು ಹಸುವನ್ನು ಪೂಜಿಸುತ್ತೇವೆ. ಏಕೆಂದರೆ ಹಸುವಿನ ಒಂದೊಂದು ಭಾಗದಲ್ಲಿಯೂ ದೇವತೆಗಳು ನೆಲಿಸಿದ್ದಾರೆ ಎಂಬ ನಂಬಿಕೆಯಿದೆ ಆದ್ದರಿಂದ ಗೋಮಾತೆಯನ್ನು ತಾಯಿಯ ಸಮಾನವಾಗಿ ನೋಡುತ್ತೇವೆ. ಇನ್ನೂ ಪ್ರತಿಯೊಂದು ದೇವಾಲಯಗಳಲ್ಲಿ ಆ ದೇವರಿಗೆ ತುಂಬಾ ಆಪ್ತವಾದ ಪ್ರಾಣಿ-ಪಕ್ಷಿಯ ಶಿಲ್ಪವಿರುತ್ತದೆ. ಉದಾರಣೆಗೆ ಗಣಪನ ಮೂರ್ತಿಯ ಪಕ್ಕ ಮೂಸಿಕ ಇರುತ್ತದೆ, ಶಿವನ ಪಕ್ಕ ನಂದಿ.
ದೇವರು ತಮ್ಮವಾಹನವಾಗಿ ಪ್ರಾಣಿ, ಪ್ಕಷಿಗಳನ್ನು ಬಳಸುತ್ತಿದ್ದರು , ಈ ಕುರಿತಂತೆ ಅನೇಕ ಕಥೆಗಳು ಪುರಾಣದಲ್ಲಿದೆ.
ಇಲ್ಲಿ ನಾವು ಕೆಲವು ಪ್ರಾಣಿ-ಪಕ್ಷಿಗಳ ಬಗ್ಗೆ ಹೇಳಿದ್ದೇವೆ. ಈ ಪ್ರಾಣಿಗಳನ್ನು ದೇವತೆಗಳು ತಮ್ಮ ವಾಹನವಾಗಿ ಬಳಸಿದ್ದಿರ ಹಿಂದಿನ ಸಂಕೇತವೇನು ಎಂದು ನೋಡೋಣ ಬನ್ನಿ:

ಇಲಿ
ಮೂಸಿಕ ಗಣಪನ ವಾಹನವಾಗಿದ್ದು ಶತ್ರುಗಳನ್ನು ನಾಶ ಪಡಿಸುವುದರ ಸಂಕೇತ ಈ ಪ್ರಾಣಿ ಎಂದು ಪುರಾಣದಲ್ಲಿ ಹೇಳಲಾಗಿದೆ.

ನಂದಿ
ಶಿವನ ವಾಹನ ನಂದಿಯಾಗಿದೆ. ಪ್ರತಿಯೊಂದು ಶಿವ ದೇವಾಲಯದಲ್ಲಿ ನಂದಿಯ ಶಿಲ್ಪ ಇರುತ್ತದೆ. ಶಿವ ಹಾಗೂ ನಂದಿಗೆ ಸಂಬಂಧಿಸಿದ ಅನೇಕ ಕಥೆಗಳು ಪುರಾಣದಲ್ಲಿದೆ. ನಂದಿ ಸಂತಾನ ಭಾಗ್ಯದ ಸಂಕೇತವಾಗಿದೆ.

ಹುಲಿ
ಹುಲಿ ದುರ್ಗಾಮಾತೆಯ ಹಾಗೂ ಅಯ್ಯಪ್ಪ ಸ್ವಾಮಿಯ ವಾಹನವಾಗಿದೆ. ದುರ್ಗಾಮಾತೆ ದುಷ್ಟರ ಸಂಹಾರಕ್ಕೆ ಹುಲಿಯ ಮೇಲೆ ಬರುತ್ತಿದ್ದಳು, ಅಯ್ಯಪ್ಪ ಸ್ವಾಮಿ ಹುಲಿಯ ಹಾಲನ್ನು ತನ್ನ ಮಲತಾಯಿಗೆ ಕೊಡಲು ಹುಲಿಯ ಮೇಲೆ ಬಂದ ಎಂಬ ಕಥೆ ಇದೆ. ಹುಲಿ ಕರುಣೆ, ಕೋಪ, ಪ್ರತಿಷ್ಠೆಯ ಸಂಕೇತವಾಗಿದೆ.

ನವಿಲು
ನವಿಲು ಸರಸ್ವತಿ ಹಾಗೂ ಸುಬ್ರಮಣ್ಣಯ ಸ್ವಾಮಿಯ ವಾಹನವಾಗಿದೆ. ನವಿಲು ಬಾಹ್ಯ ಸೌಂದರ್ಯಕ್ಕಿಂತ, ಆಂತರಿಕ ಸೌಂದರ್ಯ ಅವಶ್ಯಕ ಅನ್ನುವುದರ ಸಂಕೇತವಾಗಿದೆ.

ಗೂಬೆ
ಗೂಬೆ ಲಕ್ಷ್ಮಿ ದೇವಿಯ ವಾಹನವಾಗಿದೆ. ಗೂಬೆ ಆಧ್ಯಾತ್ಮಿಕ ಜ್ಞಾನದ ಸಂಕೇತವಾಗಿದೆ. ಗೂಬೆಯ ಕುರುಡತನ ಪ್ರಪಂಚದಲ್ಲಿ ಐಶ್ವರ್ಯದ ಮದದಲ್ಲಿ ಆಧ್ಯಾತ್ಮಿಕ ಜ್ಞಾನವನ್ನು ಮರೆಯಬಾರದು ಅನ್ನುವುದರ ಎಚ್ಚರಿಕೆಯಾಗಿದೆ.

ಹಂಸಾ
ಹಂಸಾ ಬ್ರಹ್ಮಾ ದೇವರ ವಾಹನವಾಗಿದೆ. ಹಂಸಾ ಹಾಲು ಹಾಗೂ ನೀರನ್ನು ಪ್ರತ್ಯೇಕಿಸುವ ಸಾಮರ್ಥ್ಯವಿದೆ. ಇದು ಜ್ಞಾನ ದ ಸಂಕೇತವಾಗಿದೆ.

ಆನೆ
ಆನೆ ಇಂದ್ರನ ವಾಹನವಾಗಿದೆ. ಇದು ಘನತೆ, ಶಕ್ತಿ, ಐಶ್ವರ್ಯ, ಪ್ರತಿಷ್ಠೆಯ ಸಂಕೇತವಾಗಿದೆ.

ಮೊಸಳೆ
ಮೊಸಳೆ ವರುಣಾ ದೇವತೆಯ ವಾಹನವಾಗಿದೆ. ಮೊಸಳೆ ಘನತೆ, ಶಕ್ತಿ, ವೇಗ, ಧೈರ್ಯ, ಮೋಸ ಇವುಗಳ ಸಂಕೇತವಾಗಿದೆ.

ಕುದುರೆ
ಕುದುರೆ ದೇವತೆ ಸೂರ್ಯನ ವಾಹನವಾಗಿದೆ. ಸೂರ್ಯ ಏಳು ಕುದುರೆಗಳಲ್ಲಿ ಸವಾರಿ ಮಾಡುತ್ತಾನೆ. ಕಾಮನ ಬಿಲ್ಲು ಇದರ ಸಂಕೇತವೆಂದು ಹೇಳಲಾಗುತ್ತಿದೆ.



Click it and Unblock the Notifications











