Latest Updates
-
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು?
ದೇವತೆಗಳು ಸಂಚರಿಸುವ ಈ ವಾಹನಗಳ ಸಂಕೇತವೇನು?
ಹಿಂದೂ ಧರ್ಮದಲ್ಲಿ ಪ್ರಾಣಿಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಹಿಂದೂ ಧರ್ಮದಲ್ಲಿ ನಾವು ಹಸುವನ್ನು ಪೂಜಿಸುತ್ತೇವೆ. ಏಕೆಂದರೆ ಹಸುವಿನ ಒಂದೊಂದು ಭಾಗದಲ್ಲಿಯೂ ದೇವತೆಗಳು ನೆಲಿಸಿದ್ದಾರೆ ಎಂಬ ನಂಬಿಕೆಯಿದೆ ಆದ್ದರಿಂದ ಗೋಮಾತೆಯನ್ನು ತಾಯಿಯ ಸಮಾನವಾಗಿ ನೋಡುತ್ತೇವೆ. ಇನ್ನೂ ಪ್ರತಿಯೊಂದು ದೇವಾಲಯಗಳಲ್ಲಿ ಆ ದೇವರಿಗೆ ತುಂಬಾ ಆಪ್ತವಾದ ಪ್ರಾಣಿ-ಪಕ್ಷಿಯ ಶಿಲ್ಪವಿರುತ್ತದೆ. ಉದಾರಣೆಗೆ ಗಣಪನ ಮೂರ್ತಿಯ ಪಕ್ಕ ಮೂಸಿಕ ಇರುತ್ತದೆ, ಶಿವನ ಪಕ್ಕ ನಂದಿ.
ದೇವರು ತಮ್ಮವಾಹನವಾಗಿ ಪ್ರಾಣಿ, ಪ್ಕಷಿಗಳನ್ನು ಬಳಸುತ್ತಿದ್ದರು , ಈ ಕುರಿತಂತೆ ಅನೇಕ ಕಥೆಗಳು ಪುರಾಣದಲ್ಲಿದೆ.
ಇಲ್ಲಿ ನಾವು ಕೆಲವು ಪ್ರಾಣಿ-ಪಕ್ಷಿಗಳ ಬಗ್ಗೆ ಹೇಳಿದ್ದೇವೆ. ಈ ಪ್ರಾಣಿಗಳನ್ನು ದೇವತೆಗಳು ತಮ್ಮ ವಾಹನವಾಗಿ ಬಳಸಿದ್ದಿರ ಹಿಂದಿನ ಸಂಕೇತವೇನು ಎಂದು ನೋಡೋಣ ಬನ್ನಿ:

ಇಲಿ
ಮೂಸಿಕ ಗಣಪನ ವಾಹನವಾಗಿದ್ದು ಶತ್ರುಗಳನ್ನು ನಾಶ ಪಡಿಸುವುದರ ಸಂಕೇತ ಈ ಪ್ರಾಣಿ ಎಂದು ಪುರಾಣದಲ್ಲಿ ಹೇಳಲಾಗಿದೆ.

ನಂದಿ
ಶಿವನ ವಾಹನ ನಂದಿಯಾಗಿದೆ. ಪ್ರತಿಯೊಂದು ಶಿವ ದೇವಾಲಯದಲ್ಲಿ ನಂದಿಯ ಶಿಲ್ಪ ಇರುತ್ತದೆ. ಶಿವ ಹಾಗೂ ನಂದಿಗೆ ಸಂಬಂಧಿಸಿದ ಅನೇಕ ಕಥೆಗಳು ಪುರಾಣದಲ್ಲಿದೆ. ನಂದಿ ಸಂತಾನ ಭಾಗ್ಯದ ಸಂಕೇತವಾಗಿದೆ.

ಹುಲಿ
ಹುಲಿ ದುರ್ಗಾಮಾತೆಯ ಹಾಗೂ ಅಯ್ಯಪ್ಪ ಸ್ವಾಮಿಯ ವಾಹನವಾಗಿದೆ. ದುರ್ಗಾಮಾತೆ ದುಷ್ಟರ ಸಂಹಾರಕ್ಕೆ ಹುಲಿಯ ಮೇಲೆ ಬರುತ್ತಿದ್ದಳು, ಅಯ್ಯಪ್ಪ ಸ್ವಾಮಿ ಹುಲಿಯ ಹಾಲನ್ನು ತನ್ನ ಮಲತಾಯಿಗೆ ಕೊಡಲು ಹುಲಿಯ ಮೇಲೆ ಬಂದ ಎಂಬ ಕಥೆ ಇದೆ. ಹುಲಿ ಕರುಣೆ, ಕೋಪ, ಪ್ರತಿಷ್ಠೆಯ ಸಂಕೇತವಾಗಿದೆ.

ನವಿಲು
ನವಿಲು ಸರಸ್ವತಿ ಹಾಗೂ ಸುಬ್ರಮಣ್ಣಯ ಸ್ವಾಮಿಯ ವಾಹನವಾಗಿದೆ. ನವಿಲು ಬಾಹ್ಯ ಸೌಂದರ್ಯಕ್ಕಿಂತ, ಆಂತರಿಕ ಸೌಂದರ್ಯ ಅವಶ್ಯಕ ಅನ್ನುವುದರ ಸಂಕೇತವಾಗಿದೆ.

ಗೂಬೆ
ಗೂಬೆ ಲಕ್ಷ್ಮಿ ದೇವಿಯ ವಾಹನವಾಗಿದೆ. ಗೂಬೆ ಆಧ್ಯಾತ್ಮಿಕ ಜ್ಞಾನದ ಸಂಕೇತವಾಗಿದೆ. ಗೂಬೆಯ ಕುರುಡತನ ಪ್ರಪಂಚದಲ್ಲಿ ಐಶ್ವರ್ಯದ ಮದದಲ್ಲಿ ಆಧ್ಯಾತ್ಮಿಕ ಜ್ಞಾನವನ್ನು ಮರೆಯಬಾರದು ಅನ್ನುವುದರ ಎಚ್ಚರಿಕೆಯಾಗಿದೆ.

ಹಂಸಾ
ಹಂಸಾ ಬ್ರಹ್ಮಾ ದೇವರ ವಾಹನವಾಗಿದೆ. ಹಂಸಾ ಹಾಲು ಹಾಗೂ ನೀರನ್ನು ಪ್ರತ್ಯೇಕಿಸುವ ಸಾಮರ್ಥ್ಯವಿದೆ. ಇದು ಜ್ಞಾನ ದ ಸಂಕೇತವಾಗಿದೆ.

ಆನೆ
ಆನೆ ಇಂದ್ರನ ವಾಹನವಾಗಿದೆ. ಇದು ಘನತೆ, ಶಕ್ತಿ, ಐಶ್ವರ್ಯ, ಪ್ರತಿಷ್ಠೆಯ ಸಂಕೇತವಾಗಿದೆ.

ಮೊಸಳೆ
ಮೊಸಳೆ ವರುಣಾ ದೇವತೆಯ ವಾಹನವಾಗಿದೆ. ಮೊಸಳೆ ಘನತೆ, ಶಕ್ತಿ, ವೇಗ, ಧೈರ್ಯ, ಮೋಸ ಇವುಗಳ ಸಂಕೇತವಾಗಿದೆ.

ಕುದುರೆ
ಕುದುರೆ ದೇವತೆ ಸೂರ್ಯನ ವಾಹನವಾಗಿದೆ. ಸೂರ್ಯ ಏಳು ಕುದುರೆಗಳಲ್ಲಿ ಸವಾರಿ ಮಾಡುತ್ತಾನೆ. ಕಾಮನ ಬಿಲ್ಲು ಇದರ ಸಂಕೇತವೆಂದು ಹೇಳಲಾಗುತ್ತಿದೆ.



Click it and Unblock the Notifications
